ETV Bharat / sports

ಕೊನೆಯ ಎರಡು ಟೆಸ್ಟ್​ಗೆ ತಂಡ ಪ್ರಕಟ: ರಾಹುಲ್​ಗೆ ಉಪನಾಯಕ ಸ್ಥಾನ ಖೋತಾ

author img

By

Published : Feb 20, 2023, 2:01 PM IST

ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೂರು ಮತ್ತು ನಾಲ್ಕನೇ ಪಂದ್ಯಕ್ಕೆ ತಂಡ ಪ್ರಕಟ - ಆಸ್ಟ್ರೇಲಿಯಾ ಎದುರಿನ ಮೂರು ಏಕದಿನ ಪಂದ್ಯಗಳ ಸರಣಿಗೂ ತಂಡ ಘೋಷಣೆ - ಉಪನಾಯಕನ ಸ್ಥಾನ ಕಳೆದುಕೊಂಡ ರಾಹುಲ್​ - ಮೊದಲ ಏಕದಿನಕ್ಕೆ ರೋಹಿತ್​ ಅಲಭ್ಯ.

kl-rahul-lost-the-vice-captain-position
ರಾಹುಲ್​ಗೆ ಕೈ ತಪ್ಪಿದ ಉಪನಾಯಕನ ಸ್ಥಾನ

ಕಳಪೆ ಪ್ರದರ್ಶನ ನೀಡುತ್ತಿರುವ ಕೆ.ಎಲ್​. ರಾಹುಲ್​ ಮೇಲೆ ಟೀಕೆಗಳು ಕೇಳಿ ಬರುತ್ತಿದೆ. ಅಲ್ಲದೇ ಉಪನಾಯಕನ ಸ್ಥಾನ ನೀಡಿರುವುದರಿಂದ ಆಡುವ 11ರಲ್ಲಿ ಕೈಬಿಡಲಾಗುತ್ತಿಲ್ಲ ಎಂಬ ಅಭಿಪ್ರಾಯಗಳು ಬಂದ ಹಿನ್ನೆಲೆ ರಾಹುಲ್ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳಿಗೆ ಮಾತ್ರ ಟೀಮ್​ ಘೋಷಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ನಂತರ ಮೂರು ಮತ್ತು ನಾಲ್ಕನೇ ಟೆಸ್ಟ್​ ಹಾಗೂ ಏಕದಿನ ಸರಣಿಯ ತಂಡವನ್ನು ಪ್ರಕಟಿಸಿದೆ.

ಮುಂದಿನ ಎರಡು ಟೆಸ್ಟ್​ ಪಂದ್ಯಕ್ಕೆ ಪ್ರಕಟಿಸಿರುವ ತಂಡದಲ್ಲಿ ಉಪನಾಯಕನ ಸ್ಥಾನವನ್ನು ತಂಡ ಪ್ರಕಟಿಸಿಲ್ಲ. ಉಪನಾಯಕನ ಸ್ಥಾನ ಕೊಟ್ಟಿರುವುದರಿಂದ 11ರ ಬಳಗದಿಂದ ಕೈ ಬಿಡಲಾಗುತ್ತಿಲ್ಲ ಎಂಬ ಟೀಕೆ ಇದಕ್ಕೆ ಕಾರಣವೇ ಎಂಬ ಅನುಮಾನ ಹುಟ್ಟಿದೆ. ತಂಡದಲ್ಲಿ ರಾಹುಲ್​ ಪರ್ಯಾಯ ವಿಕೆಟ್​ ಕೀಪರ್​ ಇದ್ದರೂ ಭರತ್​ ಜೊತೆಗೆ ಇಶನ್​ ಕಿಶನ್​ಗೆ ಸ್ಥಾನ ದೊರೆತಿದೆ.

ಸೌರಾಷ್ಟ್ರ ತಂಡ ರಣಜಿ ಫೈನಲ್​ ಪ್ರವೇಶ ಪಡೆದ ಕಾರಣ ಜಯದೇವ್​ ಉನಾದ್ಕತ್​ಗೆ ಎರಡನೇ ಟೆಸ್ಟ್​ನಿಂದ ಬಿಸಿಸಿಐ ಬಿಡುಗಡೆ ನೀಡಿತ್ತು. ಸೌರಾಷ್ಟ್ರ ಎರಡನೇ ಬಾರಿ ರಣಜಿ ಕಪ್​ ಗೆದ್ದ ನಂತರ ಮತ್ತೆ ಉನಾದ್ಕತ್​ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬೌಲಿಂಗ್ ಪಡೆಯಲ್ಲಿ ಮತ್ತಾವುದೇ ಬದಲಾವಣೆ ಮಾಡಲಾಗಿಲ್ಲ. ಆಲ್​ರೌಡರ್ ಮತ್ತು ಸ್ಪಿನ್​ ವಿಭಾಗವನ್ನು ಜಡೇಜ, ಅಶ್ವಿನ್​ ಮತ್ತು ಅಕ್ಷರ್​ ಉತ್ತಮವಾಗಿ ನಿಭಾಯಿಸುತ್ತಿದ್ದು, ಮಿಕ್ಕೆರಡು ಪಂದ್ಯಕ್ಕೂ ಅವರೇ ಮುಂದುವೆರೆಯುವ ಸಾಧ್ಯತೆ ಹೆಚ್ಚಿದೆ.

ಮಾರ್ಚ್​ 1ರಿಂದ 5ರ ವರೆಗೆ ಮೂರನೇ ಟೆಸ್ಟ್​ ಪಂದ್ಯ ಇಂದೋರ್​ನ ಹೋಳ್ಕರ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಪಂದ್ಯವನ್ನು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿಲಾಗಿತ್ತು. ಆದರೆ ಔಟ್​ ಫೀಲ್ಡ್​ ಇನ್ನೂ ಹುಲ್ಲುಹಾಸು ಸರಿಯಾಗಿ ಬೆಳೆದಿರದ ಹಿನ್ನೆಲೆ ಪಂದ್ಯವನ್ನು ಹೋಳ್ಕರ್​ ಸ್ಟೇಡಿಯಂಗೆ ಸ್ಥಳಾಂತರಿಸಲಾದೆ. ನಾಲ್ಕನೇ ಪಂದ್ಯ ಮಾರ್ಚ್​ 9 ರಿಂದ 13ರ ವರೆಗೆ ಅಹಮದಾಬಾದ್​ನಲ್ಲಿ ಆಯೋಜನೆಗೊಳ್ಳಲಿದೆ.

ಆಸ್ಟ್ರೇಲಿಯಾಕ್ಕೆ ಮರಳಿರುವ ಕಮಿನ್ಸ್​: ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಕೌಟುಂಬಿಕ ಅನಾರೋಗ್ಯದ ಕಾರಣ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆದರೆ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತಕ್ಕೆ ಹಿಂತಿರುಗುವ ನಿರೀಕ್ಷೆಯಿದೆ. ಮಾರ್ಚ್ 1 ರಂದು ಇಂದೋರ್‌ನಲ್ಲಿ ಪ್ರಾರಂಭವಾಗಲಿರುವ ಮೂರನೇ ಟೆಸ್ಟ್‌ಗೆ ಮುಂಚಿತವಾಗಿ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗಿದೆ.

ಏಕದಿನ ಪಂದ್ಯಕ್ಕೂ ತಂಡ ಪ್ರಕಟ: ಮಾರ್ಚ್​ 17ರಿಂದ ಆಸ್ಟ್ರೇಲಿಯಾದ ವಿರುದ್ಧ ಆರಂಭವಾಗಲಿರುವ ಮೂರು ಏಕದಿನ ಪಂದ್ಯಗಳಿಗೆ ಬಿಸಿಸಿಐ ತಂಡ ಪ್ರಕಟಿಸಿದೆ. ಏಕದಿನ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, ಟೆಸ್ಟ್​ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಅಕ್ಷರ್​ ಪಟೇಲ್​ಗೆ ಮತ್ತು ಗಾಯದಿಂದ ಚೇತರಿಸಿಕೊಂಡಿರುವ ಜಡೇಜ ಅವರಿಗೆ ಸ್ಥಾನ ದೊರೆತಿದೆ. 10 ವರ್ಷಗಳ ನಂತರ ಜಯದೇವ್​ ಉನಾದ್ಕತ್​ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಕರ್​ ಭರತ್ ಮತ್ತು ಶಹಬಾಜ್​ ಅಹಮದ್​ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಮೊದಲ ಪಂದ್ಯಕ್ಕೆ ರೋಹಿತ್​ ಅಲಭ್ಯ, ಹಾರ್ದಿಕ್​ಗೆ ಜವಾಬ್ದಾರಿ: ಮೊದಲ ಏಕದಿನ ಪಂದ್ಯಕ್ಕೆ ರೋಹಿತ್​ ಶರ್ಮಾ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಕೌಟುಂಬಿಕ ಕಾರಣದಿಂದ ಮೊದಲ ಪಂದ್ಯದಲ್ಲಿ ರೋಹಿತ್​ ಶರ್ಮಾ ಆಡುವುದಿಲ್ಲ, ಅವರ ಬದಲಾಗಿ ಉಪನಾಯಕ ಹಾರ್ದಿಕ್​ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

3ನೇ ಮತ್ತು 4ನೇ ಟೆಸ್ಟ್​ ಪಂದ್ಯದ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್​ ಕೀಪರ್​), ಇಶಾನ್ ಕಿಶನ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನದ್ಕತ್.

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್

ಇದನ್ನೂ ಓದಿ: ಭಾರತ ವಿರುದ್ಧ 2ಪಂದ್ಯ ಸೋತಿರುವ ಕಾಂಗರೂ ಪಡೆ.. ತಂಡದ ವಿರುದ್ಧ ತಿರುಗಿ ಬಿದ್ದ ಆಸ್ಟ್ರೇಲಿಯಾ ಮಾಜಿ ಆಟಗಾರರು!

ಕಳಪೆ ಪ್ರದರ್ಶನ ನೀಡುತ್ತಿರುವ ಕೆ.ಎಲ್​. ರಾಹುಲ್​ ಮೇಲೆ ಟೀಕೆಗಳು ಕೇಳಿ ಬರುತ್ತಿದೆ. ಅಲ್ಲದೇ ಉಪನಾಯಕನ ಸ್ಥಾನ ನೀಡಿರುವುದರಿಂದ ಆಡುವ 11ರಲ್ಲಿ ಕೈಬಿಡಲಾಗುತ್ತಿಲ್ಲ ಎಂಬ ಅಭಿಪ್ರಾಯಗಳು ಬಂದ ಹಿನ್ನೆಲೆ ರಾಹುಲ್ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳಿಗೆ ಮಾತ್ರ ಟೀಮ್​ ಘೋಷಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ನಂತರ ಮೂರು ಮತ್ತು ನಾಲ್ಕನೇ ಟೆಸ್ಟ್​ ಹಾಗೂ ಏಕದಿನ ಸರಣಿಯ ತಂಡವನ್ನು ಪ್ರಕಟಿಸಿದೆ.

ಮುಂದಿನ ಎರಡು ಟೆಸ್ಟ್​ ಪಂದ್ಯಕ್ಕೆ ಪ್ರಕಟಿಸಿರುವ ತಂಡದಲ್ಲಿ ಉಪನಾಯಕನ ಸ್ಥಾನವನ್ನು ತಂಡ ಪ್ರಕಟಿಸಿಲ್ಲ. ಉಪನಾಯಕನ ಸ್ಥಾನ ಕೊಟ್ಟಿರುವುದರಿಂದ 11ರ ಬಳಗದಿಂದ ಕೈ ಬಿಡಲಾಗುತ್ತಿಲ್ಲ ಎಂಬ ಟೀಕೆ ಇದಕ್ಕೆ ಕಾರಣವೇ ಎಂಬ ಅನುಮಾನ ಹುಟ್ಟಿದೆ. ತಂಡದಲ್ಲಿ ರಾಹುಲ್​ ಪರ್ಯಾಯ ವಿಕೆಟ್​ ಕೀಪರ್​ ಇದ್ದರೂ ಭರತ್​ ಜೊತೆಗೆ ಇಶನ್​ ಕಿಶನ್​ಗೆ ಸ್ಥಾನ ದೊರೆತಿದೆ.

ಸೌರಾಷ್ಟ್ರ ತಂಡ ರಣಜಿ ಫೈನಲ್​ ಪ್ರವೇಶ ಪಡೆದ ಕಾರಣ ಜಯದೇವ್​ ಉನಾದ್ಕತ್​ಗೆ ಎರಡನೇ ಟೆಸ್ಟ್​ನಿಂದ ಬಿಸಿಸಿಐ ಬಿಡುಗಡೆ ನೀಡಿತ್ತು. ಸೌರಾಷ್ಟ್ರ ಎರಡನೇ ಬಾರಿ ರಣಜಿ ಕಪ್​ ಗೆದ್ದ ನಂತರ ಮತ್ತೆ ಉನಾದ್ಕತ್​ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬೌಲಿಂಗ್ ಪಡೆಯಲ್ಲಿ ಮತ್ತಾವುದೇ ಬದಲಾವಣೆ ಮಾಡಲಾಗಿಲ್ಲ. ಆಲ್​ರೌಡರ್ ಮತ್ತು ಸ್ಪಿನ್​ ವಿಭಾಗವನ್ನು ಜಡೇಜ, ಅಶ್ವಿನ್​ ಮತ್ತು ಅಕ್ಷರ್​ ಉತ್ತಮವಾಗಿ ನಿಭಾಯಿಸುತ್ತಿದ್ದು, ಮಿಕ್ಕೆರಡು ಪಂದ್ಯಕ್ಕೂ ಅವರೇ ಮುಂದುವೆರೆಯುವ ಸಾಧ್ಯತೆ ಹೆಚ್ಚಿದೆ.

ಮಾರ್ಚ್​ 1ರಿಂದ 5ರ ವರೆಗೆ ಮೂರನೇ ಟೆಸ್ಟ್​ ಪಂದ್ಯ ಇಂದೋರ್​ನ ಹೋಳ್ಕರ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಪಂದ್ಯವನ್ನು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿಲಾಗಿತ್ತು. ಆದರೆ ಔಟ್​ ಫೀಲ್ಡ್​ ಇನ್ನೂ ಹುಲ್ಲುಹಾಸು ಸರಿಯಾಗಿ ಬೆಳೆದಿರದ ಹಿನ್ನೆಲೆ ಪಂದ್ಯವನ್ನು ಹೋಳ್ಕರ್​ ಸ್ಟೇಡಿಯಂಗೆ ಸ್ಥಳಾಂತರಿಸಲಾದೆ. ನಾಲ್ಕನೇ ಪಂದ್ಯ ಮಾರ್ಚ್​ 9 ರಿಂದ 13ರ ವರೆಗೆ ಅಹಮದಾಬಾದ್​ನಲ್ಲಿ ಆಯೋಜನೆಗೊಳ್ಳಲಿದೆ.

ಆಸ್ಟ್ರೇಲಿಯಾಕ್ಕೆ ಮರಳಿರುವ ಕಮಿನ್ಸ್​: ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಕೌಟುಂಬಿಕ ಅನಾರೋಗ್ಯದ ಕಾರಣ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆದರೆ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತಕ್ಕೆ ಹಿಂತಿರುಗುವ ನಿರೀಕ್ಷೆಯಿದೆ. ಮಾರ್ಚ್ 1 ರಂದು ಇಂದೋರ್‌ನಲ್ಲಿ ಪ್ರಾರಂಭವಾಗಲಿರುವ ಮೂರನೇ ಟೆಸ್ಟ್‌ಗೆ ಮುಂಚಿತವಾಗಿ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗಿದೆ.

ಏಕದಿನ ಪಂದ್ಯಕ್ಕೂ ತಂಡ ಪ್ರಕಟ: ಮಾರ್ಚ್​ 17ರಿಂದ ಆಸ್ಟ್ರೇಲಿಯಾದ ವಿರುದ್ಧ ಆರಂಭವಾಗಲಿರುವ ಮೂರು ಏಕದಿನ ಪಂದ್ಯಗಳಿಗೆ ಬಿಸಿಸಿಐ ತಂಡ ಪ್ರಕಟಿಸಿದೆ. ಏಕದಿನ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, ಟೆಸ್ಟ್​ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಅಕ್ಷರ್​ ಪಟೇಲ್​ಗೆ ಮತ್ತು ಗಾಯದಿಂದ ಚೇತರಿಸಿಕೊಂಡಿರುವ ಜಡೇಜ ಅವರಿಗೆ ಸ್ಥಾನ ದೊರೆತಿದೆ. 10 ವರ್ಷಗಳ ನಂತರ ಜಯದೇವ್​ ಉನಾದ್ಕತ್​ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಕರ್​ ಭರತ್ ಮತ್ತು ಶಹಬಾಜ್​ ಅಹಮದ್​ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಮೊದಲ ಪಂದ್ಯಕ್ಕೆ ರೋಹಿತ್​ ಅಲಭ್ಯ, ಹಾರ್ದಿಕ್​ಗೆ ಜವಾಬ್ದಾರಿ: ಮೊದಲ ಏಕದಿನ ಪಂದ್ಯಕ್ಕೆ ರೋಹಿತ್​ ಶರ್ಮಾ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಕೌಟುಂಬಿಕ ಕಾರಣದಿಂದ ಮೊದಲ ಪಂದ್ಯದಲ್ಲಿ ರೋಹಿತ್​ ಶರ್ಮಾ ಆಡುವುದಿಲ್ಲ, ಅವರ ಬದಲಾಗಿ ಉಪನಾಯಕ ಹಾರ್ದಿಕ್​ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

3ನೇ ಮತ್ತು 4ನೇ ಟೆಸ್ಟ್​ ಪಂದ್ಯದ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್​ ಕೀಪರ್​), ಇಶಾನ್ ಕಿಶನ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನದ್ಕತ್.

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್

ಇದನ್ನೂ ಓದಿ: ಭಾರತ ವಿರುದ್ಧ 2ಪಂದ್ಯ ಸೋತಿರುವ ಕಾಂಗರೂ ಪಡೆ.. ತಂಡದ ವಿರುದ್ಧ ತಿರುಗಿ ಬಿದ್ದ ಆಸ್ಟ್ರೇಲಿಯಾ ಮಾಜಿ ಆಟಗಾರರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.