ETV Bharat / sports

Watch : ಭಾರತಕ್ಕಾಗಿ ಆಡುವಾಗ ದ್ರಾವಿಡ್​ ಸರ್​ ಸೇರಿ ನಾವೆಲ್ಲಾ ಕನ್ನಡದಲ್ಲೇ ಮಾತಾಡ್ತೀವಿ.. ಪಡಿಕ್ಕಲ್

author img

By

Published : Sep 27, 2021, 6:45 PM IST

ಕ್ರಿಕೆಟ್​ನಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡ ಬಗ್ಗೆ ಮತ್ತು ತಮ್ಮ ಕುಟುಂಬ ತಮಗೆ ನೀಡುತ್ತಿರುವ ಬೆಂಬಲದ ಬಗ್ಗೆ ಆರ್​ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ..

Devdatt padikkal
ದೇವದತ್​ ಪಡಿಕ್ಕಲ್

ದುಬೈ : ಜುಲೈನಲ್ಲಿ ನಡೆದಿದ್ದ ಶ್ರೀಲಂಕಾ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕನ್ನಡಿಗ ಯುವ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್ ಭಾರತ ತಂಡಕ್ಕಾಗಿ ಆಡುವಾಗ ಕನ್ನಡಿಗರೆಲ್ಲಾ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ಆರ್​ಸಿಬಿ ಭಾನುವಾರ ಬಿಡುಗಡೆ ಮಾಡಿರುವ ಬೋಲ್ಡ್​ ಡೈರೀಸ್​ ಚಿಟ್​ಚಾಟ್​ನಲ್ಲಿ ಹೇಳಿಕೊಂಡಿದ್ದಾರೆ.

ಕ್ರಿಕೆಟ್​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬಗ್ಗೆ ಮತ್ತು ತಮ್ಮ ಕುಟುಂಬ ತಮಗೆ ನೀಡುತ್ತಿರುವ ಬೆಂಬಲದ ಬಗ್ಗೆ ಆರ್​ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನನ್ನನ್ನು ಕ್ರಿಕೆಟಿಗನನ್ನಾಗಿಯೇ ಮಾಡಬೇಕೆಂದು ನಮ್ಮ ಪೋಷಕರು ಮಹತ್ವದ ಮತ್ತು ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೈದರಾಬಾದ್​ನಿಂದ ಬೆಂಗಳೂರಿಗೆ ಮನೆಯನ್ನು ಬದಲಾಯಿಸಿದ್ದಾರೆ ಎಂದು ತಮಗೆ ಪೋಷಕರು ನೀಡಿದ ಪ್ರೋತ್ಸಾಹವನ್ನು ಹೇಳಿಕೊಂಡಿದ್ದಾರೆ.

  • Bold Diaries: Devdutt Padikkal’s Kannada Chat

    🎙️ @devdpd07 : "ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು - ಗೌತಮ್ ಇರಲಿ ರಾಹುಲ್ ಸಾರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ."#PlayBold #WeAreChallengers #ನಮ್ಮRCB #IPL2021 pic.twitter.com/8GFQOvnPzB

    — Royal Challengers Bangalore (@RCBTweets) September 26, 2021 " class="align-text-top noRightClick twitterSection" data=" ">

ಕನ್ನಡಿಗರಲ್ಲರು ಕನ್ನಡದಲ್ಲೇ ಮಾತಾಡ್ತೀವಿ

ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ್ದ ಬಗ್ಗೆ ಮಾತನಾಡಿದ ಪಡಿಕ್ಕಲ್​ ಅದೊಂದು ಅತ್ಯಂತ ಗೌರವಯುತ ಕ್ಷಣವಾಗಿತ್ತು ಎಂದು ಹೇಳಿದ್ದಾರೆ. ಅಂತಹ ಕ್ಷಣ ಯಾರಿಗೂ ಬೇಗ ಸಿಗಲ್ಲ, ನನಗೆ ಸಿಕ್ಕಿತ್ತು, ಕೋಚ್​ಗಳೊಂದಿಗೆ, ಸೀನಿಯರ್​ಗಳೊಂದಿಗೆ ಉತ್ತಮವಾಗಿ ಚರ್ಚೆ ಮಾಡಿದ್ದೆ, ಹೊಸ ಸ್ನೇಹಿತರು ಸಿಕ್ಕರು ಎಂದು ತಿಳಿಸಿದರು.

ಕನ್ನಡಿಗರು ಹೇಗಿರುತ್ತೀರಿ ಎಂದು ಕೇಳಿದ್ದಕ್ಕೆ, ದ್ರಾವಿಡ್​ ಸರ್​, ಗೌತಮ್ ಇರಲಿ ನಾವೆಲ್ಲಾ ಕನ್ನಡಿಗರು ಒಟ್ಟಾಗಿದ್ದರೆ ಕನ್ನಡದಲ್ಲೇ ಮಾತನಾಡೋದು. ಬೇರೆ ರಾಜ್ಯದವರಿದ್ದರೆ ಮಾತ್ರ ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಮಾತನಾಡುತ್ತೇವೆ. ನಾವಿಬ್ಬರೇ ಇದ್ದಾಗ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಚಹಾಲ್​ರನ್ನು ವಿಶ್ವಕಪ್​ ತಂಡಕ್ಕೆ ಸೇರಿಸಿಕೊಳ್ಳಿ: ಅಭಿಮಾನಿಗಳಿಂದ ಬಿಸಿಸಿಐಗೆ ಮನವಿ

ದುಬೈ : ಜುಲೈನಲ್ಲಿ ನಡೆದಿದ್ದ ಶ್ರೀಲಂಕಾ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕನ್ನಡಿಗ ಯುವ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್ ಭಾರತ ತಂಡಕ್ಕಾಗಿ ಆಡುವಾಗ ಕನ್ನಡಿಗರೆಲ್ಲಾ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ಆರ್​ಸಿಬಿ ಭಾನುವಾರ ಬಿಡುಗಡೆ ಮಾಡಿರುವ ಬೋಲ್ಡ್​ ಡೈರೀಸ್​ ಚಿಟ್​ಚಾಟ್​ನಲ್ಲಿ ಹೇಳಿಕೊಂಡಿದ್ದಾರೆ.

ಕ್ರಿಕೆಟ್​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬಗ್ಗೆ ಮತ್ತು ತಮ್ಮ ಕುಟುಂಬ ತಮಗೆ ನೀಡುತ್ತಿರುವ ಬೆಂಬಲದ ಬಗ್ಗೆ ಆರ್​ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನನ್ನನ್ನು ಕ್ರಿಕೆಟಿಗನನ್ನಾಗಿಯೇ ಮಾಡಬೇಕೆಂದು ನಮ್ಮ ಪೋಷಕರು ಮಹತ್ವದ ಮತ್ತು ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೈದರಾಬಾದ್​ನಿಂದ ಬೆಂಗಳೂರಿಗೆ ಮನೆಯನ್ನು ಬದಲಾಯಿಸಿದ್ದಾರೆ ಎಂದು ತಮಗೆ ಪೋಷಕರು ನೀಡಿದ ಪ್ರೋತ್ಸಾಹವನ್ನು ಹೇಳಿಕೊಂಡಿದ್ದಾರೆ.

  • Bold Diaries: Devdutt Padikkal’s Kannada Chat

    🎙️ @devdpd07 : "ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು - ಗೌತಮ್ ಇರಲಿ ರಾಹುಲ್ ಸಾರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ."#PlayBold #WeAreChallengers #ನಮ್ಮRCB #IPL2021 pic.twitter.com/8GFQOvnPzB

    — Royal Challengers Bangalore (@RCBTweets) September 26, 2021 " class="align-text-top noRightClick twitterSection" data=" ">

ಕನ್ನಡಿಗರಲ್ಲರು ಕನ್ನಡದಲ್ಲೇ ಮಾತಾಡ್ತೀವಿ

ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ್ದ ಬಗ್ಗೆ ಮಾತನಾಡಿದ ಪಡಿಕ್ಕಲ್​ ಅದೊಂದು ಅತ್ಯಂತ ಗೌರವಯುತ ಕ್ಷಣವಾಗಿತ್ತು ಎಂದು ಹೇಳಿದ್ದಾರೆ. ಅಂತಹ ಕ್ಷಣ ಯಾರಿಗೂ ಬೇಗ ಸಿಗಲ್ಲ, ನನಗೆ ಸಿಕ್ಕಿತ್ತು, ಕೋಚ್​ಗಳೊಂದಿಗೆ, ಸೀನಿಯರ್​ಗಳೊಂದಿಗೆ ಉತ್ತಮವಾಗಿ ಚರ್ಚೆ ಮಾಡಿದ್ದೆ, ಹೊಸ ಸ್ನೇಹಿತರು ಸಿಕ್ಕರು ಎಂದು ತಿಳಿಸಿದರು.

ಕನ್ನಡಿಗರು ಹೇಗಿರುತ್ತೀರಿ ಎಂದು ಕೇಳಿದ್ದಕ್ಕೆ, ದ್ರಾವಿಡ್​ ಸರ್​, ಗೌತಮ್ ಇರಲಿ ನಾವೆಲ್ಲಾ ಕನ್ನಡಿಗರು ಒಟ್ಟಾಗಿದ್ದರೆ ಕನ್ನಡದಲ್ಲೇ ಮಾತನಾಡೋದು. ಬೇರೆ ರಾಜ್ಯದವರಿದ್ದರೆ ಮಾತ್ರ ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಮಾತನಾಡುತ್ತೇವೆ. ನಾವಿಬ್ಬರೇ ಇದ್ದಾಗ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಚಹಾಲ್​ರನ್ನು ವಿಶ್ವಕಪ್​ ತಂಡಕ್ಕೆ ಸೇರಿಸಿಕೊಳ್ಳಿ: ಅಭಿಮಾನಿಗಳಿಂದ ಬಿಸಿಸಿಐಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.