ETV Bharat / sports

ನಾನು ಕಾಯುತ್ತೇನೆ; WTC ಫೈನಲ್​ನಲ್ಲಿ ಪಂತ್​​ ವಿಕೆಟ್​ ಕೀಪರ್​ ಆಗಲಿ: ವೃದ್ಧಿಮಾನ್​

ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿಯಲ್ಲಿ ರಿಷಭ್ ಪಂತ್​ ಭಾರತದ ಮೊದಲ ವಿಕೆಟ್ ಕೀಪರ್​​ ಆಯ್ಕೆ ಆಗಿರಲಿ ಎಂದು ವೃದ್ಧಿಮಾನ್ ಸಹಾ ಹೇಳಿದ್ದಾರೆ.

author img

By

Published : May 21, 2021, 9:04 PM IST

Saha
Saha

ನವದೆಹಲಿ: ನ್ಯೂಜಿಲ್ಯಾಂಡ್​ ವಿರುದ್ಧ ಜೂನ್​ ತಿಂಗಳಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ.

ವಿಕೆಟ್​ ಕೀಪರ್​​ಗಳಾಗಿರುವ ರಿಷಭ್​ ಪಂತ್ ಹಾಗೂ ವೃದ್ಧಿಮಾನ್​ ಸಹಾ ಇಬ್ಬರು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಇದೀಗ ಸಹಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ಪಂತ್ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರತಿಭೆ, ಕೀಪಿಂಗ್​ನಲ್ಲಿ ತೊಟ್ಟಿಲಲ್ಲಿರುವ ಮಗು: ಸಯ್ಯದ್ ಕಿರ್ಮಾನಿ ವಿಶ್ಲೇಷಣೆ

ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಸೇರಿದಂತೆ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಟೆಸ್ಟ್​ ಪಂದ್ಯಗಳಲ್ಲಿ ರಿಷಭ್​ ಪಂತ್​ ಭಾರತದ ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿರಬೇಕು ಎಂದು ವೃದ್ಧಿಮಾನ್​ ಸಹಾ ಹೇಳಿದ್ದಾರೆ. ಮಹೇಂದ್ರ ಸಿಂಗ್​ ಧೋನಿ ಟೆಸ್ಟ್​ ಕ್ರಿಕೆಟ್​​ನಿಂದ ನಿವೃತ್ತರಾದ ನಂತರ ರಿಷಭ್ ಪಂತ್ ಟೀಂ ಇಂಡಿಯಾ ಸೇರಿಕೊಳ್ಳುವವರೆಗೂ ಅಂದರೆ 2014ರಿಂದ ಸಹಾ ಭಾರತದ ಮೊದಲ ಆಯ್ಕೆಯ ವಿಕೆಟ್​ ಕೀಪರ್ ಆಗಿದ್ದರು. ​ಆದರೆ, ಇದೀಗ ಪಂತ್​ಗೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ.

ರಿಷಭ್​ ಪಂತ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಕೊನೆಯ ಕೆಲವು ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಉತ್ತಮ ಪ್ರದರ್ಶನ ನೀಡಿದ್ದು, ಇಂಗ್ಲೆಂಡ್​ನಲ್ಲಿ ನಮ್ಮ ಮೊದಲ ಆಯ್ಕೆ ಕೀಪರ್​ ಆಗಿರಬೇಕು. ನಾನು ಕಾಯುತ್ತೇನೆ. ಜೊತೆಗೆ ಯಾವುದೇ ಅವಕಾಶ ಸಿಕ್ಕರೂ ಪ್ರದರ್ಶನ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ.

ಬ್ಯಾಟಿಂಗ್​ನಲ್ಲಿ ಪಂತ್​ ವೈಫಲ್ಯ ಅನುಭವಿಸಿದ ಕಾರಣಕ್ಕಾಗಿ ವೃದ್ಧಿಮಾನ್ ಸಹಾ ಅವಕಾಶ ಪಡೆದುಕೊಂಡಿದ್ದರು. ಆದರೆ ಗಾಯದಿಂದಾಗಿ ಕಳೆದ ವರ್ಷ ಅಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಅವರು ಹೊರಗುಳಿದಿದ್ದರು. ಈ ವೇಳೆ ಉತ್ತಮ ಪ್ರದರ್ಶನ ನೀಡಿದ್ದ ಪಂತ್​, ಅನೇಕ ಮಹತ್ವದ ಇನ್ನಿಂಗ್ಸ್​ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ನವದೆಹಲಿ: ನ್ಯೂಜಿಲ್ಯಾಂಡ್​ ವಿರುದ್ಧ ಜೂನ್​ ತಿಂಗಳಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ.

ವಿಕೆಟ್​ ಕೀಪರ್​​ಗಳಾಗಿರುವ ರಿಷಭ್​ ಪಂತ್ ಹಾಗೂ ವೃದ್ಧಿಮಾನ್​ ಸಹಾ ಇಬ್ಬರು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಇದೀಗ ಸಹಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ಪಂತ್ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರತಿಭೆ, ಕೀಪಿಂಗ್​ನಲ್ಲಿ ತೊಟ್ಟಿಲಲ್ಲಿರುವ ಮಗು: ಸಯ್ಯದ್ ಕಿರ್ಮಾನಿ ವಿಶ್ಲೇಷಣೆ

ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಸೇರಿದಂತೆ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಟೆಸ್ಟ್​ ಪಂದ್ಯಗಳಲ್ಲಿ ರಿಷಭ್​ ಪಂತ್​ ಭಾರತದ ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿರಬೇಕು ಎಂದು ವೃದ್ಧಿಮಾನ್​ ಸಹಾ ಹೇಳಿದ್ದಾರೆ. ಮಹೇಂದ್ರ ಸಿಂಗ್​ ಧೋನಿ ಟೆಸ್ಟ್​ ಕ್ರಿಕೆಟ್​​ನಿಂದ ನಿವೃತ್ತರಾದ ನಂತರ ರಿಷಭ್ ಪಂತ್ ಟೀಂ ಇಂಡಿಯಾ ಸೇರಿಕೊಳ್ಳುವವರೆಗೂ ಅಂದರೆ 2014ರಿಂದ ಸಹಾ ಭಾರತದ ಮೊದಲ ಆಯ್ಕೆಯ ವಿಕೆಟ್​ ಕೀಪರ್ ಆಗಿದ್ದರು. ​ಆದರೆ, ಇದೀಗ ಪಂತ್​ಗೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ.

ರಿಷಭ್​ ಪಂತ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಕೊನೆಯ ಕೆಲವು ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಉತ್ತಮ ಪ್ರದರ್ಶನ ನೀಡಿದ್ದು, ಇಂಗ್ಲೆಂಡ್​ನಲ್ಲಿ ನಮ್ಮ ಮೊದಲ ಆಯ್ಕೆ ಕೀಪರ್​ ಆಗಿರಬೇಕು. ನಾನು ಕಾಯುತ್ತೇನೆ. ಜೊತೆಗೆ ಯಾವುದೇ ಅವಕಾಶ ಸಿಕ್ಕರೂ ಪ್ರದರ್ಶನ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ.

ಬ್ಯಾಟಿಂಗ್​ನಲ್ಲಿ ಪಂತ್​ ವೈಫಲ್ಯ ಅನುಭವಿಸಿದ ಕಾರಣಕ್ಕಾಗಿ ವೃದ್ಧಿಮಾನ್ ಸಹಾ ಅವಕಾಶ ಪಡೆದುಕೊಂಡಿದ್ದರು. ಆದರೆ ಗಾಯದಿಂದಾಗಿ ಕಳೆದ ವರ್ಷ ಅಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಅವರು ಹೊರಗುಳಿದಿದ್ದರು. ಈ ವೇಳೆ ಉತ್ತಮ ಪ್ರದರ್ಶನ ನೀಡಿದ್ದ ಪಂತ್​, ಅನೇಕ ಮಹತ್ವದ ಇನ್ನಿಂಗ್ಸ್​ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.