ETV Bharat / sports

ಇಬ್ಬನಿಯಿಂದಾಗಿ ಬೌಲರ್​ಗಳಿಗೆ ಕಷ್ಟವಾಯಿತು: ಸೋಲಿನ ಬಳಿಕ ರಾಹುಲ್ ಪ್ರತಿಕ್ರಿಯೆ

author img

By

Published : Oct 31, 2020, 9:29 AM IST

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣಲು ಇಬ್ಬನಿ ಪ್ರಮುಖ ಕಾರಣ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.

Dew made it tough for bowlers to defend
ಸೋಲಿನ ಬಳಿಕ ರಾಹುಲ್ ಪ್ರತಿಕ್ರಿಯೆ

ಅಬುಧಾಬಿ: ಅತಿಯಾದ ಇಬ್ಬನಿಯ ಕಾರಣದಿಂದಾಗಿ ಬೌಲರ್​ಗಳು ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕಿಂಗ್ಸ್‌ ಇಲೆವೆನ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 185 ರನ್​ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ ತಂಡ 17.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 186 ರನ್​ ಗಳಿಸಿ ಗೆಲುವಿನ ನಗೆ ಬೀರಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆ.ಎಲ್.ರಾಹುಲ್, "ಟಾಸ್ ಸೋತದ್ದು ತುಂಬಾ ಪರಿಣಾಮ ಬೀರಿತು. ಬ್ಯಾಟಿಂಗ್ ಮಾಡಲು ತುಂಬಾ ಸುಲಭವಾಯಿತು. ದ್ವಿತೀಯಾರ್ಧದಲ್ಲಿ ಸಾಕಷ್ಟು ಇಬ್ಬನಿ ಬೀಳುತ್ತಿದ್ದರಿಂದ ಬೌಲರ್​ಗಳಿಗೆ ಕಠಿಣವಾಯಿತು" ಎಂದು ಹೇಳಿದ್ದಾರೆ.

"ನಾವೇನು ಕೆಟ್ಟದಾಗಿ ಬೌಲಿಂಗ್ ನಡೆಸಿಲ್ಲ. ಆದರೆ ಇಬ್ಬನಿ ಬೀಳುವ ಸಮಯದಲ್ಲಿ ಉತ್ತಮವಾಗಿ ಸ್ಪೆಲ್​ ಮಾಡುವುದನ್ನು ಕಲಿಯಬೇಕು. ಈ ಸೀಸನ್​ನಲ್ಲಿ ಇಬ್ಬನಿ ಅನಿರೀಕ್ಷಿತವಾಗಿದೆ. ಅದಕ್ಕಾಗಿ ತಯಾರಿ ನಡೆಸಲು ಸಾಧ್ಯವಿಲ್ಲ. ಆದರೆ ಅದನ್ನು ಅಳವಡಿಸಿಕೊಳ್ಳಬೇಕಿದೆ" ಎಂದು ಹೇಳಿದ್ದಾರೆ.

ಸತತ ಐದು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿರುವ ಪಂಜಾಬ್ ತಂಡ, ಶುಕ್ರವಾರದ ಪಂದ್ಯದಲ್ಲಿ ಸೋಲು ಕಂಡಿದ್ದು, ನಾಕ್​ಔಟ್ ಹಾದಿ ದುರ್ಗಮವಾಗಿದೆ.

ಅಬುಧಾಬಿ: ಅತಿಯಾದ ಇಬ್ಬನಿಯ ಕಾರಣದಿಂದಾಗಿ ಬೌಲರ್​ಗಳು ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕಿಂಗ್ಸ್‌ ಇಲೆವೆನ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 185 ರನ್​ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ ತಂಡ 17.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 186 ರನ್​ ಗಳಿಸಿ ಗೆಲುವಿನ ನಗೆ ಬೀರಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆ.ಎಲ್.ರಾಹುಲ್, "ಟಾಸ್ ಸೋತದ್ದು ತುಂಬಾ ಪರಿಣಾಮ ಬೀರಿತು. ಬ್ಯಾಟಿಂಗ್ ಮಾಡಲು ತುಂಬಾ ಸುಲಭವಾಯಿತು. ದ್ವಿತೀಯಾರ್ಧದಲ್ಲಿ ಸಾಕಷ್ಟು ಇಬ್ಬನಿ ಬೀಳುತ್ತಿದ್ದರಿಂದ ಬೌಲರ್​ಗಳಿಗೆ ಕಠಿಣವಾಯಿತು" ಎಂದು ಹೇಳಿದ್ದಾರೆ.

"ನಾವೇನು ಕೆಟ್ಟದಾಗಿ ಬೌಲಿಂಗ್ ನಡೆಸಿಲ್ಲ. ಆದರೆ ಇಬ್ಬನಿ ಬೀಳುವ ಸಮಯದಲ್ಲಿ ಉತ್ತಮವಾಗಿ ಸ್ಪೆಲ್​ ಮಾಡುವುದನ್ನು ಕಲಿಯಬೇಕು. ಈ ಸೀಸನ್​ನಲ್ಲಿ ಇಬ್ಬನಿ ಅನಿರೀಕ್ಷಿತವಾಗಿದೆ. ಅದಕ್ಕಾಗಿ ತಯಾರಿ ನಡೆಸಲು ಸಾಧ್ಯವಿಲ್ಲ. ಆದರೆ ಅದನ್ನು ಅಳವಡಿಸಿಕೊಳ್ಳಬೇಕಿದೆ" ಎಂದು ಹೇಳಿದ್ದಾರೆ.

ಸತತ ಐದು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿರುವ ಪಂಜಾಬ್ ತಂಡ, ಶುಕ್ರವಾರದ ಪಂದ್ಯದಲ್ಲಿ ಸೋಲು ಕಂಡಿದ್ದು, ನಾಕ್​ಔಟ್ ಹಾದಿ ದುರ್ಗಮವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.