ETV Bharat / sports

'ಧೋನಿ ನಿವೃತ್ತಿ ಹಿಂಪಡೆದು T20 ವಿಶ್ವಕಪ್‌ ಆಡುವಂತೆ ಹೇಳೋಣವೇ?' ನಿಮ್ಮ ಅಭಿಪ್ರಾಯವೇನು?

author img

By

Published : Apr 22, 2022, 4:03 PM IST

40 ವರ್ಷದ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ವೈಖರಿಗೆ ಇಡೀ ಕ್ರೀಡಾ ಜಗತ್ತು ತಲೆಬಾಗಿದೆ. ಮುಂಬೈ ಇಂಡಿಯುನ್ಸ್ ವಿರುದ್ಧದ ಪಂದ್ಯದಲ್ಲಿ ಅವರ ಆಟವನ್ನು ಕ್ರಿಕೆಟ್‌ ಲೋಕವೇ ಕೊಂಡಾಡುತ್ತಿದೆ.

MS Dhoni IPL Match
MS Dhoni IPL Match

ಹೈದರಾಬಾದ್​​: ಮುಂಬೈ ಇಂಡಿಯನ್ಸ್​ ವಿರುದ್ಧ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ವೈಖರಿಗೆ ಎಲ್ಲರೂ ಫಿದಾ ಆಗಿದ್ದು, ಅನೇಕರು ಅವರ ಗ್ರೇಟ್​​ ಫಿನಿಷಿಂಗ್​​ ಆಟಕ್ಕೆ ಮೆಚ್ಚುಗೆ ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಟೀಂ ಇಂಡಿಯಾ ಮಾಜಿ ಬೌಲರ್​ ಮಾಹಿ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಟೀಂ ಇಂಡಿಯಾದ ಮಾಜಿ ವೇಗಿ ರುದ್ರಪ್ರತಾಪ್ ಸಿಂಗ್​​, 'ನಾವು ಎಂಎಸ್​ ಧೋನಿ ಅವರನ್ನು ಮುಂಬರುವ ಟಿ20 ವಿಶ್ವಕಪ್​ಗೋಸ್ಕರ ನಿವೃತ್ತಿಯಿಂದ ಹೊರಬಂದು ತಂಡದಲ್ಲಿ ಆಡಲು ವಿನಂತಿಸಬಹುದೇ?' ಎಂದು ಬರೆದುಕೊಂಡಿದ್ದಾರೆ. ನವೆಂಬರ್​ ಮತ್ತು ಅಕ್ಟೋಬರ್ ತಿಂಗಳಲ್ಲಿ ಪುರುಷರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣ ಆರ್​ಪಿ ಸಿಂಗ್ ಈ ರೀತಿಯಾಗಿ ಮನವಿ ಮಾಡಿಕೊಂಡಿದ್ದಾರೆ.

Former India Pacer RP Singh
ಮಾಜಿ ವೇಗದ ಬೌಲರ್ ಆರ್​ಪಿ ಸಿಂಗ್​

ಮುಂಬೈ ಇಂಡಿಯನ್ಸ್ ನೀಡಿದ್ದ 156ರನ್​​ ಗುರಿ ಬೆನ್ನಟ್ಟಿದ ಸಿಎಸ್​ಕೆ 15ನೇ ಓವರ್​​ನಲ್ಲಿ 102ರನ್​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಇದರ ಬೆನ್ನಲ್ಲೇ ಕ್ಯಾಪ್ಟನ್ ರವೀಂದ್ರ ಜಡೇಜಾ ಕೂಡ ಔಟಾದರು. ಈ ವೇಳೆ ತಂಡದ ಜವಾಬ್ದಾರಿ ಹೊತ್ತುಕೊಂಡ ಧೋನಿ ಹಾಗೂ ಪ್ರಿಟೋರಿಯಸ್ ತಂಡಕ್ಕೆ ಉತ್ತಮ ಆಟವಾಡಿದರು. ಆದರೆ, ಉನಾದ್ಕತ್‌ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಪ್ರಿಟೋರಿಯಸ್ ವಿಕೆಟ್​ ಒಪ್ಪಿಸಿದ್ದರಿಂದ ಸಿಎಸ್​ಕೆ ಸೋಲು ಖಚಿತವಾಗಿತ್ತು. ಆದರೆ, ಎರಡನೇ ಎಸೆತದಲ್ಲಿ ಬ್ರಾವೋ ಒಂದು ರನ್​​ ಬಾರಿ ಧೋನಿ ಮೇಲೆ ಎಲ್ಲ ಜವಾಬ್ದಾರಿ ಹೊರಿಸಿದರು.

ಇದನ್ನೂ ಓದಿ: 'ಮಹೀಂದ್ರಾ ಎಂಬ ನನ್ನ ಹೆಸರಲ್ಲಿ 'MAHI' ಅಕ್ಷರವಿದೆ': 'ಗ್ರೇಟ್​ ಫಿನಿಶರ್'​ ಧೋನಿಗೆ ಮೆಚ್ಚುಗೆಯ ಮಹಾಪೂರ!

ಸಿಎಸ್​ಕೆ ಗೆಲುವಿಗೆ ನಾಲ್ಕು ಎಸೆತಗಳಲ್ಲಿ 16ರನ್​ ಬೇಕಾಗಿದ್ದ ವೇಳೆ ತಾಳ್ಮೆ ಕಳೆದುಕೊಳ್ಳದ ಧೋನಿ 6,4,2 ಹಾಗೂ 4ರನ್​​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೊತೆಗೆ, ತಾವೊಬ್ಬ ಗ್ರೇಟ್ ಫಿನಿಷರ್ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.

ಹೈದರಾಬಾದ್​​: ಮುಂಬೈ ಇಂಡಿಯನ್ಸ್​ ವಿರುದ್ಧ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ವೈಖರಿಗೆ ಎಲ್ಲರೂ ಫಿದಾ ಆಗಿದ್ದು, ಅನೇಕರು ಅವರ ಗ್ರೇಟ್​​ ಫಿನಿಷಿಂಗ್​​ ಆಟಕ್ಕೆ ಮೆಚ್ಚುಗೆ ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಟೀಂ ಇಂಡಿಯಾ ಮಾಜಿ ಬೌಲರ್​ ಮಾಹಿ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಟೀಂ ಇಂಡಿಯಾದ ಮಾಜಿ ವೇಗಿ ರುದ್ರಪ್ರತಾಪ್ ಸಿಂಗ್​​, 'ನಾವು ಎಂಎಸ್​ ಧೋನಿ ಅವರನ್ನು ಮುಂಬರುವ ಟಿ20 ವಿಶ್ವಕಪ್​ಗೋಸ್ಕರ ನಿವೃತ್ತಿಯಿಂದ ಹೊರಬಂದು ತಂಡದಲ್ಲಿ ಆಡಲು ವಿನಂತಿಸಬಹುದೇ?' ಎಂದು ಬರೆದುಕೊಂಡಿದ್ದಾರೆ. ನವೆಂಬರ್​ ಮತ್ತು ಅಕ್ಟೋಬರ್ ತಿಂಗಳಲ್ಲಿ ಪುರುಷರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣ ಆರ್​ಪಿ ಸಿಂಗ್ ಈ ರೀತಿಯಾಗಿ ಮನವಿ ಮಾಡಿಕೊಂಡಿದ್ದಾರೆ.

Former India Pacer RP Singh
ಮಾಜಿ ವೇಗದ ಬೌಲರ್ ಆರ್​ಪಿ ಸಿಂಗ್​

ಮುಂಬೈ ಇಂಡಿಯನ್ಸ್ ನೀಡಿದ್ದ 156ರನ್​​ ಗುರಿ ಬೆನ್ನಟ್ಟಿದ ಸಿಎಸ್​ಕೆ 15ನೇ ಓವರ್​​ನಲ್ಲಿ 102ರನ್​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಇದರ ಬೆನ್ನಲ್ಲೇ ಕ್ಯಾಪ್ಟನ್ ರವೀಂದ್ರ ಜಡೇಜಾ ಕೂಡ ಔಟಾದರು. ಈ ವೇಳೆ ತಂಡದ ಜವಾಬ್ದಾರಿ ಹೊತ್ತುಕೊಂಡ ಧೋನಿ ಹಾಗೂ ಪ್ರಿಟೋರಿಯಸ್ ತಂಡಕ್ಕೆ ಉತ್ತಮ ಆಟವಾಡಿದರು. ಆದರೆ, ಉನಾದ್ಕತ್‌ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಪ್ರಿಟೋರಿಯಸ್ ವಿಕೆಟ್​ ಒಪ್ಪಿಸಿದ್ದರಿಂದ ಸಿಎಸ್​ಕೆ ಸೋಲು ಖಚಿತವಾಗಿತ್ತು. ಆದರೆ, ಎರಡನೇ ಎಸೆತದಲ್ಲಿ ಬ್ರಾವೋ ಒಂದು ರನ್​​ ಬಾರಿ ಧೋನಿ ಮೇಲೆ ಎಲ್ಲ ಜವಾಬ್ದಾರಿ ಹೊರಿಸಿದರು.

ಇದನ್ನೂ ಓದಿ: 'ಮಹೀಂದ್ರಾ ಎಂಬ ನನ್ನ ಹೆಸರಲ್ಲಿ 'MAHI' ಅಕ್ಷರವಿದೆ': 'ಗ್ರೇಟ್​ ಫಿನಿಶರ್'​ ಧೋನಿಗೆ ಮೆಚ್ಚುಗೆಯ ಮಹಾಪೂರ!

ಸಿಎಸ್​ಕೆ ಗೆಲುವಿಗೆ ನಾಲ್ಕು ಎಸೆತಗಳಲ್ಲಿ 16ರನ್​ ಬೇಕಾಗಿದ್ದ ವೇಳೆ ತಾಳ್ಮೆ ಕಳೆದುಕೊಳ್ಳದ ಧೋನಿ 6,4,2 ಹಾಗೂ 4ರನ್​​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೊತೆಗೆ, ತಾವೊಬ್ಬ ಗ್ರೇಟ್ ಫಿನಿಷರ್ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.