ETV Bharat / sports

IPLನಲ್ಲಿಂದು ಲಕ್ನೋ ವಿರುದ್ಧ 'ಗಂಭೀರ' ಸೇಡಿಗೆ ಸಜ್ಜಾದ RCB; ಪಂದ್ಯಕ್ಕೆ ಮಳೆ ಆತಂಕ

author img

By

Published : May 1, 2023, 4:06 PM IST

ಇಂಡಿಯನ್​ ಪ್ರೀಮಿಯರ್​ ಲೀಗ್​ನ 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಲಕ್ನೋ ಸೂಪರ್​ ಜೈಂಟ್ಸ್ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ.

IPLನಲ್ಲಿ ಇಂದು: ಲಕ್ನೋ ವಿರುದ್ಧ "ಗಂಭೀರ" ಸೇಡಿನ ಸಜ್ಜಾದ ರಾಯಲ್​ ಚಾಲೆಂಜರ್ಸ್​
IPLನಲ್ಲಿ ಇಂದು: ಲಕ್ನೋ ವಿರುದ್ಧ "ಗಂಭೀರ" ಸೇಡಿನ ಸಜ್ಜಾದ ರಾಯಲ್​ ಚಾಲೆಂಜರ್ಸ್​

ಲಕ್ನೋ (ಉತ್ತರ ಪ್ರದೇಶ): ಬೆಂಗಳೂರಿನಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್‌​ ತಂಡ ಕೊನೆಯ ಒಂದು ವಿಕೆಟ್​ನಿಂದ ಗೆದ್ದು ಆರ್​ಸಿಬಿ ಅಭಿಮಾನಿಗಳ ಮುಂದೆ ಅತಿರೇಕದ ಸಂಭ್ರಮಾಚರಣೆ ಮಾಡಿತ್ತು. ಸೋಲಿನ ನಂತರವೂ ಸ್ಟೇಡಿಯಂನಲ್ಲಿ ಮೊಳಗುತ್ತಿದ್ದ ಆರ್​ಸಿಬಿ ಎಂಬ ಕೂಗಿಗೆ ಗೌತಮ್​ ಗಂಭೀರ್​ 'ಮೌನವಾಗಿರಿ' ಎಂಬಂತೆ ಸನ್ನೆ ಮಾಡಿ ಅಭಿಮಾನಿಗಳನ್ನು ಕೆರಳಿಸಿದ್ದರು.

ಆರ್​ಸಿಬಿ ಇಂದು ಲಕ್ನೋವನ್ನು ಎದುರಿಸುತ್ತಿದ್ದು, ಅವರ ತವರು ಮೈದಾನದಲ್ಲೇ ಸೋಲಿನ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದೆ. ಅಂಕಪಟ್ಟಿಯಲ್ಲಿ ಸುಧಾರಿಸಿಕೊಳ್ಳಲು ಕೂಡಾ ಈ ಗೆಲುವು ಆರ್​ಸಿಬಿಗೆ ಅತ್ಯಂತ ಮುಖ್ಯ. ಆರ್‌ಸಿಬಿ ಈವರೆಗೆ ಆಡಿದ 8 ಪಂದ್ಯದಲ್ಲಿ 4ನ್ನು ಗೆದ್ದು 8 ಅಂಕದಿಂದ ಪಾಯಿಂಟ್​ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಲಕ್ನೋ ಎಂಟು ಪಂದ್ಯದಲ್ಲಿ ಐದರಲ್ಲಿ ಗೆದ್ದು 10 ಅಂಕದಿಂದ ಎರಡನೇ ಸ್ಥಾನದಲ್ಲಿದೆ. ಇಂದು ಆರ್​ಸಿಬಿಯನ್ನು ಮಣಿಸಿದ್ದೇ ಆದಲ್ಲಿ ಅಗ್ರಸ್ಥಾನಕ್ಕೇರಲಿದೆ. ಈ ನಡುವೆ ಕಳೆದ ಕೆಲವು ದಿನಗಳಿಂದ ಲಕ್ನೋದಲ್ಲಿ ಮಳೆ ಸುರಿಯುತ್ತಿದ್ದು, ಇಂದಿನ ಪಂದ್ಯದ ಮೇಲೂ ಕಾರ್ಮೋಡ ಆವರಿಸಿದೆ.

ಪಂಜಾಬ್​ ಕಿಂಗ್ಸ್​ ವಿರುದ್ಧ ಐಪಿಎಲ್​ನ ಎರಡನೇ ಅತಿ ಹೆಚ್ಚು 257 ರನ್​ ಗಳಿಸಿದ ಲಕ್ನೋ ಇಂದು ಇನ್ನಷ್ಟು ಉತ್ಸಾಹದಿಂದ ಕಣಕ್ಕಿಳಿಯಲಿದೆ. ಪಂಜಾಬ್​ ತಂಡವನ್ನು ಬೃಹತ್​ ಅಂತರದಿಂದ ಮಣಿಸಿದ್ದರಿಂದ ಲಕ್ನೋ ರನ್​ ರೇಟ್​​ ಸಹ ಉತ್ತಮವಾಗಿದೆ. ಸೂಪರ್​ ಜೈಂಟ್ಸ್​ನ ಎಲ್ಲ ಆಟಗಾರರು ಫಾರ್ಮ್​ನಲ್ಲಿದ್ದು, ಎಲ್ಲ ಆಟಗಾರಿಂದ ಜೊತೆಯಾಟ ಬರುತ್ತಿರುವುದು ತಂಡದ ಬೃಹತ್​ ಮೊತ್ತಕ್ಕೆ ಕಾರಣವಾಗಿದೆ. ಈ ಕಾರಣದಿಂದ ಫಾರ್ಮ್​ನಲ್ಲಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್​ ಕ್ವಿಂಟನ್ ಡಿ ಕಾಕ್​ ಅವರಿಗೆ ತಂಡದಲ್ಲಿ ಆಡಲು ಅವಕಾಶವೇ ಸಿಗುತ್ತಿಲ್ಲ.

ನಾಲ್ಕು ಆಟಗಾರರ ತಂಡವಾಗಿರುವ ಆರ್​ಸಿಬಿ: ಆರ್​ಸಿಬಿ ಮೂವರು ಬ್ಯಾಟರ್​ ಮತ್ತು ಒಬ್ಬ ಬೌಲರ್​ನ ತಂಡ ಎಂದು ಕರೆಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ನಾಯಕ ಫಾಫ್​​ ಡು ಪ್ಲೆಸಿಸ್​, ವಿರಾಟ್​ ಕೊಹ್ಲಿ, ಗ್ಲೆನ್​ ಮ್ಯಾಕ್ಸ್​ವೆಲ್ ಮತ್ತು ಸಿರಾಜ್​ ಬಿಟ್ಟರೆ ಮತ್ತಾರು ಕೂಡಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಎಂಟು ಪಂದ್ಯಗಳಲ್ಲಿ ಈ ನಾಲ್ವರಿಂದ ಮಾತ್ರ ಕೊಡುಗೆ ತಂಡಕ್ಕೆ ಬಂದಿದೆ. ಮಧ್ಯಮ ಕ್ರಮಾಂಕದಲ್ಲಿ ಆರ್​ಸಿಬಿಗೆ ಜೊತೆಯಾಟ ಮೂಡಿ ಬರುತ್ತಿಲ್ಲ. ಈ ಮೂವರ ವಿಕೆಟ್​ ಪತನದ ನಂತರ ತಂಡ ವೇಗವಾಗಿ ವಿಕೆಟ್​ ಕಳೆದುಕೊಳ್ಳುತ್ತಿದೆ. ​​

ಜೋಶ್ ಹ್ಯಾಜಲ್‌ವುಡ್ ಫಿಟ್​ ಆಗಿದ್ದಾರೆ ಎಂಬ ವರದಿಗಳಿದ್ದು ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ವಿದೇಶಿ ಆಟಗಾರ ಆದ್ದರಿಂದ ಯಾರನ್ನು ಕೈಬಿಡುವುದು ಎಂಬ ಪ್ರಶ್ನೆ ಉದ್ಭವಿಸಲಿದೆ. ಸ್ಪಿನ್​ ವಿಭಾಗದಲ್ಲಿ ಹಸರಂಗ ಉತ್ತಮವಾಗಿ ಕಾಣಿಸಿಕೊಳ್ಳುತ್ತಿದ್ದು, ಆಲ್​ರೌಂಡರ್​ ಸ್ಥಾನದಲ್ಲಿದ್ದಾರೆ. ಡೇವಿಡ್​ ವಿಲ್ಲಿ ಅವರ ಬದಲಿಗೆ ಕಣಕ್ಕಿಳಿಸುವ ಸಾಧ್ಯತೆ ಇದೆ. ಫಾಫ್​ ಪಕ್ಕೆಲುಬು ನೋವು ಗುಣವಾಗದಿದ್ದಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ತಂಡಕ್ಕೆ ತೆಗೆದುಕೊಳ್ಳುವ ಆಯ್ಕೆಯೂ ಇದೆ.

ಆರ್‌ಸಿಬಿಯಲ್ಲಿ ಸುಯಶ್ ಪ್ರಭುದೇಸಾಯಿ ಜಾಗಕ್ಕೆ ಲೆಗ್​ ಸ್ಪಿನ್ನರ್​ ಕರಣ್ ಶರ್ಮಾ ಬರುವ ನಿರೀಕ್ಷೆ ಇದೆ. ಜೋಶ್ ಹ್ಯಾಜಲ್‌ವುಡ್ ಆರ್​ಸಿಬಿಯಲ್ಲಿ ಕಾಣಿಸಿಕೊಳ್ಳುವುದನ್ನೂ ತಳ್ಳಿ ಹಾಕುವಂತಿಲ್ಲ. ಎಲ್​ಎಸ್​ಜಿಯಲ್ಲಿ ಮಾರ್ಕಸ್ ಸ್ಟೊಯ್ನಿಸ್ ಫಿಟ್​ನೆಸ್ ಪರೀಕ್ಷೆಯ ಆಧಾರದಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಬದಲಿಗೆ ಕ್ವಿಂಟನ್ ಡಿ ಕಾಕ್​ಗೆ ಸ್ಥಾನ ಸಿಗುವ ಸಂಭವವಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ/ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ವನಿಂದು ಹಸರಂಗ, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್

ಲಕ್ನೋ ಸೂಪರ್​ ಜೈಂಟ್ಸ್​: ಕೆ.ಎಲ್.ರಾಹುಲ್ (ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್/ಕ್ವಿಂಟನ್ ಡಿ ಕಾಕ್, ಆಯುಷ್ ಬಡೋನಿ, ನಿಕೋಲಸ್ ಪೂರನ್ (ವಿಕೆಟ್​ ಕೀಪರ್​), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನವೀನ್ ಉಲ್-ಹಕ್, ರವಿ ಬಿಷ್ಣೋಯ್, ಅವೇಶ್ ಖಾನ್, ಯಶ್ ಠಾಕೂರ್/ಯುದ್ಧವೀರ್ ಸಿಂಗ್ ಚರಕ್

ಪಂದ್ಯ ಸಮಯ: ಸಂಜೆ 7:30ಕ್ಕೆ

ಸ್ಥಳ: ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂ

ನೇರಪ್ರಸಾರ: ಜಿಯೋಸಿನಿಮಾ ಮತ್ತು ಸ್ಟಾರ್​ ಸ್ಪೋರ್ಟ್ಸ್​.

ಇದನ್ನೂ ಓದಿ: ಅಂದು ಬೀದಿಬದಿ ಪಾನಿಪೂರಿ ಮಾರಾಟ; ಇಂದು ಭರವಸೆಯ ಬ್ಯಾಟರ್: 'ಯಶಸ್ವಿ' ಕ್ರಿಕೆಟಿಗನಾದ ಕಥೆ!

ಲಕ್ನೋ (ಉತ್ತರ ಪ್ರದೇಶ): ಬೆಂಗಳೂರಿನಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್‌​ ತಂಡ ಕೊನೆಯ ಒಂದು ವಿಕೆಟ್​ನಿಂದ ಗೆದ್ದು ಆರ್​ಸಿಬಿ ಅಭಿಮಾನಿಗಳ ಮುಂದೆ ಅತಿರೇಕದ ಸಂಭ್ರಮಾಚರಣೆ ಮಾಡಿತ್ತು. ಸೋಲಿನ ನಂತರವೂ ಸ್ಟೇಡಿಯಂನಲ್ಲಿ ಮೊಳಗುತ್ತಿದ್ದ ಆರ್​ಸಿಬಿ ಎಂಬ ಕೂಗಿಗೆ ಗೌತಮ್​ ಗಂಭೀರ್​ 'ಮೌನವಾಗಿರಿ' ಎಂಬಂತೆ ಸನ್ನೆ ಮಾಡಿ ಅಭಿಮಾನಿಗಳನ್ನು ಕೆರಳಿಸಿದ್ದರು.

ಆರ್​ಸಿಬಿ ಇಂದು ಲಕ್ನೋವನ್ನು ಎದುರಿಸುತ್ತಿದ್ದು, ಅವರ ತವರು ಮೈದಾನದಲ್ಲೇ ಸೋಲಿನ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದೆ. ಅಂಕಪಟ್ಟಿಯಲ್ಲಿ ಸುಧಾರಿಸಿಕೊಳ್ಳಲು ಕೂಡಾ ಈ ಗೆಲುವು ಆರ್​ಸಿಬಿಗೆ ಅತ್ಯಂತ ಮುಖ್ಯ. ಆರ್‌ಸಿಬಿ ಈವರೆಗೆ ಆಡಿದ 8 ಪಂದ್ಯದಲ್ಲಿ 4ನ್ನು ಗೆದ್ದು 8 ಅಂಕದಿಂದ ಪಾಯಿಂಟ್​ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಲಕ್ನೋ ಎಂಟು ಪಂದ್ಯದಲ್ಲಿ ಐದರಲ್ಲಿ ಗೆದ್ದು 10 ಅಂಕದಿಂದ ಎರಡನೇ ಸ್ಥಾನದಲ್ಲಿದೆ. ಇಂದು ಆರ್​ಸಿಬಿಯನ್ನು ಮಣಿಸಿದ್ದೇ ಆದಲ್ಲಿ ಅಗ್ರಸ್ಥಾನಕ್ಕೇರಲಿದೆ. ಈ ನಡುವೆ ಕಳೆದ ಕೆಲವು ದಿನಗಳಿಂದ ಲಕ್ನೋದಲ್ಲಿ ಮಳೆ ಸುರಿಯುತ್ತಿದ್ದು, ಇಂದಿನ ಪಂದ್ಯದ ಮೇಲೂ ಕಾರ್ಮೋಡ ಆವರಿಸಿದೆ.

ಪಂಜಾಬ್​ ಕಿಂಗ್ಸ್​ ವಿರುದ್ಧ ಐಪಿಎಲ್​ನ ಎರಡನೇ ಅತಿ ಹೆಚ್ಚು 257 ರನ್​ ಗಳಿಸಿದ ಲಕ್ನೋ ಇಂದು ಇನ್ನಷ್ಟು ಉತ್ಸಾಹದಿಂದ ಕಣಕ್ಕಿಳಿಯಲಿದೆ. ಪಂಜಾಬ್​ ತಂಡವನ್ನು ಬೃಹತ್​ ಅಂತರದಿಂದ ಮಣಿಸಿದ್ದರಿಂದ ಲಕ್ನೋ ರನ್​ ರೇಟ್​​ ಸಹ ಉತ್ತಮವಾಗಿದೆ. ಸೂಪರ್​ ಜೈಂಟ್ಸ್​ನ ಎಲ್ಲ ಆಟಗಾರರು ಫಾರ್ಮ್​ನಲ್ಲಿದ್ದು, ಎಲ್ಲ ಆಟಗಾರಿಂದ ಜೊತೆಯಾಟ ಬರುತ್ತಿರುವುದು ತಂಡದ ಬೃಹತ್​ ಮೊತ್ತಕ್ಕೆ ಕಾರಣವಾಗಿದೆ. ಈ ಕಾರಣದಿಂದ ಫಾರ್ಮ್​ನಲ್ಲಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್​ ಕ್ವಿಂಟನ್ ಡಿ ಕಾಕ್​ ಅವರಿಗೆ ತಂಡದಲ್ಲಿ ಆಡಲು ಅವಕಾಶವೇ ಸಿಗುತ್ತಿಲ್ಲ.

ನಾಲ್ಕು ಆಟಗಾರರ ತಂಡವಾಗಿರುವ ಆರ್​ಸಿಬಿ: ಆರ್​ಸಿಬಿ ಮೂವರು ಬ್ಯಾಟರ್​ ಮತ್ತು ಒಬ್ಬ ಬೌಲರ್​ನ ತಂಡ ಎಂದು ಕರೆಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ನಾಯಕ ಫಾಫ್​​ ಡು ಪ್ಲೆಸಿಸ್​, ವಿರಾಟ್​ ಕೊಹ್ಲಿ, ಗ್ಲೆನ್​ ಮ್ಯಾಕ್ಸ್​ವೆಲ್ ಮತ್ತು ಸಿರಾಜ್​ ಬಿಟ್ಟರೆ ಮತ್ತಾರು ಕೂಡಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಎಂಟು ಪಂದ್ಯಗಳಲ್ಲಿ ಈ ನಾಲ್ವರಿಂದ ಮಾತ್ರ ಕೊಡುಗೆ ತಂಡಕ್ಕೆ ಬಂದಿದೆ. ಮಧ್ಯಮ ಕ್ರಮಾಂಕದಲ್ಲಿ ಆರ್​ಸಿಬಿಗೆ ಜೊತೆಯಾಟ ಮೂಡಿ ಬರುತ್ತಿಲ್ಲ. ಈ ಮೂವರ ವಿಕೆಟ್​ ಪತನದ ನಂತರ ತಂಡ ವೇಗವಾಗಿ ವಿಕೆಟ್​ ಕಳೆದುಕೊಳ್ಳುತ್ತಿದೆ. ​​

ಜೋಶ್ ಹ್ಯಾಜಲ್‌ವುಡ್ ಫಿಟ್​ ಆಗಿದ್ದಾರೆ ಎಂಬ ವರದಿಗಳಿದ್ದು ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ವಿದೇಶಿ ಆಟಗಾರ ಆದ್ದರಿಂದ ಯಾರನ್ನು ಕೈಬಿಡುವುದು ಎಂಬ ಪ್ರಶ್ನೆ ಉದ್ಭವಿಸಲಿದೆ. ಸ್ಪಿನ್​ ವಿಭಾಗದಲ್ಲಿ ಹಸರಂಗ ಉತ್ತಮವಾಗಿ ಕಾಣಿಸಿಕೊಳ್ಳುತ್ತಿದ್ದು, ಆಲ್​ರೌಂಡರ್​ ಸ್ಥಾನದಲ್ಲಿದ್ದಾರೆ. ಡೇವಿಡ್​ ವಿಲ್ಲಿ ಅವರ ಬದಲಿಗೆ ಕಣಕ್ಕಿಳಿಸುವ ಸಾಧ್ಯತೆ ಇದೆ. ಫಾಫ್​ ಪಕ್ಕೆಲುಬು ನೋವು ಗುಣವಾಗದಿದ್ದಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ತಂಡಕ್ಕೆ ತೆಗೆದುಕೊಳ್ಳುವ ಆಯ್ಕೆಯೂ ಇದೆ.

ಆರ್‌ಸಿಬಿಯಲ್ಲಿ ಸುಯಶ್ ಪ್ರಭುದೇಸಾಯಿ ಜಾಗಕ್ಕೆ ಲೆಗ್​ ಸ್ಪಿನ್ನರ್​ ಕರಣ್ ಶರ್ಮಾ ಬರುವ ನಿರೀಕ್ಷೆ ಇದೆ. ಜೋಶ್ ಹ್ಯಾಜಲ್‌ವುಡ್ ಆರ್​ಸಿಬಿಯಲ್ಲಿ ಕಾಣಿಸಿಕೊಳ್ಳುವುದನ್ನೂ ತಳ್ಳಿ ಹಾಕುವಂತಿಲ್ಲ. ಎಲ್​ಎಸ್​ಜಿಯಲ್ಲಿ ಮಾರ್ಕಸ್ ಸ್ಟೊಯ್ನಿಸ್ ಫಿಟ್​ನೆಸ್ ಪರೀಕ್ಷೆಯ ಆಧಾರದಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಬದಲಿಗೆ ಕ್ವಿಂಟನ್ ಡಿ ಕಾಕ್​ಗೆ ಸ್ಥಾನ ಸಿಗುವ ಸಂಭವವಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ/ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ವನಿಂದು ಹಸರಂಗ, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್

ಲಕ್ನೋ ಸೂಪರ್​ ಜೈಂಟ್ಸ್​: ಕೆ.ಎಲ್.ರಾಹುಲ್ (ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್/ಕ್ವಿಂಟನ್ ಡಿ ಕಾಕ್, ಆಯುಷ್ ಬಡೋನಿ, ನಿಕೋಲಸ್ ಪೂರನ್ (ವಿಕೆಟ್​ ಕೀಪರ್​), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನವೀನ್ ಉಲ್-ಹಕ್, ರವಿ ಬಿಷ್ಣೋಯ್, ಅವೇಶ್ ಖಾನ್, ಯಶ್ ಠಾಕೂರ್/ಯುದ್ಧವೀರ್ ಸಿಂಗ್ ಚರಕ್

ಪಂದ್ಯ ಸಮಯ: ಸಂಜೆ 7:30ಕ್ಕೆ

ಸ್ಥಳ: ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂ

ನೇರಪ್ರಸಾರ: ಜಿಯೋಸಿನಿಮಾ ಮತ್ತು ಸ್ಟಾರ್​ ಸ್ಪೋರ್ಟ್ಸ್​.

ಇದನ್ನೂ ಓದಿ: ಅಂದು ಬೀದಿಬದಿ ಪಾನಿಪೂರಿ ಮಾರಾಟ; ಇಂದು ಭರವಸೆಯ ಬ್ಯಾಟರ್: 'ಯಶಸ್ವಿ' ಕ್ರಿಕೆಟಿಗನಾದ ಕಥೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.