ETV Bharat / sports

ವಿಜಯ ಹಜಾರೆ ಟ್ರೋಫಿಯಲ್ಲಿ ಋತುರಾಜ್​ ಆರ್ಭಟ: ಸತತ 2 ಶತಕ ಸಿಡಿಸಿದ ಗಾಯಕ್ವಾಡ್​

author img

By

Published : Dec 9, 2021, 7:20 PM IST

ಗುರುವಾರ ನಡೆದ ಛತ್ತೀಸ್​​​​​ಗಢ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್​ ಅಜೇಯ ಶತಕ​​ ಸಿಡಿಸಿ ಮಹಾರಾಷ್ಟ್ರಕ್ಕೆ 8 ವಿಕೆಟ್​ಗಳ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಗಾಯಕ್ವಾಡ್​ 143 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 154 ರನ್​ಗಳಿಸಿದರು.

Maharashtra Ruturaj Gaikwad slams two consecutive century
ಋತುರಾಜ್ ಗಾಯಕ್ವಾಡ್​ ಶತಕ

ರಾಜ್​ಕೋಟ್​: ಮಹಾರಾಷ್ಟ್ರದ ಯುವ ಬ್ಯಾಟರ್​ ಋತುರಾಜ್​ ಗಾಯಕ್ವಾಡ್​ ಅವರು 2021ರ ವರ್ಷದಲ್ಲಿ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಐಪಿಎಲ್​ನಲ್ಲಿ ಗರಿಷ್ಠ ರನ್​ ಸಿಡಿಸಿ ಆರೆಂಜ್​ ಕ್ಯಾಪ್ ಪಡೆದಿದ್ದ ಸಿಎಸ್​ಕೆ ಬ್ಯಾಟರ್​, ಇದೀಗ ತಮ್ಮ ಅಮೋಘ ರನ್​ ಬೇಟೆಯನ್ನು ವಿಜಯ ಹಜಾರೆ ಟ್ರೋಫಿಯಲ್ಲೂ ಮುಂದುವರಿಸಿದ್ದಾರೆ.

ಋತುರಾಜ್​ ಗಾಯಕ್ವಾಡ್​ ಪ್ರಸ್ತುತ ನಡೆಯುತ್ತಿರುವ 50 ಓವರ್​ಗಳ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮಧ್ಯ ಪ್ರದೇಶದ ವಿರುದ್ಧ 112 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 136 ರನ್​ ಸಿಡಿಸಿ 329 ರನ್​ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್​ ಮಾಡಲು ನೆರವಾಗಿದ್ದರು.

1⃣3⃣6⃣ vs Madhya Pradesh
1⃣0⃣0⃣ up & going strong vs Chhattisgarh @Ruutu1331 brings up his second successive ton. 👏 👏 #CHHvMAH #VijayHazareTrophy pic.twitter.com/LUMmgInDi3

— BCCI Domestic (@BCCIdomestic) December 9, 2021

ಇದೀಗ ಗುರುವಾರ ನಡೆದ ಛತ್ತೀಸ್​​ಗಢ ವಿರುದ್ಧದ ಪಂದ್ಯದಲ್ಲೂ ಅಜೇಯ ಶತಕ​​ ಸಿಡಿಸಿ ಮಹಾರಾಷ್ಟ್ರಕ್ಕೆ 8 ವಿಕೆಟ್​ಗಳ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ಗಾಯಕ್ವಾಡ್​ 143 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 154 ರನ್​ಗಳಿಸಿದರು. ಛತ್ತೀಸ್​​ಗಢ ನೀಡಿದ್ದ 276 ರನ್​ಗಳನ್ನು ಮಹಾರಾಷ್ಟ್ರ 47 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ತಲುಪಿತು. ಇದಕ್ಕೂ ಕಳೆದ ತಿಂಗಳು ನಡೆದಿದ್ದ ಸಯ್ಯದ್ ಮುಷ್ತಾಕ್ ಅಲಿ ಟಿ-20ಯಲ್ಲಿ 5 ಪಂದ್ಯಗಳಿಂದ 3 ಅರ್ಧಶತಕ ಸಹಿತ 259 ರನ್​ ಸಿಡಿಸಿದ್ದರು.

6 ಕೋಟಿ ರೂ.ಗೆ ರಿಟೈನ್ ಆದ ಮಹಾರಾಷ್ಟ್ರ ನಾಯಕ

ನಾಯಕನಾಗಿ ಮಿಂಚುಹರಿಸುತ್ತಿರುವ ಋತುರಾಜ್​ ಗಾಯಕ್ವಾಡ್​ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್​ 6 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. 2020ರಲ್ಲಿ ಇವರನ್ನು ಫ್ರಾಂಚೈಸಿ ಕೇವಲ 20 ಲಕ್ಷಕ್ಕೆ ಖರೀದಿಸಿತ್ತು. 2021ರ ಆವೃತ್ತಿಯಲ್ಲಿ 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 635 ರನ್​ ಸಿಡಿಸಿ ಆರೆಂಜ್​ ಕ್ಯಾಪ್​ ಪಡೆದಿದ್ದಲ್ಲದೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಲು ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ:ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ್ದೇಕೆ: ಕೊನೆಗೂ ಬಾಯ್ಬಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ರಾಜ್​ಕೋಟ್​: ಮಹಾರಾಷ್ಟ್ರದ ಯುವ ಬ್ಯಾಟರ್​ ಋತುರಾಜ್​ ಗಾಯಕ್ವಾಡ್​ ಅವರು 2021ರ ವರ್ಷದಲ್ಲಿ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಐಪಿಎಲ್​ನಲ್ಲಿ ಗರಿಷ್ಠ ರನ್​ ಸಿಡಿಸಿ ಆರೆಂಜ್​ ಕ್ಯಾಪ್ ಪಡೆದಿದ್ದ ಸಿಎಸ್​ಕೆ ಬ್ಯಾಟರ್​, ಇದೀಗ ತಮ್ಮ ಅಮೋಘ ರನ್​ ಬೇಟೆಯನ್ನು ವಿಜಯ ಹಜಾರೆ ಟ್ರೋಫಿಯಲ್ಲೂ ಮುಂದುವರಿಸಿದ್ದಾರೆ.

ಋತುರಾಜ್​ ಗಾಯಕ್ವಾಡ್​ ಪ್ರಸ್ತುತ ನಡೆಯುತ್ತಿರುವ 50 ಓವರ್​ಗಳ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮಧ್ಯ ಪ್ರದೇಶದ ವಿರುದ್ಧ 112 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 136 ರನ್​ ಸಿಡಿಸಿ 329 ರನ್​ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್​ ಮಾಡಲು ನೆರವಾಗಿದ್ದರು.

ಇದೀಗ ಗುರುವಾರ ನಡೆದ ಛತ್ತೀಸ್​​ಗಢ ವಿರುದ್ಧದ ಪಂದ್ಯದಲ್ಲೂ ಅಜೇಯ ಶತಕ​​ ಸಿಡಿಸಿ ಮಹಾರಾಷ್ಟ್ರಕ್ಕೆ 8 ವಿಕೆಟ್​ಗಳ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ಗಾಯಕ್ವಾಡ್​ 143 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 154 ರನ್​ಗಳಿಸಿದರು. ಛತ್ತೀಸ್​​ಗಢ ನೀಡಿದ್ದ 276 ರನ್​ಗಳನ್ನು ಮಹಾರಾಷ್ಟ್ರ 47 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ತಲುಪಿತು. ಇದಕ್ಕೂ ಕಳೆದ ತಿಂಗಳು ನಡೆದಿದ್ದ ಸಯ್ಯದ್ ಮುಷ್ತಾಕ್ ಅಲಿ ಟಿ-20ಯಲ್ಲಿ 5 ಪಂದ್ಯಗಳಿಂದ 3 ಅರ್ಧಶತಕ ಸಹಿತ 259 ರನ್​ ಸಿಡಿಸಿದ್ದರು.

6 ಕೋಟಿ ರೂ.ಗೆ ರಿಟೈನ್ ಆದ ಮಹಾರಾಷ್ಟ್ರ ನಾಯಕ

ನಾಯಕನಾಗಿ ಮಿಂಚುಹರಿಸುತ್ತಿರುವ ಋತುರಾಜ್​ ಗಾಯಕ್ವಾಡ್​ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್​ 6 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. 2020ರಲ್ಲಿ ಇವರನ್ನು ಫ್ರಾಂಚೈಸಿ ಕೇವಲ 20 ಲಕ್ಷಕ್ಕೆ ಖರೀದಿಸಿತ್ತು. 2021ರ ಆವೃತ್ತಿಯಲ್ಲಿ 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 635 ರನ್​ ಸಿಡಿಸಿ ಆರೆಂಜ್​ ಕ್ಯಾಪ್​ ಪಡೆದಿದ್ದಲ್ಲದೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಲು ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ:ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ್ದೇಕೆ: ಕೊನೆಗೂ ಬಾಯ್ಬಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.