ETV Bharat / sports

ಸೂರ್ಯ, ಠಾಕೂರ್ ಮಿಂಚು: ಹಿಮಾಚಲ ಪ್ರದೇಶ ವಿರುದ್ಧ ಗೆದ್ದು ಕ್ವಾರ್ಟರ್​ಗೆ ಎಂಟ್ರಿಕೊಟ್ಟ ಮುಂಬೈ

ಜೈಪುರದಲ್ಲಿ ನಡೆದ ಮೊದಲ ನಾಲ್ಕು ಪಂದ್ಯಗಳಲ್ಲಿ ಮುಂಬೈ ತಂಡ ಡೆಲ್ಲಿ, ಮಹಾರಾಷ್ಟ್ರ, ಪುದುಚೇರಿ ಮತ್ತು ರಾಜಸ್ಥಾನ್ ವಿರುದ್ಧ ಗೆಲುವು ಸಾಧಿಸಿತ್ತು. ಇಂದು ನಾಡೆ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿ 9 ವಿಕೆಟ್​ ನಷ್ಟಕ್ಕೆ 321 ರನ್​ ಕಲೆ ಹಾಕಿತ್ತು. ಶಾರ್ದೂಲ್​ ಠಾಕೂರ್ 82 ರನ್​ಗಳಿಸಿದರೆ, ಸೂರ್ಯ ಕುಮಾರ್ ಯಾದವ್​ 91 ಮತ್ತು ಆದಿತ್ಯ ತಾರೆ 83 ರನ್​ಗಳಿಸಿದ್ದರು.

author img

By

Published : Mar 1, 2021, 7:25 PM IST

ವಿಜಯ ಹಜಾರೆ ಟ್ರೋಫಿ
ಮುಂಬೈಗೆ 200 ರನ್​ಗಳ ಜಯ

ಜೈಪುರ: ಶಾರ್ದೂಲ್​ ಠಾಕೂರ್ ಮತ್ತು ಸೂರ್ಯಕುಮಾರ್ ಯಾದವ್​ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲರ್​ಗಳ ಅದ್ಭುತ ಪ್ರದರ್ಶನ ನೆರವಿನಿಂದ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧ 200 ರನ್​ಗಳ ಬೃಹತ್ ಜಯ ಸಾಧಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ.

ಜೈಪುರದಲ್ಲಿ ನಡೆದ ಮೊದಲ ನಾಲ್ಕು ಪಂದ್ಯಗಳಲ್ಲಿ ಮುಂಬೈ ತಂಡ ಡೆಲ್ಲಿ, ಮಹಾರಾಷ್ಟ್ರ, ಪುದುಚೇರಿ ಮತ್ತು ರಾಜಸ್ಥಾನ್ ವಿರುದ್ಧ ಗೆಲುವು ಸಾಧಿಸಿತ್ತು. ಇಂದು ನಾಡೆ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿ 9 ವಿಕೆಟ್​ ನಷ್ಟಕ್ಕೆ 321 ರನ್​ ಕಲೆಯಾಕಿತ್ತು. ಶಾರ್ದುಲ್ ಠಾಕೂರ್ 82 ರನ್​ಗಳಿಸಿದರೆ, ಸೂರ್ಯ ಕುಮಾರ್ ಯಾದವ್​ 91 ಮತ್ತು ಆದಿತ್ಯ ತಾರೆ 83 ರನ್​ಗಳಿಸಿದ್ದರು.

ಒಂದು ಹಂತದಲ್ಲಿ ಮುಂಬೈ ಕೇವಲ 4 ಓವರ್​ಗಳಲ್ಲಿ 8 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿತ್ತು. ಆರಂಭಿಕರಾದ ಪೃಥ್ವಿ ಶಾ(2) , ಯಶಸ್ವಿ ಜೈಸ್ವಾಲ್(2) ಮತ್ತು ನಾಯಕ ಶ್ರೇಯಸ್ ಅಯ್ಯರ್(2) ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದರು. ಆದರೆ, ಸೂರ್ಯ ಕುಮಾರ್ ಯಾದವ್​ 75 ಎಸೆತಗಳಲ್ಲಿ 15 ಬೌಂಡರಿ ಸಹಿತ 91 ರನ್​ಗಳಿಸಿದ್ದಲ್ಲದೆ, ತಾರೆ ಜೊತೆಗೂಡಿ 99 ರನ್​ ಜೊತೆಯಾಟ ನೀಡಿದರು. ತಾರೆ 98 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 83 ರನ್​ಗಳಿಸಿದರು. ಯಾದವ್ ಔಟಾಗುತ್ತಿದ್ದಂತೆ ಬ್ಯಾಟಿಂಗ್ ಬಂದ ಶಾರ್ದುಲ್ ಠಾಕೂರ್ ಕೇವಲ 57 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು ಸಿಕ್ಸರ್​ಗಳ ನೆರವಿನಿಂದ 92 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಹಿ.ಪ್ರದೇಶದ ರಿಷಿ ಧವ್​ 84ಕ್ಕೆ 4, ಪಂಕಜ್ ಜೈಸ್ವಾಲ್​ 65ಕ್ಕೆ 3 ವಿಕೆಟ್​ ಪಡೆದರು. 322 ರನ್​ಗಳ ಗುರಿ ಪಡೆದ ಹಿ. ಪ್ರದೇಶ ಕೂಡ ಕೇವಲ 4 ರನ್​ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಓಪನರ್ಸ್​ ರವಿ ಕುಮಾರ್​(3), ಪ್ರಶಾಂತ್​ ಚೋಪ್ರಾ(1) ಮತ್ತು ನಿಖಿಲ್ ಗಂಗ್ಟ(0) ಕಡಿಮೆ ರನ್​ಗಳಿಗೆ ಔಟಾದರು.

ಇವರ ನಂತರ ಬಂದ ಬ್ಯಾಟ್ಸ್​ಮನ್​ಗಳಾರೂ ಮುಂಬೈ ಬೌಲಿಂಗ್​ಗೆ ಎದುರು ನಿಲ್ಲುವ ತಾಕತ್ತು ತೋರದ ಕಾರಣ ಕೇವಲ 121 ರನ್​ಗಳಿಗೆ ಆಲೌಟ್ ಆಗಿ 200 ರನ್​ಗಳ ಹೀನಾಯ ಸೋಲು ಕಂಡಿತು. 38 ರನ್​ಗಳಿಸಿ ಮಯಾಂಕ್ ಡ್ಯಾಗರ್​ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಮುಂಬೈ ಪರ ದವಳ್ ಕುಲಕರ್ಣಿ 8ಕ್ಕೆ2, ಸೋಲಂಕಿ 31ಕ್ಕೆ 4, ಮುಲಾನಿ 42ಕ್ಕೆ 3 ವಿಕೆಟ್ ಪಡೆದರು.

ಜೈಪುರ: ಶಾರ್ದೂಲ್​ ಠಾಕೂರ್ ಮತ್ತು ಸೂರ್ಯಕುಮಾರ್ ಯಾದವ್​ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲರ್​ಗಳ ಅದ್ಭುತ ಪ್ರದರ್ಶನ ನೆರವಿನಿಂದ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧ 200 ರನ್​ಗಳ ಬೃಹತ್ ಜಯ ಸಾಧಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ.

ಜೈಪುರದಲ್ಲಿ ನಡೆದ ಮೊದಲ ನಾಲ್ಕು ಪಂದ್ಯಗಳಲ್ಲಿ ಮುಂಬೈ ತಂಡ ಡೆಲ್ಲಿ, ಮಹಾರಾಷ್ಟ್ರ, ಪುದುಚೇರಿ ಮತ್ತು ರಾಜಸ್ಥಾನ್ ವಿರುದ್ಧ ಗೆಲುವು ಸಾಧಿಸಿತ್ತು. ಇಂದು ನಾಡೆ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿ 9 ವಿಕೆಟ್​ ನಷ್ಟಕ್ಕೆ 321 ರನ್​ ಕಲೆಯಾಕಿತ್ತು. ಶಾರ್ದುಲ್ ಠಾಕೂರ್ 82 ರನ್​ಗಳಿಸಿದರೆ, ಸೂರ್ಯ ಕುಮಾರ್ ಯಾದವ್​ 91 ಮತ್ತು ಆದಿತ್ಯ ತಾರೆ 83 ರನ್​ಗಳಿಸಿದ್ದರು.

ಒಂದು ಹಂತದಲ್ಲಿ ಮುಂಬೈ ಕೇವಲ 4 ಓವರ್​ಗಳಲ್ಲಿ 8 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿತ್ತು. ಆರಂಭಿಕರಾದ ಪೃಥ್ವಿ ಶಾ(2) , ಯಶಸ್ವಿ ಜೈಸ್ವಾಲ್(2) ಮತ್ತು ನಾಯಕ ಶ್ರೇಯಸ್ ಅಯ್ಯರ್(2) ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದರು. ಆದರೆ, ಸೂರ್ಯ ಕುಮಾರ್ ಯಾದವ್​ 75 ಎಸೆತಗಳಲ್ಲಿ 15 ಬೌಂಡರಿ ಸಹಿತ 91 ರನ್​ಗಳಿಸಿದ್ದಲ್ಲದೆ, ತಾರೆ ಜೊತೆಗೂಡಿ 99 ರನ್​ ಜೊತೆಯಾಟ ನೀಡಿದರು. ತಾರೆ 98 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 83 ರನ್​ಗಳಿಸಿದರು. ಯಾದವ್ ಔಟಾಗುತ್ತಿದ್ದಂತೆ ಬ್ಯಾಟಿಂಗ್ ಬಂದ ಶಾರ್ದುಲ್ ಠಾಕೂರ್ ಕೇವಲ 57 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು ಸಿಕ್ಸರ್​ಗಳ ನೆರವಿನಿಂದ 92 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಹಿ.ಪ್ರದೇಶದ ರಿಷಿ ಧವ್​ 84ಕ್ಕೆ 4, ಪಂಕಜ್ ಜೈಸ್ವಾಲ್​ 65ಕ್ಕೆ 3 ವಿಕೆಟ್​ ಪಡೆದರು. 322 ರನ್​ಗಳ ಗುರಿ ಪಡೆದ ಹಿ. ಪ್ರದೇಶ ಕೂಡ ಕೇವಲ 4 ರನ್​ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಓಪನರ್ಸ್​ ರವಿ ಕುಮಾರ್​(3), ಪ್ರಶಾಂತ್​ ಚೋಪ್ರಾ(1) ಮತ್ತು ನಿಖಿಲ್ ಗಂಗ್ಟ(0) ಕಡಿಮೆ ರನ್​ಗಳಿಗೆ ಔಟಾದರು.

ಇವರ ನಂತರ ಬಂದ ಬ್ಯಾಟ್ಸ್​ಮನ್​ಗಳಾರೂ ಮುಂಬೈ ಬೌಲಿಂಗ್​ಗೆ ಎದುರು ನಿಲ್ಲುವ ತಾಕತ್ತು ತೋರದ ಕಾರಣ ಕೇವಲ 121 ರನ್​ಗಳಿಗೆ ಆಲೌಟ್ ಆಗಿ 200 ರನ್​ಗಳ ಹೀನಾಯ ಸೋಲು ಕಂಡಿತು. 38 ರನ್​ಗಳಿಸಿ ಮಯಾಂಕ್ ಡ್ಯಾಗರ್​ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಮುಂಬೈ ಪರ ದವಳ್ ಕುಲಕರ್ಣಿ 8ಕ್ಕೆ2, ಸೋಲಂಕಿ 31ಕ್ಕೆ 4, ಮುಲಾನಿ 42ಕ್ಕೆ 3 ವಿಕೆಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.