ETV Bharat / sports

IND vs WI: ಟೀಂ ಇಂಡಿಯಾ ಸೇರಿದ ರಾಹುಲ್​ ,ಮಯಾಂಕ್​, ಸೈನಿ: ನೆಟ್​​ನಲ್ಲಿ ಅಭ್ಯಾಸ

author img

By

Published : Feb 8, 2022, 3:08 AM IST

ವೈಯಕ್ತಿಕ ಕಾರಣಗಳಿಂದಾಗಿ ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಉಪನಾಯಕ ರಾಹುಲ್ ಇದೀಗ ತಂಡ ಸೇರಿಕೊಂಡಿದ್ದಾರೆ.

KL Rahul joins India camp
KL Rahul joins India camp

ಅಹ್ಮದಾಬಾದ್​(ಗುಜರಾತ್​): ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಉಪನಾಯಕ ಕೆಎಲ್​ ರಾಹುಲ್ ಇದೀಗ ತಂಡ ಸರ್ಪಡೆಯಾಗಿದ್ದು, ನೆಟ್​​ನಲ್ಲಿ ಅಭ್ಯಾಸ ಆರಂಭ ಮಾಡಿದ್ದಾರೆ. ಇವರ ಜೊತೆಗೆ ಹೆಚ್ಚುವರಿಯಾಗಿ ತಂಡ ಸೇರಿಕೊಂಡಿರುವ ಮಯಾಂಕ್​ ಅಗರವಾಲ್​ ಹಾಗೂ ಕೋವಿಡ್​ನಿಂದ ಚೇತರಿಸಿಕೊಂಡಿರುವ ನವದೀಪ್ ಸೈನಿ ಕೂಡ ತರಬೇತಿಯಲ್ಲಿ ಭಾಗಿಯಾದರು.

ವೆಸ್ಟ್​ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಪಡೆ ಈಗಾಗಲೇ 1-0 ಅಂತರದ ಮುನ್ನಡೆ ಸಾಧಿಸಿದ್ದು, ನಾಡಿದ್ದು ಎರಡನೇ ಏಕದಿನ ಪಂದ್ಯ ಆರಂಭಗೊಳ್ಳಲಿದೆ. ತಂಡಕ್ಕೆ ಕೆಎಲ್ ರಾಹುಲ್ ಮರಳಿರುವ ಕಾರಣ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಿದ್ದ ಇಶನ್ ಕಿಶನ್​ ಆಡುವ 11ರ ಬಳಗದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿರಿ: 'ಹರಾಜಿನಲ್ಲಿ ಭಾಗಿಯಾಗಲು ಅನೇಕ ಫ್ರಾಂಚೈಸಿ ನನ್ನನ್ನು ಸಂಪರ್ಕಿಸಿದ್ದವು'... ವಿರಾಟ್​​ ಕೊಹ್ಲಿ!

ರಾಹುಲ್​, ನವದೀಪ್ ಸೈನಿ ಹಾಗೂ ಮಯಾಂಕ್​ ಅಗರವಾಲ್​ ನೆಟ್​ನಲ್ಲಿ ಅಭ್ಯಾಸ ಮಾಡುತ್ತಿರುವ ಪೋಟೋವೊಂದನ್ನ ಭಾರತೀಯ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ.

ಕೋವಿಡ್​​ನಿಂದಾಗಿ ತಂಡದ ಆರಂಭಿಕ ಆಟಗಾರ ಶಿಖರ್ ಧವನ್, ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್​ ಅಯ್ಯರ್ ಕ್ವಾರಂಟೈನ್​ಗೊಳಗಾಗಿದ್ದು, ಅವರು ಎರಡನೇ ಏಕದಿನ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.

ಅಹ್ಮದಾಬಾದ್​(ಗುಜರಾತ್​): ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಉಪನಾಯಕ ಕೆಎಲ್​ ರಾಹುಲ್ ಇದೀಗ ತಂಡ ಸರ್ಪಡೆಯಾಗಿದ್ದು, ನೆಟ್​​ನಲ್ಲಿ ಅಭ್ಯಾಸ ಆರಂಭ ಮಾಡಿದ್ದಾರೆ. ಇವರ ಜೊತೆಗೆ ಹೆಚ್ಚುವರಿಯಾಗಿ ತಂಡ ಸೇರಿಕೊಂಡಿರುವ ಮಯಾಂಕ್​ ಅಗರವಾಲ್​ ಹಾಗೂ ಕೋವಿಡ್​ನಿಂದ ಚೇತರಿಸಿಕೊಂಡಿರುವ ನವದೀಪ್ ಸೈನಿ ಕೂಡ ತರಬೇತಿಯಲ್ಲಿ ಭಾಗಿಯಾದರು.

ವೆಸ್ಟ್​ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಪಡೆ ಈಗಾಗಲೇ 1-0 ಅಂತರದ ಮುನ್ನಡೆ ಸಾಧಿಸಿದ್ದು, ನಾಡಿದ್ದು ಎರಡನೇ ಏಕದಿನ ಪಂದ್ಯ ಆರಂಭಗೊಳ್ಳಲಿದೆ. ತಂಡಕ್ಕೆ ಕೆಎಲ್ ರಾಹುಲ್ ಮರಳಿರುವ ಕಾರಣ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಿದ್ದ ಇಶನ್ ಕಿಶನ್​ ಆಡುವ 11ರ ಬಳಗದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿರಿ: 'ಹರಾಜಿನಲ್ಲಿ ಭಾಗಿಯಾಗಲು ಅನೇಕ ಫ್ರಾಂಚೈಸಿ ನನ್ನನ್ನು ಸಂಪರ್ಕಿಸಿದ್ದವು'... ವಿರಾಟ್​​ ಕೊಹ್ಲಿ!

ರಾಹುಲ್​, ನವದೀಪ್ ಸೈನಿ ಹಾಗೂ ಮಯಾಂಕ್​ ಅಗರವಾಲ್​ ನೆಟ್​ನಲ್ಲಿ ಅಭ್ಯಾಸ ಮಾಡುತ್ತಿರುವ ಪೋಟೋವೊಂದನ್ನ ಭಾರತೀಯ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ.

ಕೋವಿಡ್​​ನಿಂದಾಗಿ ತಂಡದ ಆರಂಭಿಕ ಆಟಗಾರ ಶಿಖರ್ ಧವನ್, ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್​ ಅಯ್ಯರ್ ಕ್ವಾರಂಟೈನ್​ಗೊಳಗಾಗಿದ್ದು, ಅವರು ಎರಡನೇ ಏಕದಿನ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.