ETV Bharat / sports

ವಿಜಯ್ ಹಜಾರೆ ಟ್ರೋಫಿ: ಶ್ರೇಯಸ್, ಪೃಥ್ವಿ ಸೇರಿ 100 ಆಟಗಾರರನ್ನು ಹೆಸರಿಸಿದ ಮುಂಬೈ

author img

By

Published : Jan 31, 2021, 2:43 PM IST

ಭಾರತ ಸೀಮಿತ ತಂಡದ ಆಟಗಾರ ಶ್ರೇಯಸ್​ ಅಯ್ಯರ್​, ಟೆಸ್ಟ್ ತಂಡದಿಂದ ಹೊರಬಿದ್ದಿರುವ ಪೃಥ್ವಿ ಶಾ, ಅನುಭವಿ ಸೂರ್ಯ ಕುಮಾರ್ ಯಾದವ್​ ಹಾಗೂ ಲೆಜೆಂಡರಿ ಬ್ಯಾಟ್ಸ್​ಮನ್​ ಸಚಿನ್ ತೆಂಡೂಲ್ಕರ್​ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.

ವಿಜಯ ಹಜಾರೆ ಟ್ರೋಫಿ
ವಿಜಯ ಹಜಾರೆ ಟ್ರೋಫಿ

ಮುಂಬೈ: ಸಯ್ಯದ್ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿ ಲೀಗ್​ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ತಂಡ ಇದೀಗ ಮುಂದಿನ ತಿಂಗಳು ನಡೆಯುವ ವಿಜಯ ಹಜಾರೆ ಟ್ರೋಫಿಗಾಗಿ ಸಂಭವನೀಯ ಆಟಗಾರರನ್ನು ಆಯ್ಕೆ ಮಾಡಿದೆ.

ಭಾರತ ಸೀಮಿತ ತಂಡದ ಆಟಗಾರ ಶ್ರೇಯಸ್​ ಅಯ್ಯರ್​, ಟೆಸ್ಟ್ ತಂಡದಿಂದ ಹೊರಬಿದ್ದಿರುವ ಪೃಥ್ವಿ ಶಾ, ಅನುಭವಿ ಸೂರ್ಯ ಕುಮಾರ್ ಯಾದವ್​ ಹಾಗೂ ಲೆಜೆಂಡರಿ ಬ್ಯಾಟ್ಸ್​ಮನ್​ ಸಚಿನ್ ತೆಂಡೂಲ್ಕರ್​ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಆಯ್ಕೆ ಯಾಗಿರುವ ಎಲ್ಲಾ ಆಟಗಾರರನ್ನು ಸೋಮವಾರ 8 ಗಂಟೆಗೆ ಎಂಸಿಎ ಶರದ್ ಪವಾರ್​ ಕ್ರಿಕೆಟ್ ಆಕಾಡೆಮಿಯ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್​ಗೆ ಹಾಜರಾಗಲೂ ಎಂಸಿಎ ಕಾರ್ಯದರ್ಶಿ ಸಂಜಯ್ ನಾಯಕ್​ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮುಂಬೈ ತಂಡಕ್ಕೆ ಆಯ್ಕೆಯಾಗಿರುವ ಪ್ರಮುಖ ಆಟಗಾರರು:

ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ಶಿವಂ ದುಬೆ, ಸೂರ್ಯ ಕುಮಾರ್ ಯಾದವ್​, ಆದಿತ್ಯಾ ತಾರೆ, ಸಿದ್ದೇಶ್ ಲಾಡ್​, ಧವಳ್ ಕುಲಕರ್ಣಿ, ಯಶಸ್ವಿ ಜೈಸ್ವಾಲ್​, ಸರ್ಫರಾಜ್ ಖಾನ್​, ಅರ್ಮನ್ ಜಾಫರ್​, ಅಖಿಲ್ ಹಾರ್ವಾಡ್ಕರ್, ದಿವ್ಯಾಂಶ್ ಸಕ್ಸೇನಾ, ಅಥರ್ವ ಅಂಕೋಲೆಕರ್, ಶಾಮ್ಸ್ ಮುಲಾನಿ, ಸುಜಿತ್ ನಾಯಕ್, ಅರ್ಹುನ್ ತೆಂಡೂಲ್ಕರ್, ತುಷಾರ್ ದೇಶಪಾಂಡೆ

ಇದನ್ನೂ ಓದಿ:14ನೇ ಆವೃತ್ತಿಯ ಐಪಿಎಲ್ ಭಾರತದಲ್ಲೇ ನಡೆಯಲಿದೆ: ಬದಲಿ ಸ್ಥಳದ ಆಲೋಚನೆ ಇಲ್ಲ ಎಂದ ಧುಮಾಲ್​

ಮುಂಬೈ: ಸಯ್ಯದ್ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿ ಲೀಗ್​ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ತಂಡ ಇದೀಗ ಮುಂದಿನ ತಿಂಗಳು ನಡೆಯುವ ವಿಜಯ ಹಜಾರೆ ಟ್ರೋಫಿಗಾಗಿ ಸಂಭವನೀಯ ಆಟಗಾರರನ್ನು ಆಯ್ಕೆ ಮಾಡಿದೆ.

ಭಾರತ ಸೀಮಿತ ತಂಡದ ಆಟಗಾರ ಶ್ರೇಯಸ್​ ಅಯ್ಯರ್​, ಟೆಸ್ಟ್ ತಂಡದಿಂದ ಹೊರಬಿದ್ದಿರುವ ಪೃಥ್ವಿ ಶಾ, ಅನುಭವಿ ಸೂರ್ಯ ಕುಮಾರ್ ಯಾದವ್​ ಹಾಗೂ ಲೆಜೆಂಡರಿ ಬ್ಯಾಟ್ಸ್​ಮನ್​ ಸಚಿನ್ ತೆಂಡೂಲ್ಕರ್​ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಆಯ್ಕೆ ಯಾಗಿರುವ ಎಲ್ಲಾ ಆಟಗಾರರನ್ನು ಸೋಮವಾರ 8 ಗಂಟೆಗೆ ಎಂಸಿಎ ಶರದ್ ಪವಾರ್​ ಕ್ರಿಕೆಟ್ ಆಕಾಡೆಮಿಯ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್​ಗೆ ಹಾಜರಾಗಲೂ ಎಂಸಿಎ ಕಾರ್ಯದರ್ಶಿ ಸಂಜಯ್ ನಾಯಕ್​ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮುಂಬೈ ತಂಡಕ್ಕೆ ಆಯ್ಕೆಯಾಗಿರುವ ಪ್ರಮುಖ ಆಟಗಾರರು:

ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ಶಿವಂ ದುಬೆ, ಸೂರ್ಯ ಕುಮಾರ್ ಯಾದವ್​, ಆದಿತ್ಯಾ ತಾರೆ, ಸಿದ್ದೇಶ್ ಲಾಡ್​, ಧವಳ್ ಕುಲಕರ್ಣಿ, ಯಶಸ್ವಿ ಜೈಸ್ವಾಲ್​, ಸರ್ಫರಾಜ್ ಖಾನ್​, ಅರ್ಮನ್ ಜಾಫರ್​, ಅಖಿಲ್ ಹಾರ್ವಾಡ್ಕರ್, ದಿವ್ಯಾಂಶ್ ಸಕ್ಸೇನಾ, ಅಥರ್ವ ಅಂಕೋಲೆಕರ್, ಶಾಮ್ಸ್ ಮುಲಾನಿ, ಸುಜಿತ್ ನಾಯಕ್, ಅರ್ಹುನ್ ತೆಂಡೂಲ್ಕರ್, ತುಷಾರ್ ದೇಶಪಾಂಡೆ

ಇದನ್ನೂ ಓದಿ:14ನೇ ಆವೃತ್ತಿಯ ಐಪಿಎಲ್ ಭಾರತದಲ್ಲೇ ನಡೆಯಲಿದೆ: ಬದಲಿ ಸ್ಥಳದ ಆಲೋಚನೆ ಇಲ್ಲ ಎಂದ ಧುಮಾಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.