ETV Bharat / sports

ರಾಹುಲ್ ಬ್ಯಾಟಿಂಗ್​​ ಟೀಕಿಸಿದ್ದು ಘೋರ ತಪ್ಪಾಯ್ತು..ಕನ್ನಡಿಗನಿಗೆ ಮಾಜಿ ಆಟಗಾರನ ಬೆಂಬಲ

author img

By

Published : Sep 29, 2022, 5:02 PM IST

ರಾಹುಲ್​ ನಿಧಾನಗತಿ ಬ್ಯಾಟಿಂಗ್​ ಬಗ್ಗೆ ಈ ಹಿಂದೆ ಟೀಕೆ ಬಂದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ತಾಳ್ಮೆಯ ಆಟ ಎಷ್ಟು ಮುಖ್ಯ ಎಂಬುದು ಸಾಬೀತಾಯಿತು.

ex-india-opener-on-kl-rahuls-knock
ರಾಹುಲ್ ಬ್ಯಾಟಿಂಗ್​​ ಟೀಕಿಸಿದ್ದು ಘೋರ ತಪ್ಪಾಯ್ತು

ಟಿ20 ಹೊಡಿಬಡಿ ಆಟವಾದರೂ ಕೆಲವೊಮ್ಮೆ ವಿಕೆಟ್​ ಕಾಯ್ದುಕೊಂಡು ಬ್ಯಾಟ್​ ಮಾಡುವುದು ಬಹುಮುಖ್ಯವಾಗುತ್ತದೆ. ಇದು ನಿನ್ನೆಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಾಬೀತಾಯಿತು. ಬೌಲರ್​ಗಳಿಗೆ ನೆರವಾಗುತ್ತಿದ್ದ ಮೈದಾನದಲ್ಲಿ ಮೊದಲು ಬ್ಯಾಟ್​ ಮಾಡಿದ ಆಫ್ರಿಕಾ ಕೇವಲ 9 ರನ್​ಗೆ 5 ವಿಕೆಟ್​ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು.

ಕೇಶವ್​ ಮಹಾರಾಜ್​, ಆ್ಯಡಂ ಮಾರ್ಕ್ರಮ್​, ವೇಯ್ನ್ ಪಾರ್ನೆಲ್​ರ ಉತ್ತಮ ಆಟದಿಂದ ಉಳಿದ 5 ವಿಕೆಟ್​ಗಳಿಂದ 100 ರನ್​ ಗಳಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೂ ಆರಂಭಿಕ ಆಘಾತ ಉಂಟಾಯಿತು. ಖಾತೆ ತೆರೆಯದೇ ಟಿ20 ಸ್ಪೆಷಲಿಸ್ಟ್​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ 3 ರನ್​ಗೆ ಔಟಾಗಿದ್ದು, ಆತಂಕ ಮೂಡಿಸಿತ್ತು.

  • The criticism of KL Rahul’s batting approach last night was seriously misplaced…there’s a reason why the opponents scored only 106 in 20 overs and your team was 2 down for not much. It was a top quality knock by KLR, for he chose to fight it out. Well played 👏👏 #IndvSA

    — Aakash Chopra (@cricketaakash) September 29, 2022 " class="align-text-top noRightClick twitterSection" data=" ">

ವಿಕೆಟ್​ ಬಿದ್ದರೂ ತಾಳ್ಮೆಯಿಂದ ಇನಿಂಗ್ಸ್​ ಕಟ್ಟಿದ ಕೆ ಎಲ್​ ರಾಹುಲ್​ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೌಲಿಂಗ್​ ಪಿಚ್​ನಲ್ಲೂ ಹರಿಣಗಳ ಉರಿ ಚೆಂಡನ್ನು ಎದುರಿಸಿ ಅರ್ಧಶತಕ ಗಳಿಸಿದ್ದಲ್ಲದೇ, ಪಂದ್ಯ ಗೆಲ್ಲಿಸಿಕೊಟ್ಟರು. ರಾಹುಲ್​ 51 ರನ್​ ಗಳಿಸಲು ತೆಗೆದುಕೊಂಡಿದ್ದು 56 ಎಸೆತ. ವಿಕೆಟ್​ ತಡೆಯುವುದೇ ಕಷ್ಟವಾಗಿದ್ದ ಮೈದಾನದಲ್ಲಿ ಸ್ಟ್ರೈಕ್​ರೇಟ್​ ಕಡಿಮೆಯಾದರೂ ಎಚ್ಚರಿಕೆಯಿಂದ ಆಡುವುದು ಹೇಗೆ ಎಂಬುದನ್ನು ರಾಹುಲ್ ತೋರಿಸಿಕೊಟ್ಟರು.

ರಾಹುಲ್​ ತಾಳ್ಮೆಯ ಆಟವನ್ನು ಮಾಜಿ ಆಟಗಾರ ಆಕಾಶ್ ಚೋಪ್ರಾ ಹೊಗಳಿದ್ದಾರೆ. "ರಾಹುಲ್​ ನಿಧಾನಗತಿ ಬ್ಯಾಟಿಂಗ್​ ಟೀಕಿಸಿದ್ದು ಘೋರ ತಪ್ಪಾಗಿದೆ. ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಕೇವಲ 106 ರನ್ ಗಳಿಸಲು ಮಾತ್ರ ಶಕ್ತವಾಯಿತು. ಭಾರತ 2 ವಿಕೆಟ್​ ಕಳೆದುಕೊಂಡು ಪಂದ್ಯ ಗೆದ್ದುಕೊಂಡಿತು. ಇದಕ್ಕೆ ಕಾರಣ ರಾಹುಲ್​ ತಾಳ್ಮೆಯ ಬ್ಯಾಟಿಂಗ್​, ಅದ್ಭುತವಾಗಿ ಆಡಿದಿರಿ" ಎಂದು ಎಂದು ಚೋಪ್ರಾ ಟ್ವೀಟ್ ಮಾಡಿದ್ದಾರೆ.

ಇದು ಗುಣಮಟ್ಟದ ಆಟಕ್ಕೆ ಸಾಕ್ಷಿ. ರಾಹುಲ್​ರ ಬ್ಯಾಟ್​ ನಿಧಾನವಾಗಿ ಸದ್ದು ಮಾಡಿದರೂ, ಹೋರಾಟದ ಕಿಚ್ಚ ಅದರಲ್ಲಿತ್ತು. ಆಟದಲ್ಲಿ ಸ್ಟ್ರೇಕ್​ರೇಟ್​ ಮುಖ್ಯವಲ್ಲ, ಪಂದ್ಯವನ್ನು ಗೆಲ್ಲಿಸುವುದೇ ಪರಮಧ್ಯೇಯವಾಗಿರಬೇಕು. ಅದನ್ನು ರಾಹುಲ್​ ನಿನ್ನೆ ಮಾಡಿ ತೋರಿಸಿದರು ಎಂದು ಆಕಾಶ್​ ಚೋಪ್ರಾ ಹೇಳಿದರು.

ಬಾಲ್​ ಪುಟಿದೇಳುತ್ತಿದ್ದ ಮೈದಾನದಲ್ಲಿ ಪಟಪಟನೇ ವಿಕೆಟ್​ಗಳು ಉರುಳುತ್ತಿದ್ದರೂ ವಿಕೆಟ್​ ಕಾಪಾಡಿಕೊಂಡು ಸೂರ್ಯಕುಮಾರ್​ ಯಾದವ್​ಗೆ ಉತ್ತಮ ಸಾಥ್​ ನೀಡಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್‌ ಬಿದ್ದರೂ, ದಕ್ಷಿಣ ಆಫ್ರಿಕಾದ ಬೌಲರ್‌ಗಳ ಮೇಲೆ ಒತ್ತಡ ಹೇರಿದರು.

ಏಷ್ಯಾ ಕಪ್​ನಲ್ಲಿ ರಾಹುಲ್​ ರನ್​ ದರದ ಬಗ್ಗೆ ಅಭಿಮಾನಿಗಳು ಮತ್ತು ವಿಮರ್ಶಕರು ಅಪಸ್ವರ ಎತ್ತಿದ್ದರು. ಟಿ20 ಮಾದರಿಯ ಕ್ರಿಕೆಟ್​ಗೆ ರಾಹುಲ್​ ಬ್ಯಾಟಿಂಗ್​ ಒಗ್ಗುತ್ತಿಲ್ಲ ಎಂಬ ಮಾತನ್ನಾಡಿದ್ದರು.

ಓದಿ: ವಿಶ್ವಕಪ್​ಗೂ ಮುನ್ನ ಶಾಕ್​..ಬೆನ್ನುಮೂಳೆ ಗಾಯದಿಂದ ಜಸ್ಪ್ರೀತ್​ ಬೂಮ್ರಾ ವಿಶ್ವಕಪ್​ನಿಂದ ಔಟ್​

ಟಿ20 ಹೊಡಿಬಡಿ ಆಟವಾದರೂ ಕೆಲವೊಮ್ಮೆ ವಿಕೆಟ್​ ಕಾಯ್ದುಕೊಂಡು ಬ್ಯಾಟ್​ ಮಾಡುವುದು ಬಹುಮುಖ್ಯವಾಗುತ್ತದೆ. ಇದು ನಿನ್ನೆಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಾಬೀತಾಯಿತು. ಬೌಲರ್​ಗಳಿಗೆ ನೆರವಾಗುತ್ತಿದ್ದ ಮೈದಾನದಲ್ಲಿ ಮೊದಲು ಬ್ಯಾಟ್​ ಮಾಡಿದ ಆಫ್ರಿಕಾ ಕೇವಲ 9 ರನ್​ಗೆ 5 ವಿಕೆಟ್​ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು.

ಕೇಶವ್​ ಮಹಾರಾಜ್​, ಆ್ಯಡಂ ಮಾರ್ಕ್ರಮ್​, ವೇಯ್ನ್ ಪಾರ್ನೆಲ್​ರ ಉತ್ತಮ ಆಟದಿಂದ ಉಳಿದ 5 ವಿಕೆಟ್​ಗಳಿಂದ 100 ರನ್​ ಗಳಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೂ ಆರಂಭಿಕ ಆಘಾತ ಉಂಟಾಯಿತು. ಖಾತೆ ತೆರೆಯದೇ ಟಿ20 ಸ್ಪೆಷಲಿಸ್ಟ್​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ 3 ರನ್​ಗೆ ಔಟಾಗಿದ್ದು, ಆತಂಕ ಮೂಡಿಸಿತ್ತು.

  • The criticism of KL Rahul’s batting approach last night was seriously misplaced…there’s a reason why the opponents scored only 106 in 20 overs and your team was 2 down for not much. It was a top quality knock by KLR, for he chose to fight it out. Well played 👏👏 #IndvSA

    — Aakash Chopra (@cricketaakash) September 29, 2022 " class="align-text-top noRightClick twitterSection" data=" ">

ವಿಕೆಟ್​ ಬಿದ್ದರೂ ತಾಳ್ಮೆಯಿಂದ ಇನಿಂಗ್ಸ್​ ಕಟ್ಟಿದ ಕೆ ಎಲ್​ ರಾಹುಲ್​ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೌಲಿಂಗ್​ ಪಿಚ್​ನಲ್ಲೂ ಹರಿಣಗಳ ಉರಿ ಚೆಂಡನ್ನು ಎದುರಿಸಿ ಅರ್ಧಶತಕ ಗಳಿಸಿದ್ದಲ್ಲದೇ, ಪಂದ್ಯ ಗೆಲ್ಲಿಸಿಕೊಟ್ಟರು. ರಾಹುಲ್​ 51 ರನ್​ ಗಳಿಸಲು ತೆಗೆದುಕೊಂಡಿದ್ದು 56 ಎಸೆತ. ವಿಕೆಟ್​ ತಡೆಯುವುದೇ ಕಷ್ಟವಾಗಿದ್ದ ಮೈದಾನದಲ್ಲಿ ಸ್ಟ್ರೈಕ್​ರೇಟ್​ ಕಡಿಮೆಯಾದರೂ ಎಚ್ಚರಿಕೆಯಿಂದ ಆಡುವುದು ಹೇಗೆ ಎಂಬುದನ್ನು ರಾಹುಲ್ ತೋರಿಸಿಕೊಟ್ಟರು.

ರಾಹುಲ್​ ತಾಳ್ಮೆಯ ಆಟವನ್ನು ಮಾಜಿ ಆಟಗಾರ ಆಕಾಶ್ ಚೋಪ್ರಾ ಹೊಗಳಿದ್ದಾರೆ. "ರಾಹುಲ್​ ನಿಧಾನಗತಿ ಬ್ಯಾಟಿಂಗ್​ ಟೀಕಿಸಿದ್ದು ಘೋರ ತಪ್ಪಾಗಿದೆ. ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಕೇವಲ 106 ರನ್ ಗಳಿಸಲು ಮಾತ್ರ ಶಕ್ತವಾಯಿತು. ಭಾರತ 2 ವಿಕೆಟ್​ ಕಳೆದುಕೊಂಡು ಪಂದ್ಯ ಗೆದ್ದುಕೊಂಡಿತು. ಇದಕ್ಕೆ ಕಾರಣ ರಾಹುಲ್​ ತಾಳ್ಮೆಯ ಬ್ಯಾಟಿಂಗ್​, ಅದ್ಭುತವಾಗಿ ಆಡಿದಿರಿ" ಎಂದು ಎಂದು ಚೋಪ್ರಾ ಟ್ವೀಟ್ ಮಾಡಿದ್ದಾರೆ.

ಇದು ಗುಣಮಟ್ಟದ ಆಟಕ್ಕೆ ಸಾಕ್ಷಿ. ರಾಹುಲ್​ರ ಬ್ಯಾಟ್​ ನಿಧಾನವಾಗಿ ಸದ್ದು ಮಾಡಿದರೂ, ಹೋರಾಟದ ಕಿಚ್ಚ ಅದರಲ್ಲಿತ್ತು. ಆಟದಲ್ಲಿ ಸ್ಟ್ರೇಕ್​ರೇಟ್​ ಮುಖ್ಯವಲ್ಲ, ಪಂದ್ಯವನ್ನು ಗೆಲ್ಲಿಸುವುದೇ ಪರಮಧ್ಯೇಯವಾಗಿರಬೇಕು. ಅದನ್ನು ರಾಹುಲ್​ ನಿನ್ನೆ ಮಾಡಿ ತೋರಿಸಿದರು ಎಂದು ಆಕಾಶ್​ ಚೋಪ್ರಾ ಹೇಳಿದರು.

ಬಾಲ್​ ಪುಟಿದೇಳುತ್ತಿದ್ದ ಮೈದಾನದಲ್ಲಿ ಪಟಪಟನೇ ವಿಕೆಟ್​ಗಳು ಉರುಳುತ್ತಿದ್ದರೂ ವಿಕೆಟ್​ ಕಾಪಾಡಿಕೊಂಡು ಸೂರ್ಯಕುಮಾರ್​ ಯಾದವ್​ಗೆ ಉತ್ತಮ ಸಾಥ್​ ನೀಡಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್‌ ಬಿದ್ದರೂ, ದಕ್ಷಿಣ ಆಫ್ರಿಕಾದ ಬೌಲರ್‌ಗಳ ಮೇಲೆ ಒತ್ತಡ ಹೇರಿದರು.

ಏಷ್ಯಾ ಕಪ್​ನಲ್ಲಿ ರಾಹುಲ್​ ರನ್​ ದರದ ಬಗ್ಗೆ ಅಭಿಮಾನಿಗಳು ಮತ್ತು ವಿಮರ್ಶಕರು ಅಪಸ್ವರ ಎತ್ತಿದ್ದರು. ಟಿ20 ಮಾದರಿಯ ಕ್ರಿಕೆಟ್​ಗೆ ರಾಹುಲ್​ ಬ್ಯಾಟಿಂಗ್​ ಒಗ್ಗುತ್ತಿಲ್ಲ ಎಂಬ ಮಾತನ್ನಾಡಿದ್ದರು.

ಓದಿ: ವಿಶ್ವಕಪ್​ಗೂ ಮುನ್ನ ಶಾಕ್​..ಬೆನ್ನುಮೂಳೆ ಗಾಯದಿಂದ ಜಸ್ಪ್ರೀತ್​ ಬೂಮ್ರಾ ವಿಶ್ವಕಪ್​ನಿಂದ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.