ETV Bharat / sports

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ: ಪಾಂಡ್ಯ ಜೊತೆ ಜಗಳದಿಂದ ತಂಡ ತೊರೆದ ಹೂಡಾ

author img

By

Published : Jan 10, 2021, 6:51 AM IST

Updated : Jan 10, 2021, 7:08 AM IST

ಬರೋಡಾ ಕ್ರಿಕೆಟ್ ಅಸೋಸಿಯೇಷನ್‌ಗೆ ಬರೆದ ಪತ್ರವೊಂದರಲ್ಲಿ ತಂಡದ ಪರ 46 ಪ್ರಥಮ ದರ್ಜೆ, 123 ಟಿ-20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಹುಡಾ, ರಿಲಯನ್ಸ್ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದ ಅವಧಿಯಲ್ಲಿ ಕೃನಾಲ್ ಪಾಂಡ್ಯ ನನ್ನನ್ನು 'ನಿಂದಿಸಿದ್ದಾರೆ' ಎಂದು ಹೇಳಿದ್ದಾರೆ.

Hooda leaves Baroda camp after spat with Pandya
ಕೃನಾಲ್ ಪಾಂಡ್ಯ ಜೊತೆ ಜಗಳದಿಂದ ಬರೋಡ ತಂಡ ತೊರೆದ ಹೂಡಾ

ಹೈದರಾಬಾದ್: ನಾಯಕ ಕೃನಾಲ್ ಪಾಂಡ್ಯ ಅವರೊಂದಿಗಿನ ವಾಗ್ವಾದದ ನಂತರ ಬರೋಡಾ ಕ್ರಿಕೆಟ್ ತಂಡಕ್ಕೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಒಂದು ದಿನ ಮೊದಲು ಆಘಾತ ಎದುರಾಗಿದ್ದು, ದೀಪಕ್ ಹೂಡಾ ತಂಡದಿಂದ ಹೊರ ನಡೆದಿದ್ದಾರೆ.

ಬರೋಡಾ ಕ್ರಿಕೆಟ್ ಅಸೋಸಿಯೇಷನ್‌ಗೆ ಬರೆದ ಪತ್ರವೊಂದರಲ್ಲಿ ತಂಡದ ಪರ 46 ಪ್ರಥಮ ದರ್ಜೆ, 123 ಟಿ-20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಹುಡಾ, ರಿಲಯನ್ಸ್ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದ ಅವಧಿಯಲ್ಲಿ ಕೃನಾಲ್ ಪಾಂಡ್ಯ ನನ್ನನ್ನು 'ನಿಂದಿಸಿದ್ದಾರೆ' ಎಂದು ಹೇಳಿದ್ದಾರೆ.

"ನಾನು ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಪರ ಕಳೆದ 11 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಪ್ರಸ್ತುತ, ನಾನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಆಯ್ಕೆಯಾಗಿದ್ದೇನೆ. ನಾನು ನಿರಾಶೆಗೊಂಡಿದ್ದೇನೆ, ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ಒತ್ತಡದಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ಮತ್ತು ಕಳೆದ ಎರಡು ದಿನಗಳಿಂದ, ನನ್ನ ತಂಡದ ನಾಯಕ ಕೃನಾಲ್ ಪಾಂಡ್ಯ ನನ್ನ ತಂಡದ ಸದಸ್ಯರು ಮತ್ತು ರಿಲಯನ್ಸ್ ಸ್ಟೇಡಿಯಂ ವಡೋದರಾದಲ್ಲಿ ಭಾಗವಹಿಸಲು ಬಂದ ಇತರ ರಾಜ್ಯಗಳ ತಂಡಗಳ ಮುಂದೆ ನನಗೆ ನಿಂದನೀಯ ಭಾಷೆ ಬಳಸುತ್ತಿದ್ದಾರೆ" ಎಂದು ಹೂಡಾ ಪತ್ರದಲ್ಲಿ ಬರೆದಿದ್ದಾರೆ.

ತರಬೇತಿ ಅವಧಿಯಲ್ಲಿ ಹೂಡಾ ಮತ್ತು ಕೃನಾಲ್ ಅವರು ತೀವ್ರ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ, "ನಾನು ನೆಟ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದೆ ಮತ್ತು ಮುಖ್ಯ ತರಬೇತುದಾರ ಪ್ರಭಾಕರ್ ಅವರ ಅನುಮತಿಯೊಂದಿಗೆ ನಾಳಿನ ಆಟಕ್ಕೆ ನನ್ನ ತಯಾರಿ ಮಾಡುತ್ತಿದ್ದೆ. ಕೃನಾಲ್ ನೆಟ್​ನಲ್ಲಿ ಬಂದು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು. ಮುಖ್ಯ ತರಬೇತುದಾರರ ಅನುಮತಿಯೊಂದಿಗೆ ನಾನು ತಯಾರಿಯನ್ನು ಮಾಡುತ್ತಿದ್ದೇನೆ ಎಂದು ಅವರಿಗೆ ಹೇಳಿದೆ. ಆದರೆ ಅವರು ‘ನಾನು ಕ್ಯಾಪ್ಟನ್, ಮುಖ್ಯ ಕೋಚ್ ಯಾರು? ನಾನೇ ಬರೋಡಾ ತಂಡ ಎಂದರು." ಎಂದು ಹೂಡಾ ಆರೋಪಿಸಿದ್ದಾರೆ.

"ಅವರು ಯಾವಾಗಲೂ ನನ್ನನ್ನು ಹತ್ತಿಕ್ಕಲು ನೋಡುತ್ತಿದ್ದರು. ನೀನು ಬರೋಡಾ ಪರವಾಗಿ ಹೇಗೆ ಆಡುತ್ತೀಯ ಎಂದು ನಾನು ನೋಡುತ್ತೇನೆ ಎಂದರು. ನನ್ನ ವೃತ್ತಿಜೀವನದಲ್ಲಿ ಇಂತಹ ಅನಾರೋಗ್ಯಕರ ವಾತಾವರಣವನ್ನು ಇಲ್ಲಿಯವರೆಗೆ ನೋಡಿಲ್ಲ. ನಾನು ಬರೋಡಾ ಕ್ರಿಕೆಟ್ ಅಸೋಸಿಯೇಷನ್‌ನಿಂದ ಮಾತ್ರ ಕ್ರಿಕೆಟ್‌ನ ಎಲ್ಲಾ ಹಂತಗಳಲ್ಲಿ ಪ್ರತಿನಿಧಿಸಿದ್ದೇನೆ. ಅಲ್ಲದೆ, ನಾನು ಕಳೆದ 7 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ. ಇಲ್ಲಿಯವರೆಗೆ ನನ್ನ ಕ್ರಿಕೆಟಿಂಗ್ ವೃತ್ತಿಜೀವನದಲ್ಲಿ ನನಗೆ ಉತ್ತಮ ದಾಖಲೆಗಳಿವೆ" ಎಂದು ಹೇಳಿದ್ದಾರೆ.

ಈ ಋತುವಿನಲ್ಲಿ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಹೂಡಾ ಆಡಿದ್ದರು. "ನಾನು ಇಲ್ಲಿಯವರೆಗೆ ಉತ್ತಮ ಅಂತಾರಾಷ್ಟ್ರೀಯ ಆಟಗಾರರು ಮತ್ತು ನಾಯಕರೊಂದಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಆದರೆ ತಂಡದ ನಾಯಕ ನೀಡಿದ ಇಂತಹ ಕೆಟ್ಟ ನಡವಳಿಕೆಯನ್ನು ನಾನು ಎಂದಿಗೂ ಎದುರಿಸಿಲ್ಲ. ನಾನು ತಂಡದ ವ್ಯಕ್ತಿಯಾಗಿದ್ದೇನೆ ಮತ್ತು ನಾನು ಯಾವಾಗಲೂ ನನ್ನ ತಂಡವನ್ನು ನನಗಿಂತಲೂ ಹೆಚ್ಚು ಎಂದು ನಂಬಿದ್ದೇನೆ. ಬರೋಡಾ ತಂಡದ ನಾಯಕ ಪ್ರತಿ ಬಾರಿಯೂ ನನ್ನನ್ನು ಚುಚ್ಚಿ ನನ್ನ ಅಭ್ಯಾಸಕ್ಕೆ ತೊಂದರೆ ನೀಡುತ್ತಿರುವ ಸಂದರ್ಭಗಳಲ್ಲಿ ನನ್ನ ಅತ್ಯುತ್ತಮ ಆಟವಾಡಲು ನನಗೆ ಸಾಧ್ಯವಾಗುತ್ತಿಲ್ಲ." ಎಂದಿದ್ದಾರೆ.

ದೀಪಕ್ ಹೂಡಾ ಶನಿವಾರ ಸಂಜೆ ಬಯೋ ಬಬಲ್​ನಿಂದ ಹೊರ ನಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಲು ಕೃನಾಲ್ ಪಾಂಡ್ಯ ಅಥವಾ ಹೂಡಾ ಇಬ್ಬರೂ ಲಭ್ಯವಿಲ್ಲ. ಈಗಾಗಲೇ ವ್ಯವಸ್ಥಾಪಕರಿಂದ ವರದಿ ಕೇಳಿರುವುದಾಗಿ ಬಿಸಿಎ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ. "ನಾನು ಭಾನುವಾರದ ವೇಳೆಗೆ ತಂಡದ ವ್ಯವಸ್ಥಾಪಕರಿಂದ ವರದಿ ಕೋರಿದ್ದೇನೆ. ನಾವು ಅದನ್ನು ಸ್ವೀಕರಿಸಿದ ನಂತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಮಾಡುತ್ತೇವೆ" ಎಂದು ಹೇಳಿದ್ದಾರೆ.

ಹೈದರಾಬಾದ್: ನಾಯಕ ಕೃನಾಲ್ ಪಾಂಡ್ಯ ಅವರೊಂದಿಗಿನ ವಾಗ್ವಾದದ ನಂತರ ಬರೋಡಾ ಕ್ರಿಕೆಟ್ ತಂಡಕ್ಕೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಒಂದು ದಿನ ಮೊದಲು ಆಘಾತ ಎದುರಾಗಿದ್ದು, ದೀಪಕ್ ಹೂಡಾ ತಂಡದಿಂದ ಹೊರ ನಡೆದಿದ್ದಾರೆ.

ಬರೋಡಾ ಕ್ರಿಕೆಟ್ ಅಸೋಸಿಯೇಷನ್‌ಗೆ ಬರೆದ ಪತ್ರವೊಂದರಲ್ಲಿ ತಂಡದ ಪರ 46 ಪ್ರಥಮ ದರ್ಜೆ, 123 ಟಿ-20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಹುಡಾ, ರಿಲಯನ್ಸ್ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದ ಅವಧಿಯಲ್ಲಿ ಕೃನಾಲ್ ಪಾಂಡ್ಯ ನನ್ನನ್ನು 'ನಿಂದಿಸಿದ್ದಾರೆ' ಎಂದು ಹೇಳಿದ್ದಾರೆ.

"ನಾನು ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಪರ ಕಳೆದ 11 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಪ್ರಸ್ತುತ, ನಾನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಆಯ್ಕೆಯಾಗಿದ್ದೇನೆ. ನಾನು ನಿರಾಶೆಗೊಂಡಿದ್ದೇನೆ, ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ಒತ್ತಡದಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ಮತ್ತು ಕಳೆದ ಎರಡು ದಿನಗಳಿಂದ, ನನ್ನ ತಂಡದ ನಾಯಕ ಕೃನಾಲ್ ಪಾಂಡ್ಯ ನನ್ನ ತಂಡದ ಸದಸ್ಯರು ಮತ್ತು ರಿಲಯನ್ಸ್ ಸ್ಟೇಡಿಯಂ ವಡೋದರಾದಲ್ಲಿ ಭಾಗವಹಿಸಲು ಬಂದ ಇತರ ರಾಜ್ಯಗಳ ತಂಡಗಳ ಮುಂದೆ ನನಗೆ ನಿಂದನೀಯ ಭಾಷೆ ಬಳಸುತ್ತಿದ್ದಾರೆ" ಎಂದು ಹೂಡಾ ಪತ್ರದಲ್ಲಿ ಬರೆದಿದ್ದಾರೆ.

ತರಬೇತಿ ಅವಧಿಯಲ್ಲಿ ಹೂಡಾ ಮತ್ತು ಕೃನಾಲ್ ಅವರು ತೀವ್ರ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ, "ನಾನು ನೆಟ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದೆ ಮತ್ತು ಮುಖ್ಯ ತರಬೇತುದಾರ ಪ್ರಭಾಕರ್ ಅವರ ಅನುಮತಿಯೊಂದಿಗೆ ನಾಳಿನ ಆಟಕ್ಕೆ ನನ್ನ ತಯಾರಿ ಮಾಡುತ್ತಿದ್ದೆ. ಕೃನಾಲ್ ನೆಟ್​ನಲ್ಲಿ ಬಂದು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು. ಮುಖ್ಯ ತರಬೇತುದಾರರ ಅನುಮತಿಯೊಂದಿಗೆ ನಾನು ತಯಾರಿಯನ್ನು ಮಾಡುತ್ತಿದ್ದೇನೆ ಎಂದು ಅವರಿಗೆ ಹೇಳಿದೆ. ಆದರೆ ಅವರು ‘ನಾನು ಕ್ಯಾಪ್ಟನ್, ಮುಖ್ಯ ಕೋಚ್ ಯಾರು? ನಾನೇ ಬರೋಡಾ ತಂಡ ಎಂದರು." ಎಂದು ಹೂಡಾ ಆರೋಪಿಸಿದ್ದಾರೆ.

"ಅವರು ಯಾವಾಗಲೂ ನನ್ನನ್ನು ಹತ್ತಿಕ್ಕಲು ನೋಡುತ್ತಿದ್ದರು. ನೀನು ಬರೋಡಾ ಪರವಾಗಿ ಹೇಗೆ ಆಡುತ್ತೀಯ ಎಂದು ನಾನು ನೋಡುತ್ತೇನೆ ಎಂದರು. ನನ್ನ ವೃತ್ತಿಜೀವನದಲ್ಲಿ ಇಂತಹ ಅನಾರೋಗ್ಯಕರ ವಾತಾವರಣವನ್ನು ಇಲ್ಲಿಯವರೆಗೆ ನೋಡಿಲ್ಲ. ನಾನು ಬರೋಡಾ ಕ್ರಿಕೆಟ್ ಅಸೋಸಿಯೇಷನ್‌ನಿಂದ ಮಾತ್ರ ಕ್ರಿಕೆಟ್‌ನ ಎಲ್ಲಾ ಹಂತಗಳಲ್ಲಿ ಪ್ರತಿನಿಧಿಸಿದ್ದೇನೆ. ಅಲ್ಲದೆ, ನಾನು ಕಳೆದ 7 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ. ಇಲ್ಲಿಯವರೆಗೆ ನನ್ನ ಕ್ರಿಕೆಟಿಂಗ್ ವೃತ್ತಿಜೀವನದಲ್ಲಿ ನನಗೆ ಉತ್ತಮ ದಾಖಲೆಗಳಿವೆ" ಎಂದು ಹೇಳಿದ್ದಾರೆ.

ಈ ಋತುವಿನಲ್ಲಿ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಹೂಡಾ ಆಡಿದ್ದರು. "ನಾನು ಇಲ್ಲಿಯವರೆಗೆ ಉತ್ತಮ ಅಂತಾರಾಷ್ಟ್ರೀಯ ಆಟಗಾರರು ಮತ್ತು ನಾಯಕರೊಂದಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಆದರೆ ತಂಡದ ನಾಯಕ ನೀಡಿದ ಇಂತಹ ಕೆಟ್ಟ ನಡವಳಿಕೆಯನ್ನು ನಾನು ಎಂದಿಗೂ ಎದುರಿಸಿಲ್ಲ. ನಾನು ತಂಡದ ವ್ಯಕ್ತಿಯಾಗಿದ್ದೇನೆ ಮತ್ತು ನಾನು ಯಾವಾಗಲೂ ನನ್ನ ತಂಡವನ್ನು ನನಗಿಂತಲೂ ಹೆಚ್ಚು ಎಂದು ನಂಬಿದ್ದೇನೆ. ಬರೋಡಾ ತಂಡದ ನಾಯಕ ಪ್ರತಿ ಬಾರಿಯೂ ನನ್ನನ್ನು ಚುಚ್ಚಿ ನನ್ನ ಅಭ್ಯಾಸಕ್ಕೆ ತೊಂದರೆ ನೀಡುತ್ತಿರುವ ಸಂದರ್ಭಗಳಲ್ಲಿ ನನ್ನ ಅತ್ಯುತ್ತಮ ಆಟವಾಡಲು ನನಗೆ ಸಾಧ್ಯವಾಗುತ್ತಿಲ್ಲ." ಎಂದಿದ್ದಾರೆ.

ದೀಪಕ್ ಹೂಡಾ ಶನಿವಾರ ಸಂಜೆ ಬಯೋ ಬಬಲ್​ನಿಂದ ಹೊರ ನಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಲು ಕೃನಾಲ್ ಪಾಂಡ್ಯ ಅಥವಾ ಹೂಡಾ ಇಬ್ಬರೂ ಲಭ್ಯವಿಲ್ಲ. ಈಗಾಗಲೇ ವ್ಯವಸ್ಥಾಪಕರಿಂದ ವರದಿ ಕೇಳಿರುವುದಾಗಿ ಬಿಸಿಎ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ. "ನಾನು ಭಾನುವಾರದ ವೇಳೆಗೆ ತಂಡದ ವ್ಯವಸ್ಥಾಪಕರಿಂದ ವರದಿ ಕೋರಿದ್ದೇನೆ. ನಾವು ಅದನ್ನು ಸ್ವೀಕರಿಸಿದ ನಂತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಮಾಡುತ್ತೇವೆ" ಎಂದು ಹೇಳಿದ್ದಾರೆ.

Last Updated : Jan 10, 2021, 7:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.