ETV Bharat / sports

'ಭಾರತ ಎ' ತಂಡಕ್ಕೆ ಹನುಮ ವಿಹಾರಿ ಸೇರ್ಪಡೆ.. ಆಯ್ಕೆ ಸಮಿತಿ ವಿರುದ್ಧದ ಆಕ್ರೋಶದಿಂದ ಎಚ್ಚೆತ್ತ ಬಿಸಿಸಿಐ?

author img

By

Published : Nov 12, 2021, 8:09 PM IST

ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಆಯ್ಕೆಯಾಗಿರುವ 'ಭಾರತ ಎ'(India A Team) ತಂಡದಲ್ಲಿ ಇದೀಗ ಅನುಭವಿ ಹನುಮ ವಿಹಾರಿ ಕೂಡ ಅವಕಾಶ ಪಡೆದುಕೊಂಡಿದ್ದಾರೆ..

Hanuma Vihari
Hanuma Vihari

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕೆಲ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಿಡ್ನಿ ಟೆಸ್ಟ್​​ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಹನುಮ ವಿಹಾರಿ(Hanuma Vihari ) ಆಯ್ಕೆ ಮಾಡದಿರುವುದಕ್ಕೆ ಆಯ್ಕೆ ಸಮಿತಿ ವಿರುದ್ಧ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ ಅವರನ್ನ ಭಾರತ ಎ(India 'A' squad)ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

ನವೆಂಬರ್​ 23ರಿಂದ ದಕ್ಷಿಣ ಆಫ್ರಿಕಾ (South Africa tour) ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಎ ಭಾಗಿಯಾಗಲಿದೆ. ಅದಕ್ಕಾಗಿ ಈಗಾಗಲೇ ತಂಡ ಪ್ರಕಟಗೊಂಡಿದೆ. ಇದರಲ್ಲಿ ಹನುಮ ವಿಹಾರಿ ಅವಕಾಶ ಪಡೆದುಕೊಂಡಿರಲಿಲ್ಲ.

ಹೀಗಾಗಿ, ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಅವರಿಗೆ ಅವಕಾಶ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಇಂದು ಪ್ರಕಟಗೊಂಡಿರುವ ತಂಡದಲ್ಲೂ ವಿಹಾರಿಗೆ ಮಣೆ ಹಾಕಿರಲಿಲ್ಲ. ಹೀಗಾಗಿ, ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿರಿ: ನಟಿ ರಚಿತಾರಾಮ್ FIRST NIGHT ಹೇಳಿಕೆಗೆ ಆಕ್ರೋಶ: ಕ್ಷಮೆಯಾಚನೆಗೆ ಕನ್ನಡ ಕ್ರಾಂತಿದಳ ಆಗ್ರಹ

ಸಿಡ್ನಿ ಟೆಸ್ಟ್ ಹೀರೋ ಹನುಮ ವಿಹಾರಿ ಆಯ್ಕೆ ಮಾಡದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ತರಹೇವಾರಿ ಟ್ವೀಟ್ ಮಾಡಿದ್ದ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಕರುಣ್ ನಾಯರ್​ಗೆ ಆದ ಪರಿಸ್ಥಿತಿ ವಿಹಾರಿಗೂ ಆಗುತ್ತಿದೆ ಎಂದಿದ್ದರು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ ಹನುಮ ವಿಹಾರಿಗೆ ಮಣೆ ಹಾಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಪ್ರಕಟಗೊಂಡಿರುವ ಭಾರತ ಎ ತಂಡದಲ್ಲಿ ವಿಹಾರಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಕೂಡ ಮಾಡಿದೆ.

ಭಾರತ ಎ ತಂಡ: ಪ್ರಿಯಾಂಕ ಪಾಂಚಾಲ(ಕ್ಯಾಪ್ಟನ್​), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್​, ಸರ್ಫರಾಜ್ ಖಾನ್​, ಬಾಬಾ ಅಪರ್ಜಿತ್, ಉಪೇಂದ್ರ ಯಾದವ್​(ವಿ,ಕೀ), ಕೆ. ಗೌತಮ್, ರಾಹುಲ್​ ಚಹರ್, ಸೌರಭ ಕುಮಾರ್, ನವದೀಪ್ ಸೈನಿ, ಉಮ್ರಾನ್ ಮಲಿಕ್, ಇಶಾನ್ ಪೂರಲ್​, ಅರ್ಜನ್​ ನಾಗವಸ್ವಲ್, ಹನುಮ ವಿಹಾರಿ.

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕೆಲ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಿಡ್ನಿ ಟೆಸ್ಟ್​​ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಹನುಮ ವಿಹಾರಿ(Hanuma Vihari ) ಆಯ್ಕೆ ಮಾಡದಿರುವುದಕ್ಕೆ ಆಯ್ಕೆ ಸಮಿತಿ ವಿರುದ್ಧ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ ಅವರನ್ನ ಭಾರತ ಎ(India 'A' squad)ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

ನವೆಂಬರ್​ 23ರಿಂದ ದಕ್ಷಿಣ ಆಫ್ರಿಕಾ (South Africa tour) ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಎ ಭಾಗಿಯಾಗಲಿದೆ. ಅದಕ್ಕಾಗಿ ಈಗಾಗಲೇ ತಂಡ ಪ್ರಕಟಗೊಂಡಿದೆ. ಇದರಲ್ಲಿ ಹನುಮ ವಿಹಾರಿ ಅವಕಾಶ ಪಡೆದುಕೊಂಡಿರಲಿಲ್ಲ.

ಹೀಗಾಗಿ, ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಅವರಿಗೆ ಅವಕಾಶ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಇಂದು ಪ್ರಕಟಗೊಂಡಿರುವ ತಂಡದಲ್ಲೂ ವಿಹಾರಿಗೆ ಮಣೆ ಹಾಕಿರಲಿಲ್ಲ. ಹೀಗಾಗಿ, ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿರಿ: ನಟಿ ರಚಿತಾರಾಮ್ FIRST NIGHT ಹೇಳಿಕೆಗೆ ಆಕ್ರೋಶ: ಕ್ಷಮೆಯಾಚನೆಗೆ ಕನ್ನಡ ಕ್ರಾಂತಿದಳ ಆಗ್ರಹ

ಸಿಡ್ನಿ ಟೆಸ್ಟ್ ಹೀರೋ ಹನುಮ ವಿಹಾರಿ ಆಯ್ಕೆ ಮಾಡದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ತರಹೇವಾರಿ ಟ್ವೀಟ್ ಮಾಡಿದ್ದ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಕರುಣ್ ನಾಯರ್​ಗೆ ಆದ ಪರಿಸ್ಥಿತಿ ವಿಹಾರಿಗೂ ಆಗುತ್ತಿದೆ ಎಂದಿದ್ದರು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ ಹನುಮ ವಿಹಾರಿಗೆ ಮಣೆ ಹಾಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಪ್ರಕಟಗೊಂಡಿರುವ ಭಾರತ ಎ ತಂಡದಲ್ಲಿ ವಿಹಾರಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಕೂಡ ಮಾಡಿದೆ.

ಭಾರತ ಎ ತಂಡ: ಪ್ರಿಯಾಂಕ ಪಾಂಚಾಲ(ಕ್ಯಾಪ್ಟನ್​), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್​, ಸರ್ಫರಾಜ್ ಖಾನ್​, ಬಾಬಾ ಅಪರ್ಜಿತ್, ಉಪೇಂದ್ರ ಯಾದವ್​(ವಿ,ಕೀ), ಕೆ. ಗೌತಮ್, ರಾಹುಲ್​ ಚಹರ್, ಸೌರಭ ಕುಮಾರ್, ನವದೀಪ್ ಸೈನಿ, ಉಮ್ರಾನ್ ಮಲಿಕ್, ಇಶಾನ್ ಪೂರಲ್​, ಅರ್ಜನ್​ ನಾಗವಸ್ವಲ್, ಹನುಮ ವಿಹಾರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.