ETV Bharat / sports

ಐಪಿಎಲ್​ ಮರು ಆಯೋಜನೆಗೊಂಡರೆ ಭಾಗಿಯಾಗಲು ಸಿದ್ಧ: ಆರ್ಚರ್​

author img

By

Published : May 14, 2021, 9:26 PM IST

ಮೊಣಕೈ ಗಾಯದ ಕಾರಣ ಐಪಿಎಲ್​ನಿಂದ ಹೊರಗುಳಿದಿದ್ದ ಇಂಗ್ಲೆಂಡ್ ವೇಗಿ ಆರ್ಚರ್ ಇದೀಗ ಅದು ಮರು ಆಯೋಜನೆಗೊಂಡರೆ ಭಾಗಿಯಾಗಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ.

Archer
Archer

ಲಂಡನ್​: ಕೊರೊನಾ ಮಹಾಮಾರಿ ಕಾರಣ ಪ್ರಸಕ್ತ ಸಾಲಿನ ಇಂಡಿಯನ್​​ ಪ್ರೀಮಿಯರ್ ಲೀಗ್​ ಟೂರ್ನಿ ಸ್ಥಗಿತಗೊಂಡಿದ್ದು, ಅದು ಮರು ಆಯೋಜನೆಗೊಳ್ಳುವ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಖಚಿತ ಮಾಹಿತಿ ಇಲ್ಲ. ಒಂದು ವೇಳೆ ವೇಳಾಪಟ್ಟಿ ಮರು ನಿಗದಿಯಾದರೆ ಆಡಲು ಸಿದ್ಧವಿದ್ದೇನೆ ಎಂದು ಆರ್ಚರ್ ಹೇಳಿಕೊಂಡಿದ್ದಾರೆ.

ಮೊಣಕೈ ಗಾಯದಿಂದಾಗಿ ಐಪಿಎಲ್​ನಿಂದ ದೂರ ಉಳಿದಿದ್ದ ಆರ್ಚರ್​ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಜತೆಗೆ ಕೆಂಟ್​ ವಿರುದ್ಧದ ಕೌಂಟಿ ಚಾಂಪಿಯನ್​ಶಿಪ್​​ ಪಂದ್ಯದಲ್ಲಿ ಸಸೆಕ್ಸ್​​ ಪರ ಆಡ್ತಿದ್ದು, 13 ಓವರ್​ಗಳಲ್ಲಿ 29ರನ್​ ನೀಡಿ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.

ಇದೇ ವೇಳೆ ಮಾತನಾಡಿರುವ ಅವರು, ಐಪಿಎಲ್​ಗೋಸ್ಕರ ನಾನು ಭಾರತಕ್ಕೆ ಹೋಗಿದ್ದರೆ ವಾಪಸ್ ಬರಬೇಕಾಗುತ್ತಿತ್ತು. ಆದರೆ ಇದೀಗ ಸಂಪೂರ್ಣವಾಗಿ ಗುಣಮುಖನಾಗಿದ್ದು, ಒಂದು ವೇಳೆ ಐಪಿಎಲ್ ಮರುನಿಗದಿಯಾದರೆ ಅದರಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಭಾರತಕ್ಕೆ ಹೋಗದಿರುವುದು ಕಠಿಣ ನಿರ್ಧಾರವಾಗಿತ್ತು. ಹೋಗಿದ್ದರೆ ಎಷ್ಟು ಪಂದ್ಯಗಳಲ್ಲಿ ಭಾಗಿಯಾಗುತ್ತಿದೆ ಎಂಬುದು ಗೊತ್ತಿರಲಿಲ್ಲ ಎಂದಿದ್ದಾರೆ. ನಾನು ತೆಗೆದುಕೊಂಡಿದ್ದ ನಿರ್ಧಾರಕ್ಕೆ ರಾಜಸ್ಥಾನ ಹಾಗೂ ಇಂಗ್ಲೆಂಡ್​ ಬೆಂಬಲ ನೀಡಿತು ಎಂದು ತಿಳಿಸಿದ್ದಾರೆ.

ಕಳೆದ ಋತುವಿನ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಇವರು 20 ವಿಕೆಟ್ ಪಡೆದುಕೊಂಡಿದ್ದರು. ಇದೀಗ ಒಂದೂವರೆ ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ ಆಡಿದ ಆರ್ಚರ್​ ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ.

ಲಂಡನ್​: ಕೊರೊನಾ ಮಹಾಮಾರಿ ಕಾರಣ ಪ್ರಸಕ್ತ ಸಾಲಿನ ಇಂಡಿಯನ್​​ ಪ್ರೀಮಿಯರ್ ಲೀಗ್​ ಟೂರ್ನಿ ಸ್ಥಗಿತಗೊಂಡಿದ್ದು, ಅದು ಮರು ಆಯೋಜನೆಗೊಳ್ಳುವ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಖಚಿತ ಮಾಹಿತಿ ಇಲ್ಲ. ಒಂದು ವೇಳೆ ವೇಳಾಪಟ್ಟಿ ಮರು ನಿಗದಿಯಾದರೆ ಆಡಲು ಸಿದ್ಧವಿದ್ದೇನೆ ಎಂದು ಆರ್ಚರ್ ಹೇಳಿಕೊಂಡಿದ್ದಾರೆ.

ಮೊಣಕೈ ಗಾಯದಿಂದಾಗಿ ಐಪಿಎಲ್​ನಿಂದ ದೂರ ಉಳಿದಿದ್ದ ಆರ್ಚರ್​ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಜತೆಗೆ ಕೆಂಟ್​ ವಿರುದ್ಧದ ಕೌಂಟಿ ಚಾಂಪಿಯನ್​ಶಿಪ್​​ ಪಂದ್ಯದಲ್ಲಿ ಸಸೆಕ್ಸ್​​ ಪರ ಆಡ್ತಿದ್ದು, 13 ಓವರ್​ಗಳಲ್ಲಿ 29ರನ್​ ನೀಡಿ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.

ಇದೇ ವೇಳೆ ಮಾತನಾಡಿರುವ ಅವರು, ಐಪಿಎಲ್​ಗೋಸ್ಕರ ನಾನು ಭಾರತಕ್ಕೆ ಹೋಗಿದ್ದರೆ ವಾಪಸ್ ಬರಬೇಕಾಗುತ್ತಿತ್ತು. ಆದರೆ ಇದೀಗ ಸಂಪೂರ್ಣವಾಗಿ ಗುಣಮುಖನಾಗಿದ್ದು, ಒಂದು ವೇಳೆ ಐಪಿಎಲ್ ಮರುನಿಗದಿಯಾದರೆ ಅದರಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಭಾರತಕ್ಕೆ ಹೋಗದಿರುವುದು ಕಠಿಣ ನಿರ್ಧಾರವಾಗಿತ್ತು. ಹೋಗಿದ್ದರೆ ಎಷ್ಟು ಪಂದ್ಯಗಳಲ್ಲಿ ಭಾಗಿಯಾಗುತ್ತಿದೆ ಎಂಬುದು ಗೊತ್ತಿರಲಿಲ್ಲ ಎಂದಿದ್ದಾರೆ. ನಾನು ತೆಗೆದುಕೊಂಡಿದ್ದ ನಿರ್ಧಾರಕ್ಕೆ ರಾಜಸ್ಥಾನ ಹಾಗೂ ಇಂಗ್ಲೆಂಡ್​ ಬೆಂಬಲ ನೀಡಿತು ಎಂದು ತಿಳಿಸಿದ್ದಾರೆ.

ಕಳೆದ ಋತುವಿನ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಇವರು 20 ವಿಕೆಟ್ ಪಡೆದುಕೊಂಡಿದ್ದರು. ಇದೀಗ ಒಂದೂವರೆ ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ ಆಡಿದ ಆರ್ಚರ್​ ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.