ETV Bharat / sports

ಜನಾಂಗೀಯ ನಿಂದನೆ.. ಪಂದ್ಯ ಬಹಿಷ್ಕರಿಸಲು ರಹಾನೆ ಒಪ್ಪಲಿಲ್ಲ; ಸಿರಾಜ್​

author img

By

Published : Jan 21, 2021, 10:25 PM IST

ನೀವು ಬಯಸಿದರೆ ಆಟವನ್ನು ಬಹಿಷ್ಕರಿಸಿ ಮೈದಾನದಿಂದ ಹೊರನಡೆಯಬಹುದು ಎಂದು ಅಂಪೈರ್​​​ಗಳು ಪರೋಕ್ಷವಾಗಿ ಸೂಚಿಸಿದ್ದರು. ಆದರೆ, ರಹಾನೆ ಭಯ್ಯಾ ಅದಕ್ಕೆ ಒಪ್ಪಲಿಲ್ಲ ಎಂದು ಸಿರಾಜ್ ಹೇಳಿದ್ದಾರೆ.

Siraj
ಮೊಹಮ್ಮದ್​ ಸಿರಾಜ್​

ಹೈದರಾಬಾದ್​: ಮೈದಾನದಲ್ಲಿ ನನ್ನ ಮತ್ತು ಜಸ್ಪ್ರಿತ್​ ಬುಮ್ರಾರನ್ನು ಆಸ್ಟ್ರೇಲಿಯಾ ಪ್ರೇಕ್ಷಕರು ನಿಂದಿಸಿದ ಸಮಯದಲ್ಲಿ ಪಂದ್ಯವನ್ನು ಕೈಬಿಡಿ ಎಂದು ಅಂಪೈರ್​​​ಗಳು ನಮಗೆ ಸೂಚಿಸಿದ್ದರು ಎಂದು ವೇಗಿ ಮೊಹಮ್ಮದ್​ ಸಿರಾಜ್​ ಹೇಳಿದರು.

ಆಸ್ಟ್ರೇಲಿಯಾ ಪ್ರೇಕ್ಷಕರು ನಮ್ಮನ್ನು ನಿಂದಿಸಿದ್ದು ನನ್ನ ಮನಸ್ಸನ್ನು ತೀವ್ರ ಘಾಸಿಗೊಳಿಸಿತು. ಅಲ್ಲದೆ, ಕಾರ್ಯಕ್ಷಮತೆಗೆ ಅಡ್ಡಿಯಾಯಿತು. ಈ ಕುರಿತು ನಾಯಕ ರಹಾನೆಗೆ ಹೇಳಿದೆ. ಬಳಿಕ ಅಂಪೈರ್​ಗಳಿಗೆ ದೂರು ನೀಡಿದೆ ಎಂದು ಭಾರತಕ್ಕೆ ಮರಳಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿರಾಜ್ ತಿಳಿಸಿದರು.

ನೀವು ಬಯಸಿದರೆ ಆಟವನ್ನು ಬಹಿಷ್ಕರಿಸಿ ಮೈದಾನದಿಂದ ಹೊರನಡೆಯಬಹುದು ಎಂದು ಅಂಪೈರ್​​​ಗಳು ಪರೋಕ್ಷವಾಗಿ ಸೂಚಿಸಿದ್ದರು. ಆದರೆ, ರಹಾನೆ ಭಯ್ಯಾ ಅದಕ್ಕೆ ಒಪ್ಪಲಿಲ್ಲ. ನಾವು ಆಟಕ್ಕೆ ಹೆಚ್ಚು ಗೌರವ ನೀಡುತ್ತೇವೆ. ನಮ್ಮ ಆಟಗಾರರನ್ನು ಹೊರ ಕಳುಹಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು ಎಂದರು. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ...13 ವಿಕೆಟ್​ಗಳಲ್ಲಿ ಅತ್ಯಂತ ನೆಚ್ಚಿನ ವಿಕೆಟ್​ ಯಾರು?.. ಸಿರಾಜ್​ ಹೇಳಿದ್ದು ಹೀಗೆ..!

ಅಜಿಂಕ್ಯ ರಹಾನೆ ನಾಯಕತ್ವದ ಯುವಪಡೆಯು ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್‌ ಸರಣಿಯಲ್ಲಿ 2-1 ಅಂತರದಿಂದ ಸೋಲಿಸಿ, ಬಾರ್ಡರ್‌–ಗಾವಸ್ಕರ್ ಟ್ರೋಫಿ ಜಯಿಸಿತು.

ಹೈದರಾಬಾದ್​: ಮೈದಾನದಲ್ಲಿ ನನ್ನ ಮತ್ತು ಜಸ್ಪ್ರಿತ್​ ಬುಮ್ರಾರನ್ನು ಆಸ್ಟ್ರೇಲಿಯಾ ಪ್ರೇಕ್ಷಕರು ನಿಂದಿಸಿದ ಸಮಯದಲ್ಲಿ ಪಂದ್ಯವನ್ನು ಕೈಬಿಡಿ ಎಂದು ಅಂಪೈರ್​​​ಗಳು ನಮಗೆ ಸೂಚಿಸಿದ್ದರು ಎಂದು ವೇಗಿ ಮೊಹಮ್ಮದ್​ ಸಿರಾಜ್​ ಹೇಳಿದರು.

ಆಸ್ಟ್ರೇಲಿಯಾ ಪ್ರೇಕ್ಷಕರು ನಮ್ಮನ್ನು ನಿಂದಿಸಿದ್ದು ನನ್ನ ಮನಸ್ಸನ್ನು ತೀವ್ರ ಘಾಸಿಗೊಳಿಸಿತು. ಅಲ್ಲದೆ, ಕಾರ್ಯಕ್ಷಮತೆಗೆ ಅಡ್ಡಿಯಾಯಿತು. ಈ ಕುರಿತು ನಾಯಕ ರಹಾನೆಗೆ ಹೇಳಿದೆ. ಬಳಿಕ ಅಂಪೈರ್​ಗಳಿಗೆ ದೂರು ನೀಡಿದೆ ಎಂದು ಭಾರತಕ್ಕೆ ಮರಳಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿರಾಜ್ ತಿಳಿಸಿದರು.

ನೀವು ಬಯಸಿದರೆ ಆಟವನ್ನು ಬಹಿಷ್ಕರಿಸಿ ಮೈದಾನದಿಂದ ಹೊರನಡೆಯಬಹುದು ಎಂದು ಅಂಪೈರ್​​​ಗಳು ಪರೋಕ್ಷವಾಗಿ ಸೂಚಿಸಿದ್ದರು. ಆದರೆ, ರಹಾನೆ ಭಯ್ಯಾ ಅದಕ್ಕೆ ಒಪ್ಪಲಿಲ್ಲ. ನಾವು ಆಟಕ್ಕೆ ಹೆಚ್ಚು ಗೌರವ ನೀಡುತ್ತೇವೆ. ನಮ್ಮ ಆಟಗಾರರನ್ನು ಹೊರ ಕಳುಹಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು ಎಂದರು. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ...13 ವಿಕೆಟ್​ಗಳಲ್ಲಿ ಅತ್ಯಂತ ನೆಚ್ಚಿನ ವಿಕೆಟ್​ ಯಾರು?.. ಸಿರಾಜ್​ ಹೇಳಿದ್ದು ಹೀಗೆ..!

ಅಜಿಂಕ್ಯ ರಹಾನೆ ನಾಯಕತ್ವದ ಯುವಪಡೆಯು ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್‌ ಸರಣಿಯಲ್ಲಿ 2-1 ಅಂತರದಿಂದ ಸೋಲಿಸಿ, ಬಾರ್ಡರ್‌–ಗಾವಸ್ಕರ್ ಟ್ರೋಫಿ ಜಯಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.