ETV Bharat / sports

ಭಾರತ ಈ ಪಂದ್ಯ ಗೆಲ್ಲಲು ಅರ್ಹವಾಗಿತ್ತು : ಇಯಾನ್ ಮಾರ್ಗನ್

author img

By

Published : Mar 21, 2021, 9:12 AM IST

Updated : Mar 25, 2021, 10:41 PM IST

ಟಿ-20 ಸರಣಿಯನ್ನ 2-3 ರಿಂದ ಸೋತ ಬಳಿಕ ಇಂಗ್ಲೆಂಡ್​ ತಂಡದ ನಾಯಕ ಇಯಾನ್​ ಮೋರ್ಗನ್ ಪ್ರತಿಕ್ರಿಯಿಸಿದ್ದು, ಟೀಮ್​ ಇಂಡಿಯಾ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಗೆಲುವು ಅವರ ತಂಡಕ್ಕೆ ಅರ್ಹ ಜಯವಾಗಿದೆ ಎಂದಿದ್ದಾರೆ.

Morgan
ಇಯಾನ್ ಮಾರ್ಗನ್

ಅಹಮದಾಬಾದ್: ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದ್ದ ಟೀಂ ಇಂಡಿಯಾ, ಇದೀಗ 5 ಪಂದ್ಯಗಳ ಟಿ-20 ಕ್ರಿಕೆಟ್​ ಸರಣಿಯನ್ನು ಸಹ ಗೆದ್ದು ಬೀಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ 36 ರನ್​ಗಳ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.

ಇಂಗ್ಲೆಂಡ್​ ತಂಡದ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯೆ

ಟಿ-20 ಸರಣಿಯನ್ನ 2-3 ರಿಂದ ಸೋತ ಬಳಿಕ ಇಂಗ್ಲೆಂಡ್​ ತಂಡದ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯಿಸಿದ್ದು, ಟೀಮ್​ ಇಂಡಿಯಾ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಗೆಲುವು ಅವರ ತಂಡಕ್ಕೆ ಅರ್ಹ ಜಯವಾಗಿದೆ ಎಂದಿದ್ದಾರೆ.

"ಭಾರತವು ಅರ್ಹ ಗೆಲುವನ್ನು ಪಡೆದಿದೆ. ಈ ಸರಣಿಯಲ್ಲಿ ನಾವು ಬಹಳ ಕಲಿತಿದ್ದವೆ. ಈ ಪಂದ್ಯದಲ್ಲಿ ನಮ್ಮ ಹಿನ್ನಡೆಗೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಕಾರಣವಾಗಿದೆ." ಎಂದು ಮಾರ್ಗನ್​ ಹೇಳಿದ್ದಾರೆ.

"ಪ್ರಬಲ ಭಾರತೀಯ ತಂಡದ ವಿರುದ್ಧ ಆಡುವುದು ಒಂದು ಅದ್ಭುತ. ಈ ಸರಣಿಯಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ, ನಮ್ಮ ಸಾಮರ್ಥ್ಯ ಮೀರಿ ಆಡಿದ್ದೇವೆ, ಆದರೆ ಇಂದು ನಮ್ಮ ದಿನವಲ್ಲ." ಎಂದು ಅವರು ಹೇಳಿದರು.

ಓದಿ : ಇಂಗ್ಲೆಂಡ್​ ಮೇಲೆ ಭಾರತದ ಸವಾರಿ: 3-2 ಅಂತರದಿಂದ ಟಿ-20 ಸರಣಿ ಗೆದ್ದ ಕೊಹ್ಲಿ ಪಡೆ

ಪವರ್-ಪ್ಲೇ ಓವರ್‌ಗಳಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಉತ್ತಮ ಬೌಲಿಂಗ್ ಮಾಡಿದರು. ಅದು ನಮ್ಮ ತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಿತ್ತು. ಹೊಸ ಚಂಡಿನಲ್ಲಿ ರಶೀದ್​ ಬೌಲಿಂಗ್ ಅದ್ಭುತವಾಗಿತ್ತು. ನಾವು ಗೆದ್ದ ಎರಡು ಪಂದ್ಯಗಳಲ್ಲಿ ಟಾಪ್​ ಆರ್ಡರ್​ ಉತ್ತಮವಾಗಿದ್ದು, ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು ಎಂದರು.

ಅಹಮದಾಬಾದ್: ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದ್ದ ಟೀಂ ಇಂಡಿಯಾ, ಇದೀಗ 5 ಪಂದ್ಯಗಳ ಟಿ-20 ಕ್ರಿಕೆಟ್​ ಸರಣಿಯನ್ನು ಸಹ ಗೆದ್ದು ಬೀಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ 36 ರನ್​ಗಳ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.

ಇಂಗ್ಲೆಂಡ್​ ತಂಡದ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯೆ

ಟಿ-20 ಸರಣಿಯನ್ನ 2-3 ರಿಂದ ಸೋತ ಬಳಿಕ ಇಂಗ್ಲೆಂಡ್​ ತಂಡದ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯಿಸಿದ್ದು, ಟೀಮ್​ ಇಂಡಿಯಾ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಗೆಲುವು ಅವರ ತಂಡಕ್ಕೆ ಅರ್ಹ ಜಯವಾಗಿದೆ ಎಂದಿದ್ದಾರೆ.

"ಭಾರತವು ಅರ್ಹ ಗೆಲುವನ್ನು ಪಡೆದಿದೆ. ಈ ಸರಣಿಯಲ್ಲಿ ನಾವು ಬಹಳ ಕಲಿತಿದ್ದವೆ. ಈ ಪಂದ್ಯದಲ್ಲಿ ನಮ್ಮ ಹಿನ್ನಡೆಗೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಕಾರಣವಾಗಿದೆ." ಎಂದು ಮಾರ್ಗನ್​ ಹೇಳಿದ್ದಾರೆ.

"ಪ್ರಬಲ ಭಾರತೀಯ ತಂಡದ ವಿರುದ್ಧ ಆಡುವುದು ಒಂದು ಅದ್ಭುತ. ಈ ಸರಣಿಯಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ, ನಮ್ಮ ಸಾಮರ್ಥ್ಯ ಮೀರಿ ಆಡಿದ್ದೇವೆ, ಆದರೆ ಇಂದು ನಮ್ಮ ದಿನವಲ್ಲ." ಎಂದು ಅವರು ಹೇಳಿದರು.

ಓದಿ : ಇಂಗ್ಲೆಂಡ್​ ಮೇಲೆ ಭಾರತದ ಸವಾರಿ: 3-2 ಅಂತರದಿಂದ ಟಿ-20 ಸರಣಿ ಗೆದ್ದ ಕೊಹ್ಲಿ ಪಡೆ

ಪವರ್-ಪ್ಲೇ ಓವರ್‌ಗಳಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಉತ್ತಮ ಬೌಲಿಂಗ್ ಮಾಡಿದರು. ಅದು ನಮ್ಮ ತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಿತ್ತು. ಹೊಸ ಚಂಡಿನಲ್ಲಿ ರಶೀದ್​ ಬೌಲಿಂಗ್ ಅದ್ಭುತವಾಗಿತ್ತು. ನಾವು ಗೆದ್ದ ಎರಡು ಪಂದ್ಯಗಳಲ್ಲಿ ಟಾಪ್​ ಆರ್ಡರ್​ ಉತ್ತಮವಾಗಿದ್ದು, ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು ಎಂದರು.

Last Updated : Mar 25, 2021, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.