ETV Bharat / sports

ವಿರಾಟ್‌ ಕೊಹ್ಲಿಗಾಗಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲಬೇಕು- ವೀರೇಂದ್ರ ಸೆಹ್ವಾಗ್

author img

By

Published : Jun 27, 2023, 7:32 PM IST

Updated : Jun 27, 2023, 7:40 PM IST

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ವೇಳಾಪಟ್ಟಿ ಬಿಡುಗಡೆ ಸಮಾರಂಭದಲ್ಲಿ ವೀರೇಂದ್ರ ಸೆಹ್ವಾಗ್ ಮಾತನಾಡಿದರು.

Virat Kohli
Virat Kohli
ವಿರಾಟ್‌ ಕೊಹ್ಲಿಗಾಗಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲಬೇಕು

ಭಾರತ ಕ್ರಿಕೆಟ್ ತಂಡ 2011ರ ವಿಶ್ವಕಪ್ ವಿಜಯವನ್ನು ಪುನರಾವರ್ತಿಸಲು ಪ್ರಯತ್ನಿಸಬೇಕು. ಈ ಮೂಲಕ ವಿರಾಟ್ ಕೊಹ್ಲಿಗಾಗಿ ಈ ಬಾರಿ ಟ್ರೋಫಿಯನ್ನು ಮನೆಗೆ ತರಲು ಪ್ರಯತ್ನಿಸಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾಗೆ ಕಿವಿಮಾತು ಹೇಳಿದ್ದಾರೆ. 2023ರ ವಿಶ್ವಕಪ್​ ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಬಾರಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತವು ಶ್ರೀಲಂಕಾ ತಂಡವನ್ನು ಸೋಲಿಸಿ 2011ರ ವಿಶ್ವಕಪ್ ಅನ್ನು ತವರು ನೆಲದಲ್ಲಿ ಗೆದ್ದುಕೊಂಡಿತು. 2011ರ ವಿಶ್ವಕಪ್‌ ಪ್ರಸಿದ್ಧ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಕೊನೆಯ ವಿಶ್ವಕಪ್ ಆಗಿತ್ತು. 'ಮಾಸ್ಟರ್ ಬ್ಲಾಸ್ಟರ್'​ಗಾಗಿ ತಂಡ ತನ್ನೆಲ್ಲ ಶಕ್ತಿ ಪ್ರದರ್ಶಿಸಿ ಅಂತಿಮವಾಗಿ ಕಪ್​ ಗೆದ್ದುಕೊಂಡಿತ್ತು.

2011ರಲ್ಲಿ ವಿರಾಟ್ ಕೊಹ್ಲಿ ತಂಡದ ಸದಸ್ಯರಾಗಿದ್ದರು. ವಿಶ್ವ ಗೆದ್ದ ನಂತರ ಸಚಿನ್​ ಅವರನ್ನು ವಿರಾಟ್​ ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದರು. ಸಚಿನ್ ನಿವೃತ್ತಿಯ ನಂತರ ಕೊಹ್ಲಿ ಭಾರತದ ಬ್ಯಾಟಿಂಗ್ ಘಟಕದ ಮುಖ್ಯಸ್ಥರಾಗಿ ಪರಿಣಾಮಕಾರಿಯಾಗಿ ಆಡುತ್ತಿದ್ದಾರೆ. ಆದರೆ, 2015 ಮತ್ತು 2019ರಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತ ಕಾರಣ ಕೊಹ್ಲಿ ಗೆಲುವಿನ ರುಚಿ ಅನುಭವಿಸಿಲ್ಲ. 2011ರ ತಂಡವು ಸಚಿನ್‌ ಅವರಿಗಾಗಿ ಗೆದ್ದಂತೆ ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲಲು ಭಾರತ ತಂಡ ಎಲ್ಲ ಪರಿಶ್ರಮವನ್ನೂ ಹಾಕಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.

ಮಂಗಳವಾರ ಮುಂಬೈನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ವೇಳಾಪಟ್ಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೆಹ್ವಾಗ್, "ನಾವು ಆ ವಿಶ್ವಕಪ್ ಅನ್ನು ತೆಂಡೂಲ್ಕರ್‌ಗಾಗಿ ಆಡಿದ್ದೆವು, ಈಗ ವಿರಾಟ್ ಕೊಹ್ಲಿಗಾಗಿ ಎಲ್ಲರೂ ವಿಶ್ವಕಪ್ ಗೆಲ್ಲುವುದನ್ನು ಎದುರು ನೋಡುತ್ತಿದ್ದಾರೆ. ವಿರಾಟ್​ ಯಾವಾಗಲೂ ಶೇ 100 ರಷ್ಟು ಪರಿಶ್ರಮ ಹಾಕಿ ಪಂದ್ಯ ಆಡುತ್ತಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 100,000 ಜನರು ವಿರಾಟ್​ ಅವರನ್ನು ವೀಕ್ಷಿಸಲಿದ್ದಾರೆ. ಪಿಚ್‌ಗಳು ಹೇಗೆ ವರ್ತಿಸುತ್ತವೆ ಎಂದು ಅವರಿಗೆ ತಿಳಿದಿದೆ. ಕೊಹ್ಲಿ ಭಾರತ ವಿಶ್ವಕಪ್ ಗೆಲ್ಲಲು ಸಾಕಷ್ಟು ರನ್ ಗಳಿಸುತ್ತಾರೆ ಎಂಬ ಖಾತ್ರಿ ನನಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಪಂದ್ಯಗಳಲ್ಲಿ ಒಂದು. "ಪ್ರತಿಯೊಬ್ಬರೂ ಆಟವನ್ನು ಎದುರು ನೋಡುತ್ತಿದ್ದಾರೆ. ನನಗೂ ಕೂಡಾ ಆ ದಿನ ಏನಾಗುತ್ತದೆ ಎಂದು ಖಾತ್ರಿಯಿಲ್ಲ. ಆದರೆ ಒತ್ತಡವನ್ನು ಉತ್ತಮವಾಗಿ ನಿಭಾಯಿಸುವ ತಂಡ ಗೆಲ್ಲುತ್ತದೆ" ಎಂದರು.

ಇದನ್ನೂ ಓದಿ: Prithvi Shaw: 'ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಸಪ್ನಾ ಗಿಲ್ ಕಿರುಕುಳ ಆರೋಪ ಸುಳ್ಳು'- ಕೋರ್ಟ್‌ಗೆ ಮುಂಬೈ ಪೊಲೀಸರ ವರದಿ

ವಿರಾಟ್‌ ಕೊಹ್ಲಿಗಾಗಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲಬೇಕು

ಭಾರತ ಕ್ರಿಕೆಟ್ ತಂಡ 2011ರ ವಿಶ್ವಕಪ್ ವಿಜಯವನ್ನು ಪುನರಾವರ್ತಿಸಲು ಪ್ರಯತ್ನಿಸಬೇಕು. ಈ ಮೂಲಕ ವಿರಾಟ್ ಕೊಹ್ಲಿಗಾಗಿ ಈ ಬಾರಿ ಟ್ರೋಫಿಯನ್ನು ಮನೆಗೆ ತರಲು ಪ್ರಯತ್ನಿಸಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾಗೆ ಕಿವಿಮಾತು ಹೇಳಿದ್ದಾರೆ. 2023ರ ವಿಶ್ವಕಪ್​ ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಬಾರಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತವು ಶ್ರೀಲಂಕಾ ತಂಡವನ್ನು ಸೋಲಿಸಿ 2011ರ ವಿಶ್ವಕಪ್ ಅನ್ನು ತವರು ನೆಲದಲ್ಲಿ ಗೆದ್ದುಕೊಂಡಿತು. 2011ರ ವಿಶ್ವಕಪ್‌ ಪ್ರಸಿದ್ಧ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಕೊನೆಯ ವಿಶ್ವಕಪ್ ಆಗಿತ್ತು. 'ಮಾಸ್ಟರ್ ಬ್ಲಾಸ್ಟರ್'​ಗಾಗಿ ತಂಡ ತನ್ನೆಲ್ಲ ಶಕ್ತಿ ಪ್ರದರ್ಶಿಸಿ ಅಂತಿಮವಾಗಿ ಕಪ್​ ಗೆದ್ದುಕೊಂಡಿತ್ತು.

2011ರಲ್ಲಿ ವಿರಾಟ್ ಕೊಹ್ಲಿ ತಂಡದ ಸದಸ್ಯರಾಗಿದ್ದರು. ವಿಶ್ವ ಗೆದ್ದ ನಂತರ ಸಚಿನ್​ ಅವರನ್ನು ವಿರಾಟ್​ ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದರು. ಸಚಿನ್ ನಿವೃತ್ತಿಯ ನಂತರ ಕೊಹ್ಲಿ ಭಾರತದ ಬ್ಯಾಟಿಂಗ್ ಘಟಕದ ಮುಖ್ಯಸ್ಥರಾಗಿ ಪರಿಣಾಮಕಾರಿಯಾಗಿ ಆಡುತ್ತಿದ್ದಾರೆ. ಆದರೆ, 2015 ಮತ್ತು 2019ರಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತ ಕಾರಣ ಕೊಹ್ಲಿ ಗೆಲುವಿನ ರುಚಿ ಅನುಭವಿಸಿಲ್ಲ. 2011ರ ತಂಡವು ಸಚಿನ್‌ ಅವರಿಗಾಗಿ ಗೆದ್ದಂತೆ ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲಲು ಭಾರತ ತಂಡ ಎಲ್ಲ ಪರಿಶ್ರಮವನ್ನೂ ಹಾಕಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.

ಮಂಗಳವಾರ ಮುಂಬೈನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ವೇಳಾಪಟ್ಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೆಹ್ವಾಗ್, "ನಾವು ಆ ವಿಶ್ವಕಪ್ ಅನ್ನು ತೆಂಡೂಲ್ಕರ್‌ಗಾಗಿ ಆಡಿದ್ದೆವು, ಈಗ ವಿರಾಟ್ ಕೊಹ್ಲಿಗಾಗಿ ಎಲ್ಲರೂ ವಿಶ್ವಕಪ್ ಗೆಲ್ಲುವುದನ್ನು ಎದುರು ನೋಡುತ್ತಿದ್ದಾರೆ. ವಿರಾಟ್​ ಯಾವಾಗಲೂ ಶೇ 100 ರಷ್ಟು ಪರಿಶ್ರಮ ಹಾಕಿ ಪಂದ್ಯ ಆಡುತ್ತಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 100,000 ಜನರು ವಿರಾಟ್​ ಅವರನ್ನು ವೀಕ್ಷಿಸಲಿದ್ದಾರೆ. ಪಿಚ್‌ಗಳು ಹೇಗೆ ವರ್ತಿಸುತ್ತವೆ ಎಂದು ಅವರಿಗೆ ತಿಳಿದಿದೆ. ಕೊಹ್ಲಿ ಭಾರತ ವಿಶ್ವಕಪ್ ಗೆಲ್ಲಲು ಸಾಕಷ್ಟು ರನ್ ಗಳಿಸುತ್ತಾರೆ ಎಂಬ ಖಾತ್ರಿ ನನಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಪಂದ್ಯಗಳಲ್ಲಿ ಒಂದು. "ಪ್ರತಿಯೊಬ್ಬರೂ ಆಟವನ್ನು ಎದುರು ನೋಡುತ್ತಿದ್ದಾರೆ. ನನಗೂ ಕೂಡಾ ಆ ದಿನ ಏನಾಗುತ್ತದೆ ಎಂದು ಖಾತ್ರಿಯಿಲ್ಲ. ಆದರೆ ಒತ್ತಡವನ್ನು ಉತ್ತಮವಾಗಿ ನಿಭಾಯಿಸುವ ತಂಡ ಗೆಲ್ಲುತ್ತದೆ" ಎಂದರು.

ಇದನ್ನೂ ಓದಿ: Prithvi Shaw: 'ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಸಪ್ನಾ ಗಿಲ್ ಕಿರುಕುಳ ಆರೋಪ ಸುಳ್ಳು'- ಕೋರ್ಟ್‌ಗೆ ಮುಂಬೈ ಪೊಲೀಸರ ವರದಿ

Last Updated : Jun 27, 2023, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.