ETV Bharat / sports

ಆರ್ಥಿಕ ಬಿಕ್ಕಟ್ಟುಪೀಡಿತ ತಾಯ್ನಾಡಿಗೆ 'ಏಷ್ಯಾಕಪ್'​​ ಗೆಲುವು ಅರ್ಪಣೆ: ಶ್ರೀಲಂಕಾ ಕ್ಯಾಪ್ಟನ್

author img

By

Published : Sep 12, 2022, 11:04 AM IST

ಹತ್ತಾರು ಏಳು-ಬೀಳುಗಳು, ಅನೇಕ ಸಮಸ್ಯೆಗಳ ಮಧ್ಯೆ ಏಷ್ಯಾ ಕಪ್​ ಚಾಂಪಿಯನ್​ ಪಟ್ಟ ಅಲಂಕರಿಸಿರುವ ಶ್ರೀಲಂಕಾ ತಂಡ ಪ್ರಶಸ್ತಿಯನ್ನು ತನ್ನ ದೇಶಕ್ಕೆ ಅರ್ಪಿಸಿದೆ.

Dasun Shanaka
Dasun Shanaka

ದುಬೈ(ಯುಎಇ): ರಾಜಕೀಯ ಅರಾಜಕತೆ, ಆರ್ಥಿಕ ಬಿಕ್ಕಟ್ಟಿನ ನಡುವೆ ಅಮೋಘ ಪ್ರದರ್ಶನ ನೀಡಿರುವ ಶ್ರೀಲಂಕಾ ಕ್ರಿಕೆಟ್​ ತಂಡ ಏಷ್ಯಾ ಕಪ್​​ನಲ್ಲಿ ಚಾಂಪಿಯನ್​​ ಪಟ್ಟಕ್ಕೇರಿದೆ. ಫೈನಲ್​ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನದ ವಿರುದ್ಧ 23 ರನ್​​​ಗಳ ರೋಚಕ ಜಯ ಸಾಧಿಸಿ 6ನೇ ಸಲ ಪ್ರಶಸ್ತಿಗೆ ಮುತ್ತಿಕ್ಕಿತು.

ಪಂದ್ಯದ ಬಳಿಕ ಮಾತನಾಡಿರುವ ಕ್ಯಾಪ್ಟನ್ ದಾಸುನ್ ಶನಕ, ಏಷ್ಯಾ ಕಪ್​ ಗೆಲುವನ್ನು ಆರ್ಥಿಕ ಬಿಕ್ಕಟ್ಟು ಪೀಡಿತ ನಮ್ಮ ದೇಶ ಶ್ರೀಲಂಕಾಗೆ ಅರ್ಪಿಸುತ್ತೇವೆ. ಈ ವಿಜಯೋತ್ಸವ ದೇಶದ ಕ್ರಿಕೆಟ್‌ಗೆ ನೈಜ ತಿರುವು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​​​ಗೆ ಮುಂಚಿತವಾಗಿ ಈ ಜಯಭೇರಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.

It's finally ours, again 🤗🏆

📸 It was a special moment Sri Lanka Captain Dasun Shanaka receiving the #AsiaCup from the President of Sri Lanka Cricket Shammi Silva.@SLCPresident#RoaringForGlory #AsiaCup2022 pic.twitter.com/EhYbZ3QXCh

— Sri Lanka Cricket 🇱🇰 (@OfficialSLC) September 12, 2022 ">

ಕಳೆದ ಎರಡ್ಮೂರು ವರ್ಷಗಳಿಂದ ನಮ್ಮ ಆಟಗಾರರು ಉತ್ತಮ ಕ್ರಿಕೆಟ್​ ಆಡುತ್ತಿದ್ದಾರೆ. ಆದರೆ, ಗೆಲ್ಲುವ ಅಂಕಿ-ಅಂಶಗಳನ್ನು ಮಾತ್ರ ಕಂಡಿರಲಿಲ್ಲ. ಎಲ್ಲದರ ಫಲಿತಾಂಶವೂ ಇದೀಗ ಹೊರಬಿದ್ದಿದೆ ಎಂದರು. ಮುಂದಿನ ಐದಾರು ವರ್ಷಗಳ ಕಾಲ ಇದೇ ರೀತಿಯ ಆಟ ಮುಂದುವರೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: ಏಷ್ಯಾ ಕಪ್​ ಚಾಂಪಿಯನ್‌ ಶ್ರೀಲಂಕಾ ರಾಷ್ಟ್ರಧ್ವಜದೊಂದಿಗೆ ಗೌತಮ್‌ ಗಂಭೀರ್ ಪೋಸ್

ಮುಂದಿನ ತಿಂಗಳ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್​​ನಲ್ಲಿ ಶ್ರೀಲಂಕಾ ತಂಡ ಅರ್ಹತಾ ಸುತ್ತಿನಲ್ಲಿ ಆಡಿ ಲೀಗ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶನಕ, ಕಳೆದ ವರ್ಷವೂ ಸಹ ನಾವು ಅರ್ಹತಾ ಪಂದ್ಯ ಆಡಿದ್ದೇವೆ. ಉತ್ತಮ ಕ್ರಿಕೆಟ್​ ಆಡುವುದು ಮಾತ್ರ ನಮ್ಮ ಗುರಿ. ಅರ್ಹತಾ ಪಂದ್ಯಗಳು ನಮ್ಮ ಕ್ರಿಕೆಟ್ ಮತ್ತಷ್ಟು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.

ತಂಡದ ಕೋಚ್​​ ಕ್ರಿಸ್​ ಸಿಲ್ವರ್​​ವುಡ್ ಯಾವಾಗಲೂ ನಮಗೆ ಉತ್ತಮ ಪ್ರೇರಕರಾಗಿದ್ದಾರೆ. ನಮ್ಮಿಂದ ಆಕ್ರಮಣಕಾರಿ ಕ್ರಿಕೆಟ್ ಹೊರಬರಬೇಕೆಂದು ಅವರು ಬಯಸುತ್ತಾರೆ. ಮೈದಾನದಲ್ಲಿ ನಾವು ಬಯಸಿದಂತೆ ಕ್ರಿಕೆಟ್ ಆಡುವ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಶನಕ ತಿಳಿಸಿದರು.

ದುಬೈ(ಯುಎಇ): ರಾಜಕೀಯ ಅರಾಜಕತೆ, ಆರ್ಥಿಕ ಬಿಕ್ಕಟ್ಟಿನ ನಡುವೆ ಅಮೋಘ ಪ್ರದರ್ಶನ ನೀಡಿರುವ ಶ್ರೀಲಂಕಾ ಕ್ರಿಕೆಟ್​ ತಂಡ ಏಷ್ಯಾ ಕಪ್​​ನಲ್ಲಿ ಚಾಂಪಿಯನ್​​ ಪಟ್ಟಕ್ಕೇರಿದೆ. ಫೈನಲ್​ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನದ ವಿರುದ್ಧ 23 ರನ್​​​ಗಳ ರೋಚಕ ಜಯ ಸಾಧಿಸಿ 6ನೇ ಸಲ ಪ್ರಶಸ್ತಿಗೆ ಮುತ್ತಿಕ್ಕಿತು.

ಪಂದ್ಯದ ಬಳಿಕ ಮಾತನಾಡಿರುವ ಕ್ಯಾಪ್ಟನ್ ದಾಸುನ್ ಶನಕ, ಏಷ್ಯಾ ಕಪ್​ ಗೆಲುವನ್ನು ಆರ್ಥಿಕ ಬಿಕ್ಕಟ್ಟು ಪೀಡಿತ ನಮ್ಮ ದೇಶ ಶ್ರೀಲಂಕಾಗೆ ಅರ್ಪಿಸುತ್ತೇವೆ. ಈ ವಿಜಯೋತ್ಸವ ದೇಶದ ಕ್ರಿಕೆಟ್‌ಗೆ ನೈಜ ತಿರುವು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​​​ಗೆ ಮುಂಚಿತವಾಗಿ ಈ ಜಯಭೇರಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.

ಕಳೆದ ಎರಡ್ಮೂರು ವರ್ಷಗಳಿಂದ ನಮ್ಮ ಆಟಗಾರರು ಉತ್ತಮ ಕ್ರಿಕೆಟ್​ ಆಡುತ್ತಿದ್ದಾರೆ. ಆದರೆ, ಗೆಲ್ಲುವ ಅಂಕಿ-ಅಂಶಗಳನ್ನು ಮಾತ್ರ ಕಂಡಿರಲಿಲ್ಲ. ಎಲ್ಲದರ ಫಲಿತಾಂಶವೂ ಇದೀಗ ಹೊರಬಿದ್ದಿದೆ ಎಂದರು. ಮುಂದಿನ ಐದಾರು ವರ್ಷಗಳ ಕಾಲ ಇದೇ ರೀತಿಯ ಆಟ ಮುಂದುವರೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: ಏಷ್ಯಾ ಕಪ್​ ಚಾಂಪಿಯನ್‌ ಶ್ರೀಲಂಕಾ ರಾಷ್ಟ್ರಧ್ವಜದೊಂದಿಗೆ ಗೌತಮ್‌ ಗಂಭೀರ್ ಪೋಸ್

ಮುಂದಿನ ತಿಂಗಳ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್​​ನಲ್ಲಿ ಶ್ರೀಲಂಕಾ ತಂಡ ಅರ್ಹತಾ ಸುತ್ತಿನಲ್ಲಿ ಆಡಿ ಲೀಗ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶನಕ, ಕಳೆದ ವರ್ಷವೂ ಸಹ ನಾವು ಅರ್ಹತಾ ಪಂದ್ಯ ಆಡಿದ್ದೇವೆ. ಉತ್ತಮ ಕ್ರಿಕೆಟ್​ ಆಡುವುದು ಮಾತ್ರ ನಮ್ಮ ಗುರಿ. ಅರ್ಹತಾ ಪಂದ್ಯಗಳು ನಮ್ಮ ಕ್ರಿಕೆಟ್ ಮತ್ತಷ್ಟು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.

ತಂಡದ ಕೋಚ್​​ ಕ್ರಿಸ್​ ಸಿಲ್ವರ್​​ವುಡ್ ಯಾವಾಗಲೂ ನಮಗೆ ಉತ್ತಮ ಪ್ರೇರಕರಾಗಿದ್ದಾರೆ. ನಮ್ಮಿಂದ ಆಕ್ರಮಣಕಾರಿ ಕ್ರಿಕೆಟ್ ಹೊರಬರಬೇಕೆಂದು ಅವರು ಬಯಸುತ್ತಾರೆ. ಮೈದಾನದಲ್ಲಿ ನಾವು ಬಯಸಿದಂತೆ ಕ್ರಿಕೆಟ್ ಆಡುವ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಶನಕ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.