ETV Bharat / sports

ಪ್ರಚಾರ ಪ್ರಿಯರು ನನ್ನ ಮತ್ತು ಮಾರ್ಗನ್​ ನಡುವಿನ ಘಟನೆ ಯುದ್ದ ಎಂಬಂತೆ ಬಿಂಬಿಸಿದರು: ಅಶ್ವಿನ್​

author img

By

Published : Oct 5, 2021, 5:18 PM IST

ಕಳೆದ ವಾರದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ಪಂದ್ಯದ ವೇಳೆ ಬ್ಯಾಟರ್​ ಆಗಿದ್ದ ರಿಷಭ್ ಪಂತ್ ದೇಹಕ್ಕೆ ಚೆಂಡು ಬಡಿದರೂ ಅಶ್ವಿನ್​ ಮತ್ತೊಂದು ರನ್​ ತೆಗೆದುಕೊಂಡಿದ್ದರು. ಇದನ್ನು ಖಂಡಿಸಿದ ಮಾರ್ಗನ್​ ಅಶ್ವಿನ್​ ವಿರುದ್ಧ ಕೋಪಗೊಂಡು, ಇದು ಕ್ರಿಕೆಟ್​ ನಿಯಮಕ್ಕೆ ಅವಮಾನ ಮಾಡಿದಂತೆ ಮತ್ತು ಕ್ರೀಡಾ ಸ್ಪೂರ್ತಿಗೂ ಧಕ್ಕೆ ಮಾಡಿದ್ದಾರೆಂದು ಆರೋಪಿಸಿದ್ದರು. ಎಂಸಿಸಿ ನಿಯಮದ ಪ್ರಕಾರ ಚೆಂಡು ಥ್ರೋ ಮಾಡಿದ ವೇಳೆ ಫೀಲ್ಡರ್​ ದೇಹಕ್ಕೆ ತಾಗಿದ ನಂತರ ರನ್​ ತೆಗೆದುಕೊಳ್ಳುವ ಹಾಗಿಲ್ಲ.

Ashwin vs Morgan
ರವಿಚಂದ್ರನ್ ಅಶ್ವಿನ್ vs ಇಯಾನ್ ಮಾರ್ಗನ್

ದುಬೈ: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಅವರೊಂದಿಗಿನ ವಿವಾದವನ್ನು ಭಾರತ ತಂಡದ ಆಫ್ - ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ ಪಂದ್ಯದ ವೇಳೆ ಕೊನೆಗೊಳಿಸಲು ಪ್ರಯತ್ನಿಸಿದ್ದಾರೆ. ಅವರೊಂದಿಗೆ ಯಾವುದೇ ವೈಯಕ್ತಿಕ ಹೋರಾಟ ನಡೆಸಿಲ್ಲ, ಆದರೆ, ಆಟವನ್ನು ಹೇಗೆ ಆಡಬೇಕು ಎನ್ನುವುದರ ಬಗೆಗಿನ ಭಿನ್ನಾಭಿಪ್ರಾಯ ಎಂದು ಹೇಳಿದ್ದಾರೆ.

ಕಳೆದ ವಾರದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ಪಂದ್ಯದ ವೇಳೆ ಬ್ಯಾಟರ್​ ಆಗಿದ್ದ ರಿಷಭ್ ಪಂತ್ ದೇಹಕ್ಕೆ ಚೆಂಡು ಬಡಿದರೂ ಅಶ್ವಿನ್​ ಮತ್ತೊಂದು ರನ್​ ತೆಗೆದುಕೊಂಡಿದ್ದರು. ಇದನ್ನು ಖಂಡಿಸಿದ ಮಾರ್ಗನ್​ ಅಶ್ವಿನ್​ ವಿರುದ್ಧ ಕೋಪಗೊಂಡು, ಇದು ಕ್ರಿಕೆಟ್​ ನಿಯಮಕ್ಕೆ ಅವಮಾನ ಮಾಡಿದಂತೆ ಮತ್ತು ಕ್ರೀಡಾಸ್ಪೂರ್ತಿಗೂ ಧಕ್ಕೆ ಮಾಡಿದ್ದಾರೆಂದು ಆರೋಪಿಸಿದ್ದರು. ಎಂಸಿಸಿ ನಿಯಮದ ಪ್ರಕಾರ ಚೆಂಡು ಥ್ರೋ ಮಾಡಿದ ವೇಳೆ ಫೀಲ್ಡರ್​ ದೇಹಕ್ಕೆ ತಾಗಿದ ನಂತರ ರನ್​ ತೆಗೆದುಕೊಳ್ಳುವ ಹಾಗಿಲ್ಲ.

ಆದರೆ, ಇಂಗ್ಲೆಂಡ್​ 2019ರ ವಿಶ್ವಕಪ್ ಫೈನಲ್​ನಲ್ಲಿ ಬೆನ್​ ಸ್ಟೋಕ್ಸ್​ ರನ್​ ಓಡುವಾಗ ಫೀಲ್ಡರ್​ ಥ್ರೋ ಮಾಡಿದ ಚೆಂಡು ಬ್ಯಾಟ್​ಗೆ ತಗುಲಿ ಬೌಂಡರಿ ಸೇರಿತ್ತು. ಅಂಪೈರ್​ ಇಂಗ್ಲೆಂಡ್​ಗೆ 5 ರನ್​ ಕೊಡುಗೆ ನೀಡಿತ್ತು. ಇದು ನ್ಯೂಜಿಲ್ಯಾಂಡ್​​​ನ​ ವಿಶ್ವಕಪ್​ ಕನಸನ್ನು ಭಗ್ನಗೊಳಿಸಿತ್ತು.

ಇದು ವೈಯುಕ್ತಿಕ ಯುದ್ಧ ಅಥವಾ ಹೋರಾಟ ಎಂದು ಭಾವಿಸಿಲ್ಲ

" ನೋಡಿ, ಇದು ಯಾರೊಂದಿಗೂ ನಡೆಸಿದ ವೈಯಕ್ತಿಕ ಯುದ್ದ ಅಥವಾ ಯಾವುದೇ ಒಂದು ಹೋರಾಟವಲ್ಲ ಎಂದು ನಾನು ಭಾವಿಸುತ್ತೇನೆ. ಗಮನ ಸೆಳೆಯಲು ಬಯಸುವ ಕೆಲವು ಜನರು ಆ ಘಟನೆಯನ್ನು ಆ ರೀತಿ ಬಿಂಬಿಸಿದರು. ನಾನು ಅದನ್ನು ಆ ರೀತಿ ನೋಡುತ್ತಿಲ್ಲ" ಎಂದು ಸಿಎಸ್​ಕೆ ವಿರುದ್ಧದ ಪಂದ್ಯ ಮುಗಿದ ನಂತರ ಸ್ಪಷ್ಟಪಡಿಸಿದ್ದಾರೆ.

ಆ ಸಂದರ್ಭದಲ್ಲಿ ಚೆಂಡು ಪಂತ್​ಗೆ ತಾಗಿದೆ ಎನ್ನುವುದು ನನ್ನ ಅರಿವಿಗೆ ಬರಲಿಲ್ಲ. ಹಾಗಾಗಿ ಎರಡನೇ ತೆಗೆದುಕೊಂಡೆ. ಆದರೆ, ಇದನ್ನು ನಾಚಿಗೇಡಿನ ಸಂಗತಿ, ಕ್ರೀಡಾ ಸ್ಪೂರ್ತಿಗೆ ಧಕ್ಕೆ ಎಂದೆಲ್ಲ ಪದ ಪ್ರಯೋಗ ಮಾಡಿದರು. ಈ ಕಾರಣಕ್ಕಾಗಿ ನಾನು ಅವರು ಬಳಸಿದ ಪದಗಳು ಸರಿಯಾದ ದಿಕ್ಕು ಮತ್ತು ಸರಿಯಾದ ಜಾಗದಲ್ಲಿಲ್ಲ ಎಂದು ನಾನು ಹೇಳಲು ಮುಂದಾದೆ ಎಂದು ಅಶ್ವಿನ್ ವಿವರಿಸಿದ್ದಾರೆ.

ಅಶ್ವಿನ್ ಆ ಪಂದ್ಯದಲ್ಲಿ ಔಟಾದ ನಂತರ ಸೌಥಿ, ಮೋಸ ಮಾಡಿದರೆ ಹೀಗೆ ಆಗುವುದು ಎಂದು ಕಮೆಂಟ್ ಮಾಡಿದ್ದರು. ಇದರಿಂದ ಕೋಪಗೊಂಡ ಅಶ್ವಿನ್​ ಮಾರ್ಗನ್​ ಮತ್ತು ಸೌಥಿ ವಿರುದ್ಧ ತಿರುಗಿ ಬಿದ್ದಿದ್ದರು. ಈ ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಕೆಕೆಆರ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮಧ್ಯ ಪ್ರವೇಶಿಸಿ ಜಗಳವನ್ನು ನಿಯಂತ್ರಿಸಿದ್ದರು.

ಇದನ್ನೂ ಓದಿ:ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ!

ದುಬೈ: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಅವರೊಂದಿಗಿನ ವಿವಾದವನ್ನು ಭಾರತ ತಂಡದ ಆಫ್ - ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ ಪಂದ್ಯದ ವೇಳೆ ಕೊನೆಗೊಳಿಸಲು ಪ್ರಯತ್ನಿಸಿದ್ದಾರೆ. ಅವರೊಂದಿಗೆ ಯಾವುದೇ ವೈಯಕ್ತಿಕ ಹೋರಾಟ ನಡೆಸಿಲ್ಲ, ಆದರೆ, ಆಟವನ್ನು ಹೇಗೆ ಆಡಬೇಕು ಎನ್ನುವುದರ ಬಗೆಗಿನ ಭಿನ್ನಾಭಿಪ್ರಾಯ ಎಂದು ಹೇಳಿದ್ದಾರೆ.

ಕಳೆದ ವಾರದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ಪಂದ್ಯದ ವೇಳೆ ಬ್ಯಾಟರ್​ ಆಗಿದ್ದ ರಿಷಭ್ ಪಂತ್ ದೇಹಕ್ಕೆ ಚೆಂಡು ಬಡಿದರೂ ಅಶ್ವಿನ್​ ಮತ್ತೊಂದು ರನ್​ ತೆಗೆದುಕೊಂಡಿದ್ದರು. ಇದನ್ನು ಖಂಡಿಸಿದ ಮಾರ್ಗನ್​ ಅಶ್ವಿನ್​ ವಿರುದ್ಧ ಕೋಪಗೊಂಡು, ಇದು ಕ್ರಿಕೆಟ್​ ನಿಯಮಕ್ಕೆ ಅವಮಾನ ಮಾಡಿದಂತೆ ಮತ್ತು ಕ್ರೀಡಾಸ್ಪೂರ್ತಿಗೂ ಧಕ್ಕೆ ಮಾಡಿದ್ದಾರೆಂದು ಆರೋಪಿಸಿದ್ದರು. ಎಂಸಿಸಿ ನಿಯಮದ ಪ್ರಕಾರ ಚೆಂಡು ಥ್ರೋ ಮಾಡಿದ ವೇಳೆ ಫೀಲ್ಡರ್​ ದೇಹಕ್ಕೆ ತಾಗಿದ ನಂತರ ರನ್​ ತೆಗೆದುಕೊಳ್ಳುವ ಹಾಗಿಲ್ಲ.

ಆದರೆ, ಇಂಗ್ಲೆಂಡ್​ 2019ರ ವಿಶ್ವಕಪ್ ಫೈನಲ್​ನಲ್ಲಿ ಬೆನ್​ ಸ್ಟೋಕ್ಸ್​ ರನ್​ ಓಡುವಾಗ ಫೀಲ್ಡರ್​ ಥ್ರೋ ಮಾಡಿದ ಚೆಂಡು ಬ್ಯಾಟ್​ಗೆ ತಗುಲಿ ಬೌಂಡರಿ ಸೇರಿತ್ತು. ಅಂಪೈರ್​ ಇಂಗ್ಲೆಂಡ್​ಗೆ 5 ರನ್​ ಕೊಡುಗೆ ನೀಡಿತ್ತು. ಇದು ನ್ಯೂಜಿಲ್ಯಾಂಡ್​​​ನ​ ವಿಶ್ವಕಪ್​ ಕನಸನ್ನು ಭಗ್ನಗೊಳಿಸಿತ್ತು.

ಇದು ವೈಯುಕ್ತಿಕ ಯುದ್ಧ ಅಥವಾ ಹೋರಾಟ ಎಂದು ಭಾವಿಸಿಲ್ಲ

" ನೋಡಿ, ಇದು ಯಾರೊಂದಿಗೂ ನಡೆಸಿದ ವೈಯಕ್ತಿಕ ಯುದ್ದ ಅಥವಾ ಯಾವುದೇ ಒಂದು ಹೋರಾಟವಲ್ಲ ಎಂದು ನಾನು ಭಾವಿಸುತ್ತೇನೆ. ಗಮನ ಸೆಳೆಯಲು ಬಯಸುವ ಕೆಲವು ಜನರು ಆ ಘಟನೆಯನ್ನು ಆ ರೀತಿ ಬಿಂಬಿಸಿದರು. ನಾನು ಅದನ್ನು ಆ ರೀತಿ ನೋಡುತ್ತಿಲ್ಲ" ಎಂದು ಸಿಎಸ್​ಕೆ ವಿರುದ್ಧದ ಪಂದ್ಯ ಮುಗಿದ ನಂತರ ಸ್ಪಷ್ಟಪಡಿಸಿದ್ದಾರೆ.

ಆ ಸಂದರ್ಭದಲ್ಲಿ ಚೆಂಡು ಪಂತ್​ಗೆ ತಾಗಿದೆ ಎನ್ನುವುದು ನನ್ನ ಅರಿವಿಗೆ ಬರಲಿಲ್ಲ. ಹಾಗಾಗಿ ಎರಡನೇ ತೆಗೆದುಕೊಂಡೆ. ಆದರೆ, ಇದನ್ನು ನಾಚಿಗೇಡಿನ ಸಂಗತಿ, ಕ್ರೀಡಾ ಸ್ಪೂರ್ತಿಗೆ ಧಕ್ಕೆ ಎಂದೆಲ್ಲ ಪದ ಪ್ರಯೋಗ ಮಾಡಿದರು. ಈ ಕಾರಣಕ್ಕಾಗಿ ನಾನು ಅವರು ಬಳಸಿದ ಪದಗಳು ಸರಿಯಾದ ದಿಕ್ಕು ಮತ್ತು ಸರಿಯಾದ ಜಾಗದಲ್ಲಿಲ್ಲ ಎಂದು ನಾನು ಹೇಳಲು ಮುಂದಾದೆ ಎಂದು ಅಶ್ವಿನ್ ವಿವರಿಸಿದ್ದಾರೆ.

ಅಶ್ವಿನ್ ಆ ಪಂದ್ಯದಲ್ಲಿ ಔಟಾದ ನಂತರ ಸೌಥಿ, ಮೋಸ ಮಾಡಿದರೆ ಹೀಗೆ ಆಗುವುದು ಎಂದು ಕಮೆಂಟ್ ಮಾಡಿದ್ದರು. ಇದರಿಂದ ಕೋಪಗೊಂಡ ಅಶ್ವಿನ್​ ಮಾರ್ಗನ್​ ಮತ್ತು ಸೌಥಿ ವಿರುದ್ಧ ತಿರುಗಿ ಬಿದ್ದಿದ್ದರು. ಈ ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಕೆಕೆಆರ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮಧ್ಯ ಪ್ರವೇಶಿಸಿ ಜಗಳವನ್ನು ನಿಯಂತ್ರಿಸಿದ್ದರು.

ಇದನ್ನೂ ಓದಿ:ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.