ETV Bharat / sports

ಧೋನಿ ಉತ್ತರಾಧಿಕಾರಿಯಾಗಲು ಪಂತ್​ಗೆ ಈ ಸರಣಿ ಸುವರ್ಣಾವಕಾಶ.. ವಿರಾಟ್‌ ಕೊಹ್ಲಿ

ಯುವ ವಿಕೆಟ್​ ಕೀಪರ್​ ರಿಷಭ್​ ಪಂತ್​ ಭಾರತ ತಂಡದ ಮೊದಲ ಆದ್ಯತೆಯ ವಿಕೆಟ್​ ಕೀಪರ್ ಆಗಿದ್ದು, ಅವರು ಧೋನಿ ಅನುಪಸ್ಥಿತಿಯಲ್ಲಿ ತಮ್ಮ ಸಾಮರ್ಥ್ಯವನ್ನು ಹೊರ ಹಾಕಲು ವಿಂಡೀಸ್​ ವಿರುದ್ಧದ ಸರಣಿ ಅದ್ಭುತ ಅವಕಾಶ ಎಂದು ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

author img

By

Published : Aug 3, 2019, 5:24 PM IST

Virat Kohli

ಫ್ಲೋರಿಡಾ : ಭಾರತ ತಂಡದ ಅನುಭವಿ ವಿಕೆಟ್​ ಕೀಪರ್​ ಅನುಪಸ್ಥಿತಿಯಲ್ಲಿ ಆಯ್ಕೆಯಾಗಿರುವ ವಿಕೆಟ್​ ಕೀಪರ್​ ರಿಷಭ್​ ಪಂತ್​ಗೆ ವಿಂಡೀಸ್​ ಸರಣಿ ಅದ್ಭುತ ಅವಕಾಶ ಎಂದು ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡಕ್ಕೆ ಕಳೆದ ಒಂದು ದಶಕದಿಂದ ಎಂಎಸ್​ ಧೋನಿ ಪಾತ್ರ ನಿರ್ಣಾಯಕವಾಗಿತ್ತು. ಇದೀಗ ಧೋನಿ ಅನುಪಸ್ಥಿತಿಯಲ್ಲಿ ಟಿ20 ಚಾಂಪಿಯನ್​ ವಿಂಡೀಸ್​ ವಿರುದ್ಧ ಇಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.

ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ದೆಹಲಿಯ ಯುವ ವಿಕೆಟ್​​ ಕೀಪರ್​ ರಿಷಭ್​ ಪಂತ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಾಗಿದೆ. ಪಂದ್ಯಕ್ಕೂ ಮುನ್ನ ನಡೆ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ಕೊಹ್ಲಿ, ಪಂತ್​ಗೆ ಅವರ ಸಾಮರ್ಥ್ಯ ತೋರಿಸಲು ಈ ಸರಣಿ ಅದ್ಭುತ ಅವಕಾಶವಾಗಿದೆ. ಭಾರತ ತಂಡಕ್ಕೆ ಅವರ ಸೇವೆ ಪ್ರಮುಖವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಜೊತೆಗೆ ಉತ್ತಮ ಲಯವನ್ನು ಕಂಡುಕೊಳ್ಳಬೇಕಿದೆ. ಇದನ್ನು ನಾವು ರಿಷಭ್​ರಿಂದ ಭಯಸುತ್ತಿದ್ದೇವೆ.

2018ರ ಐಪಿಎಲ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ರಿಷಭ್​ ಪಂತ್​, ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಪದರ್ಶನ ನೀಡುವಲ್ಲಿ ವಿಫಲರಾಗಿದ್ದರು. ನಂತರ 2019ರ ಐಪಿಎಲ್​ನಲ್ಲಿ 448 ರನ್​ಗಳಿಸಿ ಗೇಮ್‌ ಫಿನಿಶರ್​ ಆಗಿ ಮಿಂಚಿದ್ದರು. ಇದೀಗ ಅವರ ಪಾತ್ರ ಭಾರತ ತಂಡಕ್ಕೆ ನಿರ್ಣಾಯಕವಾಗಿದೆ.

ಫ್ಲೋರಿಡಾ : ಭಾರತ ತಂಡದ ಅನುಭವಿ ವಿಕೆಟ್​ ಕೀಪರ್​ ಅನುಪಸ್ಥಿತಿಯಲ್ಲಿ ಆಯ್ಕೆಯಾಗಿರುವ ವಿಕೆಟ್​ ಕೀಪರ್​ ರಿಷಭ್​ ಪಂತ್​ಗೆ ವಿಂಡೀಸ್​ ಸರಣಿ ಅದ್ಭುತ ಅವಕಾಶ ಎಂದು ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡಕ್ಕೆ ಕಳೆದ ಒಂದು ದಶಕದಿಂದ ಎಂಎಸ್​ ಧೋನಿ ಪಾತ್ರ ನಿರ್ಣಾಯಕವಾಗಿತ್ತು. ಇದೀಗ ಧೋನಿ ಅನುಪಸ್ಥಿತಿಯಲ್ಲಿ ಟಿ20 ಚಾಂಪಿಯನ್​ ವಿಂಡೀಸ್​ ವಿರುದ್ಧ ಇಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.

ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ದೆಹಲಿಯ ಯುವ ವಿಕೆಟ್​​ ಕೀಪರ್​ ರಿಷಭ್​ ಪಂತ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಾಗಿದೆ. ಪಂದ್ಯಕ್ಕೂ ಮುನ್ನ ನಡೆ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ಕೊಹ್ಲಿ, ಪಂತ್​ಗೆ ಅವರ ಸಾಮರ್ಥ್ಯ ತೋರಿಸಲು ಈ ಸರಣಿ ಅದ್ಭುತ ಅವಕಾಶವಾಗಿದೆ. ಭಾರತ ತಂಡಕ್ಕೆ ಅವರ ಸೇವೆ ಪ್ರಮುಖವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಜೊತೆಗೆ ಉತ್ತಮ ಲಯವನ್ನು ಕಂಡುಕೊಳ್ಳಬೇಕಿದೆ. ಇದನ್ನು ನಾವು ರಿಷಭ್​ರಿಂದ ಭಯಸುತ್ತಿದ್ದೇವೆ.

2018ರ ಐಪಿಎಲ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ರಿಷಭ್​ ಪಂತ್​, ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಪದರ್ಶನ ನೀಡುವಲ್ಲಿ ವಿಫಲರಾಗಿದ್ದರು. ನಂತರ 2019ರ ಐಪಿಎಲ್​ನಲ್ಲಿ 448 ರನ್​ಗಳಿಸಿ ಗೇಮ್‌ ಫಿನಿಶರ್​ ಆಗಿ ಮಿಂಚಿದ್ದರು. ಇದೀಗ ಅವರ ಪಾತ್ರ ಭಾರತ ತಂಡಕ್ಕೆ ನಿರ್ಣಾಯಕವಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.