ETV Bharat / sports

'ಆತನಿಗೂ ಒಂದು ಚಾನ್ಸ್ ನೀಡಿ'.. ಜೂನಿಯರ್​​​ ತೆಂಡೂಲ್ಕರ್​ ಪರ ಫ್ಯಾನ್ಸ್ ಬ್ಯಾಟ್​​!

author img

By

Published : May 2, 2022, 10:23 PM IST

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಕಳೆದ ಎರಡು ಆವೃತ್ತಿಗಳಿಂದಲೂ ಮುಂಬೈ ಇಂಡಿಯನ್ಸ್​​​ ಪರ ಆಯ್ಕೆಯಾಗುತ್ತಿರುವ ಜೂನಿಯರ್ ತೆಂಡೂಲ್ಕರ್​ಗೆ ಇಲ್ಲಿಯವರೆಗೆ ಆಡುವ ಅವಕಾಶ ಮಾತ್ರ ಸಿಕ್ಕಿಲ್ಲ.

arjun tendulkar MI
arjun tendulkar MI

ಹೈದರಾಬಾದ್​: ಕಳೆದ ಎರಡು ಆವೃತ್ತಿಯಲ್ಲೂ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್​ ತಂಡದ ಪಾಲಾಗಿರುವ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ಗೆ ಇಲ್ಲಿಯವರೆಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ, ಕೆಲ ಕ್ರಿಕೆಟ್​ ಅಭಿಮಾನಿಗಳು ಆತನಿಗೂ ಒಂದು ಚಾನ್ಸ್​ ನೀಡುವಂತೆ ಮನವಿ ಮಾಡಲು ಶುರು ಮಾಡಿದ್ದಾರೆ.

ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಅರ್ಜುನ್ ತೆಂಡೂಲ್ಕರ್​ಗೆ ಲಖನೌ ತಂಡದ ವಿರುದ್ಧದ ಪಂದ್ಯದಲ್ಲಿ ಅವಕಾಶ ನೀಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ತಂಡದಲ್ಲಿ ಕೆಲವೊಂದು ಬದಲಾವಣೆ ಹೊರತಾಗಿ ಕೂಡ ಅವರಿಗೆ ಚಾನ್ಸ್​ ಸಿಕ್ಕಿರಲಿಲ್ಲ. ಹೀಗಾಗಿ, ಮುಂದಿನ ಪಂದ್ಯಕ್ಕಾದ್ರೂ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗ್ತಿದೆ.

ಇದನ್ನೂ ಓದಿ: ಸನ್ ರೈಸರ್ಸ್​ಗೆ ಏಟಿನ ಮೇಲೆ ಏಟು.. ಮತ್ತೆ ಸ್ಟಾರ್ ಆಲ್​ರೌಂಡರ್ ತಂಡದಿಂದ ಹೊರಕ್ಕೆ

ನೆಟ್​​ನಲ್ಲಿ ಬೌಲಿಂಗ್​ ಅಭ್ಯಾಸ ನಡೆಸುತ್ತಿದ್ದ ವೇಳೆ ಅತ್ಯದ್ಭುತ ಯಾರ್ಕರ್​ ಎಸೆಯುವ ಮೂಲಕ ಇಶಾನ್ ಕಿಶನ್​ ಅವರನ್ನ ಕ್ಲೀನ್​ ಬೌಲ್ಡ್ ಮಾಡಿದ್ದ ಅರ್ಜುನ್ ಅನೇಕರ ಗಮನ ಸೆಳೆದಿದ್ದರು. ಆದರೂ ಕೂಡ ಇವರಿಗೆ ಅವಕಾಶ ಮಾತ್ರ ಸಿಕ್ಕಿಲ್ಲ. ಕಳೆದ ವರ್ಷ ಕೂಡ ಮುಂಬೈ ಇಂಡಿಯನ್ಸ್​ ತಂಡದಲ್ಲಿದ್ದ ಜೂನಿಯರ್ ತೆಂಡೂಲ್ಕರ್​ಗೆ ಯಾವುದೇ ಪಂದ್ಯದಲ್ಲೂ ಅವಕಾಶ ಸಿಕ್ಕಿರಲಿಲ್ಲ. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ರಾಜಸ್ಥಾನ ರಾಯಲ್ಸ್​ ವಿರುದ್ಧ ಸೆಣಸಾಟ ನಡೆಸಲಿದ್ದು, ಆ ಪಂದ್ಯದಲ್ಲಿ ಅವಕಾಶ ಸಿಗುವುದೇ ಎಂಬುದನ್ನ ಕಾಯ್ದು ನೋಡಬೇಕಾಗಿದೆ.

ಇನ್ನು ದೇಶಿಯ ಮಟ್ಟದಲ್ಲಿ ಕೇವಲ ಎರಡು ಟಿ20 ಪಂದ್ಯಗಳನ್ನಾಡಿರುವ ಅರ್ಜುನ್​ ತೆಂಡೂಲ್ಕರ್​ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.

ಹೈದರಾಬಾದ್​: ಕಳೆದ ಎರಡು ಆವೃತ್ತಿಯಲ್ಲೂ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್​ ತಂಡದ ಪಾಲಾಗಿರುವ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ಗೆ ಇಲ್ಲಿಯವರೆಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ, ಕೆಲ ಕ್ರಿಕೆಟ್​ ಅಭಿಮಾನಿಗಳು ಆತನಿಗೂ ಒಂದು ಚಾನ್ಸ್​ ನೀಡುವಂತೆ ಮನವಿ ಮಾಡಲು ಶುರು ಮಾಡಿದ್ದಾರೆ.

ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಅರ್ಜುನ್ ತೆಂಡೂಲ್ಕರ್​ಗೆ ಲಖನೌ ತಂಡದ ವಿರುದ್ಧದ ಪಂದ್ಯದಲ್ಲಿ ಅವಕಾಶ ನೀಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ತಂಡದಲ್ಲಿ ಕೆಲವೊಂದು ಬದಲಾವಣೆ ಹೊರತಾಗಿ ಕೂಡ ಅವರಿಗೆ ಚಾನ್ಸ್​ ಸಿಕ್ಕಿರಲಿಲ್ಲ. ಹೀಗಾಗಿ, ಮುಂದಿನ ಪಂದ್ಯಕ್ಕಾದ್ರೂ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗ್ತಿದೆ.

ಇದನ್ನೂ ಓದಿ: ಸನ್ ರೈಸರ್ಸ್​ಗೆ ಏಟಿನ ಮೇಲೆ ಏಟು.. ಮತ್ತೆ ಸ್ಟಾರ್ ಆಲ್​ರೌಂಡರ್ ತಂಡದಿಂದ ಹೊರಕ್ಕೆ

ನೆಟ್​​ನಲ್ಲಿ ಬೌಲಿಂಗ್​ ಅಭ್ಯಾಸ ನಡೆಸುತ್ತಿದ್ದ ವೇಳೆ ಅತ್ಯದ್ಭುತ ಯಾರ್ಕರ್​ ಎಸೆಯುವ ಮೂಲಕ ಇಶಾನ್ ಕಿಶನ್​ ಅವರನ್ನ ಕ್ಲೀನ್​ ಬೌಲ್ಡ್ ಮಾಡಿದ್ದ ಅರ್ಜುನ್ ಅನೇಕರ ಗಮನ ಸೆಳೆದಿದ್ದರು. ಆದರೂ ಕೂಡ ಇವರಿಗೆ ಅವಕಾಶ ಮಾತ್ರ ಸಿಕ್ಕಿಲ್ಲ. ಕಳೆದ ವರ್ಷ ಕೂಡ ಮುಂಬೈ ಇಂಡಿಯನ್ಸ್​ ತಂಡದಲ್ಲಿದ್ದ ಜೂನಿಯರ್ ತೆಂಡೂಲ್ಕರ್​ಗೆ ಯಾವುದೇ ಪಂದ್ಯದಲ್ಲೂ ಅವಕಾಶ ಸಿಕ್ಕಿರಲಿಲ್ಲ. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ರಾಜಸ್ಥಾನ ರಾಯಲ್ಸ್​ ವಿರುದ್ಧ ಸೆಣಸಾಟ ನಡೆಸಲಿದ್ದು, ಆ ಪಂದ್ಯದಲ್ಲಿ ಅವಕಾಶ ಸಿಗುವುದೇ ಎಂಬುದನ್ನ ಕಾಯ್ದು ನೋಡಬೇಕಾಗಿದೆ.

ಇನ್ನು ದೇಶಿಯ ಮಟ್ಟದಲ್ಲಿ ಕೇವಲ ಎರಡು ಟಿ20 ಪಂದ್ಯಗಳನ್ನಾಡಿರುವ ಅರ್ಜುನ್​ ತೆಂಡೂಲ್ಕರ್​ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.