ETV Bharat / sports

'ಪ್ಲೇ-ಆಫ್​ಗೆ ಲಗ್ಗೆ ಹಾಕದಿದ್ದರೆ ಪ್ರಪಂಚ ಅಷ್ಟಕ್ಕೇ ಮುಳುಗಿ ಹೋಗಲ್ಲ': ಧೋನಿ ಮಾತಿನ ಅರ್ಥವೇನು!

author img

By

Published : May 9, 2022, 5:16 PM IST

ಪ್ಲೇ-ಆಫ್​ ಪ್ರವೇಶ ಪಡೆದುಕೊಳ್ಳದಿದ್ದರೆ, ಪ್ರಪಂಚ ಅಷ್ಟಕ್ಕೇ ಮುಳುಗಿ ಹೋಗುವುದಿಲ್ಲ ಎಂಬ ಮಾತನ್ನ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

IPL 2022 CSK MS Dhoni
IPL 2022 CSK MS Dhoni

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ದಾಖಲೆಯ 91ರನ್​ಗಳ ಅಂತರದ ಗೆಲುವು ದಾಖಲು ಮಾಡಿರುವ ಚೆನ್ನೈ ಸೂಪರ್​ ಕಿಂಗ್ಸ್​ ಇದೀಗ 11 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿದ್ದು, ಪಾಯಿಂಟ್​ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಪ್ಲೇ-ಆಫ್​ ರೇಸ್​ನಲ್ಲಿ ಉಳಿದುಕೊಳ್ಳಬೇಕಾದರೆ ಮುಂದಿನ 3 ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದ್ದು, ಇದರ ಜೊತೆಗೆ ಉಳಿದ ತಂಡಗಳ ಸೋಲು - ಗೆಲುವಿನ ಲೆಕ್ಕಾಚಾರದ ಮೇಲೆ ಸಿಎಸ್​ಕೆ ಭವಿಷ್ಯ ನಿಂತಿದೆ.

ನಿನ್ನೆ ಡೆಲ್ಲಿ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಸಿಎಸ್​ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, 2022ರ ಐಪಿಎಲ್​​ನಲ್ಲಿ ಪ್ಲೇ-ಆಫ್​ ಪ್ರವೇಶ ಪಡೆದುಕೊಂಡಿದ್ದರೆ ಉತ್ತಮ. ಆದರೆ, ಅದು ಸಾಧ್ಯವಾಗದಿದ್ದಲಿ ಪ್ರಪಂಚ ಅಷ್ಟಕ್ಕೇ ಕೊನೆಯಾಗುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ತಂಡ ಪ್ಲೇ-ಆಫ್​ ಅರ್ಹತೆ ಬಗ್ಗೆ ಚಿಂತಿಸುವುದಿಲ್ಲ. ಈ ಗುರಿಯಲ್ಲಿ ನಾವು ವಿಫಲವಾದ್ರೂ ಅದು ಅದು ಜಗತ್ತಿನ ಅಂತ್ಯ ಅಲ್ಲ ಎಂದಿದ್ದಾರೆ.

ಚೆನ್ನೈ ಪ್ಲೇ-ಆಫ್​ ಅಸೆ ಜೀವಂತ: ಡೆಲ್ಲಿ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಸಿಎಸ್​ಕೆ ಪ್ಲೇ-ಆಫ್​ ಆಸೆ ಈಗಲೂ ಜೀವಂತವಾಗಿದೆ. ಇಲ್ಲಿಯವರೆಗೆ ತಂಡ ಆಡಿರುವ 11 ಪಂದ್ಯಗಳ ಪೈಕಿ 4ರಲ್ಲಿ ಗೆದ್ದು 8 ಪಾಯಿಂಟ್​​ಗಳಿಕೆ ಮಾಡಿದೆ. ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಒಂದು ವೇಳೆ ಈ ಎಲ್ಲ ಮ್ಯಾಚ್​​ಗಳಲ್ಲಿ ಸಿಎಸ್​​ಕೆ ಗೆಲುವು ದಾಖಲಿಸಿದರೆ 14 ಪಾಯಿಂಟ್​ ಆಗಲಿವೆ. ಈ ತಂಡದ ರನ್​ರೇಟ್​ ಉತ್ತಮವಾಗಿರುವ ಕಾರಣ, ಪ್ಲೇ-ಆಫ್​ ಪ್ರವೇಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ, ರಾಜಸ್ಥಾನ ರಾಯಲ್ಸ್ ಹಾಗೂ ಬೆಂಗಳೂರು ತಂಡ ಮುಂದಿನ ಪಂದ್ಯಗಳಲ್ಲಿ ಸೋಲು ಕೂಡ ಸಿಎಸ್​​ಕೆ ತಂಡಕ್ಕೆ ಅನಿವಾರ್ಯವಾಗಿದೆ.

ಇದನ್ನೂ ಓದಿ: IPL 2022: ಚೆನ್ನೈ ತಂಡದ ಆಲ್‌ರೌಂಡ್‌ ಪ್ರದರ್ಶನ, ಡೆಲ್ಲಿ ವಿರುದ್ಧ 91 ರನ್‌ ಜಯ

ಕೇವಲ ಆಟದ ಬಗ್ಗೆ ಮಾತ್ರ ನಾವು ಯೋಚನೆ ಮಾಡುತ್ತೇವೆ. ನಾನು ಗಣಿತದ ಅಭಿಮಾನಿಯಲ್ಲ, ಶಾಲೆಯಲ್ಲೂ ನಾನು ಲೆಕ್ಕದಲ್ಲಿ ಹಿಂದಿದ್ದೆ. ನೆಟ್​ ರನ್​ರೇಟ್​ ಬಗ್ಗೆ ಯೋಚನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇತರ ತಂಡಗಳು ಆಟವಾಡುತ್ತಿರುವಾಗಿ ರನ್​ರೇಟ್​ ಬಗ್ಗೆ ಯೋಚನೆ ಮಾಡಿ, ನಾವು ಏಕೆ ಒತ್ತಡಕ್ಕೊಳಗಾಗಬೇಕು ಎಂದರು.

ಮುಂದಿನ ಪಂದ್ಯಕ್ಕಾಗಿ ಏನು ಮಾಡಬೇಕು ಎಂಬುದರ ಬಗ್ಗೆ ನಾವು ಯೋಚನೆ ಮಾಡಬೇಕು. ಡೆಲ್ಲಿ ವಿರುದ್ಧ ನಮ್ಮ ತಂಡ ಉತ್ತಮವಾದ ಗೆಲುವು ದಾಖಲು ಮಾಡಿದೆ. ಇದೊಂದು ಪರಿಪೂರ್ಣವಾದ ಜಯ ಎಂದಿದ್ದಾರೆ.

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ದಾಖಲೆಯ 91ರನ್​ಗಳ ಅಂತರದ ಗೆಲುವು ದಾಖಲು ಮಾಡಿರುವ ಚೆನ್ನೈ ಸೂಪರ್​ ಕಿಂಗ್ಸ್​ ಇದೀಗ 11 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿದ್ದು, ಪಾಯಿಂಟ್​ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಪ್ಲೇ-ಆಫ್​ ರೇಸ್​ನಲ್ಲಿ ಉಳಿದುಕೊಳ್ಳಬೇಕಾದರೆ ಮುಂದಿನ 3 ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದ್ದು, ಇದರ ಜೊತೆಗೆ ಉಳಿದ ತಂಡಗಳ ಸೋಲು - ಗೆಲುವಿನ ಲೆಕ್ಕಾಚಾರದ ಮೇಲೆ ಸಿಎಸ್​ಕೆ ಭವಿಷ್ಯ ನಿಂತಿದೆ.

ನಿನ್ನೆ ಡೆಲ್ಲಿ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಸಿಎಸ್​ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, 2022ರ ಐಪಿಎಲ್​​ನಲ್ಲಿ ಪ್ಲೇ-ಆಫ್​ ಪ್ರವೇಶ ಪಡೆದುಕೊಂಡಿದ್ದರೆ ಉತ್ತಮ. ಆದರೆ, ಅದು ಸಾಧ್ಯವಾಗದಿದ್ದಲಿ ಪ್ರಪಂಚ ಅಷ್ಟಕ್ಕೇ ಕೊನೆಯಾಗುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ತಂಡ ಪ್ಲೇ-ಆಫ್​ ಅರ್ಹತೆ ಬಗ್ಗೆ ಚಿಂತಿಸುವುದಿಲ್ಲ. ಈ ಗುರಿಯಲ್ಲಿ ನಾವು ವಿಫಲವಾದ್ರೂ ಅದು ಅದು ಜಗತ್ತಿನ ಅಂತ್ಯ ಅಲ್ಲ ಎಂದಿದ್ದಾರೆ.

ಚೆನ್ನೈ ಪ್ಲೇ-ಆಫ್​ ಅಸೆ ಜೀವಂತ: ಡೆಲ್ಲಿ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಸಿಎಸ್​ಕೆ ಪ್ಲೇ-ಆಫ್​ ಆಸೆ ಈಗಲೂ ಜೀವಂತವಾಗಿದೆ. ಇಲ್ಲಿಯವರೆಗೆ ತಂಡ ಆಡಿರುವ 11 ಪಂದ್ಯಗಳ ಪೈಕಿ 4ರಲ್ಲಿ ಗೆದ್ದು 8 ಪಾಯಿಂಟ್​​ಗಳಿಕೆ ಮಾಡಿದೆ. ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಒಂದು ವೇಳೆ ಈ ಎಲ್ಲ ಮ್ಯಾಚ್​​ಗಳಲ್ಲಿ ಸಿಎಸ್​​ಕೆ ಗೆಲುವು ದಾಖಲಿಸಿದರೆ 14 ಪಾಯಿಂಟ್​ ಆಗಲಿವೆ. ಈ ತಂಡದ ರನ್​ರೇಟ್​ ಉತ್ತಮವಾಗಿರುವ ಕಾರಣ, ಪ್ಲೇ-ಆಫ್​ ಪ್ರವೇಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ, ರಾಜಸ್ಥಾನ ರಾಯಲ್ಸ್ ಹಾಗೂ ಬೆಂಗಳೂರು ತಂಡ ಮುಂದಿನ ಪಂದ್ಯಗಳಲ್ಲಿ ಸೋಲು ಕೂಡ ಸಿಎಸ್​​ಕೆ ತಂಡಕ್ಕೆ ಅನಿವಾರ್ಯವಾಗಿದೆ.

ಇದನ್ನೂ ಓದಿ: IPL 2022: ಚೆನ್ನೈ ತಂಡದ ಆಲ್‌ರೌಂಡ್‌ ಪ್ರದರ್ಶನ, ಡೆಲ್ಲಿ ವಿರುದ್ಧ 91 ರನ್‌ ಜಯ

ಕೇವಲ ಆಟದ ಬಗ್ಗೆ ಮಾತ್ರ ನಾವು ಯೋಚನೆ ಮಾಡುತ್ತೇವೆ. ನಾನು ಗಣಿತದ ಅಭಿಮಾನಿಯಲ್ಲ, ಶಾಲೆಯಲ್ಲೂ ನಾನು ಲೆಕ್ಕದಲ್ಲಿ ಹಿಂದಿದ್ದೆ. ನೆಟ್​ ರನ್​ರೇಟ್​ ಬಗ್ಗೆ ಯೋಚನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇತರ ತಂಡಗಳು ಆಟವಾಡುತ್ತಿರುವಾಗಿ ರನ್​ರೇಟ್​ ಬಗ್ಗೆ ಯೋಚನೆ ಮಾಡಿ, ನಾವು ಏಕೆ ಒತ್ತಡಕ್ಕೊಳಗಾಗಬೇಕು ಎಂದರು.

ಮುಂದಿನ ಪಂದ್ಯಕ್ಕಾಗಿ ಏನು ಮಾಡಬೇಕು ಎಂಬುದರ ಬಗ್ಗೆ ನಾವು ಯೋಚನೆ ಮಾಡಬೇಕು. ಡೆಲ್ಲಿ ವಿರುದ್ಧ ನಮ್ಮ ತಂಡ ಉತ್ತಮವಾದ ಗೆಲುವು ದಾಖಲು ಮಾಡಿದೆ. ಇದೊಂದು ಪರಿಪೂರ್ಣವಾದ ಜಯ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.