ETV Bharat / sports

ODI World Cup: ಮೊದ್ಲು ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕೆ ಬರಲಿ, ಆಮೇಲೆ ನಮ್ಮ ಪ್ರವಾಸ- ಜಾವೇದ್ ಮಿಯಾಂದಾದ್

author img

By

Published : Jun 19, 2023, 9:48 PM IST

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್, 2023ರ ವಿಶ್ವಕಪ್‌ಗಾಗಿ ಪಾಕಿಸ್ತಾನ ಭಾರತ ಪ್ರವಾಸ ಮಾಡಬೇಕಾದರೆ ಏಷ್ಯಾಕಪ್​ಗೆ ಭಾರತ ತಂಡ​ ತಮ್ಮ ದೇಶಕ್ಕೆ ಬರಬೇಕು ಎಂದು ಕಂಡಿಷನ್ ಹಾಕಿದ್ದಾರೆ.

World Cup 2023
ಜಾವೇದ್ ಮಿಯಾಂದಾದ್

ನವದೆಹಲಿ: ಏಷ್ಯಾ ಕಪ್​ಗೆ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಹೇಳಿದ ನಂತರ ಪಾಕಿಸ್ತಾನ ಹೈಬ್ರಿಡ್ ಕ್ರಿಕೆಟ್​ ಮಾದರಿ ಸೂಚಿಸಿದ್ದು, ಅದರಂತೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಯೋಜಿಸಲು ಸಿದ್ಧತೆಗಳು ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮುಂದಿನ ವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಹ ವಿಶ್ವಕಪ್​ನ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಆದರೆ ಪಾಕಿಸ್ತಾನದ ಅನುಭವಿ ಆಟಗಾರ ಜಾವೇದ್ ಮಿಯಾಂದಾದ್ ರೈಲು ಹೋದ ನಂತರ ಟಿಕೆಟ್​ ಖರೀದಿಸಿದ್ದಾರೆ. ಏಕೆಂದರೆ ಪಾಕಿಸ್ತಾನ ಭಾರತಕ್ಕೆ ವಿಶ್ವಕಪ್​ಗಾಗಿ ಪ್ರವಾಸ ಮಾಡುವ ಸಾಧ್ಯತೆಗಳು ಹೆಚ್ಚಿದೆ. ಐಸಿಸಿ ಕಳುಹಿಸಿದ ಕರಡು ವೇಳಾಪಟ್ಟಿಗೆ ಕೇವಲ ಎರಡು ಮೈದಾನದಲ್ಲಿ ಆಡುವ ಬಗ್ಗೆ ತಕರಾರು ತೆಗೆದಿದ್ದೇ ವಿನಃ ಪ್ರವಾಸ ನಿರಾಕರಣೆ ಮಾಡಿಲ್ಲ. ಇಷ್ಟೆಲ್ಲ ಬೆಳವಣಿಗೆಗಳ ನಂತರ ಮಾಜಿ ಆಟಗಾರ ಭಾರತ ಏಷ್ಯಾ ಕಪ್​ಗೆ ಪಾಕಿಸ್ತಾನಕ್ಕೆ ಬಾರದಿದ್ದರೆ, ಪಾಕ್​ ಸಹ ಪ್ರವಾಸ ಮಾಡಬಾರದು ಎಂದು ರಾಗ ತೆಗೆದಿದ್ದಾರೆ.

ಈಗ ಇವರ ಹೇಳಿಕೆ ಎಷ್ಟು ಮಹತ್ವ ಪಡೆಯುತ್ತದೆ ಎಂದು ತಿಳಿದಿಲ್ಲ. ಆದರೆ ಪಾಕಿಸ್ತಾನಕ್ಕೆ ಭಾರತ ಪ್ರವಾಸ ಮಾಡದಿರುವುದಕ್ಕೆ ಇತರ ಏಷ್ಯಾ ರಾಷ್ಟ್ರಗಳೂ ಬೆಂಬಲ ಸೂಚಿಸಿ ಹೈಬ್ರಿಡ್​ ಮಾದರಿಗೆ ಒಪ್ಪಿಕೊಂಡಿವೆ. ಅಲ್ಲದೇ ಶ್ರೀಲಂಕಾ ಸಹ ಪಾಕಿಸ್ತಾನ ಪ್ರವಾಸವನ್ನು ಏಷ್ಯಾ ಕಪ್​ ವೇಳೆ ಬಹುತೇಕ ಮಾಡುವುದಿಲ್ಲ. ಈ ಕಾರಣದಿಂದ ಏಷ್ಯಾಕಪ್​ನ ಕೇವಲ ನಾಲ್ಕು ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿದೆ. ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯುತ್ತವೆ. ಅಲ್ಲದೇ ಭಾರತ ಅಂತಿಮ ಹಂತಗಳನ್ನು ಪ್ರವೇಶಿಸಿದಲ್ಲಿ ಫೈನಲ್​ ಸಹ ಲಂಕಾದಲ್ಲೇ ನಡೆಯಲಿದೆ.

ಇದನ್ನೂ ಓದಿ: ODI World Cup: ಏಕದಿನ ವಿಶ್ವಕಪ್‌ ಕ್ರಿಕೆಟ್‌- ಚೆನ್ನೈ, ಬೆಂಗಳೂರಿನಲ್ಲಿ ಪಂದ್ಯ ಆಡಲ್ಲ ಎಂದ ಪಾಕಿಸ್ತಾನ!

ಆದರೆ 66 ಹರೆಯದ ಮಾಜಿ ಆಟಗಾರ "ಅರವತ್ತು ಬಂದರೆ ಅರಳು ಮರಳು" ಎಂಬಂತೆ, "ಪಾಕಿಸ್ತಾನ ಪ್ರವಾಸಕ್ಕೆ ಭಾರತದ ಸರದಿ ಬಂದಿದೆ. 2012ರಲ್ಲಿ ಮತ್ತು 2016ರಲ್ಲಿಯೂ ಪಾಕಿಸ್ತಾನ ಭಾರತಕ್ಕೆ ಭೇಟಿ ನೀಡಿತ್ತು. ಈಗ ಇಲ್ಲಿಗೆ ಬರುವ ಸರದಿ ಭಾರತೀಯರದ್ದು. ಅವರು ಇಲ್ಲಿಗೆ ಬಂದು ಆಡದಿದ್ದಲ್ಲಿ ಭಾರತಕ್ಕೆ ಹೋಗುವುದಿಲ್ಲ. 2023ರ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಭಾರತ 2008ರಲ್ಲಿ 50 ಓವರ್‌ಗಳ ಏಷ್ಯಾ ಕಪ್‌ಗಾಗಿ ಕೊನೆಯದಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಅಂದಿನಿಂದ, ಉಭಯ ದೇಶಗಳ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿದೆ. ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ಮಿಯಾಂದಾದ್ ಹೇಳಿದ್ದಾರೆ.

"ಏಷ್ಯಾ ಕಪ್‌ಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂಬ ದೃಢ ನಿರ್ಧಾರವನ್ನು ತೆಗೆದುಕೊಂಡಿದೆ. ಪಾಕಿಸ್ತಾನವೂ ತನ್ನ ನಿಲುವನ್ನು ಬಲವಾಗಿ ಪ್ರತಿಪಾದಿಸಬೇಕಿದೆ. ವಿಶ್ವಕಪ್​ಗೆ ಭಾರತದಂತೆ ಪಾಕಿಸ್ತಾನ ಕೂಡಾ ಹೈಬ್ರಿಡ್​ ಮಾದರಿಗೆ ಮನವಿ ಮಾಡಬೇಕು" ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ದುಲೀಪ್ ಟ್ರೋಫಿಯಿಂದ ದೇಶಿ ಕ್ರಿಕೆಟ್‌ ಋತು ಆರಂಭ: ಜನವರಿ 5ರಿಂದ ಮಾರ್ಚ್​ 14 ರವರೆಗೆ ರಣಜಿ

ನವದೆಹಲಿ: ಏಷ್ಯಾ ಕಪ್​ಗೆ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಹೇಳಿದ ನಂತರ ಪಾಕಿಸ್ತಾನ ಹೈಬ್ರಿಡ್ ಕ್ರಿಕೆಟ್​ ಮಾದರಿ ಸೂಚಿಸಿದ್ದು, ಅದರಂತೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಯೋಜಿಸಲು ಸಿದ್ಧತೆಗಳು ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮುಂದಿನ ವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಹ ವಿಶ್ವಕಪ್​ನ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಆದರೆ ಪಾಕಿಸ್ತಾನದ ಅನುಭವಿ ಆಟಗಾರ ಜಾವೇದ್ ಮಿಯಾಂದಾದ್ ರೈಲು ಹೋದ ನಂತರ ಟಿಕೆಟ್​ ಖರೀದಿಸಿದ್ದಾರೆ. ಏಕೆಂದರೆ ಪಾಕಿಸ್ತಾನ ಭಾರತಕ್ಕೆ ವಿಶ್ವಕಪ್​ಗಾಗಿ ಪ್ರವಾಸ ಮಾಡುವ ಸಾಧ್ಯತೆಗಳು ಹೆಚ್ಚಿದೆ. ಐಸಿಸಿ ಕಳುಹಿಸಿದ ಕರಡು ವೇಳಾಪಟ್ಟಿಗೆ ಕೇವಲ ಎರಡು ಮೈದಾನದಲ್ಲಿ ಆಡುವ ಬಗ್ಗೆ ತಕರಾರು ತೆಗೆದಿದ್ದೇ ವಿನಃ ಪ್ರವಾಸ ನಿರಾಕರಣೆ ಮಾಡಿಲ್ಲ. ಇಷ್ಟೆಲ್ಲ ಬೆಳವಣಿಗೆಗಳ ನಂತರ ಮಾಜಿ ಆಟಗಾರ ಭಾರತ ಏಷ್ಯಾ ಕಪ್​ಗೆ ಪಾಕಿಸ್ತಾನಕ್ಕೆ ಬಾರದಿದ್ದರೆ, ಪಾಕ್​ ಸಹ ಪ್ರವಾಸ ಮಾಡಬಾರದು ಎಂದು ರಾಗ ತೆಗೆದಿದ್ದಾರೆ.

ಈಗ ಇವರ ಹೇಳಿಕೆ ಎಷ್ಟು ಮಹತ್ವ ಪಡೆಯುತ್ತದೆ ಎಂದು ತಿಳಿದಿಲ್ಲ. ಆದರೆ ಪಾಕಿಸ್ತಾನಕ್ಕೆ ಭಾರತ ಪ್ರವಾಸ ಮಾಡದಿರುವುದಕ್ಕೆ ಇತರ ಏಷ್ಯಾ ರಾಷ್ಟ್ರಗಳೂ ಬೆಂಬಲ ಸೂಚಿಸಿ ಹೈಬ್ರಿಡ್​ ಮಾದರಿಗೆ ಒಪ್ಪಿಕೊಂಡಿವೆ. ಅಲ್ಲದೇ ಶ್ರೀಲಂಕಾ ಸಹ ಪಾಕಿಸ್ತಾನ ಪ್ರವಾಸವನ್ನು ಏಷ್ಯಾ ಕಪ್​ ವೇಳೆ ಬಹುತೇಕ ಮಾಡುವುದಿಲ್ಲ. ಈ ಕಾರಣದಿಂದ ಏಷ್ಯಾಕಪ್​ನ ಕೇವಲ ನಾಲ್ಕು ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿದೆ. ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯುತ್ತವೆ. ಅಲ್ಲದೇ ಭಾರತ ಅಂತಿಮ ಹಂತಗಳನ್ನು ಪ್ರವೇಶಿಸಿದಲ್ಲಿ ಫೈನಲ್​ ಸಹ ಲಂಕಾದಲ್ಲೇ ನಡೆಯಲಿದೆ.

ಇದನ್ನೂ ಓದಿ: ODI World Cup: ಏಕದಿನ ವಿಶ್ವಕಪ್‌ ಕ್ರಿಕೆಟ್‌- ಚೆನ್ನೈ, ಬೆಂಗಳೂರಿನಲ್ಲಿ ಪಂದ್ಯ ಆಡಲ್ಲ ಎಂದ ಪಾಕಿಸ್ತಾನ!

ಆದರೆ 66 ಹರೆಯದ ಮಾಜಿ ಆಟಗಾರ "ಅರವತ್ತು ಬಂದರೆ ಅರಳು ಮರಳು" ಎಂಬಂತೆ, "ಪಾಕಿಸ್ತಾನ ಪ್ರವಾಸಕ್ಕೆ ಭಾರತದ ಸರದಿ ಬಂದಿದೆ. 2012ರಲ್ಲಿ ಮತ್ತು 2016ರಲ್ಲಿಯೂ ಪಾಕಿಸ್ತಾನ ಭಾರತಕ್ಕೆ ಭೇಟಿ ನೀಡಿತ್ತು. ಈಗ ಇಲ್ಲಿಗೆ ಬರುವ ಸರದಿ ಭಾರತೀಯರದ್ದು. ಅವರು ಇಲ್ಲಿಗೆ ಬಂದು ಆಡದಿದ್ದಲ್ಲಿ ಭಾರತಕ್ಕೆ ಹೋಗುವುದಿಲ್ಲ. 2023ರ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಭಾರತ 2008ರಲ್ಲಿ 50 ಓವರ್‌ಗಳ ಏಷ್ಯಾ ಕಪ್‌ಗಾಗಿ ಕೊನೆಯದಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಅಂದಿನಿಂದ, ಉಭಯ ದೇಶಗಳ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿದೆ. ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ಮಿಯಾಂದಾದ್ ಹೇಳಿದ್ದಾರೆ.

"ಏಷ್ಯಾ ಕಪ್‌ಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂಬ ದೃಢ ನಿರ್ಧಾರವನ್ನು ತೆಗೆದುಕೊಂಡಿದೆ. ಪಾಕಿಸ್ತಾನವೂ ತನ್ನ ನಿಲುವನ್ನು ಬಲವಾಗಿ ಪ್ರತಿಪಾದಿಸಬೇಕಿದೆ. ವಿಶ್ವಕಪ್​ಗೆ ಭಾರತದಂತೆ ಪಾಕಿಸ್ತಾನ ಕೂಡಾ ಹೈಬ್ರಿಡ್​ ಮಾದರಿಗೆ ಮನವಿ ಮಾಡಬೇಕು" ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ದುಲೀಪ್ ಟ್ರೋಫಿಯಿಂದ ದೇಶಿ ಕ್ರಿಕೆಟ್‌ ಋತು ಆರಂಭ: ಜನವರಿ 5ರಿಂದ ಮಾರ್ಚ್​ 14 ರವರೆಗೆ ರಣಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.