ETV Bharat / sports

ಕೆ ಎಲ್ ರಾಹುಲ್​, ಉನಾದ್ಕತ್​ಗೆ ಮುಂಬೈನಲ್ಲಿ ಸ್ಕ್ಯಾನಿಂಗ್​: ಈ ಐಪಿಎಲ್​ ಆವೃತ್ತಿಯಿಂದ ಹೊರಕ್ಕೆ ​

author img

By

Published : May 3, 2023, 4:49 PM IST

ಲಕ್ನೋ ಸೂಪರ್​ ಜೈಂಟ್ಸ್​ನ ಕೆಎಲ್​ ರಾಹುಲ್​ ಮತ್ತು ಜಯದೇವ್​ ಉನಾದ್ಕತ್​ ಗಂಭೀರ ಗಾಯಗೊಂಡಿದ್ದು, ಈ ಆವೃತ್ತಿಯ ಮುಂದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Etv Bharat
Etv Bharat

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಂಡದ ವಿರುದ್ಧದ (ಮೇ 1ರಂದು) ಕೊನೆಯ ಪಂದ್ಯದ ವೇಳೆ ತೊಡೆಗೆ ಗಂಭೀರ ಗಾಯವಾದ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದಲೇ ಹೊರಗುಳಿಯಲಿದ್ದಾರೆ. ಇಂದು ಲಕ್ನೋ ಸೂಪರ್​ ಜೈಂಟ್ಸ್​​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡುತ್ತಿದ್ದು, ಕೃನಾಲ್​ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.

ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್​ನಲ್ಲಿ ಅಭ್ಯಾಸದಲ್ಲಿ ತೊಡಗಿರುವಾಗ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಅನುಭವ ವೇಗಿ ಜಯದೇವ್ ಉನದ್ಕತ್ ಅವರು ಸಹ ತಂಡದಿಂದ ಹೊರಗುಳಿಯಲ್ಲಿದ್ದಾರೆ. ಇನ್ನು ಅರ್ಧದಷ್ಟು ಪಂದ್ಯಗಳನ್ನು ಲಕ್ನೋ ಸೂಪರ್​ ಜೈಂಟ್ಸ್​ ಐಪಿಎಲ್​ನಲ್ಲಿ ಆಡಬೇಕಿದೆ. ತಂಡ ಇಬ್ಬರು ಪರ್ಯಾಯ ಆಟಗಾರರನ್ನು ಹುಡಕಬೇಕಿದೆ. ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವೆಲ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರಕಟವಾದ ತಂಡದಲ್ಲಿ ಪರ್ಯಾಯ ವಿಕೆಟ್​ ಕೀಪರ್​ ಆಗಿ ಕೆಎಲ್​ ರಾಹುಲ್​ ಇದ್ದಾರೆ. ಬೌಲಿಂಗ್​ನಲ್ಲಿ ಜಯದೇವ್​ ಉನಾದ್ಕತ್​ಗೆ ಅವಕಾಶ ಮಾಡಿಕೊಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡ್​ರ್​ ಗವಾಸ್ಕರ್​ ಟ್ರೋಫಿಗೂ ಜಯದೇವ್ ಆಯ್ಕೆಯಾಗಿದ್ದರು. ಈ ವರ್ಷದ ರಣಜಿಯಲ್ಲಿ ಸೌರಾಷ್ಟ್ರ ಉನಾದ್ಕತ್​ ನಾಯಕತ್ವ ಚಾಂಪಿಯನ್​ ಆಗಿತ್ತು.

"ಕೆಎಲ್ ಪ್ರಸ್ತುತ ಲಕ್ನೋದಲ್ಲಿ ತಂಡದೊಂದಿಗೆ ಇದ್ದಾರೆ. ಆದರೆ, ಅವರು ಬುಧವಾರ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ನಂತರ ಗುರುವಾರ ಶಿಬಿರದಿಂದ ನಿರ್ಗಮಿಸುತ್ತಿದ್ದಾರೆ. ಅವರ ಸ್ಕ್ಯಾನ್‌ಗಳನ್ನು ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ಮಾಡಲಾಗುತ್ತದೆ. ರಾಹುಲ್​ ಅವರಿಗೆ ತಿಳಿದ ವೈದ್ಯಕೀಯ ಸಲಹೆಯನ್ನೇ ಜಯದೇವ್ ಪ್ರಕರಣದಲ್ಲೂ ನಿರ್ವಹಿಸಲಾಗುತ್ತದೆ" ಎಂದು ಬಿಸಿಸಿಐನ ಅನಾಮಧೇಯ ಮೂಲದಿಂದ ಮಾಹಿತಿ ದೊರೆತಿದೆ. ಇಲ್ಲಿಯವರೆಗೆ ಯಾವುದೇ ಸ್ಕ್ಯಾನ್ ಮಾಡಲಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

"ಯಾರಾದರೂ ಈ ರೀತಿಯ ಗಾಯ ಅನುಭವಿಸಿದಾಗ, ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ನೋವು ಮತ್ತು ಊತ ಇರುತ್ತದೆ. ಊತವು ವಾಸಿಯಾಗಲು ಸುಮಾರು 24 ರಿಂದ 48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಂತರ ನೀವು ಸ್ಕ್ಯಾನ್ ಮಾಡಬಹುದು. ಕೆಎಲ್​ ರಾಹುಲ್​ ಟೆಸ್ಟ್​​ ತಂಡದ ಪ್ರಮುಖ ಆಟಗಾರರಾಗಿದ್ದರಿಂದ, ಇನ್ನು ಮುಂದೆ ಐಪಿಎಲ್‌ನಲ್ಲಿ ಭಾಗವಹಿಸದಿರುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಸ್ಕ್ಯಾನ್‌ನ ನಂತರ ಗಾಯದ ಮಟ್ಟ ತಿಳಿಯಲಿದ್ದು ನಂತರ, ಬಿಸಿಸಿಐ ವೈದ್ಯಕೀಯ ತಂಡವು ಕ್ರಮವನ್ನು ನಿರ್ಧರಿಸುತ್ತದೆ" ಎಂದು ಅವರು ಹೇಳಿದ್ದಾರೆ.

"ಉನಾದ್ಕತ್​ ಅವರ ಭುಜದ ಗಾಯ ಗಂಭಿರವಾಗಿಯೇ ಇದೆ. ಸ್ಕ್ಯಾನಿಂಗ್​ ನಂತರ ಅವರ ಆರೋಗ್ಯದ ಸಂಪೂರ್ಣ ಮಾಹಿಸಿ ಸಿಗಲಿದೆ. ಈ ಆವೃತ್ತಿಯ ಐಪಿಎಲ್​ನಿಂದ ಉನಾದ್ಕತ್​ ಬಹುತೇಕ ಹೊರಗುಳಿಯ ಬೇಕಾಗುತ್ತದೆ. ಅವರ ಆರೋಗ್ಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ವೇಳೆ ಸುಧಾರಿಸಿಕೊಳ್ಳುತ್ತದೆ ಎಂದಾದಲ್ಲಿ ಅವರನ್ನು ತಂಡದಲ್ಲಿ ಮುಖ್ಯ ಆಟಗಾರನಾಗಿ ಮುಂದುವರೆಸಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: LSG vs CSK: ಲಕ್ನೋ ವಿರುದ್ಧ ಟಾಸ್​ ಗೆದ್ದ ಚೆನ್ನೈ ಬೌಲಿಂಗ್​ ಆಯ್ಕೆ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಂಡದ ವಿರುದ್ಧದ (ಮೇ 1ರಂದು) ಕೊನೆಯ ಪಂದ್ಯದ ವೇಳೆ ತೊಡೆಗೆ ಗಂಭೀರ ಗಾಯವಾದ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದಲೇ ಹೊರಗುಳಿಯಲಿದ್ದಾರೆ. ಇಂದು ಲಕ್ನೋ ಸೂಪರ್​ ಜೈಂಟ್ಸ್​​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡುತ್ತಿದ್ದು, ಕೃನಾಲ್​ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.

ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್​ನಲ್ಲಿ ಅಭ್ಯಾಸದಲ್ಲಿ ತೊಡಗಿರುವಾಗ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಅನುಭವ ವೇಗಿ ಜಯದೇವ್ ಉನದ್ಕತ್ ಅವರು ಸಹ ತಂಡದಿಂದ ಹೊರಗುಳಿಯಲ್ಲಿದ್ದಾರೆ. ಇನ್ನು ಅರ್ಧದಷ್ಟು ಪಂದ್ಯಗಳನ್ನು ಲಕ್ನೋ ಸೂಪರ್​ ಜೈಂಟ್ಸ್​ ಐಪಿಎಲ್​ನಲ್ಲಿ ಆಡಬೇಕಿದೆ. ತಂಡ ಇಬ್ಬರು ಪರ್ಯಾಯ ಆಟಗಾರರನ್ನು ಹುಡಕಬೇಕಿದೆ. ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವೆಲ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರಕಟವಾದ ತಂಡದಲ್ಲಿ ಪರ್ಯಾಯ ವಿಕೆಟ್​ ಕೀಪರ್​ ಆಗಿ ಕೆಎಲ್​ ರಾಹುಲ್​ ಇದ್ದಾರೆ. ಬೌಲಿಂಗ್​ನಲ್ಲಿ ಜಯದೇವ್​ ಉನಾದ್ಕತ್​ಗೆ ಅವಕಾಶ ಮಾಡಿಕೊಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡ್​ರ್​ ಗವಾಸ್ಕರ್​ ಟ್ರೋಫಿಗೂ ಜಯದೇವ್ ಆಯ್ಕೆಯಾಗಿದ್ದರು. ಈ ವರ್ಷದ ರಣಜಿಯಲ್ಲಿ ಸೌರಾಷ್ಟ್ರ ಉನಾದ್ಕತ್​ ನಾಯಕತ್ವ ಚಾಂಪಿಯನ್​ ಆಗಿತ್ತು.

"ಕೆಎಲ್ ಪ್ರಸ್ತುತ ಲಕ್ನೋದಲ್ಲಿ ತಂಡದೊಂದಿಗೆ ಇದ್ದಾರೆ. ಆದರೆ, ಅವರು ಬುಧವಾರ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ನಂತರ ಗುರುವಾರ ಶಿಬಿರದಿಂದ ನಿರ್ಗಮಿಸುತ್ತಿದ್ದಾರೆ. ಅವರ ಸ್ಕ್ಯಾನ್‌ಗಳನ್ನು ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ಮಾಡಲಾಗುತ್ತದೆ. ರಾಹುಲ್​ ಅವರಿಗೆ ತಿಳಿದ ವೈದ್ಯಕೀಯ ಸಲಹೆಯನ್ನೇ ಜಯದೇವ್ ಪ್ರಕರಣದಲ್ಲೂ ನಿರ್ವಹಿಸಲಾಗುತ್ತದೆ" ಎಂದು ಬಿಸಿಸಿಐನ ಅನಾಮಧೇಯ ಮೂಲದಿಂದ ಮಾಹಿತಿ ದೊರೆತಿದೆ. ಇಲ್ಲಿಯವರೆಗೆ ಯಾವುದೇ ಸ್ಕ್ಯಾನ್ ಮಾಡಲಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

"ಯಾರಾದರೂ ಈ ರೀತಿಯ ಗಾಯ ಅನುಭವಿಸಿದಾಗ, ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ನೋವು ಮತ್ತು ಊತ ಇರುತ್ತದೆ. ಊತವು ವಾಸಿಯಾಗಲು ಸುಮಾರು 24 ರಿಂದ 48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಂತರ ನೀವು ಸ್ಕ್ಯಾನ್ ಮಾಡಬಹುದು. ಕೆಎಲ್​ ರಾಹುಲ್​ ಟೆಸ್ಟ್​​ ತಂಡದ ಪ್ರಮುಖ ಆಟಗಾರರಾಗಿದ್ದರಿಂದ, ಇನ್ನು ಮುಂದೆ ಐಪಿಎಲ್‌ನಲ್ಲಿ ಭಾಗವಹಿಸದಿರುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಸ್ಕ್ಯಾನ್‌ನ ನಂತರ ಗಾಯದ ಮಟ್ಟ ತಿಳಿಯಲಿದ್ದು ನಂತರ, ಬಿಸಿಸಿಐ ವೈದ್ಯಕೀಯ ತಂಡವು ಕ್ರಮವನ್ನು ನಿರ್ಧರಿಸುತ್ತದೆ" ಎಂದು ಅವರು ಹೇಳಿದ್ದಾರೆ.

"ಉನಾದ್ಕತ್​ ಅವರ ಭುಜದ ಗಾಯ ಗಂಭಿರವಾಗಿಯೇ ಇದೆ. ಸ್ಕ್ಯಾನಿಂಗ್​ ನಂತರ ಅವರ ಆರೋಗ್ಯದ ಸಂಪೂರ್ಣ ಮಾಹಿಸಿ ಸಿಗಲಿದೆ. ಈ ಆವೃತ್ತಿಯ ಐಪಿಎಲ್​ನಿಂದ ಉನಾದ್ಕತ್​ ಬಹುತೇಕ ಹೊರಗುಳಿಯ ಬೇಕಾಗುತ್ತದೆ. ಅವರ ಆರೋಗ್ಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ವೇಳೆ ಸುಧಾರಿಸಿಕೊಳ್ಳುತ್ತದೆ ಎಂದಾದಲ್ಲಿ ಅವರನ್ನು ತಂಡದಲ್ಲಿ ಮುಖ್ಯ ಆಟಗಾರನಾಗಿ ಮುಂದುವರೆಸಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: LSG vs CSK: ಲಕ್ನೋ ವಿರುದ್ಧ ಟಾಸ್​ ಗೆದ್ದ ಚೆನ್ನೈ ಬೌಲಿಂಗ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.