ETV Bharat / sports

ಧೋನಿ ನಾಯಕತ್ವದಲ್ಲಿ ಆಡಿದ್ದು ನನ್ನ ಯಶಸ್ಸಿಗೆ ಪ್ರಮುಖ ಕಾರಣ: ವಾಷಿಂಗ್ಟನ್ ಸುಂದರ್​ - ms dhoni csk

13ನೇ ಆವೃತ್ತಿಯಲ್ಲಿ ಪವರ್​ಪ್ಲೇ ಒಳಗೆ ಸುಂದರ್​ ಅವರನ್ನು ಬಳಸಿಕೊಳ್ಳುವ ಮೂಲಕ ಅವರನ್ನು ಒಬ್ಬ ಅದ್ಭುತ ಸ್ಪಿನ್ನರ್​ ಆಗಿ ನಿಗ್ರಹಿಸಿದ್ದಕ್ಕಾಗಿ ಎಲ್ಲರೂ ನಾಯಕ ವಿರಾಟ್ ಕೊಹ್ಲಿಗೆ ಮನ್ನಣೆ ನೀಡುತ್ತಿದ್ದರೆ, ಯುವ ಬೌಲರ್ ಮಾತ್ರ ತಾವೂ ಒಬ್ಬ ಕ್ರಿಕೆಟಿಗನಾಗಿ ಯಶಸ್ವಿಯಾಗಲು ಭಾರತ ತಂಡದ ಮಾಜಿ ಹಾಗೂ ಸಿಎಸ್​ಕೆ ತಂಡದ ನಾಯಕ ಎಂಎಸ್​ ಧೋನಿ ಎಂದು ಹೇಳಿದ್ದಾರೆ.

ವಾಷಿಂಗ್ಟನ್ ಸುಂದರ್​
ವಾಷಿಂಗ್ಟನ್ ಸುಂದರ್​
author img

By

Published : Oct 15, 2020, 10:45 PM IST

ಶಾರ್ಜಾ: 2020ರಲ್ಲಿ ಅದ್ಭುತ ಪ್ರದರ್ಶನ ತೋರಿ ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿರುವ ಆರ್​ಸಿಬಿ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್​ ತಮ್ಮ ಯಶಸ್ಸಿನ ಶ್ರೇಯವನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿಗೆ ಅರ್ಪಿಸಿದ್ದಾರೆ.

2020ರ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಯಶಸ್ಸಿನಲ್ಲಿ ಕೊಹ್ಲಿ, ಪಡಿಕ್ಕಲ್​, ವಿಲಿಯರ್ಸ್​, ಚಹಾಲ್​ ಪಾತ್ರ ಎಷ್ಟಿದೆಯೋ ಅಷ್ಟೇ ಪಾತ್ರ ವಾಷಿಂಗ್ಟನ್ ಇದೆ. ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಿಂದ ಕೇವಲ 6 ವಿಕೆಟ್ ಪಡೆದಿದ್ದಾರೆ. ಆದರೆ ಅವೆಲ್ಲವೂ ದೊಡ್ಡ ಬ್ಯಾಟ್ಸ್​ಮನ್​ಗಳು ಎನ್ನುವುದು ಒಂದು ಕಡೆಯಾದರೆ, ಸುಂದರೆ ಎಕಾನಮಿ ರೇಟ್​ 4.9 ಎನ್ನುವುದೇ ಅವರ ಬೌಲಿಂಗ್​ನ ವಿಶೇಷತೆ.

13ನೇ ಆವೃತ್ತಿಯಲ್ಲಿ ಪವರ್​ಪ್ಲೇ ಒಳಗೆ ಸುಂದರ್​ ಅವರನ್ನು ಬಳಸಿಕೊಳ್ಳುವ ಮೂಲಕ ಅವರನ್ನು ಒಬ್ಬ ಅದ್ಭುತ ಸ್ಪಿನ್ನರ್​ ಅಗಿ ನಿಗ್ರಹಿಸಿದ್ದಕ್ಕಾಗಿ ಎಲ್ಲರೂ ನಾಯಕ ವಿರಾಟ್ ಕೊಹ್ಲಿಗೆ ಮನ್ನಣೆ ನೀಡುತ್ತಿದ್ದರೆ, ಯುವ ಬೌಲರ್ ಮಾತ್ರ ತಾವೂ ಒಬ್ಬ ಕ್ರಿಕೆಟಿಗನಾಗಿ ಯಶಸ್ವಿಯಾಗಲು ಭಾರತ ತಂಡದ ಮಾಜಿ ಹಾಗೂ ಸಿಎಸ್​ಕೆ ತಂಡದ ನಾಯಕ ಎಂಎಸ್​ ಧೋನಿ ಎಂದು ಹೇಳಿದ್ದಾರೆ.

2017ರಲ್ಲಿ ಪುಣೆ ಸೂಪರ್​ಜೇಂಟ್ಸ್​ ಪರ ಆಡುವ ವೇಳೆ ಧೋನಿ ತಮ್ಮನ್ನು ಒಬ್ಬ ಉತ್ತಮ ಬೌಲರ್​ ಆಗಲು ನೆರವಾಗಿದ್ದರು ಎಂದಿದ್ದಾರೆ. ಸುಂದರ್​ ಆವೃತ್ತಿಯಲ್ಲಿ 11 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದರು.

" ನಾನು ಮಾಹಿ ಭಾಯ್ ನೇತೃತ್ವದಲ್ಲಿ ಆರ್‌ಪಿಎಸ್‌ ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ನಾನೊಬ್ಬ ಕ್ರಿಕೆಟಿಗನಾಗಿ ಬೆಳೆಯಲು ಸಾಕಷ್ಟು ನೆರವಾಯಿತು. ಆಗಿನಿಂದಲೂ ನಾನು ಬೌಲರ್‌ ಆಗಿ ಸಾಕಷ್ಟು ಕಲಿಯುತ್ತಿದ್ದೇನೆ ಹಾಗೂ ಒಬ್ಬ ಬೌಲರ್​ ಆಗಿ ಬೆಳೆಯುತ್ತಿದ್ದೇನೆ" ಎಂದು ಹೇಳಿದ್ದಾರೆ.

ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿರುವ 21 ವರ್ಷದ ಆಟಗಾರ, 'ವಿರಾಟ್‌ ನನ್ನ ಮೇಲೆ ಸಾಕಷ್ಟು ವಿಶ್ವಾಸ ಇರಿಸಿರುವುದಕ್ಕೆ ಹಾಗೂ ಪವರ್‌ ಪ್ಲೇ ನಲ್ಲಿ ನನಗೆ ಬೌಲಿಂಗ್ ಮಾಡಲು ಅವಕಾಶ ನೀಡುತ್ತಿರುವುದಕ್ಕೆ ತುಂಬಾ ಸಂತೋಷವಿದೆ. ಒಬ್ಬ ಫ್ರಿಂಗರ್​ ಸ್ಪಿನ್ನರ್​ಗೆ ನಾಯಕ ತನ್ನ ಮೇಲೆ ಹೊಂದಿರುವ ವಿಶ್ವಾಸವು ತುಂಬಾ ಪ್ರಮುಖವಾಗಿರುತ್ತದೆ. ನಾನು ಆರ್​ಸಿಬಿಗೆ ಬ್ಯಾಟ್​ ಮೂಲಕ ಗೆಲುವು ತಂದುಕೊಡಲು ಇಷ್ಟಪಡುತ್ತೇನೆ. ಅದಕ್ಕಾಗಿ ಬ್ಯಾಟಿಂಗ್ ಕಡೆಯೂ ಗಮನ ನೀಡುತ್ತಿರುವುದಾಗಿ ಹೇಳಿದ್ದಾರೆ.

ಶಾರ್ಜಾ: 2020ರಲ್ಲಿ ಅದ್ಭುತ ಪ್ರದರ್ಶನ ತೋರಿ ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿರುವ ಆರ್​ಸಿಬಿ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್​ ತಮ್ಮ ಯಶಸ್ಸಿನ ಶ್ರೇಯವನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿಗೆ ಅರ್ಪಿಸಿದ್ದಾರೆ.

2020ರ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಯಶಸ್ಸಿನಲ್ಲಿ ಕೊಹ್ಲಿ, ಪಡಿಕ್ಕಲ್​, ವಿಲಿಯರ್ಸ್​, ಚಹಾಲ್​ ಪಾತ್ರ ಎಷ್ಟಿದೆಯೋ ಅಷ್ಟೇ ಪಾತ್ರ ವಾಷಿಂಗ್ಟನ್ ಇದೆ. ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಿಂದ ಕೇವಲ 6 ವಿಕೆಟ್ ಪಡೆದಿದ್ದಾರೆ. ಆದರೆ ಅವೆಲ್ಲವೂ ದೊಡ್ಡ ಬ್ಯಾಟ್ಸ್​ಮನ್​ಗಳು ಎನ್ನುವುದು ಒಂದು ಕಡೆಯಾದರೆ, ಸುಂದರೆ ಎಕಾನಮಿ ರೇಟ್​ 4.9 ಎನ್ನುವುದೇ ಅವರ ಬೌಲಿಂಗ್​ನ ವಿಶೇಷತೆ.

13ನೇ ಆವೃತ್ತಿಯಲ್ಲಿ ಪವರ್​ಪ್ಲೇ ಒಳಗೆ ಸುಂದರ್​ ಅವರನ್ನು ಬಳಸಿಕೊಳ್ಳುವ ಮೂಲಕ ಅವರನ್ನು ಒಬ್ಬ ಅದ್ಭುತ ಸ್ಪಿನ್ನರ್​ ಅಗಿ ನಿಗ್ರಹಿಸಿದ್ದಕ್ಕಾಗಿ ಎಲ್ಲರೂ ನಾಯಕ ವಿರಾಟ್ ಕೊಹ್ಲಿಗೆ ಮನ್ನಣೆ ನೀಡುತ್ತಿದ್ದರೆ, ಯುವ ಬೌಲರ್ ಮಾತ್ರ ತಾವೂ ಒಬ್ಬ ಕ್ರಿಕೆಟಿಗನಾಗಿ ಯಶಸ್ವಿಯಾಗಲು ಭಾರತ ತಂಡದ ಮಾಜಿ ಹಾಗೂ ಸಿಎಸ್​ಕೆ ತಂಡದ ನಾಯಕ ಎಂಎಸ್​ ಧೋನಿ ಎಂದು ಹೇಳಿದ್ದಾರೆ.

2017ರಲ್ಲಿ ಪುಣೆ ಸೂಪರ್​ಜೇಂಟ್ಸ್​ ಪರ ಆಡುವ ವೇಳೆ ಧೋನಿ ತಮ್ಮನ್ನು ಒಬ್ಬ ಉತ್ತಮ ಬೌಲರ್​ ಆಗಲು ನೆರವಾಗಿದ್ದರು ಎಂದಿದ್ದಾರೆ. ಸುಂದರ್​ ಆವೃತ್ತಿಯಲ್ಲಿ 11 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದರು.

" ನಾನು ಮಾಹಿ ಭಾಯ್ ನೇತೃತ್ವದಲ್ಲಿ ಆರ್‌ಪಿಎಸ್‌ ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ನಾನೊಬ್ಬ ಕ್ರಿಕೆಟಿಗನಾಗಿ ಬೆಳೆಯಲು ಸಾಕಷ್ಟು ನೆರವಾಯಿತು. ಆಗಿನಿಂದಲೂ ನಾನು ಬೌಲರ್‌ ಆಗಿ ಸಾಕಷ್ಟು ಕಲಿಯುತ್ತಿದ್ದೇನೆ ಹಾಗೂ ಒಬ್ಬ ಬೌಲರ್​ ಆಗಿ ಬೆಳೆಯುತ್ತಿದ್ದೇನೆ" ಎಂದು ಹೇಳಿದ್ದಾರೆ.

ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿರುವ 21 ವರ್ಷದ ಆಟಗಾರ, 'ವಿರಾಟ್‌ ನನ್ನ ಮೇಲೆ ಸಾಕಷ್ಟು ವಿಶ್ವಾಸ ಇರಿಸಿರುವುದಕ್ಕೆ ಹಾಗೂ ಪವರ್‌ ಪ್ಲೇ ನಲ್ಲಿ ನನಗೆ ಬೌಲಿಂಗ್ ಮಾಡಲು ಅವಕಾಶ ನೀಡುತ್ತಿರುವುದಕ್ಕೆ ತುಂಬಾ ಸಂತೋಷವಿದೆ. ಒಬ್ಬ ಫ್ರಿಂಗರ್​ ಸ್ಪಿನ್ನರ್​ಗೆ ನಾಯಕ ತನ್ನ ಮೇಲೆ ಹೊಂದಿರುವ ವಿಶ್ವಾಸವು ತುಂಬಾ ಪ್ರಮುಖವಾಗಿರುತ್ತದೆ. ನಾನು ಆರ್​ಸಿಬಿಗೆ ಬ್ಯಾಟ್​ ಮೂಲಕ ಗೆಲುವು ತಂದುಕೊಡಲು ಇಷ್ಟಪಡುತ್ತೇನೆ. ಅದಕ್ಕಾಗಿ ಬ್ಯಾಟಿಂಗ್ ಕಡೆಯೂ ಗಮನ ನೀಡುತ್ತಿರುವುದಾಗಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.