ETV Bharat / sports

41 ಬಾರಿಯ ರಣಜಿ ಚಾಂಪಿಯನ್​ ಮುಂಬೈಗೆ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು!!

author img

By

Published : Jan 17, 2021, 8:17 PM IST

95 ರನ್​ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪುದುಚೇರಿ 19 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿ ಟೂರ್ನಿಯಲ್ಲಿ 2ನೇ ಜಯ ಸಾಧಿಸಿತು. ಎಸ್​ ಕಾರ್ತಿಕ್ 25, ಡಿ. ರೋಹಿತ್ 18 ಮತ್ತು ಶೆಲ್ಡಾನ್ ಜಾಕ್ಸನ್​ 24 ರನ್​ ಗಳಿಸಿದರು..

ಸಯ್ಯದ್ ಮುಷ್ತಾಕ್​ ಅಲಿ ಟ್ರೋಪಿ
ಸಯ್ಯದ್ ಮುಷ್ತಾಕ್​ ಅಲಿ ಟ್ರೋಪಿ

ಮುಂಬೈ : ರಣಜಿ ಟ್ರೋಫಿಯಲ್ಲಿ 41 ಬಾರಿ ಪ್ರಶಸ್ತಿಗೆ ದಾಖಲೆ ಬರೆದಿರುವ ಬಲಿಷ್ಠ ಮುಂಬೈ ದೇಶಿ ಟಿ20 ಲೀಗ್​ನಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದೆ. ಭಾನುವಾರ ಕಳೆದ ಲೀಗ್​ನಲ್ಲಿ ಪ್ಲೇಟ್​ ಗ್ರೂಪ್​ನಿಂದ ಬಡ್ತಿ ಪಡೆದಿರುವ ಪುದುಚೇರಿ ವಿರುದ್ಧವೂ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಮುಖಭಂಗ ಅನುಭವಿಸಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇ ಗುಂಪಿನ ಪಂದ್ಯದಲ್ಲಿ ಮುಂಬೈ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ 19 ಓವರ್​ಗಳಲ್ಲಿ ಕೇವಲ 94 ರನ್​ಗಳಿಗೆ ಆಲೌಟ್ ಆಗಿದೆ. ಪುದುಚೇರಿ ಬೌಲಿಂಗ್​ ದಾಳಿಯ ಮುಂದೆ ಆಲ್​ರೌಂಡರ್​ ಶಿವಂ ದುಬೆ(28) ಮಾತ್ರ 20ರ ಗಡಿದಾಟಿದರು.

ಯಶಸ್ವಿ ಜೈಸ್ವಾಲ್​(15) ಆದಿತ್ಯ ತಾರೆ(3) ಸೂರ್ಯಕುಮಾರ್ ಯಾದವ್​(8), ಸಿದ್ದೇಶ್ ಲಾಡ್​(2), ಸರ್ಫರಾಜ್ ಖಾನ್​(0) ವಿಕೆಟ್​ ಒಪ್ಪಿಸಿದರು. ಅಕ್ಸರ್​ ಪರ್ಕರ್​ ಕೊನೆಯಲ್ಲಿ 20 ರನ್​ಗಳಿಸಿ ತಂಡದ ಮೊತ್ತವನ್ನು ನೂರರ ಸಮೀಪ ತಂದರು.

ಪುದುಚೇರಿ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ 41 ವರ್ಷದ ಶಾಂತ ಮೂರ್ತಿ 20ರನ್​ ನೀಡಿ 5 ವಿಕೆಟ್​ ಉಡಾಯಿಸಿದರು. ಅರವಿಂದರಾಜ್ 2, ಸಾಗರ್ ಉದಾಸಿ, ಅಶಿತ್ ರಾಜೀವ್ ಹಾಗೂ ಫಬಿದ್ ಅಹ್ಮದ್​ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

95 ರನ್​ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪುದುಚೇರಿ 19 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿ ಟೂರ್ನಿಯಲ್ಲಿ 2ನೇ ಜಯ ಸಾಧಿಸಿತು. ಎಸ್​ ಕಾರ್ತಿಕ್ 25, ಡಿ. ರೋಹಿತ್ 18 ಮತ್ತು ಶೆಲ್ಡಾನ್ ಜಾಕ್ಸನ್​ 24 ರನ್​ ಗಳಿಸಿದರು.

ಮುಂಬೈ ತಂಡ ಈ ಮೊದಲು ಡೆಲ್ಲಿ ವಿರುದ್ಧ 76 ರನ್​ಗಳಿಂದ, ಕೇರಳ ವಿರುದ್ಧ 8 ವಿಕೆಟ್​ಗಳಿಂದ ಸೋಲುಂಡಿತ್ತು. ಮಂಗಳವಾರ ಆಂಧ್ರಪ್ರದೇಶದ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಲಿದೆ.

ಮುಂಬೈ : ರಣಜಿ ಟ್ರೋಫಿಯಲ್ಲಿ 41 ಬಾರಿ ಪ್ರಶಸ್ತಿಗೆ ದಾಖಲೆ ಬರೆದಿರುವ ಬಲಿಷ್ಠ ಮುಂಬೈ ದೇಶಿ ಟಿ20 ಲೀಗ್​ನಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದೆ. ಭಾನುವಾರ ಕಳೆದ ಲೀಗ್​ನಲ್ಲಿ ಪ್ಲೇಟ್​ ಗ್ರೂಪ್​ನಿಂದ ಬಡ್ತಿ ಪಡೆದಿರುವ ಪುದುಚೇರಿ ವಿರುದ್ಧವೂ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಮುಖಭಂಗ ಅನುಭವಿಸಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇ ಗುಂಪಿನ ಪಂದ್ಯದಲ್ಲಿ ಮುಂಬೈ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ 19 ಓವರ್​ಗಳಲ್ಲಿ ಕೇವಲ 94 ರನ್​ಗಳಿಗೆ ಆಲೌಟ್ ಆಗಿದೆ. ಪುದುಚೇರಿ ಬೌಲಿಂಗ್​ ದಾಳಿಯ ಮುಂದೆ ಆಲ್​ರೌಂಡರ್​ ಶಿವಂ ದುಬೆ(28) ಮಾತ್ರ 20ರ ಗಡಿದಾಟಿದರು.

ಯಶಸ್ವಿ ಜೈಸ್ವಾಲ್​(15) ಆದಿತ್ಯ ತಾರೆ(3) ಸೂರ್ಯಕುಮಾರ್ ಯಾದವ್​(8), ಸಿದ್ದೇಶ್ ಲಾಡ್​(2), ಸರ್ಫರಾಜ್ ಖಾನ್​(0) ವಿಕೆಟ್​ ಒಪ್ಪಿಸಿದರು. ಅಕ್ಸರ್​ ಪರ್ಕರ್​ ಕೊನೆಯಲ್ಲಿ 20 ರನ್​ಗಳಿಸಿ ತಂಡದ ಮೊತ್ತವನ್ನು ನೂರರ ಸಮೀಪ ತಂದರು.

ಪುದುಚೇರಿ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ 41 ವರ್ಷದ ಶಾಂತ ಮೂರ್ತಿ 20ರನ್​ ನೀಡಿ 5 ವಿಕೆಟ್​ ಉಡಾಯಿಸಿದರು. ಅರವಿಂದರಾಜ್ 2, ಸಾಗರ್ ಉದಾಸಿ, ಅಶಿತ್ ರಾಜೀವ್ ಹಾಗೂ ಫಬಿದ್ ಅಹ್ಮದ್​ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

95 ರನ್​ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪುದುಚೇರಿ 19 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿ ಟೂರ್ನಿಯಲ್ಲಿ 2ನೇ ಜಯ ಸಾಧಿಸಿತು. ಎಸ್​ ಕಾರ್ತಿಕ್ 25, ಡಿ. ರೋಹಿತ್ 18 ಮತ್ತು ಶೆಲ್ಡಾನ್ ಜಾಕ್ಸನ್​ 24 ರನ್​ ಗಳಿಸಿದರು.

ಮುಂಬೈ ತಂಡ ಈ ಮೊದಲು ಡೆಲ್ಲಿ ವಿರುದ್ಧ 76 ರನ್​ಗಳಿಂದ, ಕೇರಳ ವಿರುದ್ಧ 8 ವಿಕೆಟ್​ಗಳಿಂದ ಸೋಲುಂಡಿತ್ತು. ಮಂಗಳವಾರ ಆಂಧ್ರಪ್ರದೇಶದ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.