ETV Bharat / sports

ರಣಜಿ ಆಡೋದು ಬಿಟ್ಟು ರಾಷ್ಟ್ರೀಯ ಕ್ರಿಕೆಟ್​​​​ ಕಡೆ ಗಮನ ಕೊಡಿ: ಬುಮ್ರಾಗೆ ದಾದಾ ತಾಕೀತು

ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ​ ಜಸ್ಪ್ರೀತ್​ ಬುಮ್ರಾ ಬೆನ್ನು ನೋವಿಗೆ ತುತ್ತಾಗಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ವೆಸ್ಟ್​ ಇಂಡೀಸ್​ ವಿರುದ್ಧ ತವರಿನಲ್ಲಿ ನಡೆದ ಎಲ್ಲಾ ಸರಣಿಗಳಿಂದ ಹೊರಗುಳಿದಿದ್ದರು. ಆದರೆ ಅವರು ಇದೀಗ ಚೇತರಿಸಿಕೊಂಡಿದ್ದು, ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.

author img

By

Published : Dec 25, 2019, 3:43 PM IST

Updated : Dec 25, 2019, 3:51 PM IST

Sourav Ganguly asks Bumrah to skip Ranji game
Sourav Ganguly asks Bumrah to skip Ranji game

ಸೂರತ್​: ಗಾಯದಿಂದ ಚೇತರಿಸಿಕೊಂಡಿರುವ ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾರನ್ನು ರಣಜಿ ಕ್ರಿಕೆಟ್​ ಆಡುವುದು ಬೇಡ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ​ ಜಸ್ಪ್ರೀತ್​ ಬುಮ್ರಾ ಬೆನ್ನು ನೋವಿಗೆ ತುತ್ತಾಗಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ವೆಸ್ಟ್​ ಇಂಡೀಸ್​ ವಿರುದ್ಧ ತವರಿನಲ್ಲಿ ನಡೆದ ಎಲ್ಲಾ ಸರಣಿಗಳಿಂದ ಹೊರಗುಳಿದಿದ್ದರು. ಆದರೆ ಅವರು ಇದೀಗ ಚೇತರಿಸಿಕೊಂಡಿದ್ದು, ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.

ಬುಮ್ರಾ ಭಾರತ ತಂಡಕ್ಕೆ ಸೇರುವ ಮುನ್ನ ರಣಜಿ ಪಂದ್ಯದಲ್ಲಿ ತಮ್ಮ ಫಿಟ್ನೆಸ್​​​​ ಸಾಬೀತುಪಡಿಸಬೇಕು ಎಂದು ಬಿಸಿಸಿಐ ತಿಳಿಸಿತ್ತು. ಅದರಂತೆ ಬುಧವಾರದಿಂದ ಕೇರಳದ ವಿರುದ್ಧ ನಡೆಯುವ ರಣಜಿ ಪಂದ್ಯದಲ್ಲಿ ಆಡಲು ಬುಮ್ರಾ ನಿಶ್ಚಯಿಸಿದ್ದರು. ಆದರೆ ದಿನವೊಂದಕ್ಕೆ ಕೇವಲ 8 ಓವರ್​ ಮಾತ್ರ ಬೌಲಿಂಗ್​ ಮಾಡಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿತ್ತು. ಇದಕ್ಕೆ ಗುಜರಾತ್​ ಕ್ರಿಕೆಟ್​ ಒಪ್ಪದ್ದರಿಂದ ಬಿಸಿಸಿಐ ಅಧ್ಯಕ್ಷ ಗಂಗೂಲಿ ಬುಮ್ರಾರನ್ನು ರಣಜಿ ಕ್ರಿಕೆಟ್​ನಿಂದ ದೂರ ಉಳಿದು ಸೀಮಿತ ​ಓವರ್​ಗಳ ಕ್ರಿಕೆಟ್​ನತ್ತ ಗಮನ ನೀಡಲು ಖಡಕ್ಕಾಗಿ​ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶಾಖಪಟ್ಟಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಬುಮ್ರಾ ಅಭ್ಯಾಸದ ಅವಧಿಯಲ್ಲಿ ಭಾರತೀಯ ತಂಡದೊಂದಿಗೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು. ಈ ಸಂದರ್ಭದಲ್ಲಿ ತರಬೇತಿ ಮತ್ತು ಫಿಸಿಯೋ ತಂಡ ರಾಷ್ಟ್ರೀಯ ತಂಡ ಸೇರಲು ಬುಮ್ರಾರಿಗೆ ಹಸಿರು ನಿಶಾನೆ ನೀಡಿತ್ತು.

ಡಿಸೆಂಬರ್​ 5ರಿಂದ ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಹಾಗೂ ಡಿಸೆಂಬರ್ 14 ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ನಡೆಯಲಿದೆ.

ಸೂರತ್​: ಗಾಯದಿಂದ ಚೇತರಿಸಿಕೊಂಡಿರುವ ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾರನ್ನು ರಣಜಿ ಕ್ರಿಕೆಟ್​ ಆಡುವುದು ಬೇಡ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ​ ಜಸ್ಪ್ರೀತ್​ ಬುಮ್ರಾ ಬೆನ್ನು ನೋವಿಗೆ ತುತ್ತಾಗಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ವೆಸ್ಟ್​ ಇಂಡೀಸ್​ ವಿರುದ್ಧ ತವರಿನಲ್ಲಿ ನಡೆದ ಎಲ್ಲಾ ಸರಣಿಗಳಿಂದ ಹೊರಗುಳಿದಿದ್ದರು. ಆದರೆ ಅವರು ಇದೀಗ ಚೇತರಿಸಿಕೊಂಡಿದ್ದು, ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.

ಬುಮ್ರಾ ಭಾರತ ತಂಡಕ್ಕೆ ಸೇರುವ ಮುನ್ನ ರಣಜಿ ಪಂದ್ಯದಲ್ಲಿ ತಮ್ಮ ಫಿಟ್ನೆಸ್​​​​ ಸಾಬೀತುಪಡಿಸಬೇಕು ಎಂದು ಬಿಸಿಸಿಐ ತಿಳಿಸಿತ್ತು. ಅದರಂತೆ ಬುಧವಾರದಿಂದ ಕೇರಳದ ವಿರುದ್ಧ ನಡೆಯುವ ರಣಜಿ ಪಂದ್ಯದಲ್ಲಿ ಆಡಲು ಬುಮ್ರಾ ನಿಶ್ಚಯಿಸಿದ್ದರು. ಆದರೆ ದಿನವೊಂದಕ್ಕೆ ಕೇವಲ 8 ಓವರ್​ ಮಾತ್ರ ಬೌಲಿಂಗ್​ ಮಾಡಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿತ್ತು. ಇದಕ್ಕೆ ಗುಜರಾತ್​ ಕ್ರಿಕೆಟ್​ ಒಪ್ಪದ್ದರಿಂದ ಬಿಸಿಸಿಐ ಅಧ್ಯಕ್ಷ ಗಂಗೂಲಿ ಬುಮ್ರಾರನ್ನು ರಣಜಿ ಕ್ರಿಕೆಟ್​ನಿಂದ ದೂರ ಉಳಿದು ಸೀಮಿತ ​ಓವರ್​ಗಳ ಕ್ರಿಕೆಟ್​ನತ್ತ ಗಮನ ನೀಡಲು ಖಡಕ್ಕಾಗಿ​ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶಾಖಪಟ್ಟಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಬುಮ್ರಾ ಅಭ್ಯಾಸದ ಅವಧಿಯಲ್ಲಿ ಭಾರತೀಯ ತಂಡದೊಂದಿಗೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು. ಈ ಸಂದರ್ಭದಲ್ಲಿ ತರಬೇತಿ ಮತ್ತು ಫಿಸಿಯೋ ತಂಡ ರಾಷ್ಟ್ರೀಯ ತಂಡ ಸೇರಲು ಬುಮ್ರಾರಿಗೆ ಹಸಿರು ನಿಶಾನೆ ನೀಡಿತ್ತು.

ಡಿಸೆಂಬರ್​ 5ರಿಂದ ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಹಾಗೂ ಡಿಸೆಂಬರ್ 14 ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ನಡೆಯಲಿದೆ.

Intro:Body:Conclusion:
Last Updated : Dec 25, 2019, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.