ETV Bharat / sports

ಫೈನಲ್​ ಕನಸಿನಲ್ಲಿರುವ ಕರ್ನಾಟಕಕ್ಕೆ ಪಡಿಕ್ಕಲ್​ ಆಸರೆ... ಗೆಲ್ಲಲು 2 ದಿನದಲ್ಲಿ ಬೇಕು 254 ರನ್​!

author img

By

Published : Mar 2, 2020, 6:15 PM IST

ನಿನ್ನೆ 74ಕ್ಕೆ 4 ವಿಕೆಟ್​ ಕಳೆದುಕೊಂಡಿದ್ದ ಬಂಗಾಳ ಮೂರನೇ ದಿನವಾದ ಇಂದು ಆ ಮೊತ್ತಕ್ಕೆ 87 ರನ್​ಗಳನ್ನು ಸೇರಿಸಿ ಸರ್ವಪತನ ಕಂಡಿತು. 40 ರನ್​ಗಳಿಸಿದ್ದ ನೈಟ್ ವಾಚ್​ಮನ್​ ಸುದೀಪ್​ ಚಟರ್ಜಿ 45 ರನ್​ಗಳಿಸಿ ಔಟಾದರು. ಮಜುಮ್ದಾರ್​ 41 ರನ್​ಗಳಿಸಿದರು. ಆದರೆ ಉಳಿದ ಬ್ಯಾಟ್ಸ್​ಮನ್​ಗಳು ರನ್​ಗಳಿಸಿದಂತೆ ತಡೆಯುವಲ್ಲಿ ಕರ್ನಾಟಕ ಬೌಲರ್​ಗಳು ಯಶಸ್ವಿಯಾದರು.

Ranji Trophy semifinal
ದೇವದತ್​ ಪಡಿಕ್ಕಲ್​-ಮಿಥುನ್​

ಕೋಲ್ಕತ್ತಾ: ಅದ್ಭುತ ಬೌಲಿಂಗ್​ ಪ್ರದರ್ಶನದ ಮೂಲಕ ಬಂಗಾಳವನ್ನು 161 ರನ್​ಗಳಿಗೆ ಆಲೌಟ್ ಮಾಡಿರುವ ಕರ್ನಾಟಕ ಫೈನಲ್​ ತಲುಪಬೇಕಾದರೆ 352 ರನ್​ಗಳ ಬೃಹತ್​ ಮೊತ್ತವನ್ನು ಚೇಸ್​ ಮಾಡಬೇಕಿದೆ.

ಪಶ್ಚಿಮ ಬಂಗಾಳ ಮೊದಲ ಇನ್ನಿಂಗ್ಸ್​ನಲ್ಲಿ 312 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 122 ರನ್​ಗಳಿಗೆ ಆಲೌಟ್​ ಆಗಿ 190ರನ್​ಗಳ ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಬೌಲಿಂಗ್​ ಪ್ರದರ್ಶನ ನೀಡಿದ ಕರ್ನಾಟಕ ಬಂಗಾಳವನ್ನು 161 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಆದರೂ ಕರ್ನಾಟಕ ಫೈನಲ್​ ತಲುಪಬೇಕಾದರೆ 351 ರನ್​ಗಳನ್ನು ಚೇಸ್​ ಮಾಡುವ ಕಠಿಣ ಸವಾಲನ್ನು ಸ್ವೀಕರಿಸಿದೆ.

ನಿನ್ನೆ 74ಕ್ಕೆ 4 ವಿಕೆಟ್​ ಕಳೆದುಕೊಂಡಿದ್ದ ಬಂಗಾಳ ಮೂರನೇ ದಿನವಾದ ಇಂದು ಆ ಮೊತ್ತಕ್ಕೆ 87 ರನ್​ಗಳನ್ನು ಸೇರಿಸಿ ಸರ್ವಪತನ ಕಂಡಿತು. 40 ರನ್​ಗಳಿಸಿದ್ದ ನೈಟ್ ವಾಚ್​ಮನ್​ ಸುದೀಪ್​ ಚಟರ್ಜಿ 45 ರನ್​ಗಳಿಸಿ ಔಟಾದರು. ಮಜುಮ್ದಾರ್​ 41 ರನ್​ಗಳಿಸಿದರು. ಆದರೆ ಉಳಿದ ಬ್ಯಾಟ್ಸ್​ಮನ್​ಗಳು ರನ್​ಗಳಿಸಿದಂತೆ ತಡೆಯುವಲ್ಲಿ ಕರ್ನಾಟಕ ಬೌಲರ್​ಗಳು ಯಶಸ್ವಿಯಾದರು.

ಅಭಿಮನ್ಯು ಮಿಥುನ್​ 4, ಕೆ ಗೌತಮ್​ 3, ರೋನಿತ್​ ಮೋರೆ 2, ಹಾಗೂ ಪ್ರಸಿದ್​ ಕೃಷ್ಣ ಒಂದು ವಿಕೆಟ್ ಪಡೆದು ಮಿಂಚಿದರು.

ಒಟ್ಟಾರೆ 352 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಭರವಸೆಯ ಬ್ಯಾಟ್ಸ್​ಮನ್ ಕೆಎಲ್​ ರಾಹುಲ್​ ಅಂಪೈರ್​ ನೀಡಿದ ಕೆಟ್ಟ ತೀರ್ಪಿಗೆ ಮೊದಲ ಓವರ್​ನಲ್ಲೇ ಬಲಿಯಾದರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ದೇವದತ್​ ಪಡಿಕ್ಕಲ್​ಎರಡನೇ ವಿಕೆಟ್​ಗೆ ಸಮರ್ಥ್​ ಜೊತೆ 57 ರನ್​ಗಳ ಜೊತೆಯಾಟ ನಡೆಸಿ ಆಘಾತದಿಂದ ಪಾರು ಮಾಡಿದರು. ಆದರೆ 26 ರನ್​ಗಳಿಸಿದ್ದ ಸಮರ್ಥ್​ ಆಕಾಶ್​ ದೀಪ್​ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ ಬಂದ ನಾಯಕ ಕರುಣ್​ ನಾಯರ್​ 6 ರನ್​ಗಳಿಗೆ ವಿಕೆಟ್​ ಒಪ್ಪಿಸುವ ಮೂಲಕ ಮತ್ತೆ ವೈಫಲ್ಯ ಅನುಭವಿಸಿದರು.

ಆದರೆ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿದ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ 109 ಎಸೆತಗಳಲ್ಲಿ 50 ರನ್​ಗಳಿಸಿ ಔಟಾಗದೆ ಉಳಿದಿದ್ದಾರೆ. ಇವರ ಜೊತೆಗೆ 11 ರನ್​ಗಳಿಸಿರುವ ಮನೀಷ್​ ಪಾಂಡೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಪಂದ್ಯ ಗೆಲ್ಲಲು ಕರ್ನಾಟಕ ತಂಡಕ್ಕೆ ಇನ್ನು 254 ರನ್​ಗಳ ಅಗತ್ಯವಿದ್ದು 2 ದಿನಗಳ ಆಟ ಬಾಕಿಯುಳಿದಿದೆ. ಈಗಾಗಲೆ ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ರಾಜ್ಯ ತಂಡಕ್ಕೆ ಅನುಭವಿ ಮನೀಷ್​ ಪಾಂಡೆ ಹಾಗೂ ಪಡಿಕ್ಕಲ್​ ಆಟ ಬಹಳ ಪ್ರಮುಖವಾಗಿದೆ.

ಕೋಲ್ಕತ್ತಾ: ಅದ್ಭುತ ಬೌಲಿಂಗ್​ ಪ್ರದರ್ಶನದ ಮೂಲಕ ಬಂಗಾಳವನ್ನು 161 ರನ್​ಗಳಿಗೆ ಆಲೌಟ್ ಮಾಡಿರುವ ಕರ್ನಾಟಕ ಫೈನಲ್​ ತಲುಪಬೇಕಾದರೆ 352 ರನ್​ಗಳ ಬೃಹತ್​ ಮೊತ್ತವನ್ನು ಚೇಸ್​ ಮಾಡಬೇಕಿದೆ.

ಪಶ್ಚಿಮ ಬಂಗಾಳ ಮೊದಲ ಇನ್ನಿಂಗ್ಸ್​ನಲ್ಲಿ 312 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 122 ರನ್​ಗಳಿಗೆ ಆಲೌಟ್​ ಆಗಿ 190ರನ್​ಗಳ ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಬೌಲಿಂಗ್​ ಪ್ರದರ್ಶನ ನೀಡಿದ ಕರ್ನಾಟಕ ಬಂಗಾಳವನ್ನು 161 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಆದರೂ ಕರ್ನಾಟಕ ಫೈನಲ್​ ತಲುಪಬೇಕಾದರೆ 351 ರನ್​ಗಳನ್ನು ಚೇಸ್​ ಮಾಡುವ ಕಠಿಣ ಸವಾಲನ್ನು ಸ್ವೀಕರಿಸಿದೆ.

ನಿನ್ನೆ 74ಕ್ಕೆ 4 ವಿಕೆಟ್​ ಕಳೆದುಕೊಂಡಿದ್ದ ಬಂಗಾಳ ಮೂರನೇ ದಿನವಾದ ಇಂದು ಆ ಮೊತ್ತಕ್ಕೆ 87 ರನ್​ಗಳನ್ನು ಸೇರಿಸಿ ಸರ್ವಪತನ ಕಂಡಿತು. 40 ರನ್​ಗಳಿಸಿದ್ದ ನೈಟ್ ವಾಚ್​ಮನ್​ ಸುದೀಪ್​ ಚಟರ್ಜಿ 45 ರನ್​ಗಳಿಸಿ ಔಟಾದರು. ಮಜುಮ್ದಾರ್​ 41 ರನ್​ಗಳಿಸಿದರು. ಆದರೆ ಉಳಿದ ಬ್ಯಾಟ್ಸ್​ಮನ್​ಗಳು ರನ್​ಗಳಿಸಿದಂತೆ ತಡೆಯುವಲ್ಲಿ ಕರ್ನಾಟಕ ಬೌಲರ್​ಗಳು ಯಶಸ್ವಿಯಾದರು.

ಅಭಿಮನ್ಯು ಮಿಥುನ್​ 4, ಕೆ ಗೌತಮ್​ 3, ರೋನಿತ್​ ಮೋರೆ 2, ಹಾಗೂ ಪ್ರಸಿದ್​ ಕೃಷ್ಣ ಒಂದು ವಿಕೆಟ್ ಪಡೆದು ಮಿಂಚಿದರು.

ಒಟ್ಟಾರೆ 352 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಭರವಸೆಯ ಬ್ಯಾಟ್ಸ್​ಮನ್ ಕೆಎಲ್​ ರಾಹುಲ್​ ಅಂಪೈರ್​ ನೀಡಿದ ಕೆಟ್ಟ ತೀರ್ಪಿಗೆ ಮೊದಲ ಓವರ್​ನಲ್ಲೇ ಬಲಿಯಾದರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ದೇವದತ್​ ಪಡಿಕ್ಕಲ್​ಎರಡನೇ ವಿಕೆಟ್​ಗೆ ಸಮರ್ಥ್​ ಜೊತೆ 57 ರನ್​ಗಳ ಜೊತೆಯಾಟ ನಡೆಸಿ ಆಘಾತದಿಂದ ಪಾರು ಮಾಡಿದರು. ಆದರೆ 26 ರನ್​ಗಳಿಸಿದ್ದ ಸಮರ್ಥ್​ ಆಕಾಶ್​ ದೀಪ್​ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ ಬಂದ ನಾಯಕ ಕರುಣ್​ ನಾಯರ್​ 6 ರನ್​ಗಳಿಗೆ ವಿಕೆಟ್​ ಒಪ್ಪಿಸುವ ಮೂಲಕ ಮತ್ತೆ ವೈಫಲ್ಯ ಅನುಭವಿಸಿದರು.

ಆದರೆ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿದ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ 109 ಎಸೆತಗಳಲ್ಲಿ 50 ರನ್​ಗಳಿಸಿ ಔಟಾಗದೆ ಉಳಿದಿದ್ದಾರೆ. ಇವರ ಜೊತೆಗೆ 11 ರನ್​ಗಳಿಸಿರುವ ಮನೀಷ್​ ಪಾಂಡೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಪಂದ್ಯ ಗೆಲ್ಲಲು ಕರ್ನಾಟಕ ತಂಡಕ್ಕೆ ಇನ್ನು 254 ರನ್​ಗಳ ಅಗತ್ಯವಿದ್ದು 2 ದಿನಗಳ ಆಟ ಬಾಕಿಯುಳಿದಿದೆ. ಈಗಾಗಲೆ ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ರಾಜ್ಯ ತಂಡಕ್ಕೆ ಅನುಭವಿ ಮನೀಷ್​ ಪಾಂಡೆ ಹಾಗೂ ಪಡಿಕ್ಕಲ್​ ಆಟ ಬಹಳ ಪ್ರಮುಖವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.