ETV Bharat / sports

ಅಂದು ಬೀದಿಬದಿ ಪಾನಿಪೂರಿ ಮಾರಾಟ; ಇಂದು ಭರವಸೆಯ ಬ್ಯಾಟರ್: 'ಯಶಸ್ವಿ' ಕ್ರಿಕೆಟಿಗನಾದ ಕಥೆ!

author img

By

Published : May 1, 2023, 3:37 PM IST

ಐಪಿಎಲ್​ನಲ್ಲಿ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್‌ ವಿರುದ್ಧ ಲೀಲಾಜಾಲವಾಗಿ ಬ್ಯಾಟ್​ ಬೀಸಿ ಶತಕ ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್​ ಪ್ರತಿಭಾವಂತ ಕ್ರಿಕೆಟಿಗನಾಗಿ ಬೆಳೆದು ಬಂದ ಹಾದಿಯೇ ರೋಚಕ.

ಪಾನೀಪೂರಿ ಮಾರುತ್ತಿದ್ದ ಜೈಸ್ವಾಲ್
ಪಾನೀಪೂರಿ ಮಾರುತ್ತಿದ್ದ ಜೈಸ್ವಾಲ್

ಮುಂಬೈ: ನಿನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಗೆದ್ದಿರಬಹುದು. ಆದರೆ, ಪಂದ್ಯದಲ್ಲಿ ಮನಸೆಳೆದಿದ್ದು ಮಾತ್ರ 21 ವರ್ಷದ ಯುವ ಆಟಗಾರ ಯಶಸ್ವಿ ಜೈಸ್ವಾಲ್​ರ ಸೊಗಸಾದ ಶತಕ. ತಂಡ ಗಳಿಸಿದ ರನ್​ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜೈಸ್ವಾಲ್​ ಹೆಸರಲ್ಲಿತ್ತು. ಇಂತಹ ಉತ್ಸಾಹಿ ತರುಣ ಈ ಹಿಂದೆ ಪಾನಿಪೂರಿ ಮಾರಾಟ ಮಾಡುತ್ತಿದ್ದರು ಎಂಬುದು ಯಾರಿಗೂ ಗೊತ್ತಿಲ್ಲದ ಸತ್ಯ.

ನಿಜ!. ಯಶಸ್ವಿ ಜೈಸ್ವಾಲ್​ ಇಂದು ಯಶಸ್ವಿ ಕ್ರಿಕೆಟಿಗನಾಗಿ ಬೆಳೆದಿದ್ದರೆ, ಅದರ ಹಿಂದೆ ಅದೆಷ್ಟೋ ಹೋರಾಟವಿದೆ. ಉತ್ತರ ಪ್ರದೇಶದ ಮೂಲದ ಆಟಗಾರ ಮುಂಬೈಗೆ ಬಂದು ಕ್ರಿಕೆಟ್​ ತರಬೇತಿ ಪಡೆಯಲು ನಡೆಸಿದ ಪರದಾಟ, ಜೀವನ ನಿರ್ವಹಣೆ ಮಾಡಿದ ಕೆಲಸಗಳು ಸ್ಫೂರ್ತಿದಾಯಕವಾಗಿದೆ.

ಜೈಸ್ವಾಲ್​ರ ಆ ದಿನಗಳು...: ಕ್ರಿಕೆಟ್​ನಲ್ಲಿ ಬೆಳೆಯಬೇಕೆಂಬ ಜೈಸ್ವಾಲ್​ ಕನಸು ಅದೆಷ್ಟು ಅದಮ್ಯವಾಗಿತ್ತೆಂದರೆ, ಹುಟ್ಟೂರಾದ ಉತ್ತರ ಪ್ರದೇಶದ ಭದೋಹಿ ತೊರೆದು ಮುಂಬೈಗೆ ವಲಸೆ ಬಂದರು. ಬಳಿಕ ಆಜಾದ್​ ಮೈದಾನದಲ್ಲಿ ಕ್ರಿಕೆಟ್​ ಅಭ್ಯಾಸ ಶುರು ಮಾಡಿದರು. ಜೀವನಕ್ಕಾಗಿ ಕಲ್ಬಾದೇವಿ ಪ್ರದೇಶದ ಕೆಲ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲ ದಿನಗಳ ಬಳಿಕ ಅಲ್ಲಿಂದ ಹೊರಬಿದ್ದ ಜೈಸ್ವಾಲ್​ ಆಜಾದ್​ ಮೈದಾನದ ಹೊರಗೆ ಪಾನಿಪೂರಿ ಮಾರಾಟ ಶುರು ಮಾಡಿದ್ದರು. ಕ್ರಿಕೆಟ್​ ಅಭ್ಯಾಸದ ವಿರಾಮದ ವೇಳೆ ಪಾನಿಪೂರಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಪ್ರತ್ಯೇಕ ನಿವಾಸವಿಲ್ಲದೇ, ಜೈಸ್ವಾಲ್​ ಆಜಾದ್​ ಮೈದಾನದ ಸಿಬ್ಬಂದಿಯ ಜೊತೆಗೆ ಕ್ರೀಡಾಂಗಣದಲ್ಲೇ ಟೆಂಟ್​ನಲ್ಲಿ ಉಳಿದುಕೊಂಡಿದ್ದರು.

ಜ್ವಾಲಾಸಿಂಗ್​ ಗರಡಿ ಸೇರಿದ ಕ್ರಿಕೆಟಿಗ: ಆಜಾದ್​ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ಜೈಸ್ವಾಲ್ ಅವರ ಪ್ರತಿಭೆಯನ್ನು ಕೋಚ್ ಜ್ವಾಲಾ ಸಿಂಗ್ ಗುರುತಿಸಿದರು. ಆತನಲ್ಲಿದ್ದ ಕ್ರಿಕೆಟ್​ ಹಸಿವನ್ನು ಕಂಡ ಸಿಂಗ್ ಅವರು, ಆತನಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು. ಶಾಲಾ ಹಂತದ ಕ್ರಿಕೆಟ್​ನ ಗಿಲ್ಸ್​ ಶೀಲ್ಡ್​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದರು. ಪಂದ್ಯದಲ್ಲಿ ಔಟಾಗದೇ 319 ರನ್​ ಗಳಿಸಿದ್ದರು. ಇದು ಆತನ ಕ್ರಿಕೆಟ್​ ಬದುಕನ್ನು ಬದಲಿಸಿತು.

ಇದರಿಂದ ಮುಂಬೈ ಅಂಡರ್​ 16 ತಂಡಕ್ಕೆ ಆಯ್ಕೆಯಾಗಲು ಕಾರಣವಾಯಿತು. ನಂತರ ಅಂಡರ್​ 19 ತಂಡಕ್ಕೆ ಬಡ್ತಿ ಪಡೆದರು. 2018ರ ಅಂಡರ್​ 19 ಏಷ್ಯಾ ಕಪ್‌ನಲ್ಲಿ ಸ್ಥಾನ ಪಡೆದು ಅತಿ ಹೆಚ್ಚು ರನ್​ ಗಳಿಸಿ, ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದರು. 2018/19 ಋತುವಿನ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಆಡಿದರು.

ಮುಂಬೈ ಪರವಾಗಿ ಆಡಿದ 15 ಪಂದ್ಯಗಳಲ್ಲಿ 80.21 ರ ಸರಾಸರಿಯಲ್ಲಿ 1845 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9 ಶತಕ ಮತ್ತು 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 50 ಓವರ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಯ ಜೊತೆಗೆ 2020ರ ಅಂಡರ್​ 19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಕೂಡ ಹೌದು. ಭಾರತ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತರೂ, ಜೈಸ್ವಾಲ್ ಆ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 400 ರನ್ ಗಳಿಸಿ ಮಿಂಚಿದ್ದರು.

ಭಾನುವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಶತಕ ಸಾಧನೆ ಮಾಡುವ ಮೂಲಕ ಆರ್​ಸಿಬಿಯ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟರು. 9 ಇನ್ನಿಂಗ್ಸ್‌ಗಳಲ್ಲಿ 428 ರನ್ ಗಳಿಸಿದ್ದಾರೆ.

ಇದನ್ನೂ ಓದಿ: 16 ಬೌಂಡರಿ, 8 ಸಿಕ್ಸರ್‌! 1000ನೇ ಐಪಿಎಲ್‌ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ ಯಶಸ್ವಿ ಜೈಸ್ವಾಲ್!

ಮುಂಬೈ: ನಿನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಗೆದ್ದಿರಬಹುದು. ಆದರೆ, ಪಂದ್ಯದಲ್ಲಿ ಮನಸೆಳೆದಿದ್ದು ಮಾತ್ರ 21 ವರ್ಷದ ಯುವ ಆಟಗಾರ ಯಶಸ್ವಿ ಜೈಸ್ವಾಲ್​ರ ಸೊಗಸಾದ ಶತಕ. ತಂಡ ಗಳಿಸಿದ ರನ್​ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜೈಸ್ವಾಲ್​ ಹೆಸರಲ್ಲಿತ್ತು. ಇಂತಹ ಉತ್ಸಾಹಿ ತರುಣ ಈ ಹಿಂದೆ ಪಾನಿಪೂರಿ ಮಾರಾಟ ಮಾಡುತ್ತಿದ್ದರು ಎಂಬುದು ಯಾರಿಗೂ ಗೊತ್ತಿಲ್ಲದ ಸತ್ಯ.

ನಿಜ!. ಯಶಸ್ವಿ ಜೈಸ್ವಾಲ್​ ಇಂದು ಯಶಸ್ವಿ ಕ್ರಿಕೆಟಿಗನಾಗಿ ಬೆಳೆದಿದ್ದರೆ, ಅದರ ಹಿಂದೆ ಅದೆಷ್ಟೋ ಹೋರಾಟವಿದೆ. ಉತ್ತರ ಪ್ರದೇಶದ ಮೂಲದ ಆಟಗಾರ ಮುಂಬೈಗೆ ಬಂದು ಕ್ರಿಕೆಟ್​ ತರಬೇತಿ ಪಡೆಯಲು ನಡೆಸಿದ ಪರದಾಟ, ಜೀವನ ನಿರ್ವಹಣೆ ಮಾಡಿದ ಕೆಲಸಗಳು ಸ್ಫೂರ್ತಿದಾಯಕವಾಗಿದೆ.

ಜೈಸ್ವಾಲ್​ರ ಆ ದಿನಗಳು...: ಕ್ರಿಕೆಟ್​ನಲ್ಲಿ ಬೆಳೆಯಬೇಕೆಂಬ ಜೈಸ್ವಾಲ್​ ಕನಸು ಅದೆಷ್ಟು ಅದಮ್ಯವಾಗಿತ್ತೆಂದರೆ, ಹುಟ್ಟೂರಾದ ಉತ್ತರ ಪ್ರದೇಶದ ಭದೋಹಿ ತೊರೆದು ಮುಂಬೈಗೆ ವಲಸೆ ಬಂದರು. ಬಳಿಕ ಆಜಾದ್​ ಮೈದಾನದಲ್ಲಿ ಕ್ರಿಕೆಟ್​ ಅಭ್ಯಾಸ ಶುರು ಮಾಡಿದರು. ಜೀವನಕ್ಕಾಗಿ ಕಲ್ಬಾದೇವಿ ಪ್ರದೇಶದ ಕೆಲ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲ ದಿನಗಳ ಬಳಿಕ ಅಲ್ಲಿಂದ ಹೊರಬಿದ್ದ ಜೈಸ್ವಾಲ್​ ಆಜಾದ್​ ಮೈದಾನದ ಹೊರಗೆ ಪಾನಿಪೂರಿ ಮಾರಾಟ ಶುರು ಮಾಡಿದ್ದರು. ಕ್ರಿಕೆಟ್​ ಅಭ್ಯಾಸದ ವಿರಾಮದ ವೇಳೆ ಪಾನಿಪೂರಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಪ್ರತ್ಯೇಕ ನಿವಾಸವಿಲ್ಲದೇ, ಜೈಸ್ವಾಲ್​ ಆಜಾದ್​ ಮೈದಾನದ ಸಿಬ್ಬಂದಿಯ ಜೊತೆಗೆ ಕ್ರೀಡಾಂಗಣದಲ್ಲೇ ಟೆಂಟ್​ನಲ್ಲಿ ಉಳಿದುಕೊಂಡಿದ್ದರು.

ಜ್ವಾಲಾಸಿಂಗ್​ ಗರಡಿ ಸೇರಿದ ಕ್ರಿಕೆಟಿಗ: ಆಜಾದ್​ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ಜೈಸ್ವಾಲ್ ಅವರ ಪ್ರತಿಭೆಯನ್ನು ಕೋಚ್ ಜ್ವಾಲಾ ಸಿಂಗ್ ಗುರುತಿಸಿದರು. ಆತನಲ್ಲಿದ್ದ ಕ್ರಿಕೆಟ್​ ಹಸಿವನ್ನು ಕಂಡ ಸಿಂಗ್ ಅವರು, ಆತನಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು. ಶಾಲಾ ಹಂತದ ಕ್ರಿಕೆಟ್​ನ ಗಿಲ್ಸ್​ ಶೀಲ್ಡ್​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದರು. ಪಂದ್ಯದಲ್ಲಿ ಔಟಾಗದೇ 319 ರನ್​ ಗಳಿಸಿದ್ದರು. ಇದು ಆತನ ಕ್ರಿಕೆಟ್​ ಬದುಕನ್ನು ಬದಲಿಸಿತು.

ಇದರಿಂದ ಮುಂಬೈ ಅಂಡರ್​ 16 ತಂಡಕ್ಕೆ ಆಯ್ಕೆಯಾಗಲು ಕಾರಣವಾಯಿತು. ನಂತರ ಅಂಡರ್​ 19 ತಂಡಕ್ಕೆ ಬಡ್ತಿ ಪಡೆದರು. 2018ರ ಅಂಡರ್​ 19 ಏಷ್ಯಾ ಕಪ್‌ನಲ್ಲಿ ಸ್ಥಾನ ಪಡೆದು ಅತಿ ಹೆಚ್ಚು ರನ್​ ಗಳಿಸಿ, ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದರು. 2018/19 ಋತುವಿನ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಆಡಿದರು.

ಮುಂಬೈ ಪರವಾಗಿ ಆಡಿದ 15 ಪಂದ್ಯಗಳಲ್ಲಿ 80.21 ರ ಸರಾಸರಿಯಲ್ಲಿ 1845 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9 ಶತಕ ಮತ್ತು 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 50 ಓವರ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಯ ಜೊತೆಗೆ 2020ರ ಅಂಡರ್​ 19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಕೂಡ ಹೌದು. ಭಾರತ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತರೂ, ಜೈಸ್ವಾಲ್ ಆ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 400 ರನ್ ಗಳಿಸಿ ಮಿಂಚಿದ್ದರು.

ಭಾನುವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಶತಕ ಸಾಧನೆ ಮಾಡುವ ಮೂಲಕ ಆರ್​ಸಿಬಿಯ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟರು. 9 ಇನ್ನಿಂಗ್ಸ್‌ಗಳಲ್ಲಿ 428 ರನ್ ಗಳಿಸಿದ್ದಾರೆ.

ಇದನ್ನೂ ಓದಿ: 16 ಬೌಂಡರಿ, 8 ಸಿಕ್ಸರ್‌! 1000ನೇ ಐಪಿಎಲ್‌ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ ಯಶಸ್ವಿ ಜೈಸ್ವಾಲ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.