ETV Bharat / sports

ಮುಂಬೈ ಬೌಲಿಂಗ್​​​ ದಾಳಿಗೆ ಚೆನ್ನೈ ಉಡೀಸ್​​... 98ರನ್​​ ಟಾರ್ಗೆಟ್​ ನೀಡಿದ ಧೋನಿ ಪಡೆ

author img

By

Published : May 12, 2022, 7:38 PM IST

Updated : May 12, 2022, 9:18 PM IST

ಇಂಡಿಯನ್​ ಪ್ರೀಮಿಯರ್ ಲೀಗ್​​ನ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿವೆ. ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳುವ ದೃಷ್ಟಿಯಿಂದ ಧೋನಿ ಪಡೆಗೆ ಈ ಪಂದ್ಯ ಮಾಡು ಇಲ್ಲವೆ ಮಡಿ ಆಗಿದೆ.

Chennai Super Kings vs Mumbai Indians
Chennai Super Kings vs Mumbai Indians

ಮುಂಬೈ: ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳಲು ಮಾಡು ಇಲ್ಲವೆ ಮಡಿಯಾಗಿದ್ದ ಇಂದಿನ ಪಂದ್ಯದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 97 ರನ್​​ಗಳಿಗೆ ಆಲೌಟ್​ ಆಗಿದೆ. ಸತತ ವಿಕೆಟ್ ಪತನದ ಹೊರತಾಗಿ ಕೂಡ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(36ರನ್​) ಏಕಾಂಗಿ ಹೋರಾಟ ನಡೆಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಧೋನಿ ಬಾಯ್ಸ್​ ಮೊದಲ ಓವರ್​​ನಿಂದಲೇ ಪೆವಿಲಿಯನ್​ ಪರೇಡ್​ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕಾನ್ವೆ(0) ತಾವು ಎದುರಿಸಿದ ಮೊದಲ ಎಸೆತದಲ್ಲೇ ಡೆನಿಯಲ್​ ಸ್ಯಾಮ್ಸ್​​ ಎಲ್​ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಮೊಯಿನ್​​ ಅಲಿ(0) ಕೂಡ ಸ್ಯಾಮ್ಸ್​ ಓವರ್​​ನಲ್ಲೇ ಔಟಾದರು.

ಇದರ ಬೆನ್ನಲ್ಲೇ ಬಂದ ರಾಬಿನ್​ ಉತ್ತಪ್ಪ(1) ಕೂಡ ಬುಮ್ರಾ ಓವರ್​​ನಲ್ಲಿ ಎಲ್​​ಬಿ ಬಲೆಗೆ ಬಿದ್ದರು. ಇದಾದ ಬಳಿಕ ಋತುರಾಜ್ ಕೂಡ ಕೇವಲ 7ರನ್​​ಗಳಿಸಿ ಸ್ಯಾಮ್ಸ್​ ಬಲೆಗೆ ಬಿದ್ದರು. ಮಧ್ಯಮ ಕ್ರಮಾಂಕದಲ್ಲೂ ರಾಯುಡು 10ರನ್​​ಗಳಿಸಿ ಮೆರ್ಡಿತ್​ ಎಸೆತದಲ್ಲಿ ಔಟಾದರು.

ಧೋನಿ ಏಕಾಂಗಿ ಹೋರಾಟ: ಸಿಎಸ್​​ಕೆ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ರೂ ಏಕಾಂಗಿಯಾಗಿ ಹೋರಾಟ ನಡೆಸಿದ ಧೋನಿ ಎದುರಾಳಿ ಬೌಲರ್​​ಗಳನ್ನ ದಂಡಿಸಿದರು. ತಾವು ಎದುರಿಸಿದ 32 ಎಸೆತಗಳಲ್ಲಿ 2 ಸಿಕ್ಸರ್​ ಸಮೇತ 36ರನ್​​ಗಳಿಕೆ ಮಾಡಿದರು. ಇವರಿಗೆ ಶಿವಂ ದುಬೆ 10ರನ್​, ಬ್ರಾವೋ 12ರನ್​ ಸಾಥ್​ ನೀಡಿದರು. ಕೊನೆಯದಾಗಿ ತಂಡ 15.5 ಓವರ್​​​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 97ರನ್​​ಗಳಿಕೆ ಮಾಡಿತು.

ಮುಂಬೈ ಪರ ಬೌಲಿಂಗ್​​ನಲ್ಲಿ ಅಬ್ಬರಿಸಿದ ಡ್ಯಾನಿಯಲ್​ ಸ್ಯಾಮ್ಸ್​​​ 3ವಿಕೆಟ್​, ಮೆರ್ಡಿತ್​, ಕಾರ್ತಿಕೇಯ 2 ವಿಕೆಟ್​ ಪಡೆದ್ರೆ, ರಮಣದೀಪ್​ ಸಿಂಗ್​ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.

ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಿವೆ. ಟಾಸ್​ ಗೆದ್ದ ರೋಹಿತ್​ ಶರ್ಮಾ ಬಳಗ ಕ್ಷೇತ್ರ ರಕ್ಷಣೆ ಮಾಡುವ ನಿರ್ಧಾರ ಕೈಗೊಂಡಿದೆ. ಈ ಪಂದ್ಯ ಚೆನ್ನೈಗೆ ಮಹತ್ವದಾಗಿದೆ.

ಪಾಯಿಂಟ್​ ಪಟ್ಟಿಯಲ್ಲಿ ಉಭಯ ತಂಡಗಳು ಕೊನೆಯ ಎರಡು ಸ್ಥಾನಗಳಲ್ಲಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಖಾಮುಖಿಯಾಗಿವೆ. ಪ್ಲೇ-ಆಫ್​​ ರೇಸ್​​ನಿಂದ ಮುಂಬೈ ಇಂಡಿಯನ್ಸ್​ ಈಗಾಗಲೇ ಹೊರಬಿದ್ದಿದೆ. ಟೂರ್ನಿಯಲ್ಲಿ ಜೀವಂತವಾಗಿರಲು ಚೆನ್ನೈಗೆ ಈ ಗೆಲುವು ಅತಿ ಮಹತ್ವದಾಗಿದೆ. ಒಂದು ವೇಳೆ, ಇಂದಿನ ಪಂದ್ಯದಲ್ಲಿ ಧೋನಿ ಬಳಗ ಸೋತರೆ ಪ್ಲೇ-ಆಫ್​ ರೇಸ್​​ನಿಂದ ಹೊರಬೀಳಲಿದೆ.

ಹಾಲಿ ಚಾಂಪಿಯನ್​ ಸಿಎಸ್​​ಕೆ ಆಡಿರುವ 11 ಪಂದ್ಯಗಳಿಂದ ನಾಲ್ಕರಲ್ಲಿ ಗೆದ್ದು 8 ಪಾಯಿಂಟ್​​ ಗಳಿಕೆ ಮಾಡಿದ್ದರೆ, ಮುಂಬೈ ಕೇವಲ ಎರಡು ಪಂದ್ಯಗಳಲ್ಲಿ ಗೆದ್ದು ಕೊನೆಯ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್​​: ಋತುರಾಜ್ ಗಾಯ್ಕವಾಡ್​, ಕಾನ್ವೆ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಎಂಎಸ್​ ಧೋನಿ(ವಿ,ಕೀ/ಕ್ಯಾಪ್ಟನ್​), ಡ್ವೇನ್ ಬ್ರಾವೋ, ಮಹೇಶ್ ತಿಕ್ಷಣ್,ಸಿಮ್ರಜಿತ್ ಸಿಂಗ್, ಮುಖೇಶ್​ ಚೌಧರಿ

ಮುಂಬೈ ಇಂಡಿಯನ್ಸ್​: ರಾಬಿನ್ ಉತ್ತಪ್ಪ(ಕ್ಯಾಪ್ಟನ್), ಇಶಾನ್ ಕಿಶನ್​(ವಿ.ಕೀ), ತಿಲಕ್ ವರ್ಮಾ, ಸ್ಟುಬ್ಸ್​, ರಮಣದೀಪ್​ ಸಿಂಗ್, ಟಿಮ್ ಡೇವಿಡ್, ಡೆನಿಯಲ್ ಸ್ಯಾಮ್ಸ್​, ಕುಮಾರ್ ಕಾರ್ತಿಕೇಯ್, ಹೃತಿಕ್​​ ಶೋಕೆನ್​, ಜಸ್ಪ್ರಿತ್ ಬುಮ್ರಾ, ಮೆರ್ಡಿತ್

ಮುಂಬೈ: ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳಲು ಮಾಡು ಇಲ್ಲವೆ ಮಡಿಯಾಗಿದ್ದ ಇಂದಿನ ಪಂದ್ಯದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 97 ರನ್​​ಗಳಿಗೆ ಆಲೌಟ್​ ಆಗಿದೆ. ಸತತ ವಿಕೆಟ್ ಪತನದ ಹೊರತಾಗಿ ಕೂಡ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(36ರನ್​) ಏಕಾಂಗಿ ಹೋರಾಟ ನಡೆಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಧೋನಿ ಬಾಯ್ಸ್​ ಮೊದಲ ಓವರ್​​ನಿಂದಲೇ ಪೆವಿಲಿಯನ್​ ಪರೇಡ್​ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕಾನ್ವೆ(0) ತಾವು ಎದುರಿಸಿದ ಮೊದಲ ಎಸೆತದಲ್ಲೇ ಡೆನಿಯಲ್​ ಸ್ಯಾಮ್ಸ್​​ ಎಲ್​ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಮೊಯಿನ್​​ ಅಲಿ(0) ಕೂಡ ಸ್ಯಾಮ್ಸ್​ ಓವರ್​​ನಲ್ಲೇ ಔಟಾದರು.

ಇದರ ಬೆನ್ನಲ್ಲೇ ಬಂದ ರಾಬಿನ್​ ಉತ್ತಪ್ಪ(1) ಕೂಡ ಬುಮ್ರಾ ಓವರ್​​ನಲ್ಲಿ ಎಲ್​​ಬಿ ಬಲೆಗೆ ಬಿದ್ದರು. ಇದಾದ ಬಳಿಕ ಋತುರಾಜ್ ಕೂಡ ಕೇವಲ 7ರನ್​​ಗಳಿಸಿ ಸ್ಯಾಮ್ಸ್​ ಬಲೆಗೆ ಬಿದ್ದರು. ಮಧ್ಯಮ ಕ್ರಮಾಂಕದಲ್ಲೂ ರಾಯುಡು 10ರನ್​​ಗಳಿಸಿ ಮೆರ್ಡಿತ್​ ಎಸೆತದಲ್ಲಿ ಔಟಾದರು.

ಧೋನಿ ಏಕಾಂಗಿ ಹೋರಾಟ: ಸಿಎಸ್​​ಕೆ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ರೂ ಏಕಾಂಗಿಯಾಗಿ ಹೋರಾಟ ನಡೆಸಿದ ಧೋನಿ ಎದುರಾಳಿ ಬೌಲರ್​​ಗಳನ್ನ ದಂಡಿಸಿದರು. ತಾವು ಎದುರಿಸಿದ 32 ಎಸೆತಗಳಲ್ಲಿ 2 ಸಿಕ್ಸರ್​ ಸಮೇತ 36ರನ್​​ಗಳಿಕೆ ಮಾಡಿದರು. ಇವರಿಗೆ ಶಿವಂ ದುಬೆ 10ರನ್​, ಬ್ರಾವೋ 12ರನ್​ ಸಾಥ್​ ನೀಡಿದರು. ಕೊನೆಯದಾಗಿ ತಂಡ 15.5 ಓವರ್​​​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 97ರನ್​​ಗಳಿಕೆ ಮಾಡಿತು.

ಮುಂಬೈ ಪರ ಬೌಲಿಂಗ್​​ನಲ್ಲಿ ಅಬ್ಬರಿಸಿದ ಡ್ಯಾನಿಯಲ್​ ಸ್ಯಾಮ್ಸ್​​​ 3ವಿಕೆಟ್​, ಮೆರ್ಡಿತ್​, ಕಾರ್ತಿಕೇಯ 2 ವಿಕೆಟ್​ ಪಡೆದ್ರೆ, ರಮಣದೀಪ್​ ಸಿಂಗ್​ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.

ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಿವೆ. ಟಾಸ್​ ಗೆದ್ದ ರೋಹಿತ್​ ಶರ್ಮಾ ಬಳಗ ಕ್ಷೇತ್ರ ರಕ್ಷಣೆ ಮಾಡುವ ನಿರ್ಧಾರ ಕೈಗೊಂಡಿದೆ. ಈ ಪಂದ್ಯ ಚೆನ್ನೈಗೆ ಮಹತ್ವದಾಗಿದೆ.

ಪಾಯಿಂಟ್​ ಪಟ್ಟಿಯಲ್ಲಿ ಉಭಯ ತಂಡಗಳು ಕೊನೆಯ ಎರಡು ಸ್ಥಾನಗಳಲ್ಲಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಖಾಮುಖಿಯಾಗಿವೆ. ಪ್ಲೇ-ಆಫ್​​ ರೇಸ್​​ನಿಂದ ಮುಂಬೈ ಇಂಡಿಯನ್ಸ್​ ಈಗಾಗಲೇ ಹೊರಬಿದ್ದಿದೆ. ಟೂರ್ನಿಯಲ್ಲಿ ಜೀವಂತವಾಗಿರಲು ಚೆನ್ನೈಗೆ ಈ ಗೆಲುವು ಅತಿ ಮಹತ್ವದಾಗಿದೆ. ಒಂದು ವೇಳೆ, ಇಂದಿನ ಪಂದ್ಯದಲ್ಲಿ ಧೋನಿ ಬಳಗ ಸೋತರೆ ಪ್ಲೇ-ಆಫ್​ ರೇಸ್​​ನಿಂದ ಹೊರಬೀಳಲಿದೆ.

ಹಾಲಿ ಚಾಂಪಿಯನ್​ ಸಿಎಸ್​​ಕೆ ಆಡಿರುವ 11 ಪಂದ್ಯಗಳಿಂದ ನಾಲ್ಕರಲ್ಲಿ ಗೆದ್ದು 8 ಪಾಯಿಂಟ್​​ ಗಳಿಕೆ ಮಾಡಿದ್ದರೆ, ಮುಂಬೈ ಕೇವಲ ಎರಡು ಪಂದ್ಯಗಳಲ್ಲಿ ಗೆದ್ದು ಕೊನೆಯ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್​​: ಋತುರಾಜ್ ಗಾಯ್ಕವಾಡ್​, ಕಾನ್ವೆ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಎಂಎಸ್​ ಧೋನಿ(ವಿ,ಕೀ/ಕ್ಯಾಪ್ಟನ್​), ಡ್ವೇನ್ ಬ್ರಾವೋ, ಮಹೇಶ್ ತಿಕ್ಷಣ್,ಸಿಮ್ರಜಿತ್ ಸಿಂಗ್, ಮುಖೇಶ್​ ಚೌಧರಿ

ಮುಂಬೈ ಇಂಡಿಯನ್ಸ್​: ರಾಬಿನ್ ಉತ್ತಪ್ಪ(ಕ್ಯಾಪ್ಟನ್), ಇಶಾನ್ ಕಿಶನ್​(ವಿ.ಕೀ), ತಿಲಕ್ ವರ್ಮಾ, ಸ್ಟುಬ್ಸ್​, ರಮಣದೀಪ್​ ಸಿಂಗ್, ಟಿಮ್ ಡೇವಿಡ್, ಡೆನಿಯಲ್ ಸ್ಯಾಮ್ಸ್​, ಕುಮಾರ್ ಕಾರ್ತಿಕೇಯ್, ಹೃತಿಕ್​​ ಶೋಕೆನ್​, ಜಸ್ಪ್ರಿತ್ ಬುಮ್ರಾ, ಮೆರ್ಡಿತ್

Last Updated : May 12, 2022, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.