ETV Bharat / sports

ಚೆಂಡಿಗೆ ಉಗುಳು ಹಚ್ಚಲು ನಿಷೇಧ ತಾತ್ಕಾಲಿಕ ಕ್ರಮ ಮಾತ್ರ: ಅನಿಲ್​ ಕುಂಬ್ಳೆ ಸ್ಪಷ್ಟನೆ

author img

By

Published : May 25, 2020, 8:19 AM IST

ಇತ್ತೀಚೆಗೆ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಚೆಂಡಿಗೆ ಉಗುಳು ಸವರುವುದನ್ನು ನಿಷೇಧಿಸಲು ಅನಿಲ್​ ಕುಂಬ್ಳೆ ನೇತೃತ್ವದ ಸಮಿತಿ ಐಸಿಸಿಗೆ ಶಿಫಾರಸು ಮಾಡಿತ್ತು. ಆದರೆ ಈ ನಿರ್ಧಾರದಿಂದ ಚೆಂಡು ಸ್ವಿಂಗ್ ಪಡೆಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕ್ರಿಕೆಟ್​ ವಲಯದಲ್ಲಿ ಕೇಳಿಬಂದಿತ್ತು. ಇನ್ನು ಕೆಲವರು ಕುಂಬ್ಳೆ ಪರ ವಾದಿಸಿದ್ದರು.

ಅನಿಲ್​ ಕುಂಬ್ಳೆ
ಅನಿಲ್​ ಕುಂಬ್ಳೆ

ಮುಂಬೈ: ಚೆಂಡಿನ ಹೊಳಪು ಹೆಚ್ಚಿಸಲು ಉಗುಳು ಬಳಕೆ ನಿಷೇಧಿಸುವ ನಿರ್ಧಾರ ಕೇವಲ ತಾತ್ಕಾಲಿಕವಷ್ಟೇ, ಒಮ್ಮೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಾಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಐಸಿಸಿ ಕ್ರಿಕೆಟ್​ ಸಲಹಾ ಸಮಿತಿ ಮುಖ್ಯಸ್ಥ ಅನಿಲ್​ ಕುಂಬ್ಳೆ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಚೆಂಡಿಗೆ ಉಗುಳು ಸವರುವುದನ್ನು ನಿಷೇಧಿಸಲು ಅನಿಲ್​ ಕುಂಬ್ಳೆ ನೇತೃತ್ವದ ಸಮಿತಿ ಐಸಿಸಿಗೆ ಶಿಫಾರಸು ಮಾಡಿತ್ತು. ಆದರೆ ಈ ನಿರ್ಧಾರದಿಂದ ಚೆಂಡು ಸ್ವಿಂಗ್ ಪಡೆಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕ್ರಿಕೆಟ್​ ವಲಯದಲ್ಲಿ ಕೇಳಿಬಂದಿತ್ತು. ಇನ್ನು ಕೆಲವರು ಕುಂಬ್ಳೆ ಪರ ವಾದಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕುಂಬ್ಳೆ , ಚೆಂಡು ಹೊಳಪು ಬರಲು ಉಗುಳು ಬಳಕೆ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಕೋವಿಡ್​ ವೈರಸ್​ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ತಾತ್ಕಾಲಿಕವಾಗಿ ಇದನ್ನು ನಿಷೇಧಿಸಲಾಗಿದೆ. ಇದು ಮಧ್ಯಂತರ ಕ್ರಮವಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ವೈರಸ್​ ನಿಯಂತ್ರಣಕ್ಕೆ ಬಂದರೆ ಈ ನಿಷೇಧವನ್ನು ವಾಪಸ್​ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಚೆಂಡಿಗೆ ಹೊಳಪು ತರಲು ವ್ಯಾಕ್ಸ್​ನಂತಹ ವಸ್ತುಗಳನ್ನು ಉಪಯೋಗಿಸಲು ಚಿಂತನೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕ್ರಿಕೆಟ್​ ಇತಿಹಾಸದ ಕಡೆಗೆ ಹಿಂತುರಿಗಿ ನೋಡಿದರೆ ಚೆಂಡಿನ ಹೊಳಪಿಗೆ ಯಾವುದೇ ಬಾಹ್ಯ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇದರಿಂದ ಹೆಚ್ಚಿನ ಪರಿಣಾಮ ಬೀರಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗರ ಸ್ಯಾಂಡ್​ ಪೇಪರ್​ ಪ್ರಕರಣವನ್ನು ನೆನೆದಿದ್ದಾರೆ.

ಮುಂಬೈ: ಚೆಂಡಿನ ಹೊಳಪು ಹೆಚ್ಚಿಸಲು ಉಗುಳು ಬಳಕೆ ನಿಷೇಧಿಸುವ ನಿರ್ಧಾರ ಕೇವಲ ತಾತ್ಕಾಲಿಕವಷ್ಟೇ, ಒಮ್ಮೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಾಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಐಸಿಸಿ ಕ್ರಿಕೆಟ್​ ಸಲಹಾ ಸಮಿತಿ ಮುಖ್ಯಸ್ಥ ಅನಿಲ್​ ಕುಂಬ್ಳೆ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಚೆಂಡಿಗೆ ಉಗುಳು ಸವರುವುದನ್ನು ನಿಷೇಧಿಸಲು ಅನಿಲ್​ ಕುಂಬ್ಳೆ ನೇತೃತ್ವದ ಸಮಿತಿ ಐಸಿಸಿಗೆ ಶಿಫಾರಸು ಮಾಡಿತ್ತು. ಆದರೆ ಈ ನಿರ್ಧಾರದಿಂದ ಚೆಂಡು ಸ್ವಿಂಗ್ ಪಡೆಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕ್ರಿಕೆಟ್​ ವಲಯದಲ್ಲಿ ಕೇಳಿಬಂದಿತ್ತು. ಇನ್ನು ಕೆಲವರು ಕುಂಬ್ಳೆ ಪರ ವಾದಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕುಂಬ್ಳೆ , ಚೆಂಡು ಹೊಳಪು ಬರಲು ಉಗುಳು ಬಳಕೆ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಕೋವಿಡ್​ ವೈರಸ್​ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ತಾತ್ಕಾಲಿಕವಾಗಿ ಇದನ್ನು ನಿಷೇಧಿಸಲಾಗಿದೆ. ಇದು ಮಧ್ಯಂತರ ಕ್ರಮವಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ವೈರಸ್​ ನಿಯಂತ್ರಣಕ್ಕೆ ಬಂದರೆ ಈ ನಿಷೇಧವನ್ನು ವಾಪಸ್​ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಚೆಂಡಿಗೆ ಹೊಳಪು ತರಲು ವ್ಯಾಕ್ಸ್​ನಂತಹ ವಸ್ತುಗಳನ್ನು ಉಪಯೋಗಿಸಲು ಚಿಂತನೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕ್ರಿಕೆಟ್​ ಇತಿಹಾಸದ ಕಡೆಗೆ ಹಿಂತುರಿಗಿ ನೋಡಿದರೆ ಚೆಂಡಿನ ಹೊಳಪಿಗೆ ಯಾವುದೇ ಬಾಹ್ಯ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇದರಿಂದ ಹೆಚ್ಚಿನ ಪರಿಣಾಮ ಬೀರಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗರ ಸ್ಯಾಂಡ್​ ಪೇಪರ್​ ಪ್ರಕರಣವನ್ನು ನೆನೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.