ETV Bharat / sports

ರಾಹುಲ್​,ಮನೀಷ್​ ಇದ್ರೂ ಪ್ರಯೋಜನವಾಗಲಿಲ್ಲ... ರಣಜಿ ಸೆಮಿಫೈನಲ್​ ಸೋತ ಕರ್ನಾಟಕ! - ರಣಜಿ ಸೆಮಿಫೈನಲ್​ ಸೋತ ಕರ್ನಾಟಕ

ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದ ಕರ್ನಾಟಕ ತಂಡ ಬಂಗಾಳ್​ ವಿರುದ್ಧ ಸೋಲು ಕಾಣುವ ಮೂಲಕ ಅಭಿಯಾನ ಅಂತ್ಯಗೊಳಿಸಿದೆ.

Ranji Trophy
ರಣಜಿ ಸೆಮಿಫೈನಲ್​ ಸೋತ ಕರ್ನಾಟಕ
author img

By

Published : Mar 3, 2020, 1:03 PM IST

ಕೋಲ್ಕತ್ತಾ: ಎಂಟು ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ ಈ ಸಲದ ರಣಜಿ ಟೂರ್ನಿಯ ಸೆಮಿಫೈನಲ್​ನಲ್ಲಿ ಸೋಲು ಕಾಣುವ ಮೂಲಕ ಅಭಿಯಾನ ಅಂತ್ಯಗೊಳಿಸಿದ್ದು, ಬಂಗಾಳ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಬರೋಬ್ಬರಿ 174ರನ್​ಗಳ ಸೋಲು ಕಂಡಿದೆ.

Ranji Trophy
ಬಂಗಾಳ್​​ ತಂಡದ ಸಂಭ್ರಮ

ಅನುಭವಿ ಬ್ಯಾಟ್ಸ್​​ಮನ್​ ಮನೀಶ್​​ ಪಾಂಡೆ, ಕೆಎಲ್​ ರಾಹುಲ್​ರಂತಹ ದಿಗ್ಗಜ ಬ್ಯಾಟ್ಸ್​ಮನ್​ಗಳ ನಡುವೆ ಕೂಡ ಸಂಘಟಿತ ಪ್ರದರ್ಶನ ನೀಡಿರುವ ಬಂಗಾಳ್​​ ತಂಡ ಗೆಲುವು ಪಡೆದುಕೊಂಡು 13 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದೆ. ಕಳೆದ 30 ವರ್ಷಗಳಿಂದ ರಣಜಿ ಚಾಂಪಿಯನ್​ ಟ್ರೋಪಿ ಗೆಲ್ಲಲ್ಲು ವಿಫಲಗೊಂಡಿರುವ ಬಂಗಾಳ್​​ ತಂಡ ಈ ಸಲ ಮಾಸ್ಟರ್​ ಪ್ಲಾನ್​ ಹಾಕಿಕೊಂಡು ಕಣಕ್ಕಿಳಿದಿದ್ದು, ಗುಜರಾತ್​ ವಿರುದ್ಧ ಫೈನಲ್​​ನಲ್ಲಿ​ ಸೆಣಸಾಟ ನಡೆಸಲಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​​ ನಡೆಸಿದ್ದ ಬಂಗಾಳ್​ ತಂಡ ಮಜುಂದಾರ್​​ ​​​​ 149ರನ್​ಗಳ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 312ರನ್​ಗಳಿಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಕರ್ನಾಟಕ ತಂಡ ಕೇವಲ 122ರನ್​ಗಳಿಗೆ ಆಲೌಟ್​ ಆಗಿತ್ತು. ಎರಡನೇ ಇನ್ನಿಂಗ್ಸ್​​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ನೀಡಿದ್ದ ಕರ್ನಾಟಕ ತಂಡ ಎದುರಾಳಿ ತಂಡವನ್ನ 161ರನ್​ಗಳಿಗೆ ಆಲೌಟ್​ಮಾಡುವ ಮೂಲಕ 352ರನ್​ಗಳ ಗೆಲುವಿನ ಟಾರ್ಗೆಟ್​ ಪಡೆದುಕೊಂಡಿತು.

ಎರಡನೇ ಇನ್ನಿಂಗ್ಸ್​ನಲ್ಲೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ ಕರ್ನಾಟಕ ತಂಡ ಕೇವಲ 177ರನ್​ಗಳಿಗೆ ಆಲೌಟ್​ ಆಗಿ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ತಂಡದಲ್ಲಿ ಮನೀಷ್​ ಪಾಂಡೆ, ಕೆಎಲ್​ ರಾಹುಲ್​ ಹಾಗೂ ಕರುಣ್​ ನಾಯರ್​ರಂತಹ ಪ್ರತಿಭಾವಂತ ಪ್ಲೇಯರ್ಸ್​ಗಳಿದ್ದರೂ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ. ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಚಾಂಪಿಯನ್ ಪ್ರಶಸ್ತಿ ಗೆದ್ದಿದ್ದ ಕರ್ನಾಟಕ ಇದೀಗ ಸೋಲು ಕಂಡಿದೆ.

ಸಂಕ್ಷಿಪ್ತ ಸ್ಕೋರ್​ ಇಂತಿದೆ:

ಬಂಗಾಳ ಮೊದಲ ಇನ್ನಿಂಗ್ಸ್ 312

ಕರ್ನಾಟಕ ಮೊದಲ ಇನ್ನಿಂಗ್ಸ್ 122

ಬಂಗಾಳ ಎರಡನೇ ಇನ್ನಿಂಗ್ಸ್ 161

ಕರ್ನಾಟಕ ಎರಡನೇ ಇನ್ನಿಂಗ್ಸ್ 177

ಕೋಲ್ಕತ್ತಾ: ಎಂಟು ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ ಈ ಸಲದ ರಣಜಿ ಟೂರ್ನಿಯ ಸೆಮಿಫೈನಲ್​ನಲ್ಲಿ ಸೋಲು ಕಾಣುವ ಮೂಲಕ ಅಭಿಯಾನ ಅಂತ್ಯಗೊಳಿಸಿದ್ದು, ಬಂಗಾಳ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಬರೋಬ್ಬರಿ 174ರನ್​ಗಳ ಸೋಲು ಕಂಡಿದೆ.

Ranji Trophy
ಬಂಗಾಳ್​​ ತಂಡದ ಸಂಭ್ರಮ

ಅನುಭವಿ ಬ್ಯಾಟ್ಸ್​​ಮನ್​ ಮನೀಶ್​​ ಪಾಂಡೆ, ಕೆಎಲ್​ ರಾಹುಲ್​ರಂತಹ ದಿಗ್ಗಜ ಬ್ಯಾಟ್ಸ್​ಮನ್​ಗಳ ನಡುವೆ ಕೂಡ ಸಂಘಟಿತ ಪ್ರದರ್ಶನ ನೀಡಿರುವ ಬಂಗಾಳ್​​ ತಂಡ ಗೆಲುವು ಪಡೆದುಕೊಂಡು 13 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದೆ. ಕಳೆದ 30 ವರ್ಷಗಳಿಂದ ರಣಜಿ ಚಾಂಪಿಯನ್​ ಟ್ರೋಪಿ ಗೆಲ್ಲಲ್ಲು ವಿಫಲಗೊಂಡಿರುವ ಬಂಗಾಳ್​​ ತಂಡ ಈ ಸಲ ಮಾಸ್ಟರ್​ ಪ್ಲಾನ್​ ಹಾಕಿಕೊಂಡು ಕಣಕ್ಕಿಳಿದಿದ್ದು, ಗುಜರಾತ್​ ವಿರುದ್ಧ ಫೈನಲ್​​ನಲ್ಲಿ​ ಸೆಣಸಾಟ ನಡೆಸಲಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​​ ನಡೆಸಿದ್ದ ಬಂಗಾಳ್​ ತಂಡ ಮಜುಂದಾರ್​​ ​​​​ 149ರನ್​ಗಳ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 312ರನ್​ಗಳಿಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಕರ್ನಾಟಕ ತಂಡ ಕೇವಲ 122ರನ್​ಗಳಿಗೆ ಆಲೌಟ್​ ಆಗಿತ್ತು. ಎರಡನೇ ಇನ್ನಿಂಗ್ಸ್​​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ನೀಡಿದ್ದ ಕರ್ನಾಟಕ ತಂಡ ಎದುರಾಳಿ ತಂಡವನ್ನ 161ರನ್​ಗಳಿಗೆ ಆಲೌಟ್​ಮಾಡುವ ಮೂಲಕ 352ರನ್​ಗಳ ಗೆಲುವಿನ ಟಾರ್ಗೆಟ್​ ಪಡೆದುಕೊಂಡಿತು.

ಎರಡನೇ ಇನ್ನಿಂಗ್ಸ್​ನಲ್ಲೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ ಕರ್ನಾಟಕ ತಂಡ ಕೇವಲ 177ರನ್​ಗಳಿಗೆ ಆಲೌಟ್​ ಆಗಿ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ತಂಡದಲ್ಲಿ ಮನೀಷ್​ ಪಾಂಡೆ, ಕೆಎಲ್​ ರಾಹುಲ್​ ಹಾಗೂ ಕರುಣ್​ ನಾಯರ್​ರಂತಹ ಪ್ರತಿಭಾವಂತ ಪ್ಲೇಯರ್ಸ್​ಗಳಿದ್ದರೂ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ. ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಚಾಂಪಿಯನ್ ಪ್ರಶಸ್ತಿ ಗೆದ್ದಿದ್ದ ಕರ್ನಾಟಕ ಇದೀಗ ಸೋಲು ಕಂಡಿದೆ.

ಸಂಕ್ಷಿಪ್ತ ಸ್ಕೋರ್​ ಇಂತಿದೆ:

ಬಂಗಾಳ ಮೊದಲ ಇನ್ನಿಂಗ್ಸ್ 312

ಕರ್ನಾಟಕ ಮೊದಲ ಇನ್ನಿಂಗ್ಸ್ 122

ಬಂಗಾಳ ಎರಡನೇ ಇನ್ನಿಂಗ್ಸ್ 161

ಕರ್ನಾಟಕ ಎರಡನೇ ಇನ್ನಿಂಗ್ಸ್ 177

ETV Bharat Logo

Copyright © 2025 Ushodaya Enterprises Pvt. Ltd., All Rights Reserved.