ETV Bharat / sports

ವಿಲಿಯರ್ಸ್​ ವಿಕೆಟ್​ ಕೀಪಿಂಗ್​ ಅಭ್ಯಾಸ.. ಕರ್ನಾಟಕದ ಬ್ಯಾಟ್ಸ್​ಮನ್​ಗೆ ಸಿಕ್ಕಿದಿಯಾ ಗ್ರೀನ್​ ಸಿಗ್ನಲ್​?

author img

By

Published : Aug 30, 2020, 5:23 PM IST

ಆಸ್ಟ್ರೇಲಿಯಾದ ಆ್ಯರೋನ್​ ಫಿಂಚ್​ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಆರ್​ಸಿಬಿ ಬ್ಯಾಟಿಂಗ್​ ಲೈನ್​ಅಪ್​ ಬಲಿಷ್ಠವಾಗಿದೆ. ಆದ್ದರಿಂದ ಪಾರ್ಥೀವ್​ ಪಟೇಲ್​ ಬದಲು ಕರ್ನಾಟಕದ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ಗೆ ಈ ಬಾರಿ ಆಡುವ 11ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ..

ವಿಲಿಯರ್ಸ್​ ವಿಕೆಟ್​ ಕೀಪಿಂಗ್​ ಅಭ್ಯಾಸ
ವಿಲಿಯರ್ಸ್​ ವಿಕೆಟ್​ ಕೀಪಿಂಗ್​ ಅಭ್ಯಾಸ

ದುಬೈ : ತುಂಬಾ ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್​ಮನ್​ ಎಬಿಡಿ ವಿಲಿಯರ್ಸ್​ ವಿಕೆಟ್​ ಕೀಪಿಂಗ್‌ಗೆ ಮರಳುವ ಸಾಧ್ಯತೆಯಿದೆ. ಇದಕ್ಕೆ ಪೂರಕವೆಂಬಂತೆ ಮಿಸ್ಟರ್​ 360 ಖ್ಯಾತಿಯ ಎಬಿಡಿ ಗ್ರೌಂಡ್​ನಲ್ಲಿ ದೀರ್ಘ ಸಮಯ ವಿಕೆಟ್​ ಕೀಪಿಂಗ್ ಅಭ್ಯಾಸ ನಡೆಸಿದ್ದಾರೆ.

3 ಬಾರಿ ಐಪಿಎಲ್​ ಫೈನಲ್​ನಲ್ಲಿ ಸೋತಿರುವ ಆರ್​ಸಿಬಿ ಕಳೆದ ಮೂರು ಆವೃತ್ತಿಗಳಿಂದ ಪ್ಲೇ ಆಫ್​ ಹಂತಕ್ಕೇರಲು ಹರಸಾಹಸ ಪಡುತ್ತಿದೆ. ಈ ಬಾರಿ ಸಂಪೂರ್ಣ ಐಪಿಎಲ್​ ಯುಎಇನಲ್ಲಿ ನಡೆಯುತ್ತಿರುವುದರಿಂದ, ಇದರ ಲಾಭ ಪಡೆದುಕೊಳ್ಳಲು ಕೊಹ್ಲಿ ಟೀಮ್​ ಬಯಸಿದೆ. ಹಾಗಾಗಿ ವಿಲಿಯರ್ಸ್​ ದೀರ್ಘ ಸಮಯದ ನಂತರ ಮತ್ತೆ ಗ್ಲೌಸ್ ​ತೊಡಲಿದ್ದಾರೆ.

ದೇವದತ್​ ಪಡಿಕ್ಕಲ್​
ದೇವದತ್​ ಪಡಿಕ್ಕಲ್​

ಆಸ್ಟ್ರೇಲಿಯಾದ ಆ್ಯರೋನ್​ ಫಿಂಚ್​ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಆರ್​ಸಿಬಿ ಬ್ಯಾಟಿಂಗ್​ ಲೈನ್​ಅಪ್​ ಬಲಿಷ್ಠವಾಗಿದೆ. ಆದ್ದರಿಂದ ಪಾರ್ಥೀವ್​ ಪಟೇಲ್​ ಬದಲು ಕರ್ನಾಟಕದ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ಗೆ ಈ ಬಾರಿ ಆಡುವ 11ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಪಡಿಕ್ಕಲ್​ ಆಗಮನದಿಂದ ಬ್ಯಾಟ್ಸ್​ಮನ್​ಗಳ ಸಂಖ್ಯೆಯೂ ಹೆಚ್ಚಾಗಲಿರುವುದರಿಂದ ಪಾರ್ಥೀವ್​ ಪಟೇಲ್​ ಬದಲಿಗೆ ಎಬಿಡಿ ನಾಲ್ಕನೇ ಕ್ರಮಾಂಕ ಮತ್ತು ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ದಟ್ಟವಾಗಿದೆ. ಪೂರಕವೆಂಬಂತೆ ಎಬಿಡಿ ಕೂಡ ಭಾನುವಾರ ಬ್ಯಾಟಿಂಗ್​ ಬದಲು ಹೆಚ್ಚು ಕೀಪಿಂಗ್​ ಅಭ್ಯಾಸ ನಡೆಸಿದ್ದಾರೆ.

ಆರ್​ಸಿಬಿ ಕೋಚ್​ ಸೈಮನ್ ಕ್ಯಾಟಿಚ್​ ಕೂಡ ಯುವ ಆಟಗಾರನ ಮೇಲೆ ಸಾಕಷ್ಟು ಭರವಸೆಗಳನ್ನಿಟ್ಟುಕೊಂಡಿದ್ದು, ಐಪಿಎಲ್​ನಲ್ಲಿ ಅವಕಾಶ ನೀಡುವುದಾಗಿ ಮುನ್ಸೂಚನೆ ನೀಡಿದ್ದರು. ಇದೀಗ ಅದು ಪಕ್ಕ ಆದಂತಿದೆ. 19 ವರ್ಷದ ಪಡಿಕ್ಕಲ್​ ಕಳೆದ ವರ್ಷ ಕರ್ನಾಟಕ ಪ್ರೀಮಿಯರ್​ ಲೀಗ್​ನಲ್ಲಿ 4 ಅರ್ಧಶತಕ ಸಹಿತ 310ರನ್ ​ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು.

ಬಿಸಿಸಿಐ ಆಯೋಜನೆ ಮಾಡುವ ವಿಜಯ್​ ಹಜಾರೆ(ಏಕದಿನ) ಟ್ರೋಫಿಯಲ್ಲೂ ಪಡಿಕ್ಕಲ್​ ಅಬ್ಬರದ ಬ್ಯಾಟಿಂಗ್ ನಡೆಸಿ 2 ಶತಕ ಹಾಗೂ 5 ಅರ್ಧಶತಕ ಸಹಿತ 609 ರನ್​ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್​ ಗಳಿಸಿದ ಬ್ಯಾಟ್ಸ್​ಮನ್​ ಆಗಿದ್ದರೆ, ಸಯ್ಯದ್​ ಮುಷ್ತಾಕ್​ ಅಲಿ ಟಿ20 ಟೂರ್ನಿಯಲ್ಲೂ ಬರೋಬ್ಬರಿ 580 ರನ್​ ಗಳಿಸಿ ಮಿಂಚಿದ್ದರು.​

ದುಬೈ : ತುಂಬಾ ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್​ಮನ್​ ಎಬಿಡಿ ವಿಲಿಯರ್ಸ್​ ವಿಕೆಟ್​ ಕೀಪಿಂಗ್‌ಗೆ ಮರಳುವ ಸಾಧ್ಯತೆಯಿದೆ. ಇದಕ್ಕೆ ಪೂರಕವೆಂಬಂತೆ ಮಿಸ್ಟರ್​ 360 ಖ್ಯಾತಿಯ ಎಬಿಡಿ ಗ್ರೌಂಡ್​ನಲ್ಲಿ ದೀರ್ಘ ಸಮಯ ವಿಕೆಟ್​ ಕೀಪಿಂಗ್ ಅಭ್ಯಾಸ ನಡೆಸಿದ್ದಾರೆ.

3 ಬಾರಿ ಐಪಿಎಲ್​ ಫೈನಲ್​ನಲ್ಲಿ ಸೋತಿರುವ ಆರ್​ಸಿಬಿ ಕಳೆದ ಮೂರು ಆವೃತ್ತಿಗಳಿಂದ ಪ್ಲೇ ಆಫ್​ ಹಂತಕ್ಕೇರಲು ಹರಸಾಹಸ ಪಡುತ್ತಿದೆ. ಈ ಬಾರಿ ಸಂಪೂರ್ಣ ಐಪಿಎಲ್​ ಯುಎಇನಲ್ಲಿ ನಡೆಯುತ್ತಿರುವುದರಿಂದ, ಇದರ ಲಾಭ ಪಡೆದುಕೊಳ್ಳಲು ಕೊಹ್ಲಿ ಟೀಮ್​ ಬಯಸಿದೆ. ಹಾಗಾಗಿ ವಿಲಿಯರ್ಸ್​ ದೀರ್ಘ ಸಮಯದ ನಂತರ ಮತ್ತೆ ಗ್ಲೌಸ್ ​ತೊಡಲಿದ್ದಾರೆ.

ದೇವದತ್​ ಪಡಿಕ್ಕಲ್​
ದೇವದತ್​ ಪಡಿಕ್ಕಲ್​

ಆಸ್ಟ್ರೇಲಿಯಾದ ಆ್ಯರೋನ್​ ಫಿಂಚ್​ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಆರ್​ಸಿಬಿ ಬ್ಯಾಟಿಂಗ್​ ಲೈನ್​ಅಪ್​ ಬಲಿಷ್ಠವಾಗಿದೆ. ಆದ್ದರಿಂದ ಪಾರ್ಥೀವ್​ ಪಟೇಲ್​ ಬದಲು ಕರ್ನಾಟಕದ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ಗೆ ಈ ಬಾರಿ ಆಡುವ 11ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಪಡಿಕ್ಕಲ್​ ಆಗಮನದಿಂದ ಬ್ಯಾಟ್ಸ್​ಮನ್​ಗಳ ಸಂಖ್ಯೆಯೂ ಹೆಚ್ಚಾಗಲಿರುವುದರಿಂದ ಪಾರ್ಥೀವ್​ ಪಟೇಲ್​ ಬದಲಿಗೆ ಎಬಿಡಿ ನಾಲ್ಕನೇ ಕ್ರಮಾಂಕ ಮತ್ತು ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ದಟ್ಟವಾಗಿದೆ. ಪೂರಕವೆಂಬಂತೆ ಎಬಿಡಿ ಕೂಡ ಭಾನುವಾರ ಬ್ಯಾಟಿಂಗ್​ ಬದಲು ಹೆಚ್ಚು ಕೀಪಿಂಗ್​ ಅಭ್ಯಾಸ ನಡೆಸಿದ್ದಾರೆ.

ಆರ್​ಸಿಬಿ ಕೋಚ್​ ಸೈಮನ್ ಕ್ಯಾಟಿಚ್​ ಕೂಡ ಯುವ ಆಟಗಾರನ ಮೇಲೆ ಸಾಕಷ್ಟು ಭರವಸೆಗಳನ್ನಿಟ್ಟುಕೊಂಡಿದ್ದು, ಐಪಿಎಲ್​ನಲ್ಲಿ ಅವಕಾಶ ನೀಡುವುದಾಗಿ ಮುನ್ಸೂಚನೆ ನೀಡಿದ್ದರು. ಇದೀಗ ಅದು ಪಕ್ಕ ಆದಂತಿದೆ. 19 ವರ್ಷದ ಪಡಿಕ್ಕಲ್​ ಕಳೆದ ವರ್ಷ ಕರ್ನಾಟಕ ಪ್ರೀಮಿಯರ್​ ಲೀಗ್​ನಲ್ಲಿ 4 ಅರ್ಧಶತಕ ಸಹಿತ 310ರನ್ ​ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು.

ಬಿಸಿಸಿಐ ಆಯೋಜನೆ ಮಾಡುವ ವಿಜಯ್​ ಹಜಾರೆ(ಏಕದಿನ) ಟ್ರೋಫಿಯಲ್ಲೂ ಪಡಿಕ್ಕಲ್​ ಅಬ್ಬರದ ಬ್ಯಾಟಿಂಗ್ ನಡೆಸಿ 2 ಶತಕ ಹಾಗೂ 5 ಅರ್ಧಶತಕ ಸಹಿತ 609 ರನ್​ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್​ ಗಳಿಸಿದ ಬ್ಯಾಟ್ಸ್​ಮನ್​ ಆಗಿದ್ದರೆ, ಸಯ್ಯದ್​ ಮುಷ್ತಾಕ್​ ಅಲಿ ಟಿ20 ಟೂರ್ನಿಯಲ್ಲೂ ಬರೋಬ್ಬರಿ 580 ರನ್​ ಗಳಿಸಿ ಮಿಂಚಿದ್ದರು.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.