ETV Bharat / sports

ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡ ಪ್ರಕಟ: ಸಂಜುಗೆ ನಾಯಕತ್ವ, ಶ್ರೀಶಾಂತ್​ಗೂ ಅವಕಾಶ

author img

By

Published : Dec 30, 2020, 5:20 PM IST

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವಾಗ ಮ್ಯಾಚ್​ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದ್ದ ಶ್ರೀಶಾಂತ್ ಆಜೀವ ನಿಷೇಧಕ್ಕೊಳಗಾಗಿದ್ದರು. ನಂತರ ಅವರ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿತ್ತು. ಕಳೆದ ಸೆಪ್ಟೆಂಬರ್​​ನಲ್ಲಿ ಅವರ ನಿಷೇಧ ಅಂತ್ಯಗೊಂಡಿದ್ದು, ಇದೀಗ ಕ್ರಿಕೆಟ್​ನಲ್ಲಿ ಮತ್ತೊಂದು ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ಕೇರಳ ತಂಡಕ್ಕೆ ಶ್ರೀಶಾಂತ್ ಕಮ್​ಬ್ಯಾಕ್​
ಕೇರಳ ತಂಡಕ್ಕೆ ಶ್ರೀಶಾಂತ್ ಕಮ್​ಬ್ಯಾಕ್​

ಕೊಚ್ಚಿ: ಮ್ಯಾಚ್​ ಫಿಕ್ಸಿಂಗ್​ನ ನಿಷೇಧ ಶಿಕ್ಷೆಯಿಂದ ಹೊರಬಂದಿರುವ ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್​ ದೇಶಿ ಕ್ರಿಕೆಟ್​ಗೆ ಮರಳಿದ್ದಾರೆ. ಜನವರಿ 10ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೇರಳ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವಾಗ ಮ್ಯಾಚ್​ ಫಿಕ್ಸಿಂಗ್​ ಆರೋಪಕ್ಕೆ ಸಿಲುಕಿ ಆಜೀವ ನಿಷೇಧಕ್ಕೊಳಗಾಗಿದ್ದರು. ನಂತರ ಅವರ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿತ್ತು. ಕಳೆದ ಸೆಪ್ಟೆಂಬರ್​​ನಲ್ಲಿ ಅವರ ನಿಷೇಧ ಅಂತ್ಯಗೊಂಡಿದ್ದು, ಇದೀಗ ಕ್ರಿಕೆಟ್​ನಲ್ಲಿ ಮತ್ತೊಂದು ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

"ತನ್ನನ್ನು ತಾನೆ ಪುನರ್ ​ನಿರ್ಮಿಸಿಕೊಳ್ಳುವ ಮನನೊಂದ ಮನುಷ್ಯನಿಗಿಂತ ಬಲಶಾಲಿ ಬೇರೇನೂ ಇರುವುದಿಲ್ಲ... ನನಗೆ ಕಠಿಣ ಸಂದರ್ಭದಲ್ಲಿ ಬೆಂಬಲ ಮತ್ತು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳು." ಎಂದು ಶ್ರೀಶಾಂತ್​ ಟ್ವೀಟ್​ ಮಾಡಿದ್ದಾರೆ.

ಕೇರಳ ತಂಡ
ಕೇರಳ ತಂಡ

ಕೇರಳ ಕ್ರಿಕೆಟ್ ಅಸೋಸಿಯೇಷನ್​ ಘೋಷಿಸಿರುವ ತಂಡದಲ್ಲಿ ಸಂಜು ಸಾಮ್ಸನ್​ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸಚಿನ್ ಬೇಬಿ ಉಪನಾಯಕನಾಗಿದ್ದಾರೆ. ಇದೇ ತಂಡದಲ್ಲಿ ಶ್ರೀಶಾಂತ್, ರಾಬಿನ್ ಉತ್ತಪ್ಪ, ಬಾಸಿಲ್ ತಂಪಿ ಅವರಂಥ ಅನುಭವಿಕ ಆಟಗಾರರು ಇದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡ

ಸಂಜು ಸಾಮ್ಸನ್​ (ನಾಯಕ), ಸಚಿನ್ ಬೇಬಿ (ಉಪನಾಯಕ), ಜಲಜ್ ಸಕ್ಷೇನಾ, ರಾಬಿನ್ ಉತ್ತಪ್ಪ, ವಿಷ್ಣು ವಿನೋದ್, ಸಲ್ಮಾನ್​ ನಿಝಾರ್​, ಬಾಸಿಲ್ ತಂಪಿ, ಎಸ್​. ಶ್ರೀಶಾಂತ್​, ನಿಧೀಶ್​ ಎಂ.ಡಿ, ಆಸಿಫ್ ಕೆ.ಎಂ, ಅಕ್ಷಯ್ ಚಂದ್ರನ್, ಮಿಧುನ್ ಪಿಕೆ, ಅಭಿಷೇಕ್​ ಮೋಹನ್ ಎಸ್​ಎಲ್, ವಿನೂಪ್ ಎಸ್​ ಮನೋಹರನ್, ಮೊಹಮ್ಮದ್​ ಅಜರುದ್ದೀನ್​ ಎಂ, ರೋಹನ್ ಎಸ್​ ಕಣ್ಣುಮ್ಮಲ್​, ಮಿಧುನ್​ ಎಸ್​, ವತ್ಸಲ್ ಗೋವಿಂದ್ ಶರ್ಮಾ, ರೋಜಿತ್ ಕೆಜಿ, ಶ್ರೀರೂಪ್​ ಎಂ.ಪಿ.

ಕೊಚ್ಚಿ: ಮ್ಯಾಚ್​ ಫಿಕ್ಸಿಂಗ್​ನ ನಿಷೇಧ ಶಿಕ್ಷೆಯಿಂದ ಹೊರಬಂದಿರುವ ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್​ ದೇಶಿ ಕ್ರಿಕೆಟ್​ಗೆ ಮರಳಿದ್ದಾರೆ. ಜನವರಿ 10ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೇರಳ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವಾಗ ಮ್ಯಾಚ್​ ಫಿಕ್ಸಿಂಗ್​ ಆರೋಪಕ್ಕೆ ಸಿಲುಕಿ ಆಜೀವ ನಿಷೇಧಕ್ಕೊಳಗಾಗಿದ್ದರು. ನಂತರ ಅವರ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿತ್ತು. ಕಳೆದ ಸೆಪ್ಟೆಂಬರ್​​ನಲ್ಲಿ ಅವರ ನಿಷೇಧ ಅಂತ್ಯಗೊಂಡಿದ್ದು, ಇದೀಗ ಕ್ರಿಕೆಟ್​ನಲ್ಲಿ ಮತ್ತೊಂದು ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

"ತನ್ನನ್ನು ತಾನೆ ಪುನರ್ ​ನಿರ್ಮಿಸಿಕೊಳ್ಳುವ ಮನನೊಂದ ಮನುಷ್ಯನಿಗಿಂತ ಬಲಶಾಲಿ ಬೇರೇನೂ ಇರುವುದಿಲ್ಲ... ನನಗೆ ಕಠಿಣ ಸಂದರ್ಭದಲ್ಲಿ ಬೆಂಬಲ ಮತ್ತು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳು." ಎಂದು ಶ್ರೀಶಾಂತ್​ ಟ್ವೀಟ್​ ಮಾಡಿದ್ದಾರೆ.

ಕೇರಳ ತಂಡ
ಕೇರಳ ತಂಡ

ಕೇರಳ ಕ್ರಿಕೆಟ್ ಅಸೋಸಿಯೇಷನ್​ ಘೋಷಿಸಿರುವ ತಂಡದಲ್ಲಿ ಸಂಜು ಸಾಮ್ಸನ್​ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸಚಿನ್ ಬೇಬಿ ಉಪನಾಯಕನಾಗಿದ್ದಾರೆ. ಇದೇ ತಂಡದಲ್ಲಿ ಶ್ರೀಶಾಂತ್, ರಾಬಿನ್ ಉತ್ತಪ್ಪ, ಬಾಸಿಲ್ ತಂಪಿ ಅವರಂಥ ಅನುಭವಿಕ ಆಟಗಾರರು ಇದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡ

ಸಂಜು ಸಾಮ್ಸನ್​ (ನಾಯಕ), ಸಚಿನ್ ಬೇಬಿ (ಉಪನಾಯಕ), ಜಲಜ್ ಸಕ್ಷೇನಾ, ರಾಬಿನ್ ಉತ್ತಪ್ಪ, ವಿಷ್ಣು ವಿನೋದ್, ಸಲ್ಮಾನ್​ ನಿಝಾರ್​, ಬಾಸಿಲ್ ತಂಪಿ, ಎಸ್​. ಶ್ರೀಶಾಂತ್​, ನಿಧೀಶ್​ ಎಂ.ಡಿ, ಆಸಿಫ್ ಕೆ.ಎಂ, ಅಕ್ಷಯ್ ಚಂದ್ರನ್, ಮಿಧುನ್ ಪಿಕೆ, ಅಭಿಷೇಕ್​ ಮೋಹನ್ ಎಸ್​ಎಲ್, ವಿನೂಪ್ ಎಸ್​ ಮನೋಹರನ್, ಮೊಹಮ್ಮದ್​ ಅಜರುದ್ದೀನ್​ ಎಂ, ರೋಹನ್ ಎಸ್​ ಕಣ್ಣುಮ್ಮಲ್​, ಮಿಧುನ್​ ಎಸ್​, ವತ್ಸಲ್ ಗೋವಿಂದ್ ಶರ್ಮಾ, ರೋಜಿತ್ ಕೆಜಿ, ಶ್ರೀರೂಪ್​ ಎಂ.ಪಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.