ETV Bharat / sports

ಲೆಕ್ಕವಿಲ್ಲದಷ್ಟು ಸಲ ಟ್ರೋಲ್​ಗೊಳಗಾಗಿದ್ದ ಸಿರಾಜ್​​,ಈಗ ಹೀರೋ: ತಮ್ಮ ಪ್ರದರ್ಶನದ ಬಗ್ಗೆ ಹೇಳಿದ್ದಿಷ್ಟು!?

author img

By

Published : Oct 22, 2020, 3:38 PM IST

Updated : Oct 22, 2020, 3:46 PM IST

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೈದರಾಬಾದ್​ನ​​ ಹುಡುಗ ಮೊಹಮ್ಮದ್ ಸಿರಾಜ್​ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಪ್ರದರ್ಶನದ ಮೂಲಕ ಐಪಿಎಲ್​ ಇತಿಹಾಸದಲ್ಲೇ ಯಾರು ನಿರ್ಮಾಣ ಮಾಡದಂತಹ ರೆಕಾರ್ಡ್​ ಬರೆದಿದ್ದಾರೆ.

Mohmmad Siraj
Mohmmad Siraj

ಅಬುಧಾಬಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ 13ನೇ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ವೇಗಿ ಮೊಹಮ್ಮದ್​ ಸಿರಾಜ್​ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ತಾವು ಎಸೆದ 4 ಓವರ್​ಗಳಲ್ಲಿ ಕೇವಲ 8ರನ್​ ನೀಡಿ ಪ್ರಮುಖ ಮೂರು ವಿಕೆಟ್​ ಪಡೆದುಕೊಂಡಿರುವ ಜತೆಗೆ ಎರಡು ಮೆಡನ್ ಓವರ್​ ಮಾಡಿದ್ದಾರೆ.

ಪ್ರದರ್ಶನದ ಬಗ್ಗೆ ಸಿರಾಜ್ ಮಾತು

ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆ ಇದಾಗಿದ್ದು, ತಮ್ಮ ಅದ್ಭುತ ಪ್ರದರ್ಶನದ ಬಗ್ಗೆ ಸಿರಾಜ್​ ಖುದ್ದಾಗಿ ಮಾತನಾಡಿದ್ದಾರೆ. ನನ್ನ ಪ್ರದರ್ಶನಕ್ಕಾಗಿ ನಾನು ಮೊದಲು ಅಲ್ಲಾಹನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಂತರ ನನಗೆ ಹೊಸ ಚೆಂಡು ನೀಡಿ ಬೌಲಿಂಗ್​ ಮಾಡಲು ಪ್ರೋತ್ಸಾಹಿಸಿದ ವಿರಾಟ್​ ಕೊಹ್ಲಿ ಅವರಿಗೂ ಧನ್ಯವಾದಗಳು. ನೆಟ್​ನಲ್ಲಿ ಹೊಸ ಚೆಂಡಿನೊಂದಿಗೆ ಸಾಕಷ್ಟು ಅಭ್ಯಾಸ ಮಾಡುತ್ತಿದ್ದೆ. ಆದರೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಬೌಲ್​ ಮಾಡುವ ಯೋಜನೆ ಇರಲಿಲ್ಲ. ಮೈದಾನಕ್ಕಿಳಿದಾಗ ವಿರಾಟ್​ ಭಾಯ್​, ಮೊದಲ ಓವರ್​ಗಾಗಿ ಸಿದ್ಧರಾಗಿ ಎಂದು ಹೇಳಿದರು ಎಂದಿದ್ದಾರೆ.

ಸಿರಾಜ್ ಎಸೆದ ಮೊದಲ ಓವರ್​​ನಲ್ಲೇ ತ್ರಿಪಾಠಿ ಹಾಗೂ ನಂತರದ ಎಸೆತದಲ್ಲೇ ನಿತೀಶ್ ರಾಣಾ ವಿಕೆಟ್​ ಪಡೆದುಕೊಂಡರು.ರಾಣಾಗೆ ಎಸೆದ ಚೆಂಡು ಅದ್ಭುತವಾಗಿತ್ತು ಎಂದು ತಿಳಿಸಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಪರ ಆಡಿರುವ ಮೊಹಮ್ಮದ್​ ಸಿರಾಜ್​ ಲೆಕ್ಕವಿಲ್ಲದಷ್ಟು ಸಲ ಟ್ರೋಲ್​ಗೊಳಗಾಗಿದ್ದರು.

ಅಬುಧಾಬಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ 13ನೇ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ವೇಗಿ ಮೊಹಮ್ಮದ್​ ಸಿರಾಜ್​ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ತಾವು ಎಸೆದ 4 ಓವರ್​ಗಳಲ್ಲಿ ಕೇವಲ 8ರನ್​ ನೀಡಿ ಪ್ರಮುಖ ಮೂರು ವಿಕೆಟ್​ ಪಡೆದುಕೊಂಡಿರುವ ಜತೆಗೆ ಎರಡು ಮೆಡನ್ ಓವರ್​ ಮಾಡಿದ್ದಾರೆ.

ಪ್ರದರ್ಶನದ ಬಗ್ಗೆ ಸಿರಾಜ್ ಮಾತು

ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆ ಇದಾಗಿದ್ದು, ತಮ್ಮ ಅದ್ಭುತ ಪ್ರದರ್ಶನದ ಬಗ್ಗೆ ಸಿರಾಜ್​ ಖುದ್ದಾಗಿ ಮಾತನಾಡಿದ್ದಾರೆ. ನನ್ನ ಪ್ರದರ್ಶನಕ್ಕಾಗಿ ನಾನು ಮೊದಲು ಅಲ್ಲಾಹನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಂತರ ನನಗೆ ಹೊಸ ಚೆಂಡು ನೀಡಿ ಬೌಲಿಂಗ್​ ಮಾಡಲು ಪ್ರೋತ್ಸಾಹಿಸಿದ ವಿರಾಟ್​ ಕೊಹ್ಲಿ ಅವರಿಗೂ ಧನ್ಯವಾದಗಳು. ನೆಟ್​ನಲ್ಲಿ ಹೊಸ ಚೆಂಡಿನೊಂದಿಗೆ ಸಾಕಷ್ಟು ಅಭ್ಯಾಸ ಮಾಡುತ್ತಿದ್ದೆ. ಆದರೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಬೌಲ್​ ಮಾಡುವ ಯೋಜನೆ ಇರಲಿಲ್ಲ. ಮೈದಾನಕ್ಕಿಳಿದಾಗ ವಿರಾಟ್​ ಭಾಯ್​, ಮೊದಲ ಓವರ್​ಗಾಗಿ ಸಿದ್ಧರಾಗಿ ಎಂದು ಹೇಳಿದರು ಎಂದಿದ್ದಾರೆ.

ಸಿರಾಜ್ ಎಸೆದ ಮೊದಲ ಓವರ್​​ನಲ್ಲೇ ತ್ರಿಪಾಠಿ ಹಾಗೂ ನಂತರದ ಎಸೆತದಲ್ಲೇ ನಿತೀಶ್ ರಾಣಾ ವಿಕೆಟ್​ ಪಡೆದುಕೊಂಡರು.ರಾಣಾಗೆ ಎಸೆದ ಚೆಂಡು ಅದ್ಭುತವಾಗಿತ್ತು ಎಂದು ತಿಳಿಸಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಪರ ಆಡಿರುವ ಮೊಹಮ್ಮದ್​ ಸಿರಾಜ್​ ಲೆಕ್ಕವಿಲ್ಲದಷ್ಟು ಸಲ ಟ್ರೋಲ್​ಗೊಳಗಾಗಿದ್ದರು.

Last Updated : Oct 22, 2020, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.