ETV Bharat / sports

Cricket World Cup 2023: ಕೆಎಲ್​ ರಾಹುಲ್​ ಶತಕ ವಂಚಿತರಾಗಲು ಪಾಂಡ್ಯಾ ಸಿಕ್ಸ್​ ಮುಳುವಾಯಿತೇ?

author img

By ETV Bharat Karnataka Team

Published : Oct 9, 2023, 9:56 AM IST

ಭಾರತಕ್ಕೆ ಗೆಲುವಿಗೆ 5 ರನ್‌ಗಳ ಅಗತ್ಯವಿದ್ದಾಗ ಕೆಎಲ್ ರಾಹುಲ್ 42ನೇ ಓವರ್‌ನ ಆರಂಭದಲ್ಲಿ 91 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದರು. ಮೊದಲು ಬೌಂಡರಿ ಬಾರಿಸಿ, ನಂತರ ಸಿಕ್ಸರ್ ಹೊಡೆಯುವ ಮೂಲಕ ಶತಕ ಪೂರೈಸಬೇಕು ಎಂಬುದು ರಾಹುಲ್ ಪ್ಲಾನ್ ಆಗಿತ್ತು. ಆದ್ರೆ ಅದು ಈಡೇರಲಿಲ್ಲ..

Pandya habitual game of sixes denies  sixes denies KL Rahul ton in India  World Cup opener against Australia  Cricket World Cup 2023  ಕೆಎಲ್​ ರಾಹುಲ್​ ಶತಕ  ರಾಹುಲ್​ ಶತಕ ವಂಚಿತರಾಗಲು ಪಾಂಡ್ಯಾ ಸಿಕ್ಸ್  ಭಾರತಕ್ಕೆ ಗೆಲುವಿಗೆ 5 ರನ್‌ಗಳ ಅಗತ್ಯ  ಶತಕ ಪೂರೈಸಬೇಕು ಎಂಬುದು ರಾಹುಲ್ ಪ್ಲಾನ್  ಅಜೇಯ ಇನ್ನಿಂಗ್ಸ್ ಮತ್ತು ವಿರಾಟ್ ಕೊಹ್ಲಿ  ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ
ಕೆಎಲ್​ ರಾಹುಲ್​ ಶತಕ ವಂಚಿತರಾಗಲು ಪಾಂಡ್ಯಾ ಸಿಕ್ಸ್​ ಮುಳುವಾಯಿತೇ?

ಚೆನ್ನೈ, ತಮಿಳುನಾಡು: ಕೆಎಲ್ ರಾಹುಲ್ ಅವರ 97 ರನ್‌ಗಳ ಅಜೇಯ ಇನ್ನಿಂಗ್ಸ್ ಮತ್ತು ವಿರಾಟ್ ಕೊಹ್ಲಿ ಅವರ 85 ರನ್‌ಗಳ ಅಮೋಘ ಇನ್ನಿಂಗ್ಸ್‌ ಮೂಲಕ ಭಾರತವು 2023 ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ ನೀಡಿದ್ದ 200 ರನ್‌ಗಳ ಗುರಿಯನ್ನು ಭಾರತ 41.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿ ಗುರಿ ತಲುಪಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಆಲೌಟ್ ಆಯಿತು. ಉಭಯ ತಂಡಗಳ ನಡುವಿನ ವಿಶ್ವಕಪ್‌ನ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಿತು.

ಭಾನುವಾರ ನಡೆದ ಪಂದ್ಯದಲ್ಲಿ ಎರಡು ಸಿಕ್ಸ್​ಗಳ ಬಗ್ಗೆ ಈಗ ಚರ್ಚೆಗೆ ಕಾರಣವಾಗಿದೆ. ಒಂದು, ಹಾರ್ದಿಕ್ ಪಾಂಡ್ಯ ಸಿಡಿಸಿದ ಸಿಕ್ಸ್​​. ಎರಡನೆಯದು ಕೆಎಲ್ ರಾಹುಲ್ ಅವರು ಅಚಾತುರ್ಯದಿಂದ ಕೊನೆಯಲ್ಲಿ ಬಾರಿಸಿದ ಸಿಕ್ಸ್​. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇಬ್ಬರಿಗೂ ಶತಕಗಳನ್ನು ಗಳಿಸುವ ಅವಕಾಶವಿತ್ತು, ಆದರೆ, ಈ ಇಬ್ಬರೂ ಆಟಗಾರರು ಶತಕ ಬಾರಿಸುವಲ್ಲಿ ಯಶಸ್ವಿಯಾಗಲಿಲ್ಲ.

ರಾಹುಲ್​ ಅವರು ಕೊಹ್ಲಿಗೆ ತಮ್ಮ ಶತಕವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು. ಆ ಸಮಯದಲ್ಲಿ ರಾಹುಲ್ 75 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ವಿರಾಟ್ ಕೊಹ್ಲಿ 85 ರನ್ ಗಳಿಸಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯಾ ಕಣಕ್ಕಿಳಿದರು. ಕೊಹ್ಲಿಯ ಔಟಾದ ಕಾರಣ ಭಾರತೀಯ ಅಭಿಮಾನಿಗಳು ತಮ್ಮ ಗಮನವನ್ನು ರಾಹುಲ್ ಕಡೆಗೆ ತಿರುಗಿಸಿದರು.

ರಾಹುಲ್ ಕೊನೆಯವರೆಗೂ ಕ್ರೀಸ್​ನಲ್ಲಿದ್ದರು. ಅವರಿಗೆ ಶತಕ ಗಳಿಸುವ ಉತ್ತಮ ಅವಕಾಶವಿತ್ತು. ಅದಕ್ಕಾಗಿ ಅವರು ಪ್ಲಾನ್ ಕೂಡ ಮಾಡಿದ್ದರು. ಅಷ್ಟರಲ್ಲೇ ಹಾರ್ದಿಕ್ ಪಾಂಡ್ಯ ತಮ್ಮ ಆರನೇ ಎಸೆತವನ್ನು ಎದುರಿಸುತ್ತಿರುವಾಗ ಅವರು ಜೋಶ್ ಹ್ಯಾಜಲ್‌ವುಡ್ ಎಸೆತಕ್ಕೆ ಸಿಕ್ಸರ್​​ ಬಾರಿಸಿದರು. ಆಗ ಭಾರತದ ಸ್ಕೋರ್​​​ 176 ಆಗಿತ್ತು. ಇದು ರಾಹುಲ್​ ಶತಕಕ್ಕೆ ಕೊಂಚ ಅಡ್ಡಿ ಉಂಟು ಮಾಡಿತು.

40 ಓವರ್‌ನಲ್ಲಿ ರಾಹುಲ್ ಇನ್ನಿಂಗ್ಸ್‌ನ ಮೊದಲ ಸಿಕ್ಸರ್‌ ಬಾರಿಸಿದರು. 41ನೇ ಓವರ್‌ನ ಅಂತ್ಯದ ವೇಳೆಗೆ, ರಾಹುಲ್ 91 ರನ್‌ಗಳೊಂದಿಗೆ ಮತ್ತು ಹಾರ್ದಿಕ್ 8 ಎಸೆತಗಳಲ್ಲಿ 11 ರನ್ ಗಳಿಸಿ ಆಡುತ್ತಿದ್ದರು. ತಂಡ ಗೆಲುವಿನಿಂದ ಐದು ರನ್‌ಗಳ ಅಂತರದಲ್ಲಿರುವಾಗ ಹೇಗಾದರೂ ಶತಕವನ್ನು ಪೂರ್ಣಗೊಳಿಸುವ ಭರವಸೆಯಲ್ಲಿ ರಾಹುಲ್​ ಇದ್ದರು.

ಭಾರತ ಇನ್ನಿಂಗ್ಸ್‌ನ 42ನೇ ಓವರ್‌ನಲ್ಲಿ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದಾಗ ಭಾರತಕ್ಕೆ ಗೆಲ್ಲಲು ಕೇವಲ 5 ರನ್‌ಗಳ ಅಗತ್ಯವಿತ್ತು. ರಾಹುಲ್ 91 ರನ್‌ಗಳೊಂದಿಗೆ ಬ್ಯಾಟ್​ ಮಾಡುತ್ತಿದ್ದರು. ಮೊದಲು ಬೌಂಡರಿ ಬಾರಿಸಿ ಆಮೇಲೆ ಸಿಕ್ಸರ್ ಹೊಡೆಯಲು ಯತ್ನಿಸುವುದು ರಾಹುಲ್ ಪ್ಲಾನ್ ಆಗಿತ್ತು.

41 ನೇ ಓವರ್‌ನಲ್ಲಿ ರಾಹುಲ್ ಅವರು ತಮ್ಮ ಶತಕವನ್ನು ಗಳಿಸಲು ಒಂದು ಬೌಂಡರಿ ಮತ್ತು ನಂತರ ಸಿಕ್ಸ್​ ಬಾರಿಸಲು ಯೋಜಿಸಿದ್ದರು. ಆದರೆ ರಾಹುಲ್​ ಓವರ್‌ನ ಎರಡನೇ ಎಸೆತದಲ್ಲಿ ಸಿಕ್ಸ್​ ಬಾರಿಸಿದರು. ಸಿಕ್ಸ್​ ಹೋದ ಕೂಡಲೇ ರಾಹುಲ್​ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. ಬಳಿಕ ರಾಹುಲ್ ಎದ್ದು ತಮ್ಮ ಬ್ಯಾಟ್ ಅನ್ನು ಪ್ರೇಕ್ಷಕರತ್ತ ತೋರಿಸಿದರು.

ಒಂದು ವೇಳೆ ಅವರು ಇದರಲ್ಲಿ ಯಶಸ್ವಿಯಾಗಿದ್ದರೆ ನಿಸ್ಸಂದೇಹವಾಗಿ ಅವರ ಶತಕ ಪೂರ್ಣಗೊಳ್ಳುತ್ತಿತ್ತು. ಕೆಎಲ್ ರಾಹುಲ್ ಅವರು ಪ್ಯಾಟ್ ಕಮ್ಮಿನ್ಸ್ ಅವರ ಎಸೆತವನ್ನು ಕವರ್‌ಗಳ ಮೇಲೆ ಬೌಂಡರಿ ಹೊಡೆಯಲು ಬಯಸಿದ್ದರು. ಆದರೆ ಆ ಬಾಲ್​ ನೇರವಾಗಿ ಬೌಂಡರಿ ದಾಟಿತು. ಅವರ ಈ ಸಿಕ್ಸ್​ ಮೂಲಕ ಭಾರತ ಪಂದ್ಯವನ್ನು ಗೆದ್ದಿತು.

ಓದಿ: ನಾನು ಸಿಎಸ್​ಕೆ ಪರ ಆಡುತ್ತೇನೆ, ಇಲ್ಲಿನ ಪರಿಸ್ಥಿತಿಗಳು ನನಗೆ ತಿಳಿದಿವೆ, ಇದೊಂದು ತುಂಬಿದ ಮನೆ: ರವೀಂದ್ರ ಜಡೇಜಾ

ಚೆನ್ನೈ, ತಮಿಳುನಾಡು: ಕೆಎಲ್ ರಾಹುಲ್ ಅವರ 97 ರನ್‌ಗಳ ಅಜೇಯ ಇನ್ನಿಂಗ್ಸ್ ಮತ್ತು ವಿರಾಟ್ ಕೊಹ್ಲಿ ಅವರ 85 ರನ್‌ಗಳ ಅಮೋಘ ಇನ್ನಿಂಗ್ಸ್‌ ಮೂಲಕ ಭಾರತವು 2023 ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ ನೀಡಿದ್ದ 200 ರನ್‌ಗಳ ಗುರಿಯನ್ನು ಭಾರತ 41.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿ ಗುರಿ ತಲುಪಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಆಲೌಟ್ ಆಯಿತು. ಉಭಯ ತಂಡಗಳ ನಡುವಿನ ವಿಶ್ವಕಪ್‌ನ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಿತು.

ಭಾನುವಾರ ನಡೆದ ಪಂದ್ಯದಲ್ಲಿ ಎರಡು ಸಿಕ್ಸ್​ಗಳ ಬಗ್ಗೆ ಈಗ ಚರ್ಚೆಗೆ ಕಾರಣವಾಗಿದೆ. ಒಂದು, ಹಾರ್ದಿಕ್ ಪಾಂಡ್ಯ ಸಿಡಿಸಿದ ಸಿಕ್ಸ್​​. ಎರಡನೆಯದು ಕೆಎಲ್ ರಾಹುಲ್ ಅವರು ಅಚಾತುರ್ಯದಿಂದ ಕೊನೆಯಲ್ಲಿ ಬಾರಿಸಿದ ಸಿಕ್ಸ್​. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇಬ್ಬರಿಗೂ ಶತಕಗಳನ್ನು ಗಳಿಸುವ ಅವಕಾಶವಿತ್ತು, ಆದರೆ, ಈ ಇಬ್ಬರೂ ಆಟಗಾರರು ಶತಕ ಬಾರಿಸುವಲ್ಲಿ ಯಶಸ್ವಿಯಾಗಲಿಲ್ಲ.

ರಾಹುಲ್​ ಅವರು ಕೊಹ್ಲಿಗೆ ತಮ್ಮ ಶತಕವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು. ಆ ಸಮಯದಲ್ಲಿ ರಾಹುಲ್ 75 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ವಿರಾಟ್ ಕೊಹ್ಲಿ 85 ರನ್ ಗಳಿಸಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯಾ ಕಣಕ್ಕಿಳಿದರು. ಕೊಹ್ಲಿಯ ಔಟಾದ ಕಾರಣ ಭಾರತೀಯ ಅಭಿಮಾನಿಗಳು ತಮ್ಮ ಗಮನವನ್ನು ರಾಹುಲ್ ಕಡೆಗೆ ತಿರುಗಿಸಿದರು.

ರಾಹುಲ್ ಕೊನೆಯವರೆಗೂ ಕ್ರೀಸ್​ನಲ್ಲಿದ್ದರು. ಅವರಿಗೆ ಶತಕ ಗಳಿಸುವ ಉತ್ತಮ ಅವಕಾಶವಿತ್ತು. ಅದಕ್ಕಾಗಿ ಅವರು ಪ್ಲಾನ್ ಕೂಡ ಮಾಡಿದ್ದರು. ಅಷ್ಟರಲ್ಲೇ ಹಾರ್ದಿಕ್ ಪಾಂಡ್ಯ ತಮ್ಮ ಆರನೇ ಎಸೆತವನ್ನು ಎದುರಿಸುತ್ತಿರುವಾಗ ಅವರು ಜೋಶ್ ಹ್ಯಾಜಲ್‌ವುಡ್ ಎಸೆತಕ್ಕೆ ಸಿಕ್ಸರ್​​ ಬಾರಿಸಿದರು. ಆಗ ಭಾರತದ ಸ್ಕೋರ್​​​ 176 ಆಗಿತ್ತು. ಇದು ರಾಹುಲ್​ ಶತಕಕ್ಕೆ ಕೊಂಚ ಅಡ್ಡಿ ಉಂಟು ಮಾಡಿತು.

40 ಓವರ್‌ನಲ್ಲಿ ರಾಹುಲ್ ಇನ್ನಿಂಗ್ಸ್‌ನ ಮೊದಲ ಸಿಕ್ಸರ್‌ ಬಾರಿಸಿದರು. 41ನೇ ಓವರ್‌ನ ಅಂತ್ಯದ ವೇಳೆಗೆ, ರಾಹುಲ್ 91 ರನ್‌ಗಳೊಂದಿಗೆ ಮತ್ತು ಹಾರ್ದಿಕ್ 8 ಎಸೆತಗಳಲ್ಲಿ 11 ರನ್ ಗಳಿಸಿ ಆಡುತ್ತಿದ್ದರು. ತಂಡ ಗೆಲುವಿನಿಂದ ಐದು ರನ್‌ಗಳ ಅಂತರದಲ್ಲಿರುವಾಗ ಹೇಗಾದರೂ ಶತಕವನ್ನು ಪೂರ್ಣಗೊಳಿಸುವ ಭರವಸೆಯಲ್ಲಿ ರಾಹುಲ್​ ಇದ್ದರು.

ಭಾರತ ಇನ್ನಿಂಗ್ಸ್‌ನ 42ನೇ ಓವರ್‌ನಲ್ಲಿ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದಾಗ ಭಾರತಕ್ಕೆ ಗೆಲ್ಲಲು ಕೇವಲ 5 ರನ್‌ಗಳ ಅಗತ್ಯವಿತ್ತು. ರಾಹುಲ್ 91 ರನ್‌ಗಳೊಂದಿಗೆ ಬ್ಯಾಟ್​ ಮಾಡುತ್ತಿದ್ದರು. ಮೊದಲು ಬೌಂಡರಿ ಬಾರಿಸಿ ಆಮೇಲೆ ಸಿಕ್ಸರ್ ಹೊಡೆಯಲು ಯತ್ನಿಸುವುದು ರಾಹುಲ್ ಪ್ಲಾನ್ ಆಗಿತ್ತು.

41 ನೇ ಓವರ್‌ನಲ್ಲಿ ರಾಹುಲ್ ಅವರು ತಮ್ಮ ಶತಕವನ್ನು ಗಳಿಸಲು ಒಂದು ಬೌಂಡರಿ ಮತ್ತು ನಂತರ ಸಿಕ್ಸ್​ ಬಾರಿಸಲು ಯೋಜಿಸಿದ್ದರು. ಆದರೆ ರಾಹುಲ್​ ಓವರ್‌ನ ಎರಡನೇ ಎಸೆತದಲ್ಲಿ ಸಿಕ್ಸ್​ ಬಾರಿಸಿದರು. ಸಿಕ್ಸ್​ ಹೋದ ಕೂಡಲೇ ರಾಹುಲ್​ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. ಬಳಿಕ ರಾಹುಲ್ ಎದ್ದು ತಮ್ಮ ಬ್ಯಾಟ್ ಅನ್ನು ಪ್ರೇಕ್ಷಕರತ್ತ ತೋರಿಸಿದರು.

ಒಂದು ವೇಳೆ ಅವರು ಇದರಲ್ಲಿ ಯಶಸ್ವಿಯಾಗಿದ್ದರೆ ನಿಸ್ಸಂದೇಹವಾಗಿ ಅವರ ಶತಕ ಪೂರ್ಣಗೊಳ್ಳುತ್ತಿತ್ತು. ಕೆಎಲ್ ರಾಹುಲ್ ಅವರು ಪ್ಯಾಟ್ ಕಮ್ಮಿನ್ಸ್ ಅವರ ಎಸೆತವನ್ನು ಕವರ್‌ಗಳ ಮೇಲೆ ಬೌಂಡರಿ ಹೊಡೆಯಲು ಬಯಸಿದ್ದರು. ಆದರೆ ಆ ಬಾಲ್​ ನೇರವಾಗಿ ಬೌಂಡರಿ ದಾಟಿತು. ಅವರ ಈ ಸಿಕ್ಸ್​ ಮೂಲಕ ಭಾರತ ಪಂದ್ಯವನ್ನು ಗೆದ್ದಿತು.

ಓದಿ: ನಾನು ಸಿಎಸ್​ಕೆ ಪರ ಆಡುತ್ತೇನೆ, ಇಲ್ಲಿನ ಪರಿಸ್ಥಿತಿಗಳು ನನಗೆ ತಿಳಿದಿವೆ, ಇದೊಂದು ತುಂಬಿದ ಮನೆ: ರವೀಂದ್ರ ಜಡೇಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.