ETV Bharat / sports

ನಮ್ಮ ಯುವ ಆಟಗಾರರು ಅನುಭವಿಗಳಿದ್ದಾರೆ, ಎದುರಾಳಿಗಳಿಗೆ ತಲೆನೋವು ತರಬಲ್ಲರು: ಕೊಹ್ಲಿ

author img

By

Published : Apr 8, 2021, 9:17 PM IST

ಇತ್ತೀಚಿನ ಟೆಸ್ಟ್​ ಸರಣಿಗಳಲ್ಲಿ ಮೊಹಮ್ಮದ್ ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್​ ಪ್ರದರ್ಶನವನ್ನು ಕೊಂಡಾಡಿರುವ ಕೊಹ್ಲಿ, ಐಪಿಎಲ್​ನಲ್ಲಿ ಅವರಿಬ್ಬರ ಪ್ರದರ್ಶನ ಆಕರ್ಷಕವಾಗಿರಲಿದೆ ಎಂದಿದ್ದಾರೆ.

ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ
ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ

ಚೆನ್ನೈ: ವಾಷಿಂಗ್ಟನ್ ಸುಂದರ್​ ಮತ್ತು ಮೊಹಮ್ಮದ್ ಸಿರಾಜ್​ ಅವರು ಭಾರತ ತಂಡಕ್ಕೆ ತೋರಿದ ಸಾಹಸ ಪ್ರದರ್ಶನವೇ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವಾಗ ಅವರ ಆತ್ಮವಿಶ್ವಾಸ ಹೆಚ್ಚಾಗಲು ನೆರವಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ನೇತೃತ್ವದ ಆರ್​ಸಿಬಿ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತಂಡವನ್ನು 14ನೇ ಆವೃತ್ತಿಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಎದುರಿಸಲಿದೆ. ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯ ಜರುಗಲಿದೆ.

ತಾವು ಯುವ ಕ್ರಿಕೆಟಿಗನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡಿದ ನಂತರ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ತಿಳಿಸಿರುವ ಕೊಹ್ಲಿ, ಅದೇ ರೀತಿ ಸಿರಾಜ್ ಮತ್ತು ಸುಂದರ್​ರಲ್ಲೂ ಈ ವರ್ಷ ಆಗಬಹುದು ಎಂದು ಹೇಳಿದ್ದಾರೆ. ಏಕೆಂದರೆ ಅವರಿಬ್ಬರು ಇತ್ತೀಚಿನ ಟೆಸ್ಟ್​ ಸರಣಿಗಳಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.

ವಾಷಿಂಗ್ಟನ್ ಸುಂದರ್, ಕೊಹ್ಲಿ, ಸಿರಾಜ್
ವಾಷಿಂಗ್ಟನ್ ಸುಂದರ್, ಕೊಹ್ಲಿ, ಸಿರಾಜ್

ಇದನ್ನು ಓದಿ:ಸರಣಿಯುದ್ದಕ್ಕೂ ಆಟದಲ್ಲಿ ಫುಲ್ ಎನರ್ಜಿ ತೋರಿಸಿ... ಆರ್​ಸಿಬಿ ಬಾಯ್ಸ್​ಗೆ ಕೊಹ್ಲಿ ಕಿವಿಮಾತು

"ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಇದ್ದ ವಿಶ್ವಾಸವನ್ನು ಐಪಿಎಲ್​ನಲ್ಲಿ ಮುಂದುವರಿಸಿದ್ದೆ. ಇದೀಗ ವಾಶಿ, ಸೈನಿ, ಸಿರಾಜ್​ ಅವರೂ ಕೂಡ ತಮ್ಮದೇ ಆದ ಸಾಮರ್ಥ್ಯದಿಂದ ಬರುತ್ತಿದ್ದಾರೆ. ಯುಜಿ(ಚಹಾಲ್) ಕೂಡ ಕೆಲವು ವರ್ಷಗಳಿಂದ ತಂಡದಲ್ಲಿದ್ದಾರೆ. ಈ ರೀತಿಯ ಆಟಗಾರರು ತಂಡವನ್ನು ಬಲವಾಗಿ ಕಟ್ಟಲು ಮತ್ತು ಸರಿಯಾದ ದಿಕ್ಕಿನಲ್ಲಿ ಸಾಗಿಸಲು ನಮಗೆ ಸಹಾಯ ಮಾಡುತ್ತಾರೆ" ಎಂದು ಮಾಧ್ಯಮಗೋಷ್ಠಿಯಲ್ಲಿ ಯುವ ಆಟಗಾರರ ಬಗ್ಗೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮ ಯುವ ಆಟಗಾರರು ಹೆಚ್ಚು ಆತ್ಮವಿಶ್ವಾಸದಿಂದಿದ್ದಾರೆ ಮತ್ತು ಹೆಚ್ಚು ಅನುಭವವುಳ್ಳವರಾಗಿದ್ದಾರೆ. ಈ ಹುಡುಗರು ಯಾವುದೇ ಸಂದರ್ಭದಲ್ಲಿ ಪ್ರಭಾವ ಬೀರಬಹುದು ಎಂದು ಎದುರಾಳಿಗಳಿಗೆ ಗೊತ್ತಾಗಿದೆ. ಇದು ಖಂಡಿತವಾಗಿಯೂ ನಮಗೆ ಉತ್ತಮ ಸೂಚನೆ ಎಂದು ಕೊಹ್ಲಿ ಹೇಳಿದ್ದಾರೆ.

ಚೆನ್ನೈ: ವಾಷಿಂಗ್ಟನ್ ಸುಂದರ್​ ಮತ್ತು ಮೊಹಮ್ಮದ್ ಸಿರಾಜ್​ ಅವರು ಭಾರತ ತಂಡಕ್ಕೆ ತೋರಿದ ಸಾಹಸ ಪ್ರದರ್ಶನವೇ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವಾಗ ಅವರ ಆತ್ಮವಿಶ್ವಾಸ ಹೆಚ್ಚಾಗಲು ನೆರವಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ನೇತೃತ್ವದ ಆರ್​ಸಿಬಿ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತಂಡವನ್ನು 14ನೇ ಆವೃತ್ತಿಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಎದುರಿಸಲಿದೆ. ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯ ಜರುಗಲಿದೆ.

ತಾವು ಯುವ ಕ್ರಿಕೆಟಿಗನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡಿದ ನಂತರ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ತಿಳಿಸಿರುವ ಕೊಹ್ಲಿ, ಅದೇ ರೀತಿ ಸಿರಾಜ್ ಮತ್ತು ಸುಂದರ್​ರಲ್ಲೂ ಈ ವರ್ಷ ಆಗಬಹುದು ಎಂದು ಹೇಳಿದ್ದಾರೆ. ಏಕೆಂದರೆ ಅವರಿಬ್ಬರು ಇತ್ತೀಚಿನ ಟೆಸ್ಟ್​ ಸರಣಿಗಳಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.

ವಾಷಿಂಗ್ಟನ್ ಸುಂದರ್, ಕೊಹ್ಲಿ, ಸಿರಾಜ್
ವಾಷಿಂಗ್ಟನ್ ಸುಂದರ್, ಕೊಹ್ಲಿ, ಸಿರಾಜ್

ಇದನ್ನು ಓದಿ:ಸರಣಿಯುದ್ದಕ್ಕೂ ಆಟದಲ್ಲಿ ಫುಲ್ ಎನರ್ಜಿ ತೋರಿಸಿ... ಆರ್​ಸಿಬಿ ಬಾಯ್ಸ್​ಗೆ ಕೊಹ್ಲಿ ಕಿವಿಮಾತು

"ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಇದ್ದ ವಿಶ್ವಾಸವನ್ನು ಐಪಿಎಲ್​ನಲ್ಲಿ ಮುಂದುವರಿಸಿದ್ದೆ. ಇದೀಗ ವಾಶಿ, ಸೈನಿ, ಸಿರಾಜ್​ ಅವರೂ ಕೂಡ ತಮ್ಮದೇ ಆದ ಸಾಮರ್ಥ್ಯದಿಂದ ಬರುತ್ತಿದ್ದಾರೆ. ಯುಜಿ(ಚಹಾಲ್) ಕೂಡ ಕೆಲವು ವರ್ಷಗಳಿಂದ ತಂಡದಲ್ಲಿದ್ದಾರೆ. ಈ ರೀತಿಯ ಆಟಗಾರರು ತಂಡವನ್ನು ಬಲವಾಗಿ ಕಟ್ಟಲು ಮತ್ತು ಸರಿಯಾದ ದಿಕ್ಕಿನಲ್ಲಿ ಸಾಗಿಸಲು ನಮಗೆ ಸಹಾಯ ಮಾಡುತ್ತಾರೆ" ಎಂದು ಮಾಧ್ಯಮಗೋಷ್ಠಿಯಲ್ಲಿ ಯುವ ಆಟಗಾರರ ಬಗ್ಗೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮ ಯುವ ಆಟಗಾರರು ಹೆಚ್ಚು ಆತ್ಮವಿಶ್ವಾಸದಿಂದಿದ್ದಾರೆ ಮತ್ತು ಹೆಚ್ಚು ಅನುಭವವುಳ್ಳವರಾಗಿದ್ದಾರೆ. ಈ ಹುಡುಗರು ಯಾವುದೇ ಸಂದರ್ಭದಲ್ಲಿ ಪ್ರಭಾವ ಬೀರಬಹುದು ಎಂದು ಎದುರಾಳಿಗಳಿಗೆ ಗೊತ್ತಾಗಿದೆ. ಇದು ಖಂಡಿತವಾಗಿಯೂ ನಮಗೆ ಉತ್ತಮ ಸೂಚನೆ ಎಂದು ಕೊಹ್ಲಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.