ಕೋಲ್ಕತ್ತಾ: ಅಡಿಲೇಡ್ ಓವಲ್ನಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಲು ಕೆಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಕಳಪೆ ಬ್ಯಾಟಿಂಗ್, ಕಳಪೆ ಬೌಲಿಂಗ್ ಮತ್ತು ಕಳಪೆ ಫೀಲ್ಡಿಂಗ್ ಅಷ್ಟೇ ಅಲ್ಲ. ಟೂರ್ನಿಯ ಆರಂಭಕ್ಕೂ ಮುನ್ನವೇ ತಂಡದಲ್ಲಿದ್ದ ಲೋಪದೋಷಗಳು ಸೋಲಿಗೆ ಮೂಲ ಕಾರಣ ಎನ್ನಲಾಗುತ್ತಿದೆ. ಅದನ್ನು ತಿದ್ದಿಕೊಳ್ಳದ ಟೀಂ ಇಂಡಿಯಾ ಹಗುರವಾಗಿ ಪರಿಗಣಿಸಿದ್ದರಿಂದ ಹೀನಾಯ ಸೋಲನುಭವಿಸಬೇಕಾಯಿತು.
ಟಿ20 ವಿಶ್ವಕಪ್ ಅನ್ನು ಗೆಲ್ಲಲೇಬೇಕು ಎಂಬ ಅತ್ಯುತ್ಸಾಹದಿಂದ ಯುವ ದಂಡು ಕಟ್ಟಿಕೊಂಡು ಆಸ್ಟೇಲಿಯಾಕ್ಕೆ ಹೋದ ರೋಹಿತ್ ಶರ್ಮಾ, ಅವರನ್ನು ಬೆಂಚ್ನಲ್ಲಿ ಕಾಯ್ದಿರಿಸಿದ್ದು ಸೋಲಿನ ಮೊದಲ ಅಧ್ಯಾಯ. ಫಾರ್ಮ್ನಲ್ಲಿದ್ದವರನ್ನು ಬಿಟ್ಟು ಪರೀಕ್ಷಾರ್ಥವಾಗಿ ಕೆಲವರನ್ನು ಕಣಕ್ಕಿಳಿಸಿದ್ದು ಈ ಪಟ್ಟಿಯಲ್ಲಿ ಬರುವ ಮಗದೊಂದು ತಪ್ಪು ನಿರ್ಧಾರ.
ತಂಡ ಪ್ರಕಟಿಸಿದಾಗ ಆರಂಭದಲ್ಲಿ ವೇಗಿ ಮೊಹಮ್ಮದ್ ಶಮಿ ಇರಲಿಲ್ಲ. ಟೀಂ ಇಂಡಿಯಾದ ಯಾರ್ಕರ್ ಜಸ್ಪ್ರೀತ್ ಬುಮ್ರಾ ಅವರ ಜಾಗ ತುಂಬಲು ಮೊಹಮ್ಮದ್ ಶಮಿ ಅವರನ್ನು ಕೊನೆಯ ಕ್ಷಣದಲ್ಲಿ ಮೈದಾನಕ್ಕೆ ಕರೆ ತರಲಾಯಿತು. ಇದರಿಂದ ಭಾರಿ ಹಾನಿ ಆಗದಿದ್ದರೂ ಆ ಪರಿಸ್ಥಿತಿಗೆ ಅವರು ಅನಿವಾರ್ಯ ಅನ್ನಿಸಿದ್ದರು. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿಯೂ ಶಮಿ ಅವರನ್ನು ಬಳಸಿಕೊಳ್ಳಲು ಒಂದು ತಂತ್ರ ರೂಪಿಸಿದ ಹೊರತಾಗಿಯೂ ಫಲಿ ನೀಡದಿರುವುದು ವಿಪರ್ಯಾಸ.
![India's disappointing show in T20 World Cup: Heads must roll!](https://etvbharatimages.akamaized.net/etvbharat/prod-images/f9b4c373c45580a17689915d1a21907e_0211a_1667386194_786.jpg)
ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಅವರು ಆಡುವ ಅಗ್ರ ಕ್ರಮಾಂಕದಲ್ಲಿಯೇ ಕಾಣಿಸದೇ ಇರುವುದು. ಈ ಇಬ್ಬರೂ ಆರಂಭಿಕ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಮಾತ್ರವಲ್ಲದೇ, ಈ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭಕ್ಕೆ ಒದಗಿಸಲೂ ಹೆಣಗಾಡಿದರು. ವಿರಾಟ್ ಕೊಹ್ಲಿ ಇದ್ದಾರಲ್ಲ ಎಂಬ ನಂಬಿಕೆ ಇಟ್ಟುಕೊಂಡು ಪದೇ ಪದೇ ತಮ್ಮ ಆಟದ ವೈಖರಿಯನ್ನು ಮರೆತಿದ್ದು ಗಮನಿಸಿರಬಹುದು.
![India's disappointing show in T20 World Cup: Heads must roll!](https://etvbharatimages.akamaized.net/etvbharat/prod-images/7d01ed9d7a37bc0a4a6d153bb95669b1_0211a_1667396873_282.jpg)
ಟಿ20 ವಿಶ್ವಕಪ್ನಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಕೊಹ್ಲಿ ಮತ್ತು ಸೂರ್ಯಕುಮಾರ್, ಒಂದೆರಡು ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲೂ ತಂಡಕ್ಕೆ ತಮ್ಮ ಕೊಡುಗೆ ನೀಡಿದರು. ಈ ಇಬ್ಬರು ಆಡಿರದಿದ್ದರೆ ಭಾರತ ಸೆಮಿಫೈನಲ್ ತಲುಪುವುದೂ ಕಷ್ಟವೆನಿಸಿತ್ತು.
![India's disappointing show in T20 World Cup: Heads must roll!](https://etvbharatimages.akamaized.net/etvbharat/prod-images/7b63c78773cb5cd1968a98fa5ada4700_0111a_1667286547_759.jpg)
ಇನ್ನು ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ಗೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ತಪ್ಪು ನಿರ್ಧಾರಗಳು. ಇತ್ತೀಚೆಗಷ್ಟೇ ಉತ್ತಮ ಫಾರ್ಮ್ಗೆ ಕಮ್ ಬ್ಯಾಕ್ ಮಾಡಿದ ಕಾರ್ತಿಕ್ ಟಿ20 ವಿಶ್ವಕಪ್ನ ಆರಂಭದಲ್ಲಿ ಪ್ರಯತ್ನಿಸಿದರಾದರೂ ಪುನಃ ವಿಫಲರಾದರು. ಆಸ್ಟ್ರೇಲಿಯದ ಕಳೆದ ಎರಡು ಪ್ರವಾಸಗಳಲ್ಲಿ ಬ್ಯಾಟಿಂಗ್ ಕಲೆ ಕರಗತ ಮಾಡಿಕೊಂಡ ರಿಷಭ್ ಪಂತ್ ಈ ವಿಶ್ವಕಪ್ನಲ್ಲಿ ಬೆಂಚ್ ಕಾಯಿಸಿದ್ದು ಸಾಕಷ್ಟು ಗೊಂದಲದಿಂದ ಕೂಡಿತ್ತು. ಪ್ಲಾನ್ ಬಿ ಎಂಬಂತೆ ಕೊನೆ ಘಳಿಗೆಯಲ್ಲಿ ಅವಕಾಶ ಮಾಡಿಕೊಟ್ಟರು ಅದು ಫಲ ನೀಡಲಿಲ್ಲ.
ಇನ್ನು ಪರ್ಯಾಯ ಬೌಲರ್ಗಳ ಕೊತರೆ ಸಹ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ದಶಕದಿಂದಲೂ ಈ ಸಮಸ್ಯೆಯಲ್ಲಿರುವ ತಂಡಕ್ಕೆ ಈವರೆಗೂ ಉತ್ತರ ಕಂಡುಕೊಂಡಿಲ್ಲ. ಗಾಯದ ಸಮಸ್ಯೆಯಿಂದ ಹೊರಬಂದರೆ ಆ ಜಾಗ ತುಂಬುವ ಮತ್ತೊಬ್ಬ ಬೌಲರ್ ಇಲ್ಲದಿರುವುದು. ಅದನ್ನೇ ಮುಂದುವರೆಸಿದ್ದ ಮ್ಯಾನೆಜ್ಮೆಂಟ್ ಯಾವುದೇ ಬ್ಯಾಕ್ಅಪ್ ಯೋಜನೆಗಳಿಲ್ಲದೇ ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಅವರೊಂದಿಗೆ ಆಸ್ಟೇಲಿಯಾಕ್ಕೆ ಬಂದಿತ್ತು.
ಶಮಿ, ಹಾರ್ದಿಕ್ ಪಾಂಡ್ಯ, ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಆಸರೆಯಾದರೂ ಗೆಲುವಿನ ಸೂತ್ರ ಕೈಗೂಡಲಿಲ್ಲ. 15ನೇ ಆಟಗಾರ ಯುಜ್ವೇಂದ್ರ ಚಹಾಲ್ ಒಂದೇ ಒಂದು ಪಂದ್ಯದಲ್ಲೂ ಕಾಣಿಸಿಕೊಳ್ಳಲಿಲ್ಲ. ಅಕ್ಸರ್ ಮತ್ತು ಅಶ್ವಿನ್ ವಿಫಲರಾದ ನಂತರವೂ ತಂಡ ಉದಾಸೀನ ತೋರಿಸಿದ್ದನ್ನು ಗಮನಿಸಿರಬಹುದು.
ಟಿಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ಬಾರಿ ನಿರಾಶಕ್ತಿ ತೋರಿದ್ದು ಕಂಡು ಬಂದಿತು. ತಂಡದಲ್ಲಿ ಚಾಣಕ್ಷಣತನದ ಕೊರತೆ ಎದ್ದು ಕಾಣುತ್ತಿತ್ತು. ಈ ಎಲ್ಲ ತಪ್ಪುಗಳನ್ನು ತಿದ್ದುಕೊಂಡು ತಂಡದ ಆಯ್ಕೆಗಾರರು ಇದೀಗ ಭಾರತ ಟಿ20 ತಂಡವನ್ನು ಮರಳಿ ಕಟ್ಟಬೇಕಿದೆ. ಹೊಣೆಗಾರಿಗೆ ಹೊತ್ತು ಹಿರಿಯರು ಕೆಳಗಿಳಿಯುದು ಸೂಕ್ತ! ಆದರೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಂದಿನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್: ಭಾರತಕ್ಕೆ ಮೂರು ಚಿನ್ನದ ಪದಕ ತಂದ ಮಹಿಳಾ ಮಣಿಗಳು