ETV Bharat / sports

2021ರ ಐಪಿಎಲ್​ಗೂ ಎಂಎಸ್​ ಧೋನಿಯೇ ನಮ್ಮ ತಂಡದ ನಾಯಕ: ಸಿಎಸ್​ಕೆ ಸಿಇಒ ವಿಶ್ವನಾಥನ್

author img

By

Published : Oct 27, 2020, 6:52 PM IST

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಎಂಎಸ್​ ಧೋನಿ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಕಾರಣ ಮುಂದಿನ ಆವೃತ್ತಿಯಲ್ಲಿ ಅವರು ಸಿಎಸ್​ಕೆ ಭಾಗವಾಗುವ ಸಾಧ್ಯತೆ ಕಡಿಮೆ ಎಂದು ವದಂತಿಗಳಿದ್ದವು. ಆದರೆ, ಸಿಎಸ್​ಕೆ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಪ್ರತಿಕ್ರಿಯಿಸಿದ್ದು, ಧೋನಿ 2021ರ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​
ಎಂಎಸ್ ಧೋನಿ

ದುಬೈ: ಐಪಿಎಲ್​ನಲ್ಲಿ ತಾನಾಡಿದ​ ಎಲ್ಲ ಆವೃತ್ತಿಗಳಲ್ಲೂ ಪ್ಲೇ ಆಫ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಐಪಿಎಲ್​ನಲ್ಲಿ ಮೊದಲ ಬಾರಿಗೆ ಗುಂಪು ಹಂತದಿಂದ ನಿರ್ಗಮಿಸುತ್ತಿದೆ.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಎಂಎಸ್​ ಧೋನಿ, ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಕಾರಣ ಮುಂದಿನ ಆವೃತ್ತಿಯಲ್ಲಿ ಅವರು ಸಿಎಸ್​ಕೆ ಭಾಗವಾಗುವ ಸಾಧ್ಯತೆ ಕಡಿಮೆ ಎಂದು ವದಂತಿಗಳಿದ್ದವು. ಆದರೆ, ಸಿಎಸ್​ಕೆ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಪ್ರತಿಕ್ರಿಯಿಸಿದ್ದು, ಧೋನಿ 2021ರ ಆವೃತ್ತಿಯಲ್ಲಿ ತಂಡ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

" ಧೋನಿ ಖಂಡಿತವಾಗಿ 2021ರ ಐಪಿಎಲ್​ನಲ್ಲಿ ಸಿಎಸ್‌ಕೆ ಮುನ್ನಡೆಸಲಿದ್ದಾರೆ ಎಂಬ ನಂಬಿಕೆ ನನಗಿದೆ. ಟೂರ್ನಮೆಂಟ್​ನಲ್ಲಿ ಅವರು ನಮಗೆ ಮೂರು ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದಾರೆ. ನಮ್ಮ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯದ ಮೊದಲ ವರ್ಷ ಇದಾಗಿದೆ. ಆದರೆ, ಬೇರೆ ಯಾವ ತಂಡಗಳೂ ಈ ಸಾಧನೆ ಮಾಡಿಲ್ಲ. ಈ ವರ್ಷ ಕೆಟ್ಟ ವರ್ಷವಾಗಿದೆ. ಆದರೆ, ಅದಕ್ಕಾಗಿ ನಾಯಕನನ್ನು ಬದಲಾಯಿಸಬೇಕು ಎಂಬುದು ನಮ್ಮ ತಲೆಯಲ್ಲಿಲ್ಲ ಎಂದು " ವಿಶ್ವನಾಥನ್ ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

" 2020ರ ಆವೃತ್ತಿಯಲ್ಲಿ ನಾವು ಈ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ನಾವು ಗೆಲ್ಲಬೇಕಾದ ಪಂದ್ಯಗಳನ್ನ ಕಳೆದುಕೊಂಡಿದ್ದೇವೆ. ಅದು ನಮ್ಮನ್ನು ಹಿಂದಕ್ಕೆ ತಳ್ಳಿದೆ. ತಂಡದಲ್ಲಿ ಕೋವಿಡ್ ಪ್ರಕರಣದ ಹೊಡೆತದ ಜೊತೆಗೆ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅಂತಹ ಅನುಭವಿಗಳ ಅನುಪಸ್ಥಿತಿ ತಂಡದ ಸಮತೋಲನವನ್ನು ಗೊಂದಲಗೊಳಿಸಿತು "ಎಂದಿದ್ದಾರೆ.

ದುಬೈ: ಐಪಿಎಲ್​ನಲ್ಲಿ ತಾನಾಡಿದ​ ಎಲ್ಲ ಆವೃತ್ತಿಗಳಲ್ಲೂ ಪ್ಲೇ ಆಫ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಐಪಿಎಲ್​ನಲ್ಲಿ ಮೊದಲ ಬಾರಿಗೆ ಗುಂಪು ಹಂತದಿಂದ ನಿರ್ಗಮಿಸುತ್ತಿದೆ.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಎಂಎಸ್​ ಧೋನಿ, ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಕಾರಣ ಮುಂದಿನ ಆವೃತ್ತಿಯಲ್ಲಿ ಅವರು ಸಿಎಸ್​ಕೆ ಭಾಗವಾಗುವ ಸಾಧ್ಯತೆ ಕಡಿಮೆ ಎಂದು ವದಂತಿಗಳಿದ್ದವು. ಆದರೆ, ಸಿಎಸ್​ಕೆ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಪ್ರತಿಕ್ರಿಯಿಸಿದ್ದು, ಧೋನಿ 2021ರ ಆವೃತ್ತಿಯಲ್ಲಿ ತಂಡ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

" ಧೋನಿ ಖಂಡಿತವಾಗಿ 2021ರ ಐಪಿಎಲ್​ನಲ್ಲಿ ಸಿಎಸ್‌ಕೆ ಮುನ್ನಡೆಸಲಿದ್ದಾರೆ ಎಂಬ ನಂಬಿಕೆ ನನಗಿದೆ. ಟೂರ್ನಮೆಂಟ್​ನಲ್ಲಿ ಅವರು ನಮಗೆ ಮೂರು ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದಾರೆ. ನಮ್ಮ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯದ ಮೊದಲ ವರ್ಷ ಇದಾಗಿದೆ. ಆದರೆ, ಬೇರೆ ಯಾವ ತಂಡಗಳೂ ಈ ಸಾಧನೆ ಮಾಡಿಲ್ಲ. ಈ ವರ್ಷ ಕೆಟ್ಟ ವರ್ಷವಾಗಿದೆ. ಆದರೆ, ಅದಕ್ಕಾಗಿ ನಾಯಕನನ್ನು ಬದಲಾಯಿಸಬೇಕು ಎಂಬುದು ನಮ್ಮ ತಲೆಯಲ್ಲಿಲ್ಲ ಎಂದು " ವಿಶ್ವನಾಥನ್ ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

" 2020ರ ಆವೃತ್ತಿಯಲ್ಲಿ ನಾವು ಈ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ನಾವು ಗೆಲ್ಲಬೇಕಾದ ಪಂದ್ಯಗಳನ್ನ ಕಳೆದುಕೊಂಡಿದ್ದೇವೆ. ಅದು ನಮ್ಮನ್ನು ಹಿಂದಕ್ಕೆ ತಳ್ಳಿದೆ. ತಂಡದಲ್ಲಿ ಕೋವಿಡ್ ಪ್ರಕರಣದ ಹೊಡೆತದ ಜೊತೆಗೆ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅಂತಹ ಅನುಭವಿಗಳ ಅನುಪಸ್ಥಿತಿ ತಂಡದ ಸಮತೋಲನವನ್ನು ಗೊಂದಲಗೊಳಿಸಿತು "ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.