ETV Bharat / sports

ಚಿಕ್ಕವನಾಗಿದ್ದಾಗ ನನ್ನ ಬ್ಯಾಟಿಂಗ್​ ನೋಡಿಲ್ಲ.. ಕೋಚ್​ ರಾಹುಲ್​ ಮಾತಿಗೆ ನಕ್ಕ ಸೂರ್ಯಕುಮಾರ್​

author img

By

Published : Jan 8, 2023, 5:20 PM IST

ಶ್ರೀಲಂಕಾ ವಿರುದ್ಧ ಸರಣಿ ಗೆಲುವು- ಕೋಚ್​ ರಾಹುಲ್​ ದ್ರಾವಿಡ್​ ಸೂರ್ಯಕುಮಾರ್​ ಸಂದರ್ಶನ- ಬ್ಯಾಟಿಂಗ್​ ಶೈಲಿ ಬಗ್ಗೆ ಸ್ವಾರಸ್ಯಕರ ಚರ್ಚೆ- ತಮ್ಮ ಬ್ಯಾಟಿಂಗ್​ ಶೈಲಿ ತಮಾಷೆ ಮಾಡಿದ ರಾಹುಲ್​ ದ್ರಾವಿಡ್​

rahul-dravid-leaves-suryakumar-yadav-in-splits
ಕೋಚ್​ ರಾಹುಲ್​ ಮಾತಿಗೆ ನಕ್ಕ ಸೂರ್ಯಕುಮಾರ್​

ರಾಜ್​ಕೋಟ್(ಗುಜರಾತ್​)​: ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಟಿ20 ಕ್ರಿಕೆಟ್​ನ ನಂಬರ್​​ 1 ಬ್ಯಾಟರ್ ಸೂರ್ಯಕುಮಾರ್​ ಯಾದವ್​ ಅಮೋಘ ಆಟವಾಡಿ ಶತಕ ಸಾಧನೆ ಮಾಡಿದರು. ಸೂರ್ಯರ ಭರ್ಜರಿ ಬ್ಯಾಟಿಂಗ್​ಗೆ ಲಂಕಾ ಸೋಲು ಕಂಡು ಸರಣಿ ಸೋಲನುಭವಿಸಿತು. ಈ ಮೂಲಕ ಭಾರತ ತವರು ನೆಲದಲ್ಲಿ ಸತತ 12 ನೇ ಸರಣಿ ಗೆಲುವು ಸಾಧಿಸಿತು. ಪಂದ್ಯದಲ್ಲಿ ಕೇಂದ್ರ ಬಿಂದುವಾಗಿದ್ದು ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​.

51 ಎಸೆತಗಳಲ್ಲಿ 112 ರನ್ ಗಳಿಸುವ ಮೂಲಕ ಸೂರ್ಯ ಮತ್ತೊಮ್ಮೆ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದರು. ಪಂದ್ಯದ ಬಳಿಕ ಸೂರ್ಯಕುಮಾರ್​ ಜೊತೆಗೆ ಸಂದರ್ಶನ ನಡೆಸಿದ ತಂಡದ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ 'ನೀವು ಚಿಕ್ಕವರಿದ್ದಾಗ ನಾನು ಬ್ಯಾಟಿಂಗ್​ ಮಾಡುವುದನ್ನು ನೀವು ನೋಡಿಲ್ಲ ಎಂದೆನಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಸೂರ್ಯ, ನಾನು ನೋಡಿದ್ದೇನೆ ಎಂದು ಉತ್ತರಿಸಿ ನಕ್ಕಿದ್ದಾರೆ.

ಬ್ಯಾಟಿಂಗ್ ಶೈಲಿ ಬಗ್ಗೆ ರಾಹುಲ್​ ಕಾಮಿಡಿ: ಸೂರ್ಯಕುಮಾರ್​ ಬ್ಯಾಟಿಂಗ್​ ಬಗ್ಗೆ ಮಾತನಾಡಿದ ರಾಹುಲ್​ ದ್ರಾವಿಡ್​ ಅವರು, ನನ್ನ ಸಕ್ರಿಯ ಕ್ರಿಕೆಟ್​ ಜೀವನದ ವೇಳೆ ಸೂರ್ಯ ಬ್ಯಾಟಿಂಗ್​ ಅನ್ನು ಗಮನಿಸಿಲ್ಲ. ಹೀಗಾಗಿ ಆತ ಯರ್ರಾಬಿರ್ರಿ ಬ್ಯಾಟ್​ ಬೀಸುತ್ತಿದ್ದಾನೆ ಎಂದು ಹೇಳಿದರು. ಅಂದರೆ ದ್ರಾವಿಡ್​ ಅವರು ತಮ್ಮ ರಕ್ಷಣಾತ್ಮಕ ಬ್ಯಾಟಿಂಗ್​ ಅನ್ನು ತಾವೇ ತಮಾಷೆ ಮಾಡಿದ್ದಾರೆ. ಈ ವೇಳೆ ಸೂರ್ಯಕುಮಾರ್​ ಇಲ್ಲ, ನಾನು ನಿಮ್ಮ ಬ್ಯಾಟಿಂಗ್​ ಶೈಲಿಯನ್ನೇ ನೋಡಿಯೇ ಬೆಳೆದಿದ್ದೇನೆ ಎಂದು ಉತ್ತರಿಸಿದ್ದಾರೆ. ನೀವು ನನ್ನ ಬ್ಯಾಟಿಂಗ್​ ನೋಡಿದ್ದರೆ, ಹೀಗೆ ಬಿರುಸಾಗಿ ಬ್ಯಾಟ್ ಬೀಸುತ್ತಿರಲಿಲ್ಲ. ನೀವೊಬ್ಬ ಅಸಾಧಾರಣ ಆಟಗಾರ. ಭಾರತ ತಂಡದ ಆಧಾರ. ಬ್ಯಾಟಿಂಗ್​ ಅನ್ನು ನಾವು ದೂರದಿಂದಲೇ ಆನಂದಿಸುತ್ತೇವೆ. ಇನ್ನೂ ಉತ್ತಮ ಇನ್ನಿಂಗ್ಸ್​ಗಳು ಮೂಡಿಬರಲಿ ಎಂದು ಹೇಳಿದರು.

ಒತ್ತಡ ಸಹಜ, ಎಲ್ಲವನ್ನೂ ಮೀರಬೇಕು: ಇನ್ನು, ಸೂರ್ಯಕುಮಾರ್​ ಯಾದವ್​ ತಮ್ಮ ಬ್ಯಾಟಿಂಗ್​ ಬಗ್ಗೆ ಮಾತನಾಡಿ, ನಾವು ಮೈದಾನದಲ್ಲಿ ಬ್ಯಾಟ್​ ಮಾಡುವಾಗ ಒತ್ತಡ ಸಹಜವಾಗಿರುತ್ತದೆ. ಪ್ರತಿ ಪಂದ್ಯವೂ ಸವಾಲಿನದ್ದಾಗಿರುತ್ತದೆ. ತಯಾರಿ ನಡೆಸುವಾಗ ನಮ್ಮ ಮೇಲಿರುವ ಒತ್ತಡಗಳೇ ನಮ್ಮನ್ನು ಪಕ್ವವನ್ನಾಗಿ ಮಾಡುತ್ತವೆ. ಹಾಗಿದ್ದಾಗ ಮಾತ್ರ ಆಟ ಉತ್ತಮವಾಗಿರುತ್ತದೆ. ಕಠಿಣ ಸವಾಲು ಎದುರಿಸಿದಾಗಲೇ ಬ್ಯಾಟ್​ ಮೊನಚಾಗುತ್ತದೆ. ಗುಣಮಟ್ಟದ ಅಭ್ಯಾಸ ಪಂದ್ಯದ ವೇಳೆ ನೆರವಿಗೆ ಬರುತ್ತದೆ ಎಂದು ಹೇಳಿದರು.

ಇನ್ನು ಪಂದ್ಯದ ಕುರಿತು ಮಾತನಾಡಿದ ಸೂರ್ಯ, ಬೌಂಡರಿ ಗೆರೆಯನ್ನು ಗಮನದಲ್ಲಿಸಿಕೊಂಡು ನಾನು ಬ್ಯಾಟಿಂಗ್ ಮಾಡುತ್ತೇನೆ. 50- 60 ಮೀಟರ್​ ಅಂಗಳದಲ್ಲಿ ಬೌಂಡರಿಗಿಂತಲೂ ಸಿಕ್ಸರ್​​ಗಳನ್ನು ಬಾರಿಸುವೆ. ಇಲ್ಲಿಯೂ ಪಿಚ್​ ಸ್ವಲ್ಪ ಚಿಕ್ಕದಿದ್ದ ಕಾರಣ ಬಲವಾದ ಹೊಡೆತಗಳಿಗೆ ಕೈಹಾಕಿದೆ. ಕೆಲವೊಂದು ಶಾಟ್​ಗಳನ್ನು ಮೊದಲೇ ನಿರ್ಧರಿಸಿ ಆಡುವೆ ಎಂದು ಉಸುರಿದರು.

ಹೊಡೆತಗಳ ನಿರ್ಧರಿಸುವೆ: ಮೈದಾನದ ಫೀಲ್ಡರ್​ಗಳನ್ನು ಗುರಿಯಾಗಿಸಿಕೊಂಡು ಬಾಲ್​ ಎದುರಿಸುವೆ. ಯಾವುದೇ ಪ್ರಯತ್ನವೂ ವಿಫಲವಾಗಬಾರದು ಎಂದು ಹೊಡೆತ ಆಯ್ದುಕೊಳ್ಳುವೆ. ನನ್ನ ನಿರ್ಭೀತಿಯ ಆಟಕ್ಕೆ ತಂಡ ಮತ್ತು ಕೋಚ್​ ದ್ರಾವಿಡ್​ರ ಬೆಂಬಲವಿದೆ. ಹೀಗಾಗಿ ಉತ್ತಮ ಇನ್ನಿಂಗ್ಸ್​ ಕಟ್ಟಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.

ಸೂರ್ಯಕುಮಾರ್ ಯಾದವ್ ಅವರ ವೀರಾವೇಶದ ಬ್ಯಾಟಿಂಗ್​​ನಿಂದಾಗ ಭಾರತ 3ನೇ ಟಿ20ಯಲ್ಲಿ ಶ್ರೀಲಂಕಾವನ್ನು 91 ರನ್​ಗಳಿಂದ ಸೋಲಿಸುವ ಮೂಲಕ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

ಓದಿ: 'ಭಾರತ ತಂಡಕ್ಕೆ ಈತನೊಬ್ಬ ಸಾಕು...': ಸಿಡಿಲಮರಿ ಸೂರ್ಯಕುಮಾರ್​ಗೆ ವಿಶ್ವಕ್ರಿಕೆಟ್​ ಬಹುಪರಾಕ್​

ರಾಜ್​ಕೋಟ್(ಗುಜರಾತ್​)​: ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಟಿ20 ಕ್ರಿಕೆಟ್​ನ ನಂಬರ್​​ 1 ಬ್ಯಾಟರ್ ಸೂರ್ಯಕುಮಾರ್​ ಯಾದವ್​ ಅಮೋಘ ಆಟವಾಡಿ ಶತಕ ಸಾಧನೆ ಮಾಡಿದರು. ಸೂರ್ಯರ ಭರ್ಜರಿ ಬ್ಯಾಟಿಂಗ್​ಗೆ ಲಂಕಾ ಸೋಲು ಕಂಡು ಸರಣಿ ಸೋಲನುಭವಿಸಿತು. ಈ ಮೂಲಕ ಭಾರತ ತವರು ನೆಲದಲ್ಲಿ ಸತತ 12 ನೇ ಸರಣಿ ಗೆಲುವು ಸಾಧಿಸಿತು. ಪಂದ್ಯದಲ್ಲಿ ಕೇಂದ್ರ ಬಿಂದುವಾಗಿದ್ದು ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​.

51 ಎಸೆತಗಳಲ್ಲಿ 112 ರನ್ ಗಳಿಸುವ ಮೂಲಕ ಸೂರ್ಯ ಮತ್ತೊಮ್ಮೆ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದರು. ಪಂದ್ಯದ ಬಳಿಕ ಸೂರ್ಯಕುಮಾರ್​ ಜೊತೆಗೆ ಸಂದರ್ಶನ ನಡೆಸಿದ ತಂಡದ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ 'ನೀವು ಚಿಕ್ಕವರಿದ್ದಾಗ ನಾನು ಬ್ಯಾಟಿಂಗ್​ ಮಾಡುವುದನ್ನು ನೀವು ನೋಡಿಲ್ಲ ಎಂದೆನಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಸೂರ್ಯ, ನಾನು ನೋಡಿದ್ದೇನೆ ಎಂದು ಉತ್ತರಿಸಿ ನಕ್ಕಿದ್ದಾರೆ.

ಬ್ಯಾಟಿಂಗ್ ಶೈಲಿ ಬಗ್ಗೆ ರಾಹುಲ್​ ಕಾಮಿಡಿ: ಸೂರ್ಯಕುಮಾರ್​ ಬ್ಯಾಟಿಂಗ್​ ಬಗ್ಗೆ ಮಾತನಾಡಿದ ರಾಹುಲ್​ ದ್ರಾವಿಡ್​ ಅವರು, ನನ್ನ ಸಕ್ರಿಯ ಕ್ರಿಕೆಟ್​ ಜೀವನದ ವೇಳೆ ಸೂರ್ಯ ಬ್ಯಾಟಿಂಗ್​ ಅನ್ನು ಗಮನಿಸಿಲ್ಲ. ಹೀಗಾಗಿ ಆತ ಯರ್ರಾಬಿರ್ರಿ ಬ್ಯಾಟ್​ ಬೀಸುತ್ತಿದ್ದಾನೆ ಎಂದು ಹೇಳಿದರು. ಅಂದರೆ ದ್ರಾವಿಡ್​ ಅವರು ತಮ್ಮ ರಕ್ಷಣಾತ್ಮಕ ಬ್ಯಾಟಿಂಗ್​ ಅನ್ನು ತಾವೇ ತಮಾಷೆ ಮಾಡಿದ್ದಾರೆ. ಈ ವೇಳೆ ಸೂರ್ಯಕುಮಾರ್​ ಇಲ್ಲ, ನಾನು ನಿಮ್ಮ ಬ್ಯಾಟಿಂಗ್​ ಶೈಲಿಯನ್ನೇ ನೋಡಿಯೇ ಬೆಳೆದಿದ್ದೇನೆ ಎಂದು ಉತ್ತರಿಸಿದ್ದಾರೆ. ನೀವು ನನ್ನ ಬ್ಯಾಟಿಂಗ್​ ನೋಡಿದ್ದರೆ, ಹೀಗೆ ಬಿರುಸಾಗಿ ಬ್ಯಾಟ್ ಬೀಸುತ್ತಿರಲಿಲ್ಲ. ನೀವೊಬ್ಬ ಅಸಾಧಾರಣ ಆಟಗಾರ. ಭಾರತ ತಂಡದ ಆಧಾರ. ಬ್ಯಾಟಿಂಗ್​ ಅನ್ನು ನಾವು ದೂರದಿಂದಲೇ ಆನಂದಿಸುತ್ತೇವೆ. ಇನ್ನೂ ಉತ್ತಮ ಇನ್ನಿಂಗ್ಸ್​ಗಳು ಮೂಡಿಬರಲಿ ಎಂದು ಹೇಳಿದರು.

ಒತ್ತಡ ಸಹಜ, ಎಲ್ಲವನ್ನೂ ಮೀರಬೇಕು: ಇನ್ನು, ಸೂರ್ಯಕುಮಾರ್​ ಯಾದವ್​ ತಮ್ಮ ಬ್ಯಾಟಿಂಗ್​ ಬಗ್ಗೆ ಮಾತನಾಡಿ, ನಾವು ಮೈದಾನದಲ್ಲಿ ಬ್ಯಾಟ್​ ಮಾಡುವಾಗ ಒತ್ತಡ ಸಹಜವಾಗಿರುತ್ತದೆ. ಪ್ರತಿ ಪಂದ್ಯವೂ ಸವಾಲಿನದ್ದಾಗಿರುತ್ತದೆ. ತಯಾರಿ ನಡೆಸುವಾಗ ನಮ್ಮ ಮೇಲಿರುವ ಒತ್ತಡಗಳೇ ನಮ್ಮನ್ನು ಪಕ್ವವನ್ನಾಗಿ ಮಾಡುತ್ತವೆ. ಹಾಗಿದ್ದಾಗ ಮಾತ್ರ ಆಟ ಉತ್ತಮವಾಗಿರುತ್ತದೆ. ಕಠಿಣ ಸವಾಲು ಎದುರಿಸಿದಾಗಲೇ ಬ್ಯಾಟ್​ ಮೊನಚಾಗುತ್ತದೆ. ಗುಣಮಟ್ಟದ ಅಭ್ಯಾಸ ಪಂದ್ಯದ ವೇಳೆ ನೆರವಿಗೆ ಬರುತ್ತದೆ ಎಂದು ಹೇಳಿದರು.

ಇನ್ನು ಪಂದ್ಯದ ಕುರಿತು ಮಾತನಾಡಿದ ಸೂರ್ಯ, ಬೌಂಡರಿ ಗೆರೆಯನ್ನು ಗಮನದಲ್ಲಿಸಿಕೊಂಡು ನಾನು ಬ್ಯಾಟಿಂಗ್ ಮಾಡುತ್ತೇನೆ. 50- 60 ಮೀಟರ್​ ಅಂಗಳದಲ್ಲಿ ಬೌಂಡರಿಗಿಂತಲೂ ಸಿಕ್ಸರ್​​ಗಳನ್ನು ಬಾರಿಸುವೆ. ಇಲ್ಲಿಯೂ ಪಿಚ್​ ಸ್ವಲ್ಪ ಚಿಕ್ಕದಿದ್ದ ಕಾರಣ ಬಲವಾದ ಹೊಡೆತಗಳಿಗೆ ಕೈಹಾಕಿದೆ. ಕೆಲವೊಂದು ಶಾಟ್​ಗಳನ್ನು ಮೊದಲೇ ನಿರ್ಧರಿಸಿ ಆಡುವೆ ಎಂದು ಉಸುರಿದರು.

ಹೊಡೆತಗಳ ನಿರ್ಧರಿಸುವೆ: ಮೈದಾನದ ಫೀಲ್ಡರ್​ಗಳನ್ನು ಗುರಿಯಾಗಿಸಿಕೊಂಡು ಬಾಲ್​ ಎದುರಿಸುವೆ. ಯಾವುದೇ ಪ್ರಯತ್ನವೂ ವಿಫಲವಾಗಬಾರದು ಎಂದು ಹೊಡೆತ ಆಯ್ದುಕೊಳ್ಳುವೆ. ನನ್ನ ನಿರ್ಭೀತಿಯ ಆಟಕ್ಕೆ ತಂಡ ಮತ್ತು ಕೋಚ್​ ದ್ರಾವಿಡ್​ರ ಬೆಂಬಲವಿದೆ. ಹೀಗಾಗಿ ಉತ್ತಮ ಇನ್ನಿಂಗ್ಸ್​ ಕಟ್ಟಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.

ಸೂರ್ಯಕುಮಾರ್ ಯಾದವ್ ಅವರ ವೀರಾವೇಶದ ಬ್ಯಾಟಿಂಗ್​​ನಿಂದಾಗ ಭಾರತ 3ನೇ ಟಿ20ಯಲ್ಲಿ ಶ್ರೀಲಂಕಾವನ್ನು 91 ರನ್​ಗಳಿಂದ ಸೋಲಿಸುವ ಮೂಲಕ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

ಓದಿ: 'ಭಾರತ ತಂಡಕ್ಕೆ ಈತನೊಬ್ಬ ಸಾಕು...': ಸಿಡಿಲಮರಿ ಸೂರ್ಯಕುಮಾರ್​ಗೆ ವಿಶ್ವಕ್ರಿಕೆಟ್​ ಬಹುಪರಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.