ಕಳಪೆ ಪ್ರದರ್ಶನ ನೀಡುತ್ತಿರುವ ಕೆ.ಎಲ್. ರಾಹುಲ್ ಮೇಲೆ ಟೀಕೆಗಳು ಕೇಳಿ ಬರುತ್ತಿದೆ. ಅಲ್ಲದೇ ಉಪನಾಯಕನ ಸ್ಥಾನ ನೀಡಿರುವುದರಿಂದ ಆಡುವ 11ರಲ್ಲಿ ಕೈಬಿಡಲಾಗುತ್ತಿಲ್ಲ ಎಂಬ ಅಭಿಪ್ರಾಯಗಳು ಬಂದ ಹಿನ್ನೆಲೆ ರಾಹುಲ್ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಮಾತ್ರ ಟೀಮ್ ಘೋಷಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ನಂತರ ಮೂರು ಮತ್ತು ನಾಲ್ಕನೇ ಟೆಸ್ಟ್ ಹಾಗೂ ಏಕದಿನ ಸರಣಿಯ ತಂಡವನ್ನು ಪ್ರಕಟಿಸಿದೆ.
ಮುಂದಿನ ಎರಡು ಟೆಸ್ಟ್ ಪಂದ್ಯಕ್ಕೆ ಪ್ರಕಟಿಸಿರುವ ತಂಡದಲ್ಲಿ ಉಪನಾಯಕನ ಸ್ಥಾನವನ್ನು ತಂಡ ಪ್ರಕಟಿಸಿಲ್ಲ. ಉಪನಾಯಕನ ಸ್ಥಾನ ಕೊಟ್ಟಿರುವುದರಿಂದ 11ರ ಬಳಗದಿಂದ ಕೈ ಬಿಡಲಾಗುತ್ತಿಲ್ಲ ಎಂಬ ಟೀಕೆ ಇದಕ್ಕೆ ಕಾರಣವೇ ಎಂಬ ಅನುಮಾನ ಹುಟ್ಟಿದೆ. ತಂಡದಲ್ಲಿ ರಾಹುಲ್ ಪರ್ಯಾಯ ವಿಕೆಟ್ ಕೀಪರ್ ಇದ್ದರೂ ಭರತ್ ಜೊತೆಗೆ ಇಶನ್ ಕಿಶನ್ಗೆ ಸ್ಥಾನ ದೊರೆತಿದೆ.
ಸೌರಾಷ್ಟ್ರ ತಂಡ ರಣಜಿ ಫೈನಲ್ ಪ್ರವೇಶ ಪಡೆದ ಕಾರಣ ಜಯದೇವ್ ಉನಾದ್ಕತ್ಗೆ ಎರಡನೇ ಟೆಸ್ಟ್ನಿಂದ ಬಿಸಿಸಿಐ ಬಿಡುಗಡೆ ನೀಡಿತ್ತು. ಸೌರಾಷ್ಟ್ರ ಎರಡನೇ ಬಾರಿ ರಣಜಿ ಕಪ್ ಗೆದ್ದ ನಂತರ ಮತ್ತೆ ಉನಾದ್ಕತ್ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬೌಲಿಂಗ್ ಪಡೆಯಲ್ಲಿ ಮತ್ತಾವುದೇ ಬದಲಾವಣೆ ಮಾಡಲಾಗಿಲ್ಲ. ಆಲ್ರೌಡರ್ ಮತ್ತು ಸ್ಪಿನ್ ವಿಭಾಗವನ್ನು ಜಡೇಜ, ಅಶ್ವಿನ್ ಮತ್ತು ಅಕ್ಷರ್ ಉತ್ತಮವಾಗಿ ನಿಭಾಯಿಸುತ್ತಿದ್ದು, ಮಿಕ್ಕೆರಡು ಪಂದ್ಯಕ್ಕೂ ಅವರೇ ಮುಂದುವೆರೆಯುವ ಸಾಧ್ಯತೆ ಹೆಚ್ಚಿದೆ.
-
🚨 NEWS 🚨: India squads for last two Tests of Border-Gavaskar Trophy and ODI series announced. #TeamIndia | #INDvAUS | @mastercardindia
— BCCI (@BCCI) February 19, 2023 " class="align-text-top noRightClick twitterSection" data="
More Details 🔽https://t.co/Mh8XMabWei
">🚨 NEWS 🚨: India squads for last two Tests of Border-Gavaskar Trophy and ODI series announced. #TeamIndia | #INDvAUS | @mastercardindia
— BCCI (@BCCI) February 19, 2023
More Details 🔽https://t.co/Mh8XMabWei🚨 NEWS 🚨: India squads for last two Tests of Border-Gavaskar Trophy and ODI series announced. #TeamIndia | #INDvAUS | @mastercardindia
— BCCI (@BCCI) February 19, 2023
More Details 🔽https://t.co/Mh8XMabWei