ETV Bharat / sports

ಪಿಎಂ ಶ್ಲಾಘನೆ ನಮಗೆ ಒತ್ತಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಆತ್ಮವಿಶ್ವಾಸ ಹೆಚ್ಚಿಸಿದೆ: ಶಾಸ್ತ್ರಿ

author img

By

Published : Jan 31, 2021, 8:04 PM IST

ಭಾರತ ತಂಡ ಗಾಯ ಹಾಗೂ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿಯೂ ಮೊದಲ ಪಂದ್ಯದ ದಯನೀಯ ಸೋಲಿನ ಬಳಿಕ ಅದ್ಭುತವಾಗಿ ತಿರುಗಿಬಿದ್ದು, ಸರಣಿಯನ್ನು 2-1ರಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಶನಿವಾರ ಪ್ರಧಾನಿ ಮೋದಿ ಮನ್​ ಕಿ ಬಾತ್​ನಲ್ಲಿ ಭಾರತೀಯರ ಕಠಿಣ ಪರಿಶ್ರಮ ಸ್ಫೂರ್ತಿದಾಯಕವಾದದ್ದು ಎಂದು ವ್ಯಾಖ್ಯಾನಿಸಿದ್ದರು.

ರವಿಶಾಸ್ತ್ರಿ , ರಹಾನೆ
ರವಿಶಾಸ್ತ್ರಿ , ರಹಾನೆ

ಹೈದರಾಬಾದ್​: ಪ್ರಧಾನಿ ಮೋದಿ ಇಂದಿನ ಮನ್​ ಕಿ ಬಾತ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಭಾರತೀಯರು ತೋರಿದ ಸಂಘಟಿತ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಭಾರತ ಕ್ರಿಕೆಟ್​ ತಂಡದ ಕೋಚ್​ ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಧನ್ಯವಾದ ತಿಳಿಸಿದ್ದಾರೆ.

ಭಾರತ ತಂಡ ಗಾಯ ಹಾಗೂ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿಯೂ ಮೊದಲ ಪಂದ್ಯದ ದಯನೀಯ ಸೋಲಿನ ಬಳಿಕ ಅದ್ಭುತವಾಗಿ ತಿರುಗಿಬಿದ್ದು, ಸರಣಿಯನ್ನು 2-1ರಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಶನಿವಾರ ಪ್ರಧಾನಿ ಮೋದಿ ಮನ್​ ಕಿ ಬಾತ್​ನಲ್ಲಿ ಭಾರತೀಯರ ಕಠಿಣ ಪರಿಶ್ರಮ ಸ್ಫೂರ್ತಿದಾಯಕವಾದದ್ದು ಎಂದು ವ್ಯಾಖ್ಯಾನಿಸಿದ್ದರು.

ಟೆಸ್ಟ್​ ಸರಣಿ ಗೆದ್ದ ಭಾರತ ತಂಡ
ಟೆಸ್ಟ್​ ಸರಣಿ ಗೆದ್ದ ಭಾರತ ತಂಡ

"ಈ ತಿಂಗಳು, ನಮಗೆ ಕ್ರಿಕೆಟ್ ಪಿಚ್‌ನಿಂದ ಒಳ್ಳೆಯ ಸುದ್ದಿ ಸಿಕ್ಕಿತು. ಆರಂಭಿಕ ಹಿನ್ನಡೆಯ ನಂತರ ಭಾರತ ತಂಡವು ವೈಭವಯುತವಾಗಿ ಪುಟಿದೇಳುವ ಮೂಲಕ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿದೆ. ಈ ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ಸಂಘಟಿತ ಹೋರಾಟ ಸ್ಫೂರ್ತಿದಾಯಕವಾಗಿದೆ" ಎಂದು ಪಿಎಂ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು.

  • Thank you, Sir. Your kind words will further strengthen #TeamIndia and 🇮🇳’s resolve to perform under pressure and in trying circumstances. Jai Hind ! https://t.co/yQQN9nh8Ab

    — Ravi Shastri (@RaviShastriOfc) January 31, 2021 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿ, " ಧನ್ಯವಾದಗಳು ಸರ್, ಈ ರೀತಿಯ ನಿಮ್ಮ ಮಾತುಗಳು ಭಾರತ ತಂಡಕ್ಕೆ ಒತ್ತಡದಲ್ಲಿ ಮತ್ತು ಗೆಲುವಿಗಾಗಿ ಪ್ರಯತ್ನಿಸುವ ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಜೈ ಹಿಂದ್"​ ಎಂದು ಟ್ವೀಟ್​ ಮಾಡಿದ್ದಾರೆ.

Sincere thanks and gratitude to Honourable Prime minister for recognising the performance of the Indian cricket team in australia..

— Sourav Ganguly (@SGanguly99) January 31, 2021 " class="align-text-top noRightClick twitterSection" data=" ">

ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸಾಧನೆಯನ್ನು ಗುರುತಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ನಿಮ್ಮ ಈ ಉತ್ತೇಜಕ ಮಾತುಗಳಿಗೆ ಧನ್ಯವಾದಗಳು ಮೋದಿ ಜೀ, ಭವಿಷ್ಯದಲ್ಲಿ ಇಂತಹ ಸವಾಲುಗಳನ್ನು ಎದುರಿಸಲು ಭಾರತೀಯ ಕ್ರಿಕೆಟ್‌ಗೆ ಆತ್ಮಸ್ಥೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸಿದೆ ”ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಹೈದರಾಬಾದ್​: ಪ್ರಧಾನಿ ಮೋದಿ ಇಂದಿನ ಮನ್​ ಕಿ ಬಾತ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಭಾರತೀಯರು ತೋರಿದ ಸಂಘಟಿತ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಭಾರತ ಕ್ರಿಕೆಟ್​ ತಂಡದ ಕೋಚ್​ ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಧನ್ಯವಾದ ತಿಳಿಸಿದ್ದಾರೆ.

ಭಾರತ ತಂಡ ಗಾಯ ಹಾಗೂ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿಯೂ ಮೊದಲ ಪಂದ್ಯದ ದಯನೀಯ ಸೋಲಿನ ಬಳಿಕ ಅದ್ಭುತವಾಗಿ ತಿರುಗಿಬಿದ್ದು, ಸರಣಿಯನ್ನು 2-1ರಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಶನಿವಾರ ಪ್ರಧಾನಿ ಮೋದಿ ಮನ್​ ಕಿ ಬಾತ್​ನಲ್ಲಿ ಭಾರತೀಯರ ಕಠಿಣ ಪರಿಶ್ರಮ ಸ್ಫೂರ್ತಿದಾಯಕವಾದದ್ದು ಎಂದು ವ್ಯಾಖ್ಯಾನಿಸಿದ್ದರು.

ಟೆಸ್ಟ್​ ಸರಣಿ ಗೆದ್ದ ಭಾರತ ತಂಡ
ಟೆಸ್ಟ್​ ಸರಣಿ ಗೆದ್ದ ಭಾರತ ತಂಡ

"ಈ ತಿಂಗಳು, ನಮಗೆ ಕ್ರಿಕೆಟ್ ಪಿಚ್‌ನಿಂದ ಒಳ್ಳೆಯ ಸುದ್ದಿ ಸಿಕ್ಕಿತು. ಆರಂಭಿಕ ಹಿನ್ನಡೆಯ ನಂತರ ಭಾರತ ತಂಡವು ವೈಭವಯುತವಾಗಿ ಪುಟಿದೇಳುವ ಮೂಲಕ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿದೆ. ಈ ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ಸಂಘಟಿತ ಹೋರಾಟ ಸ್ಫೂರ್ತಿದಾಯಕವಾಗಿದೆ" ಎಂದು ಪಿಎಂ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು.

  • Thank you, Sir. Your kind words will further strengthen #TeamIndia and 🇮🇳’s resolve to perform under pressure and in trying circumstances. Jai Hind ! https://t.co/yQQN9nh8Ab

    — Ravi Shastri (@RaviShastriOfc) January 31, 2021 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿ, " ಧನ್ಯವಾದಗಳು ಸರ್, ಈ ರೀತಿಯ ನಿಮ್ಮ ಮಾತುಗಳು ಭಾರತ ತಂಡಕ್ಕೆ ಒತ್ತಡದಲ್ಲಿ ಮತ್ತು ಗೆಲುವಿಗಾಗಿ ಪ್ರಯತ್ನಿಸುವ ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಜೈ ಹಿಂದ್"​ ಎಂದು ಟ್ವೀಟ್​ ಮಾಡಿದ್ದಾರೆ.

  • Sincere thanks and gratitude to Honourable Prime minister for recognising the performance of the Indian cricket team in australia..

    — Sourav Ganguly (@SGanguly99) January 31, 2021 " class="align-text-top noRightClick twitterSection" data=" ">

ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸಾಧನೆಯನ್ನು ಗುರುತಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ನಿಮ್ಮ ಈ ಉತ್ತೇಜಕ ಮಾತುಗಳಿಗೆ ಧನ್ಯವಾದಗಳು ಮೋದಿ ಜೀ, ಭವಿಷ್ಯದಲ್ಲಿ ಇಂತಹ ಸವಾಲುಗಳನ್ನು ಎದುರಿಸಲು ಭಾರತೀಯ ಕ್ರಿಕೆಟ್‌ಗೆ ಆತ್ಮಸ್ಥೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸಿದೆ ”ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.