ETV Bharat / sports

ಚುಮು ಚುಮು ಚಳಿಯ ಆಹ್ಲಾದ ಸವಿದ ಸೂರ್ಯಕುಮಾರ್​ ಯಾದವ್​.. ಪತ್ನಿಯ ಜೊತೆ ಪ್ರವಾಸ

ರಜಾ ದಿನಗಳನ್ನು ಕಳೆಯುತ್ತಿರುವ ಭಾರತದ ಡ್ಯಾಶಿಂಗ್​ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಪತ್ನಿ ದೇವಿಶಾ ಜೊತೆಗೆ ಉತ್ತರಾಖಂಡಕ್ಕೆ ಭೇಟಿ ನೀಡಿದ್ದಾರೆ.

author img

By

Published : Dec 14, 2022, 2:13 PM IST

cricketer-suryakumar-yadav
ಚುಮುಚುಮು ಚಳಿಯ ಆಹ್ಲಾದ ಸವಿದ ಸೂರ್ಯಕುಮಾರ್​ ಯಾದವ್​

ಋಷಿಕೇಶ(ಉತ್ತರಾಖಂಡ): ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿರುವ ಭಾರತದ ಡ್ಯಾಶಿಂಗ್ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಕುಟುಂಬದ ಜೊತೆಗೆ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ.

ಉತ್ತರಾಖಂಡದ ಋಷಿಕೇಶದ ಸೊಬಗಿನ ತಾಣಗಳಿಗೆ ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಭೇಟಿ ನೀಡಿದ್ದಾರೆ. ತಮ್ಮ ಪತಿ ಸೂರ್ಯಕುಮಾರ್​ ಯಾದವ್​ ಜೊತೆಗೆ ಸುಮಧುರ ಕ್ಷಣಗಳನ್ನು ಕಳೆಯುತ್ತಿರುವ ಚಿತ್ರಗಳನ್ನು ದೇವಿಶಾ ಶೆಟ್ಟಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಹರಿಯುವ ಗಂಗಾನದಿಯ ದಡದ ಮೇಲೆ, ಋಷಿಕೇಶದ ಸುಂದರ ಕಣಿವೆಗಳಲ್ಲಿ ಕುಳಿತು ಆಪ್ತ ಕ್ಷಣಗಳನ್ನು ಕಳೆಯುತ್ತಿರುವ ಸೂರ್ಯ ಕುಮಾರ್ ಯಾದವ್ ಮತ್ತು ದೇವಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಚಳಿಗಾಲದ ವೇಳೆ ಉತ್ತರಾಖಂಡಕ್ಕೆ ಸೆಲೆಬ್ರಿಟಿಗಳು ಭೇಟಿ ನೀಡುತ್ತಾರೆ.

ಸೂರ್ಯ ಮತ್ತು ದೇವಿಶಾ ಸದ್ಯ ರಿಷಿಕೇಶದ ಬದರಿನಾಥ್ ಮಾರ್ಗದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ಹೇಳಲಾಗುತ್ತಿದೆ. ನೆಚ್ಚಿನ ಆಟಗಾರನ ಆಗಮನ ಸುದ್ದಿ ಕೇಳಿದ ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಹೋಟೆಲ್​ಗೆ ಬಂದು ಹೋಗುತ್ತಿದ್ದಾರೆ.

ಟಿ20 ವಿಶ್ವಕಪ್​ನಿಂದ ಸತತ ಪಂದ್ಯವಾಡುತ್ತಿರುವ ಸೂರ್ಯಕುಮಾರ್​ ಯಾದವ್​ಗೆ ಬಾಂಗ್ಲಾದೇಶ ಪ್ರವಾಸದಿಂದ ಕೈಬಿಟ್ಟ ಬಿಸಿಸಿಐ ವಿಶ್ರಾಂತಿ ನೀಡಿದೆ.

ಓದಿ: 2ನೇ ಸೆಮೀಸ್​ನಲ್ಲಿ ಮೊರಾಕ್ಕೊ ಫ್ರಾನ್ಸ್​ ಫೈಟ್​: ಫೈನಲ್​​​​​ನಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸೋರ್‍ಯಾರು?

ಋಷಿಕೇಶ(ಉತ್ತರಾಖಂಡ): ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿರುವ ಭಾರತದ ಡ್ಯಾಶಿಂಗ್ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಕುಟುಂಬದ ಜೊತೆಗೆ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ.

ಉತ್ತರಾಖಂಡದ ಋಷಿಕೇಶದ ಸೊಬಗಿನ ತಾಣಗಳಿಗೆ ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಭೇಟಿ ನೀಡಿದ್ದಾರೆ. ತಮ್ಮ ಪತಿ ಸೂರ್ಯಕುಮಾರ್​ ಯಾದವ್​ ಜೊತೆಗೆ ಸುಮಧುರ ಕ್ಷಣಗಳನ್ನು ಕಳೆಯುತ್ತಿರುವ ಚಿತ್ರಗಳನ್ನು ದೇವಿಶಾ ಶೆಟ್ಟಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಹರಿಯುವ ಗಂಗಾನದಿಯ ದಡದ ಮೇಲೆ, ಋಷಿಕೇಶದ ಸುಂದರ ಕಣಿವೆಗಳಲ್ಲಿ ಕುಳಿತು ಆಪ್ತ ಕ್ಷಣಗಳನ್ನು ಕಳೆಯುತ್ತಿರುವ ಸೂರ್ಯ ಕುಮಾರ್ ಯಾದವ್ ಮತ್ತು ದೇವಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಚಳಿಗಾಲದ ವೇಳೆ ಉತ್ತರಾಖಂಡಕ್ಕೆ ಸೆಲೆಬ್ರಿಟಿಗಳು ಭೇಟಿ ನೀಡುತ್ತಾರೆ.

ಸೂರ್ಯ ಮತ್ತು ದೇವಿಶಾ ಸದ್ಯ ರಿಷಿಕೇಶದ ಬದರಿನಾಥ್ ಮಾರ್ಗದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ಹೇಳಲಾಗುತ್ತಿದೆ. ನೆಚ್ಚಿನ ಆಟಗಾರನ ಆಗಮನ ಸುದ್ದಿ ಕೇಳಿದ ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಹೋಟೆಲ್​ಗೆ ಬಂದು ಹೋಗುತ್ತಿದ್ದಾರೆ.

ಟಿ20 ವಿಶ್ವಕಪ್​ನಿಂದ ಸತತ ಪಂದ್ಯವಾಡುತ್ತಿರುವ ಸೂರ್ಯಕುಮಾರ್​ ಯಾದವ್​ಗೆ ಬಾಂಗ್ಲಾದೇಶ ಪ್ರವಾಸದಿಂದ ಕೈಬಿಟ್ಟ ಬಿಸಿಸಿಐ ವಿಶ್ರಾಂತಿ ನೀಡಿದೆ.

ಓದಿ: 2ನೇ ಸೆಮೀಸ್​ನಲ್ಲಿ ಮೊರಾಕ್ಕೊ ಫ್ರಾನ್ಸ್​ ಫೈಟ್​: ಫೈನಲ್​​​​​ನಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸೋರ್‍ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.