ETV Bharat / sports

ಸೆಮಿಫೈನಲ್​ನಲ್ಲಿ ಕೈಕೊಟ್ಟ ಕರ್ನಾಟಕ ಬ್ಯಾಟ್ಸ್​ಮನ್​ಗಳು​: ಬಂಗಾಳಕ್ಕೆ ಭಾರಿ ಮುನ್ನಡೆ

author img

By

Published : Mar 1, 2020, 5:57 PM IST

ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆಯುತ್ತಿರುವ ಸೆಮಿಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 122 ರನ್​ಗಳಿಗೆ ಆಲೌಟ್​ ಆಗುವ ಮೂಲಕ 190 ರನ್​ಗಳ ಭಾರಿ ಹಿನ್ನಡೆ ಅನುಭವಿಸಿದೆ.

Karnataka vs West Bengal
ರಣಜಿ ಸೆಮಿಫೈನಲ್​

ಕೋಲ್ಕತ್ತಾ: ಬಂಗಾಳದ ಯುವ ಬೌಲರ್​ ಇಶಾನ್​ ಪೊರೆಲ್​ ದಾಳಿಗೆ ಸಿಲುಕಿ ಕೇವಲ 122 ರನ್​ಗಳಿಗೆ ಸರ್ವಪತನ ಕಂಡ ಕರ್ನಾಟಕ ತಂಡದ 8ನೇ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕನಸು ನುಚ್ಚುನೂರಾಗಿದೆ.

ಕೋಲ್ಕತ್ತಾ ಈಡನ್​ ಗಾರ್ಡನ್​ನಲ್ಲಿ ನಡೆಯುತ್ತಿರುವ ಸೆಮಿಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 122 ರನ್​ಗಳಿಗೆ ಆಲೌಟ್​ ಆಗುವ ಮೂಲಕ 190 ರನ್​ಗಳ ಭಾರಿ ಹಿನ್ನಡೆ ಅನುಭವಿಸಿದೆ.

ಭಾರತ ತಂಡದ ಪರ ಅದ್ಭುತ ಪ್ರದರ್ಶನ ತೋರಿದ್ದ ರಾಹುಲ್​, ಕರ್ನಾಟಕ ತಂಡ ಸೇರಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಯುವ ವೇಗಿ ಇಶಾನ್​ ಪೊರೆಲ್​ 5 ವಿಕೆಟ್​ ಹಾಗೂ ಆಕಾಶ್​ ದೀಪ್​ 3 ಹಾಗೂ ಮುಖೇಶ್​ ಕುಮಾರ್​ 2 ವಿಕೆಟ್​ ಪಡೆದು ಕರ್ನಾಟಕ ತಂಡವನ್ನು 122 ರನ್​ಗಳಿಗೆ ಕಟ್ಟಿಹಾಕಿದ್ರು.

31 ರನ್ ​ಗಳಿಸಿದ ಕೆ ಗೌತಮ್​ ತಂಡದ ಗರಿಷ್ಠ ರನ್​ ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಅನುಭವಿಗಳಾದ ರಾಹುಲ್​ (26), ಮನೀಷ್​ ಪಾಂಡೆ(12) ಕರುಣ್​ ನಾಯರ್​(3), ಸಮರ್ಥ್​(0), ಸಿದ್ಧಾರ್ಥ್​ (14), ಯುವ ಬ್ಯಾಟ್ಸ್​ಮನ್​ಗಳಾದ ಪಡಿಕ್ಕಲ್​ (4) ಶರತ್​(1) ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿ ವಿಕೆಟ್​ ಒಪ್ಪಿಸಿದರು.

ಗೌತಮ್​(31) ಹಾಗೂ ಮಿಥುನ್​(24) ಸ್ವಲ್ಪ ಸಮಯ ಅಬ್ಬರಿಸಿದ್ದರಿಂದ ಕರ್ನಾಟಕ ತಂಡ 100ರ ಗಡಿದಾಟಲು ಸಾಧ್ಯವಾಯಿತು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ 21 ವರ್ಷದ ಇಶಾನ್​ ಪೊರೆಲ್​ 39 ರನ್​ ನೀಡಿ 5 ವಿಕೆಟ್​ ಪಡೆದು ಕರ್ನಾಟಕ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ ಪರೇಡ್​ ನಡೆಸುವಂತೆ ಮಾಡಿದರು.

190 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪಶ್ಚಿಮ ಬಂಗಾಳ ತಂಡ ಈಗಾಗಲೇ 4 ವಿಕೆಟ್​ ಕಳೆದುಕೊಂಡು 72 ರನ್​ ಗಳಿಸಿ ಒಟ್ಟಾರೆ 262 ರನ್​ಗಳ ಮುನ್ನಡೆ ಸಾಧಿಸಿದೆ. ಸುದೀಪ್​ ಚಟರ್ಜಿ 40 ರನ್ ಹಾಗೂ ಮೊದಲ ಇನ್ನಿಂಗ್ಸ್​ ಶತಕ ವೀರ ಅನುಸ್ತೂಪ್​ ಮಜುಮ್ದಾರ್​ 1 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇನ್ನು ಮೂರು ದಿನಗಳ ಆಟ ಬಾಕಿಯಿದ್ದು ಮೂರನೇ ದಿನ ಬಂಗಾಳವನ್ನು ಆದಷ್ಟು ಕಡಿಮೆ ಮೊತ್ತಕ್ಕೆ ಆಲೌಟ್​ ಮಾಡಿದರೆ ಕರ್ನಾಟಕ ತಂಡಕ್ಕೆ ಗೆಲ್ಲುವ ಅವಕಾಶವಿದೆ.

ಕೋಲ್ಕತ್ತಾ: ಬಂಗಾಳದ ಯುವ ಬೌಲರ್​ ಇಶಾನ್​ ಪೊರೆಲ್​ ದಾಳಿಗೆ ಸಿಲುಕಿ ಕೇವಲ 122 ರನ್​ಗಳಿಗೆ ಸರ್ವಪತನ ಕಂಡ ಕರ್ನಾಟಕ ತಂಡದ 8ನೇ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕನಸು ನುಚ್ಚುನೂರಾಗಿದೆ.

ಕೋಲ್ಕತ್ತಾ ಈಡನ್​ ಗಾರ್ಡನ್​ನಲ್ಲಿ ನಡೆಯುತ್ತಿರುವ ಸೆಮಿಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 122 ರನ್​ಗಳಿಗೆ ಆಲೌಟ್​ ಆಗುವ ಮೂಲಕ 190 ರನ್​ಗಳ ಭಾರಿ ಹಿನ್ನಡೆ ಅನುಭವಿಸಿದೆ.

ಭಾರತ ತಂಡದ ಪರ ಅದ್ಭುತ ಪ್ರದರ್ಶನ ತೋರಿದ್ದ ರಾಹುಲ್​, ಕರ್ನಾಟಕ ತಂಡ ಸೇರಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಯುವ ವೇಗಿ ಇಶಾನ್​ ಪೊರೆಲ್​ 5 ವಿಕೆಟ್​ ಹಾಗೂ ಆಕಾಶ್​ ದೀಪ್​ 3 ಹಾಗೂ ಮುಖೇಶ್​ ಕುಮಾರ್​ 2 ವಿಕೆಟ್​ ಪಡೆದು ಕರ್ನಾಟಕ ತಂಡವನ್ನು 122 ರನ್​ಗಳಿಗೆ ಕಟ್ಟಿಹಾಕಿದ್ರು.

31 ರನ್ ​ಗಳಿಸಿದ ಕೆ ಗೌತಮ್​ ತಂಡದ ಗರಿಷ್ಠ ರನ್​ ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಅನುಭವಿಗಳಾದ ರಾಹುಲ್​ (26), ಮನೀಷ್​ ಪಾಂಡೆ(12) ಕರುಣ್​ ನಾಯರ್​(3), ಸಮರ್ಥ್​(0), ಸಿದ್ಧಾರ್ಥ್​ (14), ಯುವ ಬ್ಯಾಟ್ಸ್​ಮನ್​ಗಳಾದ ಪಡಿಕ್ಕಲ್​ (4) ಶರತ್​(1) ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿ ವಿಕೆಟ್​ ಒಪ್ಪಿಸಿದರು.

ಗೌತಮ್​(31) ಹಾಗೂ ಮಿಥುನ್​(24) ಸ್ವಲ್ಪ ಸಮಯ ಅಬ್ಬರಿಸಿದ್ದರಿಂದ ಕರ್ನಾಟಕ ತಂಡ 100ರ ಗಡಿದಾಟಲು ಸಾಧ್ಯವಾಯಿತು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ 21 ವರ್ಷದ ಇಶಾನ್​ ಪೊರೆಲ್​ 39 ರನ್​ ನೀಡಿ 5 ವಿಕೆಟ್​ ಪಡೆದು ಕರ್ನಾಟಕ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ ಪರೇಡ್​ ನಡೆಸುವಂತೆ ಮಾಡಿದರು.

190 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪಶ್ಚಿಮ ಬಂಗಾಳ ತಂಡ ಈಗಾಗಲೇ 4 ವಿಕೆಟ್​ ಕಳೆದುಕೊಂಡು 72 ರನ್​ ಗಳಿಸಿ ಒಟ್ಟಾರೆ 262 ರನ್​ಗಳ ಮುನ್ನಡೆ ಸಾಧಿಸಿದೆ. ಸುದೀಪ್​ ಚಟರ್ಜಿ 40 ರನ್ ಹಾಗೂ ಮೊದಲ ಇನ್ನಿಂಗ್ಸ್​ ಶತಕ ವೀರ ಅನುಸ್ತೂಪ್​ ಮಜುಮ್ದಾರ್​ 1 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇನ್ನು ಮೂರು ದಿನಗಳ ಆಟ ಬಾಕಿಯಿದ್ದು ಮೂರನೇ ದಿನ ಬಂಗಾಳವನ್ನು ಆದಷ್ಟು ಕಡಿಮೆ ಮೊತ್ತಕ್ಕೆ ಆಲೌಟ್​ ಮಾಡಿದರೆ ಕರ್ನಾಟಕ ತಂಡಕ್ಕೆ ಗೆಲ್ಲುವ ಅವಕಾಶವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.