ETV Bharat / sports

ಸೌರಾಷ್ಟ್ರ ವಿರುದ್ಧ ತಿರುಗಿಬಿದ್ದ ಗುಜರಾತ್​... ಕೂತೂಹಲ ಘಟದಲ್ಲಿ ರಣಜಿ ಸೆಮಿಫೈನಲ್​

author img

By

Published : Mar 2, 2020, 11:54 PM IST

52 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಲು ಬಂದ ಆರಂಭಿಕರಾದ ಕಿಶನ್ ಕುಮಾರ್ಶ್ರ(0)​ ಹಾರ್ವಿಕ್​ ದೇಸಾಯಿ(0)ಅವರನ್ನು ಖಾತೆ ತೆರೆಯುವ ಮುನ್ನವೇ ಚಿಂತನ್​ ಪೆವಿಲಿಯನ್​ಗಟ್ಟಿದರು. ನಂತರ ಬಂದ ಅವಿ ಬರೋತ್​ 1 ರನ್​ಗಳಿಸಿ ಅದೇ ಓವರ್​ನ ಕೊನೆಯ ಎಸೆತದಲ್ಲಿ ಔಟಾದರು.

Ranji Trophy 2020
ರಣಜಿ ಸೆಮಿಫೈನಲ್​

ರಾಜ್​ಕೋಟ್​: ಮೊದಲ ಇನ್ನಿಂಗ್ಸ್​ನಲ್ಲಿ 52 ರನ್​ಗಳ ಹಿನ್ನಡೆಯನುಭಿವಿಸಿದರು ಎರಡನೇ ಇನ್ನಿಂಗ್ಸ್​ನಲ್ಲಿ ಕರಾರುವಾಕ್​ ಬೌಲಿಂಗ್​ ದಾಳಿ ನಡೆಸಿದ ಗುಜರಾತ್​ ತಂಡ ಸೌರಾಷ್ಟ್ರ ವಿರುದ್ಧ ಸೆಮಿಫೈನಲ್​ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೋಯ್ದಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಸೌರಾಷ್ಟ್ರ ತಂಡ ಶೆಲ್ಡಾನ್ ಜಾಕ್ಸನ್​(103) ಅವರ ಶತಕದ ನೆರವಿನಿಂದ 304 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಗುಜರಾತ್​ ತಂಡ 252 ರನ್​ಗಳಿಗೆ ಆಲೌಟ್​ ಆಗುವ ಮೂಲಕ 52 ರನ್​ಗಳ ಹಿನ್ನಡೆ ಅನುಭವಿಸಿತ್ತು.

ಆದರೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಗುಜರಾತ್​ ತಂಡಕ್ಕೆ ಚಿಂತನ್​ ಗಜ ಭಾರಿ ಆಘಾತ ನೀಡಿದ್ದಾರೆ. ಕೇವಲ 15 ರನ್​ 5 ವಿಕೆಟ್​ ಪಡೆದ ಗಜ ಗುಜರಾತ್​ ತಂಡಕ್ಕೆ ಫೈನಲ್​ ಕನಸನ್ನು ಮತ್ತೆ ಚಿಗುರುವಂತೆ ಮಾಡಿದ್ದಾರೆ.

52 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಲು ಬಂದ ಆರಂಭಿಕರಾದ ಕಿಶನ್ ಕುಮಾರ್ಶ್ರ(0)​ ಹಾರ್ವಿಕ್​ ದೇಸಾಯಿ(0)ಅವರನ್ನು ಖಾತೆ ತೆರೆಯುವ ಮುನ್ನವೇ ಚಿಂತನ್​ ಪೆವಿಲಿಯನ್​ಗಟ್ಟಿದರು. ನಂತರ ಬಂದ ಅವಿ ಬರೋತ್​ 1 ರನ್​ಗಳಿಸಿ ಅದೇ ಓವರ್​ನ ಕೊನೆಯ ಎಸೆತದಲ್ಲಿ ಔಟಾದರು.

4 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದ ಸೌರಾಷ್ಟ್ರಕ್ಕೆ ಚೇತರಿಸಿಕೊಳ್ಳಲು ಅವಕಾಶ ನೀಡ ಚಿಂತನ್​ ಮತ್ತೆ 15 ರನ್​ಗಳಾಗುವಷ್ಟರಲ್ಲಿ ವಿಶ್ವರಾಜ್​ ಜಡೇಜ(6) ಅವರನ್ನು ಹಾಗೂ ನಂತರದ ಎಸೆತದಲ್ಲಿ ಮೊದಲ ಇನ್ನಿಂಗ್ಸ್​ನ ಶತಕವೀರ ಶೆಲ್ಡಾನ್​ ಜಾಕ್ಸನ್(0) ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗಟ್ಟಿದರು.

ಇನ್ನು ಕೇವಲ 15ರನ್​ಗೆ 5 ವಿಕೆಟ್ ಕಳೆದುಕೊಂಡು ಅಘಾತಕ್ಕೊಳಗಾಗಿದ್ದ ಸೌರಾಷ್ಟ್ರ ತಂಡಕ್ಕೆ ಚೇತನ್​ ಸಕಾರಿಯಾ(32) ಹಾಗೂ ಅರ್ಪಿತ್​ ವಾಸುದೇವ(23) 6ನೇ ವಿಕೆಟ್​ 51 ರನ್​ ಸೇರಿಸುವ ಮೂಲಕ ಚೇತರಿಕೆ ನೀಡಿದ್ದಾರೆ. ಇನ್ನು ಎರಡು ದಿನಗಳ ಆಟ ಬಾಕಿಯಿದ್ದು ಯಾವ ತಂಡ ಫೈನಲ್​ ಪ್ರವೇಶಿಸಲಿದೆ ಎಂದು ಕಾದುನೋಡಬೇಕಿದೆ.

ರಾಜ್​ಕೋಟ್​: ಮೊದಲ ಇನ್ನಿಂಗ್ಸ್​ನಲ್ಲಿ 52 ರನ್​ಗಳ ಹಿನ್ನಡೆಯನುಭಿವಿಸಿದರು ಎರಡನೇ ಇನ್ನಿಂಗ್ಸ್​ನಲ್ಲಿ ಕರಾರುವಾಕ್​ ಬೌಲಿಂಗ್​ ದಾಳಿ ನಡೆಸಿದ ಗುಜರಾತ್​ ತಂಡ ಸೌರಾಷ್ಟ್ರ ವಿರುದ್ಧ ಸೆಮಿಫೈನಲ್​ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೋಯ್ದಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಸೌರಾಷ್ಟ್ರ ತಂಡ ಶೆಲ್ಡಾನ್ ಜಾಕ್ಸನ್​(103) ಅವರ ಶತಕದ ನೆರವಿನಿಂದ 304 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಗುಜರಾತ್​ ತಂಡ 252 ರನ್​ಗಳಿಗೆ ಆಲೌಟ್​ ಆಗುವ ಮೂಲಕ 52 ರನ್​ಗಳ ಹಿನ್ನಡೆ ಅನುಭವಿಸಿತ್ತು.

ಆದರೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಗುಜರಾತ್​ ತಂಡಕ್ಕೆ ಚಿಂತನ್​ ಗಜ ಭಾರಿ ಆಘಾತ ನೀಡಿದ್ದಾರೆ. ಕೇವಲ 15 ರನ್​ 5 ವಿಕೆಟ್​ ಪಡೆದ ಗಜ ಗುಜರಾತ್​ ತಂಡಕ್ಕೆ ಫೈನಲ್​ ಕನಸನ್ನು ಮತ್ತೆ ಚಿಗುರುವಂತೆ ಮಾಡಿದ್ದಾರೆ.

52 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಲು ಬಂದ ಆರಂಭಿಕರಾದ ಕಿಶನ್ ಕುಮಾರ್ಶ್ರ(0)​ ಹಾರ್ವಿಕ್​ ದೇಸಾಯಿ(0)ಅವರನ್ನು ಖಾತೆ ತೆರೆಯುವ ಮುನ್ನವೇ ಚಿಂತನ್​ ಪೆವಿಲಿಯನ್​ಗಟ್ಟಿದರು. ನಂತರ ಬಂದ ಅವಿ ಬರೋತ್​ 1 ರನ್​ಗಳಿಸಿ ಅದೇ ಓವರ್​ನ ಕೊನೆಯ ಎಸೆತದಲ್ಲಿ ಔಟಾದರು.

4 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದ ಸೌರಾಷ್ಟ್ರಕ್ಕೆ ಚೇತರಿಸಿಕೊಳ್ಳಲು ಅವಕಾಶ ನೀಡ ಚಿಂತನ್​ ಮತ್ತೆ 15 ರನ್​ಗಳಾಗುವಷ್ಟರಲ್ಲಿ ವಿಶ್ವರಾಜ್​ ಜಡೇಜ(6) ಅವರನ್ನು ಹಾಗೂ ನಂತರದ ಎಸೆತದಲ್ಲಿ ಮೊದಲ ಇನ್ನಿಂಗ್ಸ್​ನ ಶತಕವೀರ ಶೆಲ್ಡಾನ್​ ಜಾಕ್ಸನ್(0) ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗಟ್ಟಿದರು.

ಇನ್ನು ಕೇವಲ 15ರನ್​ಗೆ 5 ವಿಕೆಟ್ ಕಳೆದುಕೊಂಡು ಅಘಾತಕ್ಕೊಳಗಾಗಿದ್ದ ಸೌರಾಷ್ಟ್ರ ತಂಡಕ್ಕೆ ಚೇತನ್​ ಸಕಾರಿಯಾ(32) ಹಾಗೂ ಅರ್ಪಿತ್​ ವಾಸುದೇವ(23) 6ನೇ ವಿಕೆಟ್​ 51 ರನ್​ ಸೇರಿಸುವ ಮೂಲಕ ಚೇತರಿಕೆ ನೀಡಿದ್ದಾರೆ. ಇನ್ನು ಎರಡು ದಿನಗಳ ಆಟ ಬಾಕಿಯಿದ್ದು ಯಾವ ತಂಡ ಫೈನಲ್​ ಪ್ರವೇಶಿಸಲಿದೆ ಎಂದು ಕಾದುನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.