ETV Bharat / sports

ಕುಲ್ದೀಪ್​-ಚಹಲ್​ರನ್ನು ಒಟ್ಟಿಗೆ ಆಡಿಸಬೇಕೆಂಬುದು ನನ್ನ ಮನದಲ್ಲಿದೆ : ರೋಹಿತ್ ಶರ್ಮಾ

author img

By

Published : Feb 5, 2022, 3:57 PM IST

ಹಿಂದೆ ಕುಲ್ದೀಪ್​ ಮತ್ತು ಚಹಲ್​ ನಮಗಾಗಿ ಶ್ರೇಷ್ಠ ಪ್ರದರ್ಶನ ತೋರಿದವರಾಗಿದ್ದಾರೆ. ಅವರಿಬ್ಬರು ಜೊತೆಯಾಗಿ ಆಡಿದಾಗಲೆಲ್ಲಾ ಆಕರ್ಷಕ ಪ್ರದರ್ಶನ ತೋರಿದ್ದಾರೆ. ಮಧ್ಯಂತರದಲ್ಲಿ ಅವರಿಬ್ಬರು ನಾವು ಹೊಸ ಸಂಯೋಜನೆ ಬಯಸಿದ್ದರಿಂದ ಬೇರ್ಪಟ್ಟಿದ್ದರು. ಇದೀಗ ಅವರನ್ನು ಮತ್ತೆ ಒಂದಾಗಿಸಬೇಕೆಂಬುದು ನನ್ನ ಮನದಲ್ಲಿದೆ..

Playing Kuldeep, Chahal together certainly on my mind: Rohit Sharma
ವಿಂಡೀಸ್​ ಸರಣಿಗೆ ಕುಲ್ಧೀಪ್ -ಚಹಲ್​

ಅಹ್ಮದಾಬಾದ್​ : ಮುಂಬರುವ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಶ್ರೇಷ್ಠ ಸ್ಪಿನ್​ದ್ವಯರಲ್ಲಿ ಒಂದಾಗಿದ್ದ ಯಜ್ವೇಂದ್ರ ಚಹಲ್​ ಮತ್ತು ಕುಲ್ದೀಪ್​ ಜೋಡಿಯನ್ನು ಕಣಕ್ಕಿಳಿಸಬೇಕೆಂಬುದ ನನ್ನ ಮನಸ್ಸಿನಲ್ಲಿದೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡ ವಿಂಡೀಸ್​ ವಿರುದ್ಧ ಫೆಬ್ರವರಿ 6ರಿಂದ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಅಧಿಕೃತ ನಾಯಕನಾಗಿ ರೋಹಿತ್ ಶರ್ಮಾ ಅವರಿಗೆ ಇದು ಮೊದಲ ಸರಣಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರೇ ಮುನ್ನಡೆಸಬೇಕಾಗಿತ್ತಾದರೂ, ಹ್ಯಾಮ್​ಸ್ಟ್ರಿಂಗ್ ಕಾರಣ ಪ್ರವಾಸದಿಂದಲೇ ಹೊರಬಿದ್ದಿದ್ದರು. ಹಾಗಾಗಿ, ರಾಹುಲ್​ ತಂಡವನ್ನು ಮುನ್ನಡೆಸಿದ್ದರು.

ಹಿಂದೆ ಕುಲ್ದೀಪ್​ ಮತ್ತು ಚಹಲ್​ ನಮಗಾಗಿ ಶ್ರೇಷ್ಠ ಪ್ರದರ್ಶನ ತೋರಿದವರಾಗಿದ್ದಾರೆ. ಅವರಿಬ್ಬರು ಜೊತೆಯಾಗಿ ಆಡಿದಾಗಲೆಲ್ಲಾ ಆಕರ್ಷಕ ಪ್ರದರ್ಶನ ತೋರಿದ್ದಾರೆ. ಮಧ್ಯಂತರದಲ್ಲಿ ಅವರಿಬ್ಬರು ನಾವು ಹೊಸ ಸಂಯೋಜನೆ ಬಯಸಿದ್ದರಿಂದ ಬೇರ್ಪಟ್ಟಿದ್ದರು.

ಇದೀಗ ಅವರನ್ನು ಮತ್ತೆ ಒಂದಾಗಿಸಬೇಕೆಂಬುದು ನನ್ನ ಮನದಲ್ಲಿದೆ, ವಿಶೇಷವಾಗಿ ಕುಲ್ದೀಪ್ ಎಂದು ರೋಹಿತ್ ವರ್ಚುವಲ್​​ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕುಲ್ದೀಪ್​ ಸಾಕಷ್ಟು ಕ್ರಿಕೆಟ್​ ಆಡಿಲ್ಲ. ಹಾಗಾಗಿ, ಅವರಿಗೆ ನಿಧಾನವಾಗಿ ಅವರನ್ನು ತಂಡದಲ್ಲಿ ಉಳಿಯುವಂತೆ ಮಾಡಲು ಬಯುಸುತ್ತೇವೆ.

ಅವರಿಂದ ಈ ಕೂಡಲೇ ಶ್ರೇಷ್ಠ ಪ್ರದರ್ಶನ ತೋರಬೇಕೆಂಬ ಒತ್ತಡವನ್ನುಂಟು ಮಾಡುವುದಿಲ್ಲ. ನಮಗೂ ಪರಿಸ್ಥಿತಿಯ ಬಗ್ಗೆ ಅರಿವಿದೆ. ಅವರು ತಮ್ಮ ಲಯವನ್ನು ಮರಳಿ ಪಡೆಯುವವರೆಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ನಾಳಿನ ಪಂದ್ಯದಲ್ಲಿ ರಾಹುಲ್​ ಮತ್ತು ಶಿಖರ್ ಧವನ್​ ಲಭ್ಯರಿಲ್ಲದ ಕಾರಣ ಇಶಾನ್ ಕಿಶನ್​ ತಮ್ಮ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.

ಇದನ್ನೂ ಓದಿ:ಧವನ್-ರಾಹುಲ್ ಅನುಪಸ್ಥಿತಿ: ಹೊಸ ಆರಂಭಿಕನನ್ನ ಖಚಿತ ಪಡಿಸಿದ ರೋಹಿತ್ ಶರ್ಮಾ

ಅಹ್ಮದಾಬಾದ್​ : ಮುಂಬರುವ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಶ್ರೇಷ್ಠ ಸ್ಪಿನ್​ದ್ವಯರಲ್ಲಿ ಒಂದಾಗಿದ್ದ ಯಜ್ವೇಂದ್ರ ಚಹಲ್​ ಮತ್ತು ಕುಲ್ದೀಪ್​ ಜೋಡಿಯನ್ನು ಕಣಕ್ಕಿಳಿಸಬೇಕೆಂಬುದ ನನ್ನ ಮನಸ್ಸಿನಲ್ಲಿದೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡ ವಿಂಡೀಸ್​ ವಿರುದ್ಧ ಫೆಬ್ರವರಿ 6ರಿಂದ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಅಧಿಕೃತ ನಾಯಕನಾಗಿ ರೋಹಿತ್ ಶರ್ಮಾ ಅವರಿಗೆ ಇದು ಮೊದಲ ಸರಣಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರೇ ಮುನ್ನಡೆಸಬೇಕಾಗಿತ್ತಾದರೂ, ಹ್ಯಾಮ್​ಸ್ಟ್ರಿಂಗ್ ಕಾರಣ ಪ್ರವಾಸದಿಂದಲೇ ಹೊರಬಿದ್ದಿದ್ದರು. ಹಾಗಾಗಿ, ರಾಹುಲ್​ ತಂಡವನ್ನು ಮುನ್ನಡೆಸಿದ್ದರು.

ಹಿಂದೆ ಕುಲ್ದೀಪ್​ ಮತ್ತು ಚಹಲ್​ ನಮಗಾಗಿ ಶ್ರೇಷ್ಠ ಪ್ರದರ್ಶನ ತೋರಿದವರಾಗಿದ್ದಾರೆ. ಅವರಿಬ್ಬರು ಜೊತೆಯಾಗಿ ಆಡಿದಾಗಲೆಲ್ಲಾ ಆಕರ್ಷಕ ಪ್ರದರ್ಶನ ತೋರಿದ್ದಾರೆ. ಮಧ್ಯಂತರದಲ್ಲಿ ಅವರಿಬ್ಬರು ನಾವು ಹೊಸ ಸಂಯೋಜನೆ ಬಯಸಿದ್ದರಿಂದ ಬೇರ್ಪಟ್ಟಿದ್ದರು.

ಇದೀಗ ಅವರನ್ನು ಮತ್ತೆ ಒಂದಾಗಿಸಬೇಕೆಂಬುದು ನನ್ನ ಮನದಲ್ಲಿದೆ, ವಿಶೇಷವಾಗಿ ಕುಲ್ದೀಪ್ ಎಂದು ರೋಹಿತ್ ವರ್ಚುವಲ್​​ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕುಲ್ದೀಪ್​ ಸಾಕಷ್ಟು ಕ್ರಿಕೆಟ್​ ಆಡಿಲ್ಲ. ಹಾಗಾಗಿ, ಅವರಿಗೆ ನಿಧಾನವಾಗಿ ಅವರನ್ನು ತಂಡದಲ್ಲಿ ಉಳಿಯುವಂತೆ ಮಾಡಲು ಬಯುಸುತ್ತೇವೆ.

ಅವರಿಂದ ಈ ಕೂಡಲೇ ಶ್ರೇಷ್ಠ ಪ್ರದರ್ಶನ ತೋರಬೇಕೆಂಬ ಒತ್ತಡವನ್ನುಂಟು ಮಾಡುವುದಿಲ್ಲ. ನಮಗೂ ಪರಿಸ್ಥಿತಿಯ ಬಗ್ಗೆ ಅರಿವಿದೆ. ಅವರು ತಮ್ಮ ಲಯವನ್ನು ಮರಳಿ ಪಡೆಯುವವರೆಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ನಾಳಿನ ಪಂದ್ಯದಲ್ಲಿ ರಾಹುಲ್​ ಮತ್ತು ಶಿಖರ್ ಧವನ್​ ಲಭ್ಯರಿಲ್ಲದ ಕಾರಣ ಇಶಾನ್ ಕಿಶನ್​ ತಮ್ಮ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.

ಇದನ್ನೂ ಓದಿ:ಧವನ್-ರಾಹುಲ್ ಅನುಪಸ್ಥಿತಿ: ಹೊಸ ಆರಂಭಿಕನನ್ನ ಖಚಿತ ಪಡಿಸಿದ ರೋಹಿತ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.