ETV Bharat / sports

ಇಶಾಂತ್ ಶರ್ಮಾ ಫಾರ್ಮ್​ ನಮಗೆ ಕಳವಳ ತಂದಿದೆ: ಬೌಲಿಂಗ್ ಕೋಚ್​ ಅರುಣ್

ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ಬೌಲಿಂಗ್​ ನಮಗೆ ತುಂಬಾ ಚೆನ್ನಾಗಿತ್ತು. ಒಂದು ವೇಳೆ ಅವರು 78 ರನ್​ಗಳನ್ನು ಡಿಫೆಂಡ್​ ಮಾಡುವಂತಿದ್ದರೆ ಹೇಗೆ ಬೌಲಿಂಗ್ ಮಾಡುತ್ತಿದ್ದರು ಎಂಬುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ಭಾರತ ತಂಡದ ಬೌಲಿಂಗ್ ಕೋಚ್​ ಭರತ್​ ಅರುಣ್ ಹೇಳಿದ್ದಾರೆ.

author img

By

Published : Sep 2, 2021, 9:46 AM IST

Ishant's form
ಇಶಾಂತ್ ಶರ್ಮಾ

ಲಂಡನ್: ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಬೌಲಿಂಗ್​ಗಿಂತ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿ ಅತ್ಯುತ್ತಮವಾಗಿತ್ತು ಎಂದು ಭಾರತ ತಂಡದ ಬೌಲಿಂಗ್ ಕೋಚ್​ ಭರತ್​ ಅರುಣ್​ ಒಪ್ಪಿಕೊಂಡಿದ್ದಾರೆ. ಹೆಡಿಂಗ್ಲೆಯಲ್ಲಿ ನಡೆದ 3ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಕೇವಲ 78ಕ್ಕೆ ಆಲೌಟ್​ ಆಗಿತ್ತು. ಅಲ್ಲದೇ ಎರಡನೇ ಇನ್ನಿಂಗ್ಸ್​ನಲ್ಲೂ ದಿಢೀರ್ ಕುಸಿದು ಇನ್ನಿಂಗ್ಸ್ ಮತ್ತು 76 ರನ್​ಗಳ ಸೋಲು ಕಂಡಿತ್ತು.

ನೀವು ಲಾರ್ಡ್ಸ್​ ಟೆಸ್ಟ್​ ಪಂದ್ಯ ಗಮನಿಸಿ, ನೀವು ಖಂಡಿತ ಭಾರತದ ಬೌಲಿಂಗ್ ಇಂಗ್ಲೆಂಡ್​ ದಾಳಿಗಿಂತ ಉತ್ತಮವಾಗಿತ್ತು ಎಂದು ಹೇಳುತ್ತೀರಿ. ಆ ಸಂದರ್ಭದಲ್ಲಿ ಭಾರತೀಯ ಬೌಲರ್​ಗಳು ಚೆಂಡನ್ನು ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿ ಅವರೆಲ್ಲರೂ ತಮ್ಮಿಂದ ಸಾಧ್ಯವಾದದ್ದೆಲ್ಲವನ್ನು ಮಾಡಿದ್ದರು ಎಂದು ಅರುಣ್​ ಹೇಳಿದರು.

ಆದರೆ, ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ಬೌಲಿಂಗ್​ ನಮಗೆ ತುಂಬಾ ಚೆನ್ನಾಗಿತ್ತು. ಒಂದು ವೇಳೆ ಅವರು 78 ರನ್​ಗಳನ್ನು ಡಿಫೆಂಡ್​ ಮಾಡುವಂತಿದ್ದರೆ ಹೇಗೆ ಬೌಲಿಂಗ್ ಮಾಡುತ್ತಿದ್ದರು ಎಂಬುವುದನ್ನು ನೋಡಲು ನಾನು ಬಯಸುತ್ತೇನೆ. ಹೌದು, ಯಾವಾಗಲೂ ಸುಧಾರಣೆಗೆ ಅವಕಾಶವಿದೆ ಮತ್ತು ನಾವು ವೈಫಲ್ಯ ಅನುಭವಿಸಿದ ಆ ಪ್ರದೇಶಗಳನ್ನು ನೋಡಿದ್ದೇವೆ ಮತ್ತು ಮುಂಬರುವ ಟೆಸ್ಟ್ ಪಂದ್ಯದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನು 3ನೇ ಟೆಸ್ಟ್​ನಲ್ಲಿ ಇಶಾಂತ್​ ಲಯ ಕಳೆದುಕೊಂಡಿದ್ದ ತಂಡಕ್ಕೆ ಹಿನ್ನಡೆಯಾಯಿತು ಎಂದು ಕೇಳಿದ್ದಕ್ಕೆ ಉತ್ತರಿಸಿದ 58 ವರ್ಷದ ಅರುಣ್, ಇಶಾಂತ್ ಅವರ ಕಳೆದ ಪಂದ್ಯದ ಫಾರ್ಮ್​ ನಮಗೆ ಕಳವಳ ತಂದಿದೆ.

ಆದರೆ, ನಾವು ಆ ಸಮಸ್ಯೆಯನ್ನು ಈಗಾಗಲೇ ಬಗೆಹಿರಿಸಿಕೊಂಡಿದ್ದೇವೆ ಎಂದರು. ಕರ್ನಾಟಕದ ಪ್ರಸಿಧ್ ಕೃಷ್ಣ ಅವರ ಆಯ್ಕೆ ಬಗ್ಗೆ ಮಾತನಾಡಿ ತಂಡದಲ್ಲಿನ ಕೆಲಸ ಹೊರೆ ನಿರ್ವಹಣೆ ಮಾಡಬೇಕೆಂದಾದರೆ ಅಗತ್ಯವಾಗಬಹುದೆಂದು ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಇದನ್ನು ಓದಿ:50 ವರ್ಷಗಳಿಂದ ಓವಲ್​ನಲ್ಲಿ ಭಾರತಕ್ಕಿಲ್ಲ ಗೆಲುವು.. ಮರುಕಳಿಸುವುದೇ ಗಬ್ಬಾ ವಿಜಯ?

ಲಂಡನ್: ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಬೌಲಿಂಗ್​ಗಿಂತ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿ ಅತ್ಯುತ್ತಮವಾಗಿತ್ತು ಎಂದು ಭಾರತ ತಂಡದ ಬೌಲಿಂಗ್ ಕೋಚ್​ ಭರತ್​ ಅರುಣ್​ ಒಪ್ಪಿಕೊಂಡಿದ್ದಾರೆ. ಹೆಡಿಂಗ್ಲೆಯಲ್ಲಿ ನಡೆದ 3ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಕೇವಲ 78ಕ್ಕೆ ಆಲೌಟ್​ ಆಗಿತ್ತು. ಅಲ್ಲದೇ ಎರಡನೇ ಇನ್ನಿಂಗ್ಸ್​ನಲ್ಲೂ ದಿಢೀರ್ ಕುಸಿದು ಇನ್ನಿಂಗ್ಸ್ ಮತ್ತು 76 ರನ್​ಗಳ ಸೋಲು ಕಂಡಿತ್ತು.

ನೀವು ಲಾರ್ಡ್ಸ್​ ಟೆಸ್ಟ್​ ಪಂದ್ಯ ಗಮನಿಸಿ, ನೀವು ಖಂಡಿತ ಭಾರತದ ಬೌಲಿಂಗ್ ಇಂಗ್ಲೆಂಡ್​ ದಾಳಿಗಿಂತ ಉತ್ತಮವಾಗಿತ್ತು ಎಂದು ಹೇಳುತ್ತೀರಿ. ಆ ಸಂದರ್ಭದಲ್ಲಿ ಭಾರತೀಯ ಬೌಲರ್​ಗಳು ಚೆಂಡನ್ನು ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿ ಅವರೆಲ್ಲರೂ ತಮ್ಮಿಂದ ಸಾಧ್ಯವಾದದ್ದೆಲ್ಲವನ್ನು ಮಾಡಿದ್ದರು ಎಂದು ಅರುಣ್​ ಹೇಳಿದರು.

ಆದರೆ, ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ಬೌಲಿಂಗ್​ ನಮಗೆ ತುಂಬಾ ಚೆನ್ನಾಗಿತ್ತು. ಒಂದು ವೇಳೆ ಅವರು 78 ರನ್​ಗಳನ್ನು ಡಿಫೆಂಡ್​ ಮಾಡುವಂತಿದ್ದರೆ ಹೇಗೆ ಬೌಲಿಂಗ್ ಮಾಡುತ್ತಿದ್ದರು ಎಂಬುವುದನ್ನು ನೋಡಲು ನಾನು ಬಯಸುತ್ತೇನೆ. ಹೌದು, ಯಾವಾಗಲೂ ಸುಧಾರಣೆಗೆ ಅವಕಾಶವಿದೆ ಮತ್ತು ನಾವು ವೈಫಲ್ಯ ಅನುಭವಿಸಿದ ಆ ಪ್ರದೇಶಗಳನ್ನು ನೋಡಿದ್ದೇವೆ ಮತ್ತು ಮುಂಬರುವ ಟೆಸ್ಟ್ ಪಂದ್ಯದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನು 3ನೇ ಟೆಸ್ಟ್​ನಲ್ಲಿ ಇಶಾಂತ್​ ಲಯ ಕಳೆದುಕೊಂಡಿದ್ದ ತಂಡಕ್ಕೆ ಹಿನ್ನಡೆಯಾಯಿತು ಎಂದು ಕೇಳಿದ್ದಕ್ಕೆ ಉತ್ತರಿಸಿದ 58 ವರ್ಷದ ಅರುಣ್, ಇಶಾಂತ್ ಅವರ ಕಳೆದ ಪಂದ್ಯದ ಫಾರ್ಮ್​ ನಮಗೆ ಕಳವಳ ತಂದಿದೆ.

ಆದರೆ, ನಾವು ಆ ಸಮಸ್ಯೆಯನ್ನು ಈಗಾಗಲೇ ಬಗೆಹಿರಿಸಿಕೊಂಡಿದ್ದೇವೆ ಎಂದರು. ಕರ್ನಾಟಕದ ಪ್ರಸಿಧ್ ಕೃಷ್ಣ ಅವರ ಆಯ್ಕೆ ಬಗ್ಗೆ ಮಾತನಾಡಿ ತಂಡದಲ್ಲಿನ ಕೆಲಸ ಹೊರೆ ನಿರ್ವಹಣೆ ಮಾಡಬೇಕೆಂದಾದರೆ ಅಗತ್ಯವಾಗಬಹುದೆಂದು ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಇದನ್ನು ಓದಿ:50 ವರ್ಷಗಳಿಂದ ಓವಲ್​ನಲ್ಲಿ ಭಾರತಕ್ಕಿಲ್ಲ ಗೆಲುವು.. ಮರುಕಳಿಸುವುದೇ ಗಬ್ಬಾ ವಿಜಯ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.