ETV Bharat / sports

ಗುರು​ ರಾಹುಲ್‌ ದ್ರಾವಿಡ್‌​ ಬಗ್ಗೆ ಪೃಥ್ವಿ ಶಾ ಗುಣಗಾನ ಹೀಗಿತ್ತು..

ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕೋಚ್​ ಆಗಿ ಆಯ್ಕೆಯಾಗಿರುವ ರಾಹುಲ್​ ದ್ರಾವಿಡ್​ ಬಗ್ಗೆ ತಂಡದ ಆರಂಭಿಕ ಆಟಗಾರ ಶಿಖರ್ ಧವನ್​ ಮೌನ ಮುರಿದಿದ್ದಾರೆ.

author img

By

Published : Jul 5, 2021, 4:08 PM IST

Rahul Dravid
Rahul Dravid

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಗಾಗಿ ಈಗಾಗಲೇ ಲಂಕಾದಲ್ಲಿರುವ ಟೀಂ ಇಂಡಿಯಾಗೆ 'ದಿ ವಾಲ್​' ಖ್ಯಾತಿಯ ರಾಹುಲ್​ ದ್ರಾವಿಡ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಗರಡಿಯಲ್ಲಿ ಬೆಳೆದಿರುವ ಅನೇಕ ಯಂಗ್ ಪ್ಲೇಯರ್ಸ್​ ಇದೀಗ ಲಂಕಾ ಪ್ರವಾಸದಲ್ಲಿದ್ದು, ಸದ್ಯ ನೆಟ್​​ನಲ್ಲಿ ಬೆವರು ಹರಿಸುತ್ತಿದ್ದಾರೆ.

Rahul Dravid
ಕೋಚ್ ರಾಹುಲ್​ ದ್ರಾವಿಡ್​

ರಾಹುಲ್​ ದ್ರಾವಿಡ್​ ಅವರ ಕೋಚಿಂಗ್​ ಅದ್ಭುತವಾಗಿರುತ್ತದೆ. ಅವರಿಗೆ ಕ್ರಿಕೆಟ್​ ಬಗ್ಗೆ ಅಪಾರ ಜ್ಞಾನವಿದ್ದು, ಅದನ್ನ ಹಂಚಿಕೊಳ್ಳುವ ರೀತಿ ಕೂಡ ಅತ್ಯುತ್ತಮವಾಗಿದೆ ಎಂದು ಪೃಥ್ವಿ ಶಾ ಹೇಳಿದ್ದಾರೆ. ರಾಹುಲ್​ ಸರ್​ ಅಡಿಯಲ್ಲಿ ಕ್ರಿಕೆಟ್​​ ಆಡುವುದು ನಿಜಕ್ಕೂ ವಿಭಿನ್ನವಾದ ಖುಷಿ ನೀಡುತ್ತದೆ. ಈ ಹಿಂದೆ ಅಂಡರ್​-19 ತಂಡದ ಕೋಚ್​ ಆಗಿ ಅವರು ನಮಗೆ ಸಲಹೆ ನೀಡಿದ್ದಾರೆ. ಈ ವೇಳೆ ಅನೇಕ ರೀತಿಯ ಅನುಭವ ಹಂಚಿಕೊಂಡಿದ್ದು, ಮೈದಾನದಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಲು ಸಹಕಾರಿಯಾಗಲಿದೆ ಎಂದು ಶಾ ಹೇಳಿದ್ದಾರೆ.

ರಾಹುಲ್​ ಸರ್​ ಡ್ರೆಸ್ಸಿಂಗ್​​ ರೂಂನಲ್ಲಿದ್ದಾಗ ಎಲ್ಲರೂ ಶಿಸ್ತಿನಿಂದ ಇರುತ್ತಾರೆ. ಅವರೊಂದಿಗಿನ ಪ್ರಾಕ್ಟಿಸ್​​ ಸೆಷನ್​ಗೋಸ್ಕರ ನಾನು ನಿರೀಕ್ಷೆ ಮಾಡ್ತಿದ್ದು, ಅನೇಕ ವಿಷಯಗಳ ಕುರಿತು ಮಾತನಾಡಬೇಕಾಗಿದೆ. ಈ ಪ್ರವಾಸದಲ್ಲಿನ ಅವಕಾಶ ಸದುಪಯೋಗಪಡಿಸಿ ಕೊಳ್ಳಬೇಕಾಗಿದ್ದು, ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಇರಾದೆ ಇಟ್ಟುಕೊಂಡಿದ್ದೇನೆ. ಭಾರತ ತಂಡವಾಗಲಿ, ರಣಜಿ ತಂಡವಾಗಲಿ, ಕ್ಲಬ್​ ಅಥವಾ ನನ್ನ ಶಾಲಾ ತಂಡವಾಗಲಿ, ಅದು ಯಾವಾಗಲೂ ಅಗ್ರ ಸ್ಥಾನದಲ್ಲಿರಬೇಕು ಎಂಬುದು ನನ್ನ ಹಂಬಲ ಎಂದು ಪೃಥ್ವಿ ಶಾ ಹೇಳಿದ್ದಾರೆ.

ಇದನ್ನೂ ಓದಿರಿ: ಇವರ ಗೋಳು ಕೇಳೋರು ಯಾರು? Online Class​​ಗೋಸ್ಕರ ಮರವೇರುವ ವಿದ್ಯಾರ್ಥಿಗಳು!

ಈ ಹಿಂದೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಪೃಥ್ವಿ ಶಾಗೆ ಅವಕಾಶ ನೀಡಲಾಗಿತ್ತು. ಆದರೆ ಕಳಪೆ ಬ್ಯಾಟಿಂಗ್​ ಪ್ರದರ್ಶನದಿಂದಾಗಿ ಅವರನ್ನ ತಂಡದಿಂದ ಕೈಬಿಡಲಾಗಿತ್ತು. ಇದಾದ ಬಳಿಕ ನಡೆದ 2021ರ ಐಪಿಎಲ್​ನಲ್ಲಿ ಉತ್ತವಾಗಿ ಆಡಿರುವ ಕಾರಣ ಮತ್ತೊಮ್ಮೆ ತಂಡದಲ್ಲಿ ಅವಕಾಶ ನೀಡಲಾಗಿದೆ. ವಿರಾಟ್​​ ಕೊಹ್ಲಿ ನೇತೃತ್ವದ ಮತ್ತೊಂದು ತಂಡ ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲಿದ್ದು, ಶುಬ್ಮನ್​ ಗಿಲ್​ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಪೃಥ್ವಿ ಶಾ ಆಯ್ಕೆಯಾಗಲಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿವೆ.

ಭಾರತ-ಶ್ರೀಲಂಕಾ ನಡುವೆ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ನಡೆಯಲಿದ್ದು, ಸರಣಿ ಜುಲೈ 13ರಿಂದ ಆರಂಭಗೊಳ್ಳಲಿದೆ. ಟೀಂ ಇಂಡಿಯಾ ನಾಯಕನಾಗಿ ಶಿಖರ್​ ಧವನ್​ ಆಯ್ಕೆಯಾಗಿದ್ದಾರೆ.

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಗಾಗಿ ಈಗಾಗಲೇ ಲಂಕಾದಲ್ಲಿರುವ ಟೀಂ ಇಂಡಿಯಾಗೆ 'ದಿ ವಾಲ್​' ಖ್ಯಾತಿಯ ರಾಹುಲ್​ ದ್ರಾವಿಡ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಗರಡಿಯಲ್ಲಿ ಬೆಳೆದಿರುವ ಅನೇಕ ಯಂಗ್ ಪ್ಲೇಯರ್ಸ್​ ಇದೀಗ ಲಂಕಾ ಪ್ರವಾಸದಲ್ಲಿದ್ದು, ಸದ್ಯ ನೆಟ್​​ನಲ್ಲಿ ಬೆವರು ಹರಿಸುತ್ತಿದ್ದಾರೆ.

Rahul Dravid
ಕೋಚ್ ರಾಹುಲ್​ ದ್ರಾವಿಡ್​

ರಾಹುಲ್​ ದ್ರಾವಿಡ್​ ಅವರ ಕೋಚಿಂಗ್​ ಅದ್ಭುತವಾಗಿರುತ್ತದೆ. ಅವರಿಗೆ ಕ್ರಿಕೆಟ್​ ಬಗ್ಗೆ ಅಪಾರ ಜ್ಞಾನವಿದ್ದು, ಅದನ್ನ ಹಂಚಿಕೊಳ್ಳುವ ರೀತಿ ಕೂಡ ಅತ್ಯುತ್ತಮವಾಗಿದೆ ಎಂದು ಪೃಥ್ವಿ ಶಾ ಹೇಳಿದ್ದಾರೆ. ರಾಹುಲ್​ ಸರ್​ ಅಡಿಯಲ್ಲಿ ಕ್ರಿಕೆಟ್​​ ಆಡುವುದು ನಿಜಕ್ಕೂ ವಿಭಿನ್ನವಾದ ಖುಷಿ ನೀಡುತ್ತದೆ. ಈ ಹಿಂದೆ ಅಂಡರ್​-19 ತಂಡದ ಕೋಚ್​ ಆಗಿ ಅವರು ನಮಗೆ ಸಲಹೆ ನೀಡಿದ್ದಾರೆ. ಈ ವೇಳೆ ಅನೇಕ ರೀತಿಯ ಅನುಭವ ಹಂಚಿಕೊಂಡಿದ್ದು, ಮೈದಾನದಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಲು ಸಹಕಾರಿಯಾಗಲಿದೆ ಎಂದು ಶಾ ಹೇಳಿದ್ದಾರೆ.

ರಾಹುಲ್​ ಸರ್​ ಡ್ರೆಸ್ಸಿಂಗ್​​ ರೂಂನಲ್ಲಿದ್ದಾಗ ಎಲ್ಲರೂ ಶಿಸ್ತಿನಿಂದ ಇರುತ್ತಾರೆ. ಅವರೊಂದಿಗಿನ ಪ್ರಾಕ್ಟಿಸ್​​ ಸೆಷನ್​ಗೋಸ್ಕರ ನಾನು ನಿರೀಕ್ಷೆ ಮಾಡ್ತಿದ್ದು, ಅನೇಕ ವಿಷಯಗಳ ಕುರಿತು ಮಾತನಾಡಬೇಕಾಗಿದೆ. ಈ ಪ್ರವಾಸದಲ್ಲಿನ ಅವಕಾಶ ಸದುಪಯೋಗಪಡಿಸಿ ಕೊಳ್ಳಬೇಕಾಗಿದ್ದು, ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಇರಾದೆ ಇಟ್ಟುಕೊಂಡಿದ್ದೇನೆ. ಭಾರತ ತಂಡವಾಗಲಿ, ರಣಜಿ ತಂಡವಾಗಲಿ, ಕ್ಲಬ್​ ಅಥವಾ ನನ್ನ ಶಾಲಾ ತಂಡವಾಗಲಿ, ಅದು ಯಾವಾಗಲೂ ಅಗ್ರ ಸ್ಥಾನದಲ್ಲಿರಬೇಕು ಎಂಬುದು ನನ್ನ ಹಂಬಲ ಎಂದು ಪೃಥ್ವಿ ಶಾ ಹೇಳಿದ್ದಾರೆ.

ಇದನ್ನೂ ಓದಿರಿ: ಇವರ ಗೋಳು ಕೇಳೋರು ಯಾರು? Online Class​​ಗೋಸ್ಕರ ಮರವೇರುವ ವಿದ್ಯಾರ್ಥಿಗಳು!

ಈ ಹಿಂದೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಪೃಥ್ವಿ ಶಾಗೆ ಅವಕಾಶ ನೀಡಲಾಗಿತ್ತು. ಆದರೆ ಕಳಪೆ ಬ್ಯಾಟಿಂಗ್​ ಪ್ರದರ್ಶನದಿಂದಾಗಿ ಅವರನ್ನ ತಂಡದಿಂದ ಕೈಬಿಡಲಾಗಿತ್ತು. ಇದಾದ ಬಳಿಕ ನಡೆದ 2021ರ ಐಪಿಎಲ್​ನಲ್ಲಿ ಉತ್ತವಾಗಿ ಆಡಿರುವ ಕಾರಣ ಮತ್ತೊಮ್ಮೆ ತಂಡದಲ್ಲಿ ಅವಕಾಶ ನೀಡಲಾಗಿದೆ. ವಿರಾಟ್​​ ಕೊಹ್ಲಿ ನೇತೃತ್ವದ ಮತ್ತೊಂದು ತಂಡ ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲಿದ್ದು, ಶುಬ್ಮನ್​ ಗಿಲ್​ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಪೃಥ್ವಿ ಶಾ ಆಯ್ಕೆಯಾಗಲಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿವೆ.

ಭಾರತ-ಶ್ರೀಲಂಕಾ ನಡುವೆ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ನಡೆಯಲಿದ್ದು, ಸರಣಿ ಜುಲೈ 13ರಿಂದ ಆರಂಭಗೊಳ್ಳಲಿದೆ. ಟೀಂ ಇಂಡಿಯಾ ನಾಯಕನಾಗಿ ಶಿಖರ್​ ಧವನ್​ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.