ETV Bharat / sports

ಪೃಥ್ವಿ ಶಾ ಅಜೇಯ ಶತಕ​: ಸೌರಾಷ್ಟ್ರ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಮುಂಬೈ

author img

By

Published : Mar 9, 2021, 5:01 PM IST

ದೆಹಲಿಯ ಏರ್​ಫೋರ್ಸ್​ ಕಾಂಪ್ಲೆಕ್ಸ್​ ಮೈದಾನದಲ್ಲಿ ನಡೆದ ನಾಲ್ಕನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ನೀಡಿದ್ದ 285 ರನ್​ಗಳ ಗುರಿಯನ್ನು ಮುಂಬೈ ತಂಡ ಕೇವಲ 41.5 ಓವರ್​ಗಳಲ್ಲಿ 1 ವಿಕೆಟ್​ ಕಳೆದುಕೊಂಡು ತಲುಪಿತು.

ವಿಜಯ ಹಜಾರೆ ಟ್ರೋಫಿ
ಪೃಥ್ವಿ ಶಾ ಶತಕ

ದೆಹಲಿ: ನಾಯಕ ಪೃಥ್ವಿ ಶಾ ಸಿಡಿಸಿದ ಅಬ್ಬರ ಶತಕದ ನೆರವಿನಿಂದ ವಿಜಯ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಸೌರಾಷ್ಟ್ರದ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

ದೆಹಲಿಯ ಏರ್​ಫೋರ್ಸ್​ ಕಾಂಪ್ಲೆಕ್ಸ್​ ಮೈದಾನದಲ್ಲಿ ನಡೆದ ನಾಲ್ಕನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ನೀಡಿದ್ದ 285ರನ್​ಗಳ ಗುರಿಯನ್ನು ಮುಂಬೈ ತಂಡ ಕೇವಲ 41.5 ಓವರ್​ಗಳಲ್ಲಿ 1 ವಿಕೆಟ್​ ಕಳೆದುಕೊಂಡು ಗುರಿ ತಲುಪಿದೆ.

ನಾಯಕ ಪೃಥ್ವಿ ಶಾ ಕೇವಲ 123 ಎಸೆತಗಳಲ್ಲಿ 21 ಬೌಂಡರಿ 7 ಸಿಕ್ಸರ್​ಗಳ ಸಹಿತ ಅಜೇಯ 185 ರನ್​ ಸಿಡಿಸಿದರು. ಅಲ್ಲದೇ ಯುವ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್​ ಜೊತೆಗೆ ಮೊದಲ ವಿಕೆಟ್​ಗೆ ಬರೋಬ್ಬರಿ 238 ರನ್​ಗಳ ಜೊತೆಯಾಟ ನೀಡಿದರು. ಜೈಶ್ವಾಲ್​ 104 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್‌ಸಹಿತ 75 ರನ್​ಗಳಿಸಿದರು. ಆದಿತ್ಯ ತಾರೆ 24 ಎಸೆತಗಳಲ್ಲಿ ಅಜೇಯ 20 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ 50 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 284 ರನ್​ಗಳಿಸಿತ್ತು. ಸಮರ್ಥ್​ ವ್ಯಾಸ್​ ಅಜೇಯ 90, ಚಿರಾಗ್​ ಜನಿ ಅಜೇಯ 53, ವಿಶ್ವರಾಜ್​ ಜಡೇಜಾ 53 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.

ಇದನ್ನೂ ಓದಿ: ಮಂದಾನ ಸ್ಫೋಟಕ ಅರ್ಧಶತಕ: ದ.ಆಫ್ರಿಕಾ ವನಿತೆಯ ವಿರುದ್ಧ ಭಾರತಕ್ಕೆ ಜಯ

ದೆಹಲಿ: ನಾಯಕ ಪೃಥ್ವಿ ಶಾ ಸಿಡಿಸಿದ ಅಬ್ಬರ ಶತಕದ ನೆರವಿನಿಂದ ವಿಜಯ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಸೌರಾಷ್ಟ್ರದ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

ದೆಹಲಿಯ ಏರ್​ಫೋರ್ಸ್​ ಕಾಂಪ್ಲೆಕ್ಸ್​ ಮೈದಾನದಲ್ಲಿ ನಡೆದ ನಾಲ್ಕನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ನೀಡಿದ್ದ 285ರನ್​ಗಳ ಗುರಿಯನ್ನು ಮುಂಬೈ ತಂಡ ಕೇವಲ 41.5 ಓವರ್​ಗಳಲ್ಲಿ 1 ವಿಕೆಟ್​ ಕಳೆದುಕೊಂಡು ಗುರಿ ತಲುಪಿದೆ.

ನಾಯಕ ಪೃಥ್ವಿ ಶಾ ಕೇವಲ 123 ಎಸೆತಗಳಲ್ಲಿ 21 ಬೌಂಡರಿ 7 ಸಿಕ್ಸರ್​ಗಳ ಸಹಿತ ಅಜೇಯ 185 ರನ್​ ಸಿಡಿಸಿದರು. ಅಲ್ಲದೇ ಯುವ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್​ ಜೊತೆಗೆ ಮೊದಲ ವಿಕೆಟ್​ಗೆ ಬರೋಬ್ಬರಿ 238 ರನ್​ಗಳ ಜೊತೆಯಾಟ ನೀಡಿದರು. ಜೈಶ್ವಾಲ್​ 104 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್‌ಸಹಿತ 75 ರನ್​ಗಳಿಸಿದರು. ಆದಿತ್ಯ ತಾರೆ 24 ಎಸೆತಗಳಲ್ಲಿ ಅಜೇಯ 20 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ 50 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 284 ರನ್​ಗಳಿಸಿತ್ತು. ಸಮರ್ಥ್​ ವ್ಯಾಸ್​ ಅಜೇಯ 90, ಚಿರಾಗ್​ ಜನಿ ಅಜೇಯ 53, ವಿಶ್ವರಾಜ್​ ಜಡೇಜಾ 53 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.

ಇದನ್ನೂ ಓದಿ: ಮಂದಾನ ಸ್ಫೋಟಕ ಅರ್ಧಶತಕ: ದ.ಆಫ್ರಿಕಾ ವನಿತೆಯ ವಿರುದ್ಧ ಭಾರತಕ್ಕೆ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.