ETV Bharat / sports

ಜನ ಸೋಂಕಿನಿಂದ ಸಾಯುತ್ತಿರುವಾಗ ಐಪಿಎಲ್​ ನೋಡುವುದು ಅಸಹ್ಯ; ನಾಸಿರ್ ಹುಸೇನ್

author img

By

Published : May 5, 2021, 4:07 PM IST

ಐಪಿಎಲ್ ನಡೆಯುವ ಜಾಗದಲ್ಲಿ ಜನರು ರಸ್ತೆಯ ಮೇಲೆ ಸತ್ತು ಬೀಳುತ್ತಿದ್ದರೂ ಐಪಿಎಲ್ ನೋಡುವುದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಇಲ್ಲಿ ನಾನು ಯಾವುದೇ ಆಟಗಾರರನ್ನು ದೂಷಿಸುವುದಿಲ್ಲ, ಆದರೆ ಲೀಗ್​ಅನ್ನು ನಿಲ್ಲಿಸಲೇಬೇಕಾಗಿತ್ತು ನಾಸಿರ್ ಹುಸೇನ್ ಅವರು ಇಂಗ್ಲೀಷ್ ಪತ್ರಿಕೆ ಡೈಲಿ ಮೇಲ್​ನಲ್ಲಿ ಬರೆದಿದ್ದಾರೆ.

ನಾಸಿರ್ ಹುಸೇನ್
ನಾಸಿರ್ ಹುಸೇನ್

ನವದೆಹಲಿ: ಕೋವಿಡ್​-19 ಸೋಂಕಿನಿಂದ ಜನ ರಸ್ತೆಯಲ್ಲಿ ಸಾವನ್ನಪ್ಪುತ್ತಿರುವ ಇಂಥ ಸಮಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ ನೋಡುವುದು ಅಸಹ್ಯಕರ ಮತ್ತು ಅಹಿತಕರ ಎಂದಿರುವ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್, ಬಿಸಿಸಿಐ ಐಪಿಎಲ್​ ಅಯೋಜಿಸಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದೆ ಮೊದಲ ತಪ್ಪು ಎಂದಿದ್ದಾರೆ.

"ಐಪಿಎಲ್ ನಡೆಯುವ ಜಾಗದಲ್ಲಿ ಜನರು ರಸ್ತೆಯ ಮೇಲೆ ಸತ್ತು ಬೀಳುತ್ತಿರುವ ಸಂದರ್ಭದಲ್ಲಿ ಐಪಿಎಲ್ ನೋಡುವುದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಇಲ್ಲಿ ನಾನು ಯಾವುದೇ ಆಟಗಾರರನ್ನು ಧೂಷಿಸುವುದಿಲ್ಲ, ಆದರೆ ಲೀಗ್​ಅನ್ನು ನಿಲ್ಲಿಸಲೇಬೇಕಾಗಿತ್ತು" ಎಂದು ಅವರು ಇಂಗ್ಲೀಷ್ ಪತ್ರಿಕೆ ಡೈಲಿ ಮೇಲ್​ನಲ್ಲಿ ಬರೆದಿದ್ದಾರೆ.

ಕೆಲವು ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಮಂಗಳವಾರ ಬಿಸಿಸಿಐ ಲೀಗ್ ​ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಆದರೆ ಇಂಗ್ಲೆಂಡ್ ಮಾಜಿ ನಾಯಕ ಹುಸೇನ್ ಪ್ರಕಾರ ಕಳೆದ ವರ್ಷದಂತೆ ಈ ಆವೃತ್ತಿಯು ಯುಎಇನಲ್ಲೇ ನಡೆಯಬೇಕಿತ್ತು ಎಂದಿದ್ದಾರೆ.

ಭಾರತವನ್ನು ಟೂರ್ನಮೆಂಟ್ ಆಯೋಜಿಸಲು ಆಯ್ಕೆ ಮಾಡಿಕೊಂಡಿದ್ದೇ ಮೊದಲ ತಪ್ಪು. 6 ತಿಂಗಳ ಹಿಂದೆ ಯುಎಇನಲ್ಲಿ ಐಪಿಎಲ್​ ಅದ್ಭುತವಾಗಿ ಜರುಗಿತ್ತು. ಅಲ್ಲಿ ಕೋವಿಡ್​ ದರ ಕಡಿಮೆಯಿತ್ತು. ಇನ್ನೂ ಬಯೋಬಬಲ್​ನಲ್ಲಿ ಯಾವುದೇ ರಾಜಿಯಿರಲಿಲ್ಲ. ಅವರು ಅಲ್ಲಿಗೆ ಈ ಬಾರಿಯೂ ಮರಳಬೇಕಿತ್ತು ಎಂದು ಹುಸೇನ್ ಹೇಳಿದ್ದಾರೆ.

ಈಗ ಅದನ್ನು ಪಶ್ಚಾತ್ತಾಪದಿಂದ ಹೇಳುವುದು ಸುಲಭ. ಆದರೆ ಈ ವರ್ಷದ ಸ್ಪರ್ಧೆಯನ್ನು ನಡೆಸಲು ನಿರ್ಧರಿಸಿದಾಗ ಭಾರತದಲ್ಲಿ ವೈರಸ್‌ ಕೆಟ್ಟದಾಗಿರುವುದು ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಭಾರತದಲ್ಲಿ ಟಿ20 ವಿಶ್ವಕಪ್ ನಡೆಸುವುದರ ಕುರಿತು ಜುಲೈನಲ್ಲಿ ಅಂತಿಮ ನಿರ್ಧಾರ

ನವದೆಹಲಿ: ಕೋವಿಡ್​-19 ಸೋಂಕಿನಿಂದ ಜನ ರಸ್ತೆಯಲ್ಲಿ ಸಾವನ್ನಪ್ಪುತ್ತಿರುವ ಇಂಥ ಸಮಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ ನೋಡುವುದು ಅಸಹ್ಯಕರ ಮತ್ತು ಅಹಿತಕರ ಎಂದಿರುವ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್, ಬಿಸಿಸಿಐ ಐಪಿಎಲ್​ ಅಯೋಜಿಸಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದೆ ಮೊದಲ ತಪ್ಪು ಎಂದಿದ್ದಾರೆ.

"ಐಪಿಎಲ್ ನಡೆಯುವ ಜಾಗದಲ್ಲಿ ಜನರು ರಸ್ತೆಯ ಮೇಲೆ ಸತ್ತು ಬೀಳುತ್ತಿರುವ ಸಂದರ್ಭದಲ್ಲಿ ಐಪಿಎಲ್ ನೋಡುವುದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಇಲ್ಲಿ ನಾನು ಯಾವುದೇ ಆಟಗಾರರನ್ನು ಧೂಷಿಸುವುದಿಲ್ಲ, ಆದರೆ ಲೀಗ್​ಅನ್ನು ನಿಲ್ಲಿಸಲೇಬೇಕಾಗಿತ್ತು" ಎಂದು ಅವರು ಇಂಗ್ಲೀಷ್ ಪತ್ರಿಕೆ ಡೈಲಿ ಮೇಲ್​ನಲ್ಲಿ ಬರೆದಿದ್ದಾರೆ.

ಕೆಲವು ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಮಂಗಳವಾರ ಬಿಸಿಸಿಐ ಲೀಗ್ ​ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಆದರೆ ಇಂಗ್ಲೆಂಡ್ ಮಾಜಿ ನಾಯಕ ಹುಸೇನ್ ಪ್ರಕಾರ ಕಳೆದ ವರ್ಷದಂತೆ ಈ ಆವೃತ್ತಿಯು ಯುಎಇನಲ್ಲೇ ನಡೆಯಬೇಕಿತ್ತು ಎಂದಿದ್ದಾರೆ.

ಭಾರತವನ್ನು ಟೂರ್ನಮೆಂಟ್ ಆಯೋಜಿಸಲು ಆಯ್ಕೆ ಮಾಡಿಕೊಂಡಿದ್ದೇ ಮೊದಲ ತಪ್ಪು. 6 ತಿಂಗಳ ಹಿಂದೆ ಯುಎಇನಲ್ಲಿ ಐಪಿಎಲ್​ ಅದ್ಭುತವಾಗಿ ಜರುಗಿತ್ತು. ಅಲ್ಲಿ ಕೋವಿಡ್​ ದರ ಕಡಿಮೆಯಿತ್ತು. ಇನ್ನೂ ಬಯೋಬಬಲ್​ನಲ್ಲಿ ಯಾವುದೇ ರಾಜಿಯಿರಲಿಲ್ಲ. ಅವರು ಅಲ್ಲಿಗೆ ಈ ಬಾರಿಯೂ ಮರಳಬೇಕಿತ್ತು ಎಂದು ಹುಸೇನ್ ಹೇಳಿದ್ದಾರೆ.

ಈಗ ಅದನ್ನು ಪಶ್ಚಾತ್ತಾಪದಿಂದ ಹೇಳುವುದು ಸುಲಭ. ಆದರೆ ಈ ವರ್ಷದ ಸ್ಪರ್ಧೆಯನ್ನು ನಡೆಸಲು ನಿರ್ಧರಿಸಿದಾಗ ಭಾರತದಲ್ಲಿ ವೈರಸ್‌ ಕೆಟ್ಟದಾಗಿರುವುದು ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಭಾರತದಲ್ಲಿ ಟಿ20 ವಿಶ್ವಕಪ್ ನಡೆಸುವುದರ ಕುರಿತು ಜುಲೈನಲ್ಲಿ ಅಂತಿಮ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.