ETV Bharat / sports

'ಸೂರ್ಯ ಕುಮಾರ'ನಿಗೆ ತಾಳ್ಮೆಯಿಂದರಲು ಸಲಹೆ ನೀಡಿದ ರವಿಶಾಸ್ತ್ರಿ

author img

By

Published : Oct 29, 2020, 6:57 PM IST

ಟೀಮ್ ಇಂಡಿಯಾಕ್ಕೆ ಸೂರ್ಯಕುಮಾರ್ ಆಯ್ಕೆಯಾಗದ್ದಕ್ಕೆ ಹರ್ಭಜನ್​ ಸಿಂಗ್ ಸೇರಿದಂತೆ ಹಲವಾರು ಕ್ರಿಕೆಟಿಗರು ಬಿಸಿಸಿಐ ನಡೆಯನ್ನು ಟೀಕಿಸಿದ್ದಾರೆ. ಕೆಲವರು ಇನ್ನು ಸಮಯ ಮೀರಿಲ್ಲ ತಂಡದ ಜೊತೆ ಯಾದವ್​ ಅವರನ್ನು ಕರೆದುಕೊಂಡು ಹೋಗಬಹುದು ಎಂದು ಸಲಹೆ ನೀಡುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್​
ಸೂರ್ಯಕುಮಾರ್ ಯಾದವ್​

ಅಬುಧಾಬಿ: ಬುಧವಾರ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮರ್​ ಯಾದವ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೀಮ್ ಇಂಡಿಯಾ ಕೋಚ್​ ರವಿ ಶಾಸ್ತ್ರಿ ತಾಳ್ಮೆ ಕಳೆದುಕೊಳ್ಳದಿರಲು ಸಲಹೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಯಾವುದೇ ಮಾದರಿಯ ಕ್ರಿಕೆಟ್​​ಗೂ ಸೂರ್ಯಕುಮರ್ ಯಾದವ್​ ಆಯ್ಕೆಮಾಡಿರಲಿಲ್ಲ. ಇದೇ ಕೋಪದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸೂರ್ಯಕುಮಾರ್​ ಕೇವಲ 49 ಎಸೆತಗಳಲ್ಲಿ 79 ರನ್​ ಚಚ್ಚುವ ಮೂಲಕ ಭಾರತ ತಂಡದ ನಾಯಕ ಕೊಹ್ಲಿ ಎದುರೇ ತಮ್ಮ ತಂಡಕ್ಕೆ ಜಯ ತಂದುಕೊಟ್ಟು ತಾಕತ್ತು ಪ್ರದರ್ಶಿಸಿದ್ದರು.

ಸೂರ್ಯಕುಮಾರ್​ ಹಾಗೂ ಕೊಹ್ಲಿ ಪಂದ್ಯದ ಸಮಯದಲ್ಲಿ​ ಎದುರು ಬದುರಾಗಿ ಗುರಾಯಿಸಿದ ಘಟನೆ ಕೂಡ ನಡೆದಿತ್ತು. ಇದು ಇಂಟರ್​ನೆಟ್​ನಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಕೆಲವು ಕೊಹ್ಲಿ ಪರ, ಕೆಲವರು ಕೊಹ್ಲಿಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ ಸೂರ್ಯಕುಮಾರ್ ಯಾದವ್​ ಕೂಡ ಪಂದ್ಯದಲ್ಲಿ ತಮ್ಮನ್ನು ಆಯ್ಕೆ ಮಾಡದಿದ್ದ ಅಸಮಾಧಾನವನ್ನು ಹೊರ ಹಾಕುತ್ತಿದ್ದರು.

ಪಂದ್ಯದ ಮುಗಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಭಾರತ ತಂಡದ ಕೋಚ್ ರವಿಶಾಸ್ತ್ರಿ, " ಸೂರ್ಯ ನಮಸ್ಕಾರ್, ಇದೇ ರೀತಿ ದೃಢವಾಗಿ ಮತ್ತ ತಾಳ್ಮೆಯಿಂದಿರು" ಎಂದು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಸೂರ್ಯಕುಮಾರ್ ಆಯ್ಕೆಯಾಗದ್ದಕ್ಕೆ ಹರ್ಭಜನ್​ ಸಿಂಗ್ ಸೇರಿದಂತೆ ಹಲವಾರು ಕ್ರಿಕೆಟಿಗರು ಬಿಸಿಸಿಐ ನಡೆಯನ್ನು ಟೀಕಿಸಿದ್ದಾರೆ. ಕೆಲವರು ಇನ್ನು ಸಮಯ ಮೀರಿಲ್ಲ ತಂಡದ ಜೊತೆ ಯಾದವ್ ಅವ​ರನ್ನು ಕರೆದುಕೊಂಡು ಹೋಗಬಹುದು ಎಂದು ಸಲಹೆ ನೀಡುತ್ತಿದ್ದಾರೆ.

ಅಬುಧಾಬಿ: ಬುಧವಾರ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮರ್​ ಯಾದವ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೀಮ್ ಇಂಡಿಯಾ ಕೋಚ್​ ರವಿ ಶಾಸ್ತ್ರಿ ತಾಳ್ಮೆ ಕಳೆದುಕೊಳ್ಳದಿರಲು ಸಲಹೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಯಾವುದೇ ಮಾದರಿಯ ಕ್ರಿಕೆಟ್​​ಗೂ ಸೂರ್ಯಕುಮರ್ ಯಾದವ್​ ಆಯ್ಕೆಮಾಡಿರಲಿಲ್ಲ. ಇದೇ ಕೋಪದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸೂರ್ಯಕುಮಾರ್​ ಕೇವಲ 49 ಎಸೆತಗಳಲ್ಲಿ 79 ರನ್​ ಚಚ್ಚುವ ಮೂಲಕ ಭಾರತ ತಂಡದ ನಾಯಕ ಕೊಹ್ಲಿ ಎದುರೇ ತಮ್ಮ ತಂಡಕ್ಕೆ ಜಯ ತಂದುಕೊಟ್ಟು ತಾಕತ್ತು ಪ್ರದರ್ಶಿಸಿದ್ದರು.

ಸೂರ್ಯಕುಮಾರ್​ ಹಾಗೂ ಕೊಹ್ಲಿ ಪಂದ್ಯದ ಸಮಯದಲ್ಲಿ​ ಎದುರು ಬದುರಾಗಿ ಗುರಾಯಿಸಿದ ಘಟನೆ ಕೂಡ ನಡೆದಿತ್ತು. ಇದು ಇಂಟರ್​ನೆಟ್​ನಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಕೆಲವು ಕೊಹ್ಲಿ ಪರ, ಕೆಲವರು ಕೊಹ್ಲಿಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ ಸೂರ್ಯಕುಮಾರ್ ಯಾದವ್​ ಕೂಡ ಪಂದ್ಯದಲ್ಲಿ ತಮ್ಮನ್ನು ಆಯ್ಕೆ ಮಾಡದಿದ್ದ ಅಸಮಾಧಾನವನ್ನು ಹೊರ ಹಾಕುತ್ತಿದ್ದರು.

ಪಂದ್ಯದ ಮುಗಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಭಾರತ ತಂಡದ ಕೋಚ್ ರವಿಶಾಸ್ತ್ರಿ, " ಸೂರ್ಯ ನಮಸ್ಕಾರ್, ಇದೇ ರೀತಿ ದೃಢವಾಗಿ ಮತ್ತ ತಾಳ್ಮೆಯಿಂದಿರು" ಎಂದು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಸೂರ್ಯಕುಮಾರ್ ಆಯ್ಕೆಯಾಗದ್ದಕ್ಕೆ ಹರ್ಭಜನ್​ ಸಿಂಗ್ ಸೇರಿದಂತೆ ಹಲವಾರು ಕ್ರಿಕೆಟಿಗರು ಬಿಸಿಸಿಐ ನಡೆಯನ್ನು ಟೀಕಿಸಿದ್ದಾರೆ. ಕೆಲವರು ಇನ್ನು ಸಮಯ ಮೀರಿಲ್ಲ ತಂಡದ ಜೊತೆ ಯಾದವ್ ಅವ​ರನ್ನು ಕರೆದುಕೊಂಡು ಹೋಗಬಹುದು ಎಂದು ಸಲಹೆ ನೀಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.